AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ಮಶಾನದಲ್ಲಿ ವಿಚಿತ್ರ ರಂಗೋಲಿಯ ಚಿತ್ತಾರ! ಅದ ಕಂಡು ಬೆಚ್ಚಿಬಿದ್ದ ಸ್ಥಳೀಯರು

ಆಂಧ್ರ ಪ್ರದೇಶದಲ್ಲಿ ದಾರುಣ ಘಟನೆಯೊಂದು ಬೆಳಕಿಗೆ ಬಂದಿದೆ. ಸ್ಮಶಾನದಲ್ಲಿ ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಘಟನೆಯ ವಿವರಗಳು ಈ ಕೆಳಗಿನಂತಿವೆ.

ಸ್ಮಶಾನದಲ್ಲಿ ವಿಚಿತ್ರ ರಂಗೋಲಿಯ ಚಿತ್ತಾರ! ಅದ ಕಂಡು ಬೆಚ್ಚಿಬಿದ್ದ ಸ್ಥಳೀಯರು
ಸ್ಮಶಾನದಲ್ಲಿ ವಿಚಿತ್ರ ರಂಗೋಲಿಯ ಚಿತ್ತಾರ! ಅದ ಕಂಡು ಬೆಚ್ಚಿಬಿದ್ದ ಸ್ಥಳೀಯರು
Follow us
TV9 Web
| Updated By: ಸಾಧು ಶ್ರೀನಾಥ್​

Updated on: Aug 24, 2022 | 4:12 PM

Andhra Pradesh Crime News: ಈ ಜಗತ್ತಿನಲ್ಲಿ ಮೂಢನಂಬಿಕೆಗಳು.. ಕೆಲವರ ಮೆದುಳಿನಲ್ಲಿ ಭದ್ರವಾಗಿ ಬೇರೂರಿ ಕುಳಿತುಬಿಟ್ಟಿದೆ. ವಾಮಾಚಾರ ಮತ್ತು ಮಾಟಮಂತ್ರದ ಹೆಸರಿನಲ್ಲಿ ದೆವ್ವಗಳನ್ನು ಸೃಷ್ಟಿಸುತ್ತಾರೆ. ಅದಕ್ಕೂ ಮುನ್ನ ಜೀವಂತವಾಗಿರುವವರ ಪ್ರಾಣ ಹಿಂಡಲು, ಜೀವ ತೆಗೆಯಲು ಕೂಡ ಹಿಂದೆ ಸರಿಯುವುದಿಲ್ಲ. ನರಬಲಿಯಂತಹ ಅನೇಕ ಘಟನೆಗಳನ್ನು ನಾವು ಆಗಾಗ ನೋಡಿದ್ದೇವೆ. ಇತ್ತೀಚೆಗೆ ಆಂಧ್ರ ಪ್ರದೇಶದ ಶ್ರೀ ಸತ್ಯಸಾಯಿ ಜಿಲ್ಲೆಯಲ್ಲಿ ಇಂತಹದ್ದೇ ಘಟನೆಯೊಂದು ಬೆಳಕಿಗೆ ಬಂದಿದೆ.

ಸಾಮಾನ್ಯವಾಗಿ ಯಾರಾದರೂ ಸತ್ತ ನಂತರ, ಅವರನ್ನು ಅಂತ್ಯಕ್ರಿಯೆಗಾಗಿ ಶಾಸ್ತ್ರೋಕ್ತವಾಗಿ ಸ್ಮಶಾನಕ್ಕೆ ಕರೆದೊಯ್ಯಲಾಗುತ್ತದೆ. ಆದರೆ ಒಬ್ಬ ಜೀವಂತ ವ್ಯಕ್ತಿಯನ್ನೇ ಸ್ಮಶಾನಕ್ಕೆ ಕರೆದೊಯ್ದು ಕೊಲ್ಲಲ್ಪಡಲಾಗಿದೆ. ಇದೆಲ್ಲಾ ನಡೆದಿರುವುದು ಗುಪ್ತ ನಿಧಿಗಾಗಿ! ಈ ದುಷ್ಕೃತ್ಯದ ಬಗ್ಗೆ ಸ್ಥಳೀಯರು ಮತ್ತಷ್ಟು ಮಾಹಿತಿ ನೀಡಿದ್ದಾರೆ. ಮರವಪಲ್ಲಿ ಹೊಂಡದ ಬಳಿ ಈ ಘಟನೆ ನಡೆದಿದೆ. ಮೃತನನ್ನು ನಾಗಾರ್ಜುನ ರೆಡ್ಡಿ ಎಂದು ಗುರುತಿಸಲಾಗಿದೆ. ಅವರನ್ನು ಅಮಾನುಷವಾಗಿ ಕಲ್ಲಿನಿಂದ ಹೊಡೆದು ಕೊಂದಿದ್ದಾರೆ. ಈ ಕೊಲೆ ನಡೆದ ಸ್ಥಳದ ಬಳಿ ವಿಚಿತ್ರವಾಗಿ ದೈವಿಕ ಚಿತ್ತಾರಗಳು ಮತ್ತು ತಾಂತ್ರಿಕ ಪೂಜೆಯ ಕುರುಹುಗಳಿವೆ. ಅಲೌಕಿಕ ಶಕ್ತಿ ಮತ್ತು ಗುಪ್ತ ನಿಧಿಗಾಗಿ ಈ ಕೊಲೆ ಮಾಡಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಪೊಲೀಸರು ಸ್ಥಳಕ್ಕೆ ಬಂದು, ಶ್ವಾನದಳದ ಸಹಾಯದಿಂದ ವಿವರ ಸಂಗ್ರಹಿಸಿದ್ದಾರೆ. ಸಂಪೂರ್ಣ ಮಾಹಿತಿ ಸಂಗ್ರಹಿಸುತ್ತಿದ್ದೇವೆ ಎಂದಿರುವ ಪೊಲೀಸರು ಶೀಘ್ರವೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

To read more in Telugu click here