Murder: ಮರುಮದುವೆಯಾಗಲು ಮುಂದಾದ 80 ವರ್ಷದ ತಂದೆಯನ್ನು ಕೊಚ್ಚಿ ಕೊಂದ ಮಗ!

| Updated By: ಸುಷ್ಮಾ ಚಕ್ರೆ

Updated on: Jan 07, 2022 | 7:27 PM

Crime News: ತನ್ನ ಅಪ್ಪ ಇಳಿವಯಸ್ಸಿನಲ್ಲಿ ಮರುಮದುವೆಯಾಗಲು ಬಯಸಿದ್ದಾರೆಂದು ತಿಳಿದು ನನಗೆ ಬಹಳ ಕೋಪ ಬಂದಿತ್ತು. ಇದರಿಂದ ಈ ಹತ್ಯೆ ಮಾಡಿದ್ದಾಗಿ ಶೇಖರ್ ಹೇಳಿಕೆಯಲ್ಲಿ ಒಪ್ಪಿಕೊಂಡಿದ್ದಾರೆ.

Murder: ಮರುಮದುವೆಯಾಗಲು ಮುಂದಾದ 80 ವರ್ಷದ ತಂದೆಯನ್ನು ಕೊಚ್ಚಿ ಕೊಂದ ಮಗ!
ಪ್ರಾತಿನಿಧಿಕ ಚಿತ್ರ
Follow us on

ನವದೆಹಲಿ: ಮರುಮದುವೆಯಾಗಲು ಮ್ಯಾಟ್ರಿಮೋನಿಯಲ್ ಬ್ಯೂರೋದಲ್ಲಿ ಹೆಸರು ನೋಂದಾಯಿಸಿದ್ದಾರೆ ಎಂದು ತಿಳಿದ 47 ವರ್ಷದ ವ್ಯಕ್ತಿಯೊಬ್ಬ 80 ವರ್ಷದ ತನ್ನ ತಂದೆಯನ್ನು ಬರ್ಬರವಾಗಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ಪುಣೆಯ ರಾಜಗುರುನಗರದಲ್ಲಿ ನಡೆದಿದೆ. ತನ್ನ ತಂದೆಯನ್ನು ಹತ್ಯೆ ಮಾಡಿದ ನಂತರ ಶೇಖರ್ ಬೋರ್ಹಾಡೆ ಎಂದು ಗುರುತಿಸಲಾದ ಆರೋಪಿಯು ಶರಣಾಗಲು ರಾಜಗುರು ಪೊಲೀಸ್ ಠಾಣೆಗೆ ಬಂದು ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ.

ತನ್ನ ಅಪ್ಪ ಇಳಿವಯಸ್ಸಿನಲ್ಲಿ ಮರುಮದುವೆಯಾಗಲು ಬಯಸಿದ್ದಾರೆಂದು ತಿಳಿದು ನನಗೆ ಬಹಳ ಕೋಪ ಬಂದಿತ್ತು. ಇದರಿಂದ ಈ ಹತ್ಯೆ ಮಾಡಿದ್ದಾಗಿ ಶೇಖರ್ ಹೇಳಿಕೆಯಲ್ಲಿ ಒಪ್ಪಿಕೊಂಡಿದ್ದಾರೆ. ಅಪ್ಪ ಮರುಮದುವೆಯಾಗಲು ಬಯಸಿರುವುದಕ್ಕೆ ಕೋಪಗೊಂಡ ಆತ ತನ್ನ ತಂದೆಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ.

ಏನಿದು ಪ್ರಕರಣ?:
47 ವರ್ಷದ ಶೇಖರ್ ಬೋರಹಾಡೆ ರಾಜಗುರುನಗರದಲ್ಲಿ ತಮ್ಮ ತಂದೆಯನ್ನು ಕೊಲೆ ಮಾಡಿದ ಆರೋಪದ ಮೇಲೆ ಅವರನ್ನು ಬಂಧಿಸಲಾಗಿದೆ. ಕೊಲೆ ಆರೋಪಿಯು ತನ್ನ ತಂದೆ ಮದುವೆ ಬ್ಯೂರೋಗೆ ಹಣ ಪಾವತಿಸಿ ವಧುವಿನೊಂದಿಗೆ ಮರುಮದುವೆಯಾಗಲು ಹೆಸರು ನೋಂದಾಯಿಸಿಕೊಂಡಿದ್ದರು ಎಂದು ಪೊಲೀಸರಿಗೆ ತಿಳಿಸಿದ್ದಾನೆ. ಅವನ ತಂದೆ ಮರು ಮದುವೆಯಾಗಲು ಬಯಸುತ್ತಾನೆ ಎಂಬುದನ್ನು ತಿಳಿದು ಆತ ಕೋಪಗೊಂಡಿದ್ದ. ಹೀಗಾಗಿ, ಆತ ತನ್ನ ತಂದೆಯನ್ನು ಕೊಲೆ ಮಾಡಿದ್ದಾನೆ.

ಅಪ್ಪ ಮತ್ತೆ ಮದುವೆಯಾಗಲು ಬಯಸಿರುವುದನ್ನು ತಿಳಿದು ಕೋಪಗೊಂಡು ಅಪ್ಪನ ಕತ್ತು ಕೊಯ್ಯಲು ತಂದೆಯ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದ ಎಂದು ಆರೋಪಿ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ನಂತರ ಮಸಾಲೆ ರುಬ್ಬುವ ಕಲ್ಲಿನಿಂದ ತನ್ನ ತಂದೆಯ ತಲೆಗೆ ಪದೇಪದೆ ಹೊಡೆದು ಅಮಾನುಷವಾಗಿ ದಾಳಿ ಮಾಡಿದ್ದ. ಬಳಿಕ ಅಡುಗೆ ಮನೆಯಲ್ಲಿದ್ದ ಚಾಕುವನ್ನು ಹರಿತಗೊಳಿಸಿ ತಂದೆಯ ತಲೆಯನ್ನು ಕತ್ತರಿಸಿದ್ದ.

ಇದನ್ನೂ ಓದಿ: Crime News: ಪ್ರಿಯಕರನೊಂದಿಗೆ ಸೇರಿ ಅತ್ತೆ-ಮಾವನನ್ನೇ ಕೊಂದು, ಸುಟ್ಟು ಹಾಕಿದ ಸೊಸೆ

Murder: ತವರು ಮನೆಗೆ ಹೋಗುತ್ತೇನೆಂದು ಹಠ ಮಾಡಿದ ಹೆಂಡತಿಯ ಕತ್ತು ಸೀಳಿ ಕೊಂದ ಗಂಡ!