Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಪತ್ತೆಯಾಗಿದ್ದ ಮಗನ ಪತ್ತೆಗೆ ನೆರವಾಯ್ತು ಆಧಾರ್ ಕಾರ್ಡ್: ಬೆಂಗಳೂರಿನಲ್ಲಿ ಕಳೆದುಹೋಗಿದ್ದ ಮಗ ನಾಗಪುರದಲ್ಲಿ ಪತ್ತೆ

ಯಲಹಂಕ ಬಳಿಯ ಸಿಂಗನಾಯಕನಹಳ್ಳಿ ತರಕಾರಿ ಮಾರುಕಟ್ಟೆಯಲ್ಲಿ ಪಾರ್ವತಮ್ಮ ಅವರ ಪುತ್ರ ಭರತ್ 2016ರಲ್ಲಿ ನಾಪತ್ತೆಯಾಗಿದ್ದ

ನಾಪತ್ತೆಯಾಗಿದ್ದ ಮಗನ ಪತ್ತೆಗೆ ನೆರವಾಯ್ತು ಆಧಾರ್ ಕಾರ್ಡ್: ಬೆಂಗಳೂರಿನಲ್ಲಿ ಕಳೆದುಹೋಗಿದ್ದ ಮಗ ನಾಗಪುರದಲ್ಲಿ ಪತ್ತೆ
ನಾಗಪುರದಲ್ಲಿ ಮಗನ ಬಿಗಿದಪ್ಪಿದ ತಾಯಿ ಪಾರ್ವತಮ್ಮ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Mar 12, 2022 | 7:01 AM

ಬೆಂಗಳೂರು: ನಗರದಲ್ಲಿ ಕಳೆದುಹೋಗಿದ್ದ (Missing) ಮಾತು ಬಾರದ ಮಗನನ್ನು ಮತ್ತೆ ತಾಯಿಯ ಮಡಿಲಿಗೆ ಸೇರಿಸಲು ಆಧಾರ್ ಕಾರ್ಡ್​ (Aadhaar Card) ನೆರವಿಗೆ ಬಂದಿದೆ. 6 ವರ್ಷದ ಬಳಿಕ ತಾಯಿಯನ್ನು ಸೇರಿದ ಮಗ ಭರತ್ ಇದೀಗ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾನೆ. ಯಲಹಂಕ ಬಳಿಯ ಸಿಂಗನಾಯಕನಹಳ್ಳಿ ತರಕಾರಿ ಮಾರುಕಟ್ಟೆಯಲ್ಲಿ ಪಾರ್ವತಮ್ಮ ಅವರ ಪುತ್ರ ಭರತ್ 2016ರಲ್ಲಿ ನಾಪತ್ತೆಯಾಗಿದ್ದ. ಎಷ್ಟು ಹುಡುಕಾಡಿದರೂ ಭರತ್ ಸಿಕ್ಕಿರಲಿಲ್ಲ. ಹೀಗಾಗಿ ಪಾರ್ವತಮ್ಮ ಅನಿವಾರ್ಯವಾಗಿ ಯಲಹಂಕ ಠಾಣೆಯಲ್ಲಿ ಕಿಡ್ನ್ಯಾಪ್ ಕೇಸ್ ದಾಖಲಿಸಿದ್ದರು.

ಯಲಹಂಕದಿಂದ ನಾಗಪುರ ರೈಲ್ವೆ ನಿಲ್ದಾಣಕ್ಕೆ ಹೋಗಿದ್ದ ಭರತ್, ರೈಲ್ವೆ ಭದ್ರತಾ ಪಡೆ ಅಧಿಕಾರಿಗಳಿಗೆ ಸಿಕ್ಕಿದ್ದ. ಅವರು ಅವನಿಗೆ ಆಶ್ರಯ ಒದಗಿಸಿದ್ದರು. 6 ವರ್ಷಗಳ ಬಳಿಕ ಆಧಾರ್ ಕಾರ್ಡ್ ಮಾಡಿಸಲು ಬೆರಳು ಮುದ್ರೆ ಪಡೆದುಕೊಂಡಿದ್ದರು. ಈ ವೇಳೆ ಅದಾಗಲೇ ಆಧಾರ್ ಮಾಡಿಸಿರುವುದು ಪತ್ತೆಯಾಗಿತ್ತು. ಆಧಾರ್‌ನಲ್ಲಿದ್ದ ವಿಳಾಸ ಸಂಪರ್ಕಿಸಿದ ಅಧಿಕಾರಿಗಳು ಭರತ್ ತಾಯಿ ಪಾರ್ವತಮ್ಮಗೆ ಕರೆ ಮಾಡಿ ವಿಷಯ ತಿಳಿಸಿದರು. ಅಧಿಕಾರಿಗಳ ನೆರವಿನಿಂದ ಭರತ್ ತಾಯಿಯ ಮಡಿಲು ಸೇರುವಲ್ಲಿ ಯಶಸ್ವಿಯಾದರು.

ಯಲಹಂಕದ ರೈತ ಸಂತೆಯಲ್ಲಿ ತರಕಾರಿ ಮಾರಾಟದ ವೇಳೆ ಪಾರ್ವತಮ್ಮ ಮಗನನ್ನು ಕಳೆದುಕೊಂಡಿದ್ದರು. ಮಗನಿಗೆ ಎಲ್ಲೆಡೆ ಹುಡುಕಾಡಿ ಸೋತು ಹೋಗಿದ್ದರು. ಯಲಹಂಕದಲ್ಲಿ ತಪ್ಪಿಸಿಕೊಂಡಿದ್ದ ಭರತ್ ಹೇಗೋ 10 ತಿಂಗಳ ನಂತರ ನಾಗಪುರ ಸೇರಿದ್ದ. ಕಂಗೆಟ್ಟು ಓಡಾಡುತ್ತಿದ್ದ ಭರತ್‌ನನ್ನು ಕಂಡು ರಕ್ಷಿಸಿದ್ದ ರೈಲ್ವೆ ಭದ್ರತಾ ಪಡೆ ಅಧಿಕಾರಿಗಳು ಅವನನ್ನು ಪುನರ್ವಸತಿ ಕೇಂದ್ರಕ್ಕೆ ಸೇರಿಸಿದ್ದರು.

ಭರತ್‌ಗೆ ಆಧಾರ್​ಕಾರ್ಡ್ ಮಾಡಿಸಲು ಪುನರ್ವಸತಿ ಕೇಂದ್ರದ ಅಧಿಕಾರಿ ಮಹೇಶ್ 2022ರ ಜನವರಿಯಲ್ಲಿ ಸ್ಥಳೀಯ ಆಧಾರ್ ಸೇವಾ ಕೇಂದ್ರಕ್ಕೆ ಕರೆದೊಯ್ದಿದ್ದರು. ಭರತ್‌ನ ಹೊಸ ಆಧಾರ್ ಕಾರ್ಡ್ ತಿರಸ್ಕೃತವಾಗಿರುವ ಬಗ್ಗೆ ಮಾಹಿತಿ ನೀಡಿದ್ದ ಆಧಾರ್ ಸೇವಾ ಕೇಂದ್ರ ಅಧಿಕಾರಿ ಅನಿಲ್ ಮರಾಠೆ, ಈಗಾಗಲೇ ಬೆಂಗಳೂರಿನಲ್ಲಿ ಬಿ.ಭರತ್ ಕುಮಾರ್ ಹೆಸರಿನಲ್ಲಿ ಆತನ ಕಾರ್ಡ್ ಚಾಲ್ತಿಯಲ್ಲಿರುವ ಬಗ್ಗೆ ಮಾಹಿತಿ ನೀಡಿದ್ದರು.

ಈ ಮಾಹಿತಿ ತಿಳಿದ ಕೂಡಲೇ ಭರತ್ ಪೋಷಕರ ವಿಳಾಸ ಪತ್ತೆಗೆ ನೆರವಾಗುವಂತೆ ಮಹೇಶ್ ವಿನಂತಿಸಿದರು. ಮಹೇಶ್ ಮನವಿಗೆ ಸ್ಪಂದಿಸಿದ ಆಧಾರ್ ಕೇಂದ್ರದ ಅಧಿಕಾರಿಗಳು ಬಿ.ಭರತ್ ಕುಮಾರ್ ಹೆಸರಿನಲ್ಲಿದ್ದ ವ್ಯಕ್ತಿಯ ಬೆರಳಚ್ಚು ಹೋಲಿಕೆ ಮಾಡಿದಾಗ ಎರಡಕ್ಕೂ ಸಾಮ್ಯತೆ ಇದ್ದುದು ಗುರುತಿಸಿದರು. ಭರತ್‌ನ ತಾಯಿ ಪಾರ್ವತಮ್ಮ ಅವರ ಮೊಬೈಲ್ ನಂಬರ್ ಸಹ ಅದೇ ಕಾರ್ಡ್​ನಲ್ಲಿ ಸಿಕ್ಕಿತು. ಈ ಮಾಹಿತಿಯನ್ನು ಅವರು ತಕ್ಷಣ ಕರ್ನಾಟಕದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ನೀಡಿದರು.

Mother-Son

ಮಹಾರಾಷ್ಟ್ರದ ನಾಗಪುರದಲ್ಲಿ ಮಗ ಭರತ್ ಜೊತೆಗೆ ತಾಯಿ ಪಾರ್ವತಮ್ಮ

ಯಲಹಂಕ ಪೊಲೀಸರನ್ನು ಸಂಪರ್ಕಸಿದ ನಾಗಪುರ ಪುನರ್ವಸತಿ ಕೇಂದ್ರದ ಅಧಿಕಾರಿಗಳು ವಿಷಯ ತಿಳಿಸಿದರು. ಯಲಹಂಕ ಠಾಣೆ ಇನ್ಸ್‌ಪೆಕ್ಟರ್ ಕೆ.ಪಿ.ಸತ್ಯನಾರಾಯಣ್ ಭರತ್ ತಾಯಿಯನ್ನು ಪತ್ತೆ ಹಚ್ಚಿ, ತಮ್ಮ ಠಾಣಾ ಸಿಬ್ಬಂದಿಯೊಂದಿಗೆ ಪಾರ್ವತಮ್ಮ ಅವರನ್ನ ನಾಗಪುರಕ್ಕೆ ಕಳುಹಿಸಿ ಕೊಟ್ಟರು. ಮಾರ್ಚ್ 7ರಂದು ಮಗನನ್ನು ಕಂಡು ಭಾವುಕರಾದ ಪಾರ್ವತಮ್ಮ ಅಪ್ಪಿ ಮುದ್ದಾಡಿದರು. ಎರಡು ದಿನಗಳ ಬಳಿಕ ಮಗನನ್ನು ಮನೆಗೆ ಕರೆ ತಂದರು. 6 ವರ್ಷಗಳ ಬಳಿಕ ಕೊನೆಗೂ ಮಗ ಭರತ್ ತಾಯಿಯ ಮಡಿಲು ಸೇರಿದ. ಪುನರ್ವಸತಿ ಕೇಂದ್ರದ ಅಧಿಕಾರಿಗಳು ಮತ್ತು ಆಧಾರ್ ಕೇಂದ್ರದ ಅಧಿಕಾರಿಗಳನ್ನು ಅವರು ಶ್ಲಾಘಿಸಿದರು.

ಇದನ್ನೂ ಓದಿ: Instant ePAN Online: ಆಧಾರ್ ಸಂಖ್ಯೆ ಬಳಸಿ ತಕ್ಷಣ ePAN ಆನ್​ಲೈನ್​ನಲ್ಲಿ ಪಡೆಯುವುದು ಹೇಗೆ?

ಇದನ್ನೂ ಓದಿ: Baal Aadhaar Card: ನವಜಾತ ಶಿಶುವಿಗೇ ಪಡೆಯಿರಿ ಬಾಲ್ ಆಧಾರ್ ಕಾರ್ಡ್; ಅರ್ಜಿ ಸಲ್ಲಿಕೆ ಹಂತಹಂತ ಮಾಹಿತಿ ಇಲ್ಲಿದೆ

Published On - 6:58 am, Sat, 12 March 22

ಮುಷ್ಕರ ಕಾರಣ ಮಹಾರಾಷ್ಟ್ರದ ಟ್ರಕ್ಕನ್ನು ಟೋಲ್ ಗೇಟ್ ಬಳಿ ತಡೆಯಲಾಗಿತ್ತು
ಮುಷ್ಕರ ಕಾರಣ ಮಹಾರಾಷ್ಟ್ರದ ಟ್ರಕ್ಕನ್ನು ಟೋಲ್ ಗೇಟ್ ಬಳಿ ತಡೆಯಲಾಗಿತ್ತು
ಗರೀಬ್​ ರಥ್​ ಎಕ್ಸ್​ಪ್ರೆಸ್​ ರೈಲನ್ನು ಹಳಿ ತಪ್ಪಿಸುವ ಯತ್ನ ವಿಫಲ
ಗರೀಬ್​ ರಥ್​ ಎಕ್ಸ್​ಪ್ರೆಸ್​ ರೈಲನ್ನು ಹಳಿ ತಪ್ಪಿಸುವ ಯತ್ನ ವಿಫಲ
ಮಲೆ ಮಹದೇಶ್ವರ ಬೆಟ್ಟದಲ್ಲಿ ಹುಂಡಿ ಏಣಿಕೆ: ಮತ್ತೆ ಕೋಟ್ಯಧಿಪತಿಯಾದ ಮಾದಪ್ಪ
ಮಲೆ ಮಹದೇಶ್ವರ ಬೆಟ್ಟದಲ್ಲಿ ಹುಂಡಿ ಏಣಿಕೆ: ಮತ್ತೆ ಕೋಟ್ಯಧಿಪತಿಯಾದ ಮಾದಪ್ಪ
ನೋ ಬಾಲ್, ಫ್ರೀ ಹಿಟ್, ರನೌಟ್​: ಸೂಪರ್​ ಓವರ್​ನಲ್ಲಿ ಡೆಲ್ಲಿಗೆ ರೋಚಕ ಜಯ
ನೋ ಬಾಲ್, ಫ್ರೀ ಹಿಟ್, ರನೌಟ್​: ಸೂಪರ್​ ಓವರ್​ನಲ್ಲಿ ಡೆಲ್ಲಿಗೆ ರೋಚಕ ಜಯ
Daily Devotional: ಧಾರ್ಮಿಕ ಕ್ಷೇತ್ರಗಳಲ್ಲಿ ಪಂಕ್ತಿ ಭೋಜನದ ಮಹತ್ವ
Daily Devotional: ಧಾರ್ಮಿಕ ಕ್ಷೇತ್ರಗಳಲ್ಲಿ ಪಂಕ್ತಿ ಭೋಜನದ ಮಹತ್ವ
Daily Horoscope: ಈ ರಾಶಿಯವರಿಗೆ ಇಂದು ಆರು ಗ್ರಹಗಳ ಅನುಗ್ರಹ
Daily Horoscope: ಈ ರಾಶಿಯವರಿಗೆ ಇಂದು ಆರು ಗ್ರಹಗಳ ಅನುಗ್ರಹ
ಕೇಕ್ ಕಟ್ ಮಾಡಿ ಮೊದಲ ಪೀಸನ್ನು ಶಿವಕುಮಾರ್​ಗೆ ನೀಡಿದ ಸಿದ್ದರಾಮಯ್ಯ
ಕೇಕ್ ಕಟ್ ಮಾಡಿ ಮೊದಲ ಪೀಸನ್ನು ಶಿವಕುಮಾರ್​ಗೆ ನೀಡಿದ ಸಿದ್ದರಾಮಯ್ಯ
ಮ್ಯಾಜಿಸ್ಟ್ರೇಟ್ 50,000 ರೂ. ಲಂಚ ಕೇಳಿದ್ದಕ್ಕೆ ಮರ ಹತ್ತಿದ ವೃದ್ಧೆ!
ಮ್ಯಾಜಿಸ್ಟ್ರೇಟ್ 50,000 ರೂ. ಲಂಚ ಕೇಳಿದ್ದಕ್ಕೆ ಮರ ಹತ್ತಿದ ವೃದ್ಧೆ!
ಮತ್ತೆ ಜೈಲಿಗೆ ಹೋದ ರಜತ್ ಬಗ್ಗೆ ಕೇಳಿದ್ದಕ್ಕೆ ವಿನಯ್ ಗೌಡ ಹೇಳಿದ್ದೇನು?
ಮತ್ತೆ ಜೈಲಿಗೆ ಹೋದ ರಜತ್ ಬಗ್ಗೆ ಕೇಳಿದ್ದಕ್ಕೆ ವಿನಯ್ ಗೌಡ ಹೇಳಿದ್ದೇನು?
ಸಂಪುಟ ಪುನಾರಚನೆ ಹೈಕಮಾಂಡ್ ವಿವೇಚನೆಗೆ ಬಿಟ್ಟ ವಿಷಯವಾಗಿದೆ: ಸಚಿವ
ಸಂಪುಟ ಪುನಾರಚನೆ ಹೈಕಮಾಂಡ್ ವಿವೇಚನೆಗೆ ಬಿಟ್ಟ ವಿಷಯವಾಗಿದೆ: ಸಚಿವ