ಕರ್ನಾಟಕ ಕಾಂಗ್ರೆಸ್ ಶಾಸಕರ ಪುತ್ರನ ಹತ್ಯೆಗೆ ಸ್ಕೆಚ್​, ಸ್ವಲ್ಪದರಲ್ಲೇ ಹತ್ಯೆಯಿಂದ ಪಾರು!

ಕರ್ನಾಟಕದಲ್ಲಿ ಲೈಂಗಿಕ ದೌರ್ಜನ್ಯ, ಅತ್ಯಾಚಾರ, ಕೊಲೆ-ಸುಲಿಗೆ ಸೇರಿದಂತೆ ಅಪರಾಧ ಚಟುವಟಿಕೆಗಳು ಹೆಚ್ಚಾಗುತ್ತೇ ಇವೆ. ಇದರ ಮಧ್ಯ ಕಾಂಗ್ರೆಸ್​​ ಶಾಸಕರೊಬ್ಬರ ಪುತ್ರನ ಹತ್ಯೆಗೆ ಸಂಚು ರೂಪಿಸಿರುವ ಸುದ್ದಿಯೊಂದು ಬೆಳಕಿಗೆ ಬಂದಿದೆ. ಹೌದು...ಜೈಲಿನಿಂದಲೇ ಆರೋಪಿಯೋರ್ವ ಶಾಸಕನ ಮಗನ ಕೊಲೆಗೆ ಸುಫಾರಿ ನೀಡಿದ್ದಾನೆ. ಈ ಸಂಬಂಧ ಶಾಸಕರ ನಿವಾಸಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್​ ಒದಗಿಸಲಾಗಿದೆ. ಶಾಸಕ ಯಾರು? ಕೊಲೆ ಸಂಚು ರೂಪಿಸಿದವರು ಯಾರು? ಪ್ರಕರಣ ಹೇಗೆ ಬೆಳಕಿಗೆ ಬಂತು? ಈ ಎಲ್ಲಾ ವಿವರ ಈ ಕೆಳಗಿನಂತಿದೆ.

ಕರ್ನಾಟಕ ಕಾಂಗ್ರೆಸ್  ಶಾಸಕರ ಪುತ್ರನ ಹತ್ಯೆಗೆ ಸ್ಕೆಚ್​, ಸ್ವಲ್ಪದರಲ್ಲೇ ಹತ್ಯೆಯಿಂದ ಪಾರು!
ಕೈ ಶಾಸಕ ಸಂಗಮೇಶ್​ ಪುತ್ರ
Edited By:

Updated on: Aug 22, 2024 | 3:49 PM

ಶಿವಮೊಗ್ಗ(ಆಗಸ್ಟ್ .22): ಜಿಲ್ಲೆಯ ಭದ್ರಾವತಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್​ ಶಾಸಕ ಬಿ.ಕೆ.ಸಂಗಮೇಶ್ವರ ಅವರ ಪುತ್ರ ಬಸವೇಶನ ಹತ್ಯೆಗೆ ಸಂಚು ರೂಪಿಸಲಾಗಿದೆ ಎಂಬ ಆಘಾತಕಾರಿ ಸುದ್ದಿ ತಿಳಿದುಬಂದಿದೆ. ಶಾಸಕ ಸಂಗಮೇಶ್ವರ ಅವರ ಪುತ್ರ ಬಸವೇಶನ ಹತ್ಯೆಗೆ ಜೈಲಿನಿಂದಲೇ ಹತ್ಯೆಗೆ ಸ್ಕೆಚ್ ಸಂಚು ರೂಪಿಸಿದ್ದ ಎನ್ನುವ ಸ್ಫೋಟಕ ಅಂಶ ಬೆಳಕಿಗೆ ಬಂದಿದೆ.  ಪ್ರಕರಣವೊಂದರಲ್ಲಿ‌ ಜೈಲಿನಲ್ಲಿರುವ ಆರೋಪಿ ಡಿಚ್ಚಿ ಮುಬಾರಕ್ ಎನ್ನುವಾತಲೇ ಬಸವೇಶನ ಹತ್ಯೆಗೆ ಸುಫಾರಿ ನೀಡಿದ್ದು, ಭದ್ರಾವತಿ ಗಾಂಧಿ ಸರ್ಕಲ್​ನಲ್ಲಿ ಕೊಲೆ ಮಾಡಲು ಸೂಚಿಸಿದ್ದ ಎಂದು ತಿಳಿದುಬಂದಿದೆ. ಅಲ್ಲದೇ ಹತ್ಯೆಗೆ ಚಾಕು ಖರೀದಿಸಿದ್ದ ಮುಬಾರಕ್​, ಕೃತ್ಯಕ್ಕೆ ಕಾರು, ನಾಲ್ವರನ್ನ ಕಳುಹಿಸಿದ್ದ ಎನ್ನುವ ಮಾಹಿತಿ ಲಭ್ಯವಾಗಿದೆ.

ಬಸವೇಶನನ್ನು ಕೊಲೆ ಮಾಡುವ ಬಗ್ಗೆ ಮುಬಾರಕ್, ಗುತ್ತಿಗೆದಾರ ಸುನೀಲ್ ಎಂಬಾತನಿಗೆ ಹೇಳಿದ್ದ. ಇದನ್ನು ಸುನೀಲ್​, ಮೊನ್ನೆ ಅಂದರೆ ಆಗಸ್ಟ್ 19 ರಂದು ಭದ್ರಾವತಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಸುನೀಲ್ ನೀಡಿದ ದೂರು ಆಧರಿಸಿ ಭದ್ರಾವತಿ ಹಳೆನಗರ ಠಾಣೆಯ ಪೊಲೀಸರು ಎಫ್​ಐಆರ್​ ದಾಖಲು ಮಾಡಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಯುವಕನ ಜೀವ ತೆಗೆದ ರೋಡ್‌ ರೇಜ್‌ ರೋಷ, ಬೈಕ್‌ ಟಚ್‌ ಆಗಿದ್ದಕ್ಕೆ ಕಾರಲ್ಲಿ ಗುದ್ದಿ ಕೊಲೆ

ಡಿಚ್ಚಿ ಮುಬಾರಕ್​ನಿಂದ ಹತ್ಯೆ ಸುಫಾರಿ ಪಡೆದುಕೊಂಡಿದ್ದ ಟಿಪ್ಪು ಮತ್ತು ಇತರೆ ನಾಲ್ವರ ವಿರುದ್ಧ ಭದ್ರಾವತಿ ಹಳೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಟಿಪ್ಪುನನ್ನು ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಅದೃಷ್ಟವಶಾತ್ ಶಾಸಕ ಬಿ.ಕೆ.ಸಂಗಮೇಶ್ವರ್ ಪುತ್ರ ಸ್ವಲ್ಪದ್ರಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನು ಮುಂಜಾಗ್ರತಾವಾಗಿ ಶಾಸಕ ಸಂಗಮೇಶ್​ ನಿವಾಸದ ಬಳಿ ಬಿಗಿ ಭದ್ರತೆ ಕೈಗೊಂಡಿದ್ದಾರೆ.

ಶಿವಮೊಗ್ಗ ಪೊಲೀಸ್ ವರಿಷ್ಠಾಧಿಕಾರಿ ಹೇಳಿದ್ದಿಷ್ಟು

ಈ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಶಿವಮೊಗ್ಗ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್, ಶಾಸಕ ಬಿ.ಕೆ.ಸಂಗಮೇಶ್ವರ್ ಪುತ್ರನ ಹತ್ಯೆಗೆ ಸಂಚು ಆರೋಪದ ಬಗ್ಗೆ ಭದ್ರಾವತಿ ಹಳೇ ನಗರ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ. ಈಗಾಗಲೇ ತನಿಖೆ ಆರಂಭಿಸಿ ಓರ್ವ ಆರೋಪಿ ಬಂಧಿಸಲಾಗಿದೆ. ಎಲ್ಲಾ ಆಯಾಮದಲ್ಲೂ ತನಿಖೆ ನಡೆಸುತ್ತಿದ್ದೇವೆ. ಜೈಲಿನಿಂದ ಕರೆ ಬಂದಿರುವ ಬಗ್ಗೆಯೂ ಪರಿಶೀಲನೆ ಮಾಡುತ್ತಿದ್ದೇವೆ. ಯಾರಿಂದ ಕರೆ ಬಂದಿದೆ, ಯಾರು ಮಾತನಾಡಿದ್ದಾರೆಂದು ಪರಿಶೀಲನೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us