AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೀಪಿಕಾ ಪಡುಕೋಣೆ ಮ್ಯಾನೇಜರ್ ಮನೆಯಲ್ಲಿ ಡ್ರಗ್ಸ್ ಪತ್ತೆ, ಆಕೆ ನಾಪತ್ತೆ!

ಸುಪ್ರಸಿದ್ಧ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರ ಮ್ಯಾನೇಜರ್ ಕರಿಷ್ಮಾ ಪ್ರಕಾಶ್ ಮನೆಯಿಂದ ಮಾದಕವಸ್ತು ನಿಯಂತ್ರಣ ಸಂಸ್ಥೆಯ (ಎನ್​ಸಿಬಿ) ಅಧಿಕಾರಿಗಳು ಡ್ರಗ್ಸ್ ವಶಪಡಿಸಿಕೊಂಡಿದ್ದು, ನಾಪತ್ತೆಯಾಗಿರುವ ಆಕೆಗೆ ತಮ್ಮೆದುರು ಹಾಜರಾಗುವಂತೆ ನೊಟೀಸು ಜಾರಿ ಮಾಡಿದ್ದಾರೆ. ಕರಿಷ್ಮಾ ಮನೆಯಲ್ಲಿರದ ಕಾರಣ ಮನೆಬಾಗಿಲಿಗೆ ನೊಟೀಸನ್ನು ಅಂಟಿಸಲಾಗಿದೆ. ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ ಆಕೆಯ ಮನೆಯಲ್ಲಿ ಕೆಲ ಬಗೆಯ ಡ್ರಗ್ಸ್ ಅಲ್ಪ ಪ್ರಮಾಣದಲ್ಲಿ ದೊರೆತಿವೆ. ಎನ್​ಸಿಬಿ, ನೊಟೀಸಿನ ಜೊತೆಗೆ ಸಮನ್ಸ್ ಕೂಡ ಜಾರಿಮಾಡಿದೆ. ಕೆಲ ಬಂಧಿತ ಡ್ರಗ್ ಪೆಡ್ಲರ್​ಗಳು ವಿಚಾರಣೆಯ ವೇಲೆ ಕರಿಷ್ಮಾಳ […]

ದೀಪಿಕಾ ಪಡುಕೋಣೆ ಮ್ಯಾನೇಜರ್ ಮನೆಯಲ್ಲಿ ಡ್ರಗ್ಸ್ ಪತ್ತೆ, ಆಕೆ ನಾಪತ್ತೆ!
ಅರುಣ್​ ಕುಮಾರ್​ ಬೆಳ್ಳಿ
ಅರುಣ್​ ಕುಮಾರ್​ ಬೆಳ್ಳಿ|

Updated on: Oct 27, 2020 | 9:31 PM

Share

ಸುಪ್ರಸಿದ್ಧ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರ ಮ್ಯಾನೇಜರ್ ಕರಿಷ್ಮಾ ಪ್ರಕಾಶ್ ಮನೆಯಿಂದ ಮಾದಕವಸ್ತು ನಿಯಂತ್ರಣ ಸಂಸ್ಥೆಯ (ಎನ್​ಸಿಬಿ) ಅಧಿಕಾರಿಗಳು ಡ್ರಗ್ಸ್ ವಶಪಡಿಸಿಕೊಂಡಿದ್ದು, ನಾಪತ್ತೆಯಾಗಿರುವ ಆಕೆಗೆ ತಮ್ಮೆದುರು ಹಾಜರಾಗುವಂತೆ ನೊಟೀಸು ಜಾರಿ ಮಾಡಿದ್ದಾರೆ.

ಕರಿಷ್ಮಾ ಮನೆಯಲ್ಲಿರದ ಕಾರಣ ಮನೆಬಾಗಿಲಿಗೆ ನೊಟೀಸನ್ನು ಅಂಟಿಸಲಾಗಿದೆ. ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ ಆಕೆಯ ಮನೆಯಲ್ಲಿ ಕೆಲ ಬಗೆಯ ಡ್ರಗ್ಸ್ ಅಲ್ಪ ಪ್ರಮಾಣದಲ್ಲಿ ದೊರೆತಿವೆ. ಎನ್​ಸಿಬಿ, ನೊಟೀಸಿನ ಜೊತೆಗೆ ಸಮನ್ಸ್ ಕೂಡ ಜಾರಿಮಾಡಿದೆ.

ಕೆಲ ಬಂಧಿತ ಡ್ರಗ್ ಪೆಡ್ಲರ್​ಗಳು ವಿಚಾರಣೆಯ ವೇಲೆ ಕರಿಷ್ಮಾಳ ಹೆಸರನ್ನು ಉಲ್ಲೇಖಿಸಿದ್ದರಿಂದ ಎನ್​ಸಿಬಿ ಆಕೆಯ ಮನೆ ಮೇಲೆ ದಾಳಿ ನಡೆಸಿತು. ಸಂಸ್ಥೆಯು ಈಗಾಗಲೇ ಆಕೆಯ ವಿಚಾರಣೆಯನ್ನು ಒಮ್ಮೆ ನಡೆಸಿದೆ. ಸಂಸ್ಥೆಯ ಮೂಲಗಳ ಪ್ರಕಾರ ಕರಿಷ್ಮಾ, ದೀಪಿಕಾ ಪಡುಕೋಣೆಯೊಂದಿಗೆ ವಾಟ್ಸ್ಯಾಪ್​ನಲ್ಲಿ ಚ್ಯಾಟ್ ಮಾಡುವಾಗ ಡ್ರಗ್ಸ್ ಬಗ್ಗೆ ಉಲ್ಲೇಖಿಸಿದ್ದಾಳೆ. ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ನಂತರ ಬಾಲಿವುಡ್ ಜೊತೆ ಡ್ರಗ್ಸ್ ನಂಟು ಹೊರಬಿದ್ದಿದೆ.

ಎನ್​ಸಿಬಿ ಅಧಿಕಾರಿಗಳು ಒಮ್ಮೆ ದೀಪಿಕಾರ ವಿಚಾರಣೆ ಕೂಡ ನಡೆಸಿದ್ದಾರೆ. ಆಕೆಯಲ್ಲದೆ, ಶ್ರದ್ಧಾ ಕಪೂರ್, ಸಾರಾ ಅಲಿ ಖಾನ್ ಮತ್ತು ರಕುಲ್ ಪ್ರೀತ್ ಸಿಂಗ್ ಅವರನ್ನೂ ಪ್ರಶ್ನಿಸಲಾಗಿದೆ.

2017ರಲ್ಲಿ ಕರಿಷ್ಮಾ ಮತ್ತು ದೀಪಿಕಾ ನಡುವೆ ನಡೆದಿರುವ ಚ್ಯಾಟ್​ಗಳಲ್ಲಿ ಮಾಲ್, ವೀಡ್, ಹ್ಯಾಷ್, ಡೂಬ್ ಮೊದಲಾದ ಪದಗಳ ಬಳಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದರು.

Follow Us
Arun Belly
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.