AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ramanagara News: ನಾಪತ್ತೆಯಾಗಿದ್ದ ಅಪ್ರಾಪ್ತನ ಪತ್ತೆಗೆ BEOS ಟೆಕ್ನಾಲಜಿ ಬಳಕೆ; ಕರ್ನಾಟಕದಲ್ಲಿ ಇದೇ ಮೊದಲು

ರಾಮನಗರ ಜಿಲ್ಲೆ ಕನಕಪುರದಲ್ಲಿ ಮಿಸ್ಸಿಂಗ್ ಆಗಿದ್ದ 17 ರ ಹರೆಯದ ಅಪ್ರಾಪ್ತ ಬಾಲಕನ ನಿಗೂಢ ಹತ್ಯೆ ಕೇಸ್, ರಾಜ್ಯದ FSL ನಲ್ಲಿ ನೂತನ ಟೆಕ್ನಾಲಜಿ ಆಧಾರಿತ ಬ್ರೈನ್ ಮ್ಯಾಫಿಂಗ್ ಪರೀಕ್ಷೆ ಮೂಲಕ ರಿವೀಲ್ ಅಗಿದೆ.

Ramanagara News: ನಾಪತ್ತೆಯಾಗಿದ್ದ ಅಪ್ರಾಪ್ತನ ಪತ್ತೆಗೆ BEOS ಟೆಕ್ನಾಲಜಿ ಬಳಕೆ; ಕರ್ನಾಟಕದಲ್ಲಿ ಇದೇ ಮೊದಲು
ಆರೋಪಿಗಳಾದ ವಕೀಲ ಶಂಕರೇಗೌಡ ಹಾಗೂ ಆತನ ಸ್ನೇಹಿತ ಅರುಣ್
TV9 Web
| Updated By: ವಿವೇಕ ಬಿರಾದಾರ|

Updated on: Jan 22, 2023 | 8:39 AM

Share

ರಾಮನಗರ: ಜಿಲ್ಲೆಯ ಕನಕಪುರ (Kanakpura) ಪೊಲೀಸರು ರಾಜ್ಯದಲ್ಲೇ ಮೊದಲ ಬಾರಿಗೆ ಬ್ರೈನ್ ಮ್ಯಾಫಿಂಗ್ ಪರೀಕ್ಷೆ (Brain electrical Assileation Signature Profiling BEOS) ಮೂಲಕ ಅಪ್ರಾಪ್ತ ಬಾಲಕ ಮೇಲೆ ಆದ ಅಸಹಜ ಲೈಂಗಿಕ ಕ್ರಿಯೆ ಹಾಗೂ ಮಿಸ್ಸಿಂಗ್​ ಪ್ರಕರಣವನ್ನು ಭೇದಿಸಿದ್ದಾರೆ. ನೂತನ ತಂತ್ರಜ್ಞಾನದ ಮೂಲಕ ಆರೋಪಿಗಳಾದ ವಕೀಲ ಶಂಕರೇಗೌಡ ಹಾಗೂ ಅವನ ಸ್ನೇಹಿತ ಅರುಣ್ ಬಂಧಿಸಿದ್ದಾರೆ. ಕಳೆದ ವರ್ಷ 2022 ಮೇ 19 ರಂದು ಕನಕಪುರದ ನಿವಾಸಿ 17 ರ ಹರೆಯದ ಅಪ್ರಾಪ್ತ ಬಾಲಕನ ಜೊತೆ ಕನಕಪುರದಲ್ಲಿ ಈ ಇಬ್ಬರು ಅಸಹಜ ಲೈಂಗಿಕ ಕ್ರಿಯೆ ನಡೆಸಿ, ಕೊಲೆ ಮಾಡಿರುವ ಆರೋಪವಿದೆ.

ಮೇ 19 ರಂದು ತನ್ನ 17 ವರ್ಷದ ಮಗ ಪರಿಚಿತ ವಕೀಲರ ಕಚೇರಿ ಶಿಫ್ಟ್ ಮಾಡ್ತಿದ್ದು ಕೆಲಸಕ್ಕೆ ಕರೆದಿರುವುದಾಗಿ ಹೇಳಿ ಹೋದವನು ನಾಪತ್ತೆಯಾಗಿದ್ದಾನೆಂದು ಬಾಲಕನ ತಾಯಿ ಕನಕಪುರ ಠಾಣೆಗೆ ದೂರು‌ ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ್ದ ಪೊಲೀಸರು ಹಲವು ಆಯಾಮಗಳಲ್ಲಿ ತನಿಖೆ ಕೈಗೊಂಡಿದ್ದರು. ದೂರಿನ ಹಿನ್ನಲೆ ಕೇಸ್ ತನಿಖೆ ವೇಳೆ ಅಸಹಜ ಲೈಂಗಿಕ ಕ್ರಿಯೆ ಆರೋಪದಲ್ಲಿ ವಕೀಲ ಶಂಕರೇಗೌಡ ಮತ್ತು ಅರುಣ್ ಮೇಲೆ ಐಪಿಸಿ ಸೆಕ್ಷನ್ 377 ಅಡಿ ಕೇಸ್ ದಾಖಲಿಸಿದ್ದ ಕನಕಪುರ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್ ಶೀಟ್​ನ್ನು ಕೂಡ ಸಲ್ಲಿಕೆ ಮಾಡಿದ್ದರು. ಆದರೆ ಆರೋಪಿಗಳಿಬ್ಬರು ಬಾಲಕ ನಿಗೂಢ ನಾಪತ್ತೆ ಕುರಿತು ಬಾಯಿಬಿಟ್ಟಿರಲಿಲ್ಲ.

ಈ ಹಿನ್ನಲೆ ಆರೋಪಿಗಳನ್ನು ಕಾನೂನು ಪ್ರಕ್ರಿಯೆಯಂತೆ ಕ್ರಮವಹಿಸಿ ನೂತನ ಟೆಕ್ನಾಲಜಿ ಆಧಾರಿತ ವ್ಯವಸ್ಥೆ ಆಧರಿಸಿ BEOS ಬ್ರೈನ್ ಮ್ಯಾಫಿಂಗ್ ಒಳಪಡಿಸಿದಾಗ ಸತ್ಯಾಂಶ ರಿವೀಲ್ ಆಗಿದ್ದು, ಅಪ್ರಾಪ್ತನನ್ನ ಕಚೇರಿ ಶಿಫ್ಟ್ ಮಾಡುವ ನೆಪವೊಡ್ಡಿ ಕರೆಸಿಕೊಂಡು, ಪ್ರಜ್ಞೆ ತಪ್ಪಿಸಿ ಲೈಂಗಿಕ ಕ್ರಿಯೆ ನಡೆಸಿ ಆ ಬಳಿಕ ನೀರಿನಲ್ಲಿ ಮುಳುಗಿಸಿ ಹತ್ಯೆ ನಡೆಸಿರುವುದಾಗಿ ರಿವೀಲ್ ಮಾಡಿದ್ದಾರೆ. ಇದರಿಂದ BEOS ಬ್ರೈನ್ ಮ್ಯಾಫಿಂಗ್ ಪರೀಕ್ಷೆಯ ಬಳಿಕ ಅಪ್ರಾಪ್ತನ ಹತ್ಯೆ ಆರೋಪಕ್ಕೆ ಸಂಬಂಧಿಸಿ ಪೊಲೀಸರಿಗೆ ಪ್ರಬಲವಾದ ಟೆಕ್ನಿಕಲ್ ಎವಿಡೆನ್ಸ್ ಲಭ್ಯವಾದಂತಾಗಿದೆ. ಟೆಕ್ನಿಕಲ್ ಎವಿಡೆನ್ಸ್ ಆಧಾರದ ಮೇಲೆ ಐಪಿಸಿ ಸೆಕ್ಷನ್ 377 ಅಡಿ ಅಸಹಜ ಲೈಂಗಿಕ ಕ್ರಿಯೆ ಆರೋಪದ ಜತೆಗೆ ಐಪಿಸಿ ಸೆಕ್ಷನ್ 302 ಅಡಿ ಹತ್ಯೆ ಆರೋಪಕ್ಕೆ ಒಳಪಟ್ಟಿದ್ದಾರೆ. ಕನಕಪುರ ಪೊಲೀಸರಿಗೆ ಚಾಲೆಂಜಿಂಗ್ ಆಗಿದ್ದ ಪ್ರಕರಣ ಭೇಧಿಸಿದ್ದಾರೆ. ಶಿವಪ್ರಸಾದ್ ಟಿವಿನೈನ್ ಬೆಂಗಳೂರು

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್  ಮಾಡಿ

ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್