ಅಪಘಾತಕ್ಕೆ ತುತ್ತಾದ ಆಟೋ-ಲಾರಿ; ಇಷ್ಟಕ್ಕೂ ಆಟೋದಲ್ಲಿ ಏನು ಸಾಗಿಸುತ್ತಿದ್ದರು ಗೊತ್ತಾ?

ಆಂಧ್ರ ಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಆಟೋಗೆ ಲಾರಿ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಆಟೋದಲ್ಲಿದ್ದ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಆದರೆ ಈ ರಸ್ತೆ ಅಪಘಾತಕ್ಕೆ ಟ್ವಿಸ್ಟ್ ಸಿಕ್ಕಿದೆ.

ಅಪಘಾತಕ್ಕೆ ತುತ್ತಾದ ಆಟೋ-ಲಾರಿ; ಇಷ್ಟಕ್ಕೂ ಆಟೋದಲ್ಲಿ ಏನು ಸಾಗಿಸುತ್ತಿದ್ದರು ಗೊತ್ತಾ?
ಅಪಘಾತಕ್ಕೆ ತುತ್ತಾದ ಆಟೋ-ಲಾರಿ; ಇಷ್ಟಕ್ಕೂ ಆಟೋದಲ್ಲಿ ಏನು ಸಾಗಿಸುತ್ತಿದ್ದರು ಗೊತ್ತಾ?
Edited By:

Updated on: Aug 26, 2022 | 5:46 PM

ಆಂಧ್ರ ಪ್ರದೇಶ ಅಪರಾಧ ಸುದ್ದಿ: ಅಪರೂಪದ, ರಕ್ಷಿತ ವನ್ಯಜೀವಿಗಳನ್ನು ಯಾರ ಕಣ್ಣಿಗೂ ಬೀಳದಂತೆ ಗಪ್​ ಚುಪ್​ ಅಂತಾ ಗಡಿದಾಟಿಸುವುದಕ್ಕೆ ಅವರು ಸ್ಕೆಚ್​ ಹಾಕಿದ್ದರು. ದುಷ್ಕರ್ಮಿಗಳು ಹೀಗೆ ಅಪಾರ ಸಂಖ್ಯೆಯಲ್ಲಿ ಆಗಾಗ ರಕ್ಷಿತ ವನ್ಯಜೀವಿಗಳ ಕಳ್ಳಸಾಗಣೆಯಲ್ಲಿ ತೊಡಗಿರುತ್ತಾರೆ ಎಂಬುದು ಖೇದಕರ ಸಂಗತಿ. ಆಂಧ್ರ ಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಆಟೋಗೆ ಲಾರಿ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಆಟೋದಲ್ಲಿದ್ದ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಆದರೆ ಈ ರಸ್ತೆ ಅಪಘಾತಕ್ಕೆ ಟ್ವಿಸ್ಟ್ ಸಿಕ್ಕಿದೆ.

ಇತ್ತೀಚೆಗೆ ಬಿ.ಆರ್.ಅಂಬೇಡ್ಕರ್ ಕೋನಸೀಮಾ ಜಿಲ್ಲೆಯ (konaseema district) ಮುಮ್ಮಿಡಿವರಂ ಬಳಿ ನಡೆದ ರಸ್ತೆ ಅಪಘಾತದಲ್ಲಿ ಅಕ್ರಮವಾಗಿ ನಕ್ಷತ್ರ ಆಮೆ ಸಾಗಾಟ ಮಾಡಿರುವುದು ಬೆಳಕಿಗೆ ಬಂದಿದೆ. ಕಾಟ್ರೇನಿಕೋಣ ಮಂಡಲದ (Katrenikona Mandal) ಅಗ್ರಹಾರದಲ್ಲಿ ಅಮಲಾಪುರ ಕಡೆಗೆ ಹೋಗುತ್ತಿದ್ದ ಆಟೋಗೆ ಎದುರಿನಿಂದ ಬರುತ್ತಿದ್ದ ಲಾರಿ ಡಿಕ್ಕಿ ಹೊಡೆದಿದೆ.

ಅಪಘಾತದದ ತೀವ್ರತೆಗೆ ಆಟೋದಲ್ಲಿದ್ದ ಇಬ್ಬರು ಗಾಯಗೊಂಡಿದ್ದಾರೆ. ತಕ್ಷಣ ಅವರನ್ನು 108 ಆಂಬುಲೆನ್ಸ್ ಸಹಾಯದಿಂದ ಅಮಲಾಪುರಂ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಈ ಅಪಘಾತದ ಸ್ಥಳದಲ್ಲಿ ಒಂದಷ್ಟು ಆಮೆಗಳು ಕೂಡ ಸತ್ತು ಬಿದ್ದಿದ್ದವು. ರಸ್ತೆ ದಾಟುವಾಗ ವಾಹನಗಳ ಟೈರ್ ಅಡಿಯಲ್ಲಿ ಸಿಕ್ಕಿ ಬಿದ್ದು ಸತ್ತಿವೆ ಎಂದು ಸ್ಥಳೀಯರು ಮೊದಲು ಭಾವಿಸಿದ್ದರು.

ಆದರೆ ಅಪಘಾತಕ್ಕೀಡಾದ ಆಟೋದಲ್ಲಿದ್ದ ಬ್ಯಾಗ್ ಗಳು ಚಲಿಸುತ್ತಿರುವುದು ಕಂಡು ಬಂದಿದೆ. ಅನುಮಾನ ಬಂದು ಚೀಲಗಳನ್ನು ತೆರೆದು ನೋಡಿದಾಗ ಅದರೊಳಗೆ 15 ಆಮೆಗಳು (Star Tortoise) ಇದ್ದವು. ಇದರಿಂದ ಆಮೆಗಳು ಕಳ್ಳಸಾಗಣೆಯಾಗುತ್ತಿರುವುದು ಸ್ಥಳೀಯರ ಅರಿವಿಗೆ ಬಂದಿದೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

To read more in Telugu click here