AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bengaluru Crime |ಅಡುಗೆ ತಯಾರಿಸುವ ವಿಚಾರಕ್ಕೆ ಶೆಫ್​ಗಳ ನಡುವೆ ಜಗಳ.. ಚಾಕು ಇರಿದು ಯುವಕನ ಕೊಲೆ, ಆರೋಪಿ ಎಸ್ಕೇಪ್

ಜೆ.ಪಿ.ನಗರದ ವಾಲ್ ಸ್ಟ್ರೀಟ್ ಪಬ್‌ನಲ್ಲಿ ಶೆಫ್‌ಗಳಾಗಿದ್ದ ಸಾಗರ್ ಮತ್ತು ಮೌಸಿಕ್ ನಡುವೆ ಅಡುಗೆ ತಯಾರಿಸುವ ವಿಚಾರಕ್ಕೆ ಜಗಳ ಶುರುವಾಗಿದ್ದು ಅದು ಕೊಲೆಯಲ್ಲಿ ಅಂತ್ಯ ಕಂಡಿದೆ. ಚಾಕುವಿನಿಂದ ಇರಿದು ಪಶ್ಚಿಮ ಬಂಗಾಳದ ಯುವಕ ಸಾಗರ್​ನನ್ನು ಮೌಸಿಕ್ ಬರ್ಬರವಾಗಿ ಹತ್ಯೆ ಮಾಡಿದ್ದಾನೆ.

Bengaluru Crime |ಅಡುಗೆ ತಯಾರಿಸುವ ವಿಚಾರಕ್ಕೆ ಶೆಫ್​ಗಳ ನಡುವೆ ಜಗಳ.. ಚಾಕು ಇರಿದು ಯುವಕನ ಕೊಲೆ, ಆರೋಪಿ ಎಸ್ಕೇಪ್
ಸಾಗರ್ (ಎಡ) ಮೌಸಿಕ್ (ಬಲ)
ಆಯೇಷಾ ಬಾನು
| Updated By: Praveen Sahu|

Updated on:Mar 23, 2021 | 12:44 PM

Share

ಬೆಂಗಳೂರು: ಅಡುಗೆ ತಯಾರಿಸುವ ವಿಚಾರಕ್ಕೆ ಜಗಳವಾಗಿ ಯುವಕನ ಹತ್ಯೆ ಮಾಡಿದ ಘಟನೆ ಬೆಂಗಳೂರಿನ ಜೆ.ಪಿ.ನಗರದ ಪಬ್‌ನಲ್ಲಿ ನಡೆದಿದೆ. ಪಶ್ಚಿಮ ಬಂಗಾಳದ ಸಾಗರ್(22) ಕೊಲೆಯಾದ ದುರ್ದೈವಿ. ಪಬ್‌ನಲ್ಲಿ ಶೆಫ್‌ಗಳಾಗಿದ್ದ ಸಾಗರ್ ಮತ್ತು ಮೌಸಿಕ್ ನಡುವೆ ಜಗಳ ಉಂಟಾಗಿ ಮೌಸಿಕ್ ಹೊಟ್ಟೆ, ಎದೆಗೆ ಚಾಕು ಇರಿದು ಸಾಗರ್​ನನ್ನು ಕೊಲೆ ಮಾಡಿದ್ದಾನೆ.

ಜೆ.ಪಿ.ನಗರದ ವಾಲ್ ಸ್ಟ್ರೀಟ್ ಪಬ್‌ನಲ್ಲಿ ಶೆಫ್‌ಗಳಾಗಿದ್ದ ಸಾಗರ್ ಮತ್ತು ಮೌಸಿಕ್ ನಡುವೆ ಅಡುಗೆ ತಯಾರಿಸುವ ವಿಚಾರಕ್ಕೆ ಜಗಳ ಶುರುವಾಗಿದ್ದು ಅದು ಕೊಲೆಯಲ್ಲಿ ಅಂತ್ಯ ಕಂಡಿದೆ. ಚಾಕುವಿನಿಂದ ಇರಿದು ಪಶ್ಚಿಮ ಬಂಗಾಳದ ಯುವಕ ಸಾಗರ್​ನನ್ನು ಮೌಸಿಕ್ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಮಾರ್ಚ್ 20ರ ತಡರಾತ್ರಿ ಈ ಘಟನೆ ನಡೆದಿದೆ.

ಅಡುಗೆ ರೆಡಿ ಮಾಡೋದಕ್ಕೆ ಇಬ್ಬರ ನಡುವೆ ಜಗಳವಾಗಿದೆ. ಬಳಿಕ ಸರಿಯಾಗಿ ಕೆಲಸ ಮಾಡಲ್ಲವೆಂದು ಮೌಸಿಕ್ ಮೇಲೆ ಸಾಗರ್ ಹಲ್ಲೆ ಮಾಡಿದ್ದಾನೆ. ಈ ವೇಳೆ ಕೋಪಗೊಂಡ ಮೌಸಿಕ್ ಸ್ಥಳದಲ್ಲಿದ್ದ ಚಾಕುವಿನಿಂದ ಸಾಗರ್​ನ ಹೊಟ್ಟೆ ಹಾಗೂ ಎದೆಭಾಗಕ್ಕೆ ಇರಿದಿದ್ದಾನೆ. ಕೂಡಲೇ ಗಾಯಾಳು ಸಾಗರ್​ನನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಆದ್ರೆ ಚಿಕಿತ್ಸೆ ಫಲಿಸದೆ ಸಾಗರ್ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾನೆ. ಘಟನೆಯ ನಂತರ ಸ್ಥಳದಲ್ಲಿದ್ದ ಆರೋಪಿ ಮೌಸಿಕ್ ಪರಾರಿಯಾಗಿದ್ದು ತಲೆ ಮರೆಸಿಕೊಂಡಿದ್ದಾನೆ. ಸ್ಥಳಕ್ಕೆ ಜೆ.ಪಿ.ನಗರ ಠಾಣೆ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ….

ಇದನ್ನೂ ಓದಿ: ತಿಪ್ಪೆ ಜಾಗದ ವಿಚಾರಕ್ಕೆ ನಡೆದ ಜಗಳ ಕೊಲೆಯಲ್ಲಿ ಅಂತ್ಯ, ಯಾವೂರಲ್ಲಿ?

Published On - 7:44 am, Sun, 21 March 21