AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಹಾರಾಷ್ಟ್ರ: ಪ್ರಿಯಕರನೊಂದಿಗೆ ಓಡಿ ಹೋಗಲು ತನ್ನ ಇಬ್ಬರು ಮಕ್ಕಳನ್ನು ಹತ್ಯೆ ಮಾಡಿದ್ದ ಮಹಿಳೆಯ ಬಂಧನ

ಪ್ರಿಯಕರನೊಂದಿಗೆ ಓಡಿ ಹೋಗಲು ತನ್ನ ಇಬ್ಬರು ಮಕ್ಕಳನ್ನು ಹತ್ಯೆ ಮಾಡಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಮಹಾರಾಷ್ಟ್ರದ ರಾಯಗಢದಲ್ಲಿ 25 ವರ್ಷದ ಮಹಿಳೆಯು ತನ್ನ ಪ್ರೀತಿಗೆ ಮಕ್ಕಳು ಅಡ್ಡಬರುತ್ತವೆ ಎಂದು ಐದು ಹಾಗೂ ಮೂರು ವರ್ಷದ ಮಕ್ಕಳನ್ನು ಹತ್ಯೆ ಮಾಡಿದ್ದಳು.

ಮಹಾರಾಷ್ಟ್ರ: ಪ್ರಿಯಕರನೊಂದಿಗೆ ಓಡಿ ಹೋಗಲು ತನ್ನ ಇಬ್ಬರು ಮಕ್ಕಳನ್ನು ಹತ್ಯೆ ಮಾಡಿದ್ದ ಮಹಿಳೆಯ ಬಂಧನ
ಮಕ್ಕಳ ಹತ್ಯೆ
ನಯನಾ ರಾಜೀವ್
|

Updated on:Apr 10, 2024 | 8:46 AM

Share

ಪ್ರಿಯಕರನೊಂದಿಗೆ ಓಡಿ ಹೋಗಲು ತನ್ನ ಇಬ್ಬರು ಮಕ್ಕಳನ್ನು ಹತ್ಯೆ ಮಾಡಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಮಹಾರಾಷ್ಟ್ರದ ರಾಯಗಢದಲ್ಲಿ 25 ವರ್ಷದ ಮಹಿಳೆಯು ತನ್ನ ಪ್ರೀತಿಗೆ ಮಕ್ಕಳು ಅಡ್ಡಬರುತ್ತವೆ ಎಂದು ಐದು ಹಾಗೂ ಮೂರು ವರ್ಷದ ಮಕ್ಕಳನ್ನು ಹತ್ಯೆ ಮಾಡಿದ್ದಳು.

ತಾನು ಮದುವೆಗೂ ಮುನ್ನ ಸಂಬಂಧ ಹೊಂದಿದ್ದ ತನ್ನ ಪ್ರಿಯಕರನೊಂದಿಗೆ ಓಡಿಹೋಗುವ ಯೋಜನೆಗೆ ಮಕ್ಕಳು ಅಡ್ಡಿಯಾಗುತ್ತಿದ್ದರು ಎಂದು ಈ ನಿರ್ಧಾರ ಮಾಡಿದ್ದಳು. ಮಾರ್ಚ್ 31 ರಂದು ಮಕ್ಕಳ ಕೊಲೆ ನಡೆದಿದ್ದು, ಅವರ ತಂದೆ ಸದಾನಂದ್ ಪೋಲ್ ಅವರು ಮನೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ಮಕ್ಕಳನ್ನು ರಾಯಗಢದ ಅಲಿಬಾಗ್ ಸಿವಿಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು ಆದರೆ ವೈದ್ಯರು ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು.

ಪತಿ ಸದಾನಂದನ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ, ಘಟನೆ ನಡೆದ ದಿನ ಸಂಜೆ 4.30ರ ಸುಮಾರಿಗೆ ವಾರದ ಮಾರುಕಟ್ಟೆಗೆ ಹೋಗಿದ್ದೆ ಎಂದು ತಿಳಿಸಿದ್ದಾರೆ.

ಮತ್ತಷ್ಟು ಓದಿ: ಐಷಾರಾಮಿ ಮನೆಯಲ್ಲಿ ವಾಸಿಸುತ್ತಿದ್ದ ಮಹಿಳೆಯ ಹತ್ಯೆ, ಕೊಲೆ ಮಾಡಿದ್ದು ವೈದ್ಯನಾ, ಕಾರು ಚಾಲಕನಾ?

ಅವರು ತಮ್ಮ ಐದು ವರ್ಷದ ಮಗಳು ಮತ್ತು ಮೂರು ವರ್ಷದ ಮಗನಿಗೆ ಸಿಹಿತಿಂಡಿಗಳು ಮತ್ತು ಚಪ್ಪಲಿಯನ್ನು ಖರೀದಿಸಿ ವಾಪಸಾಗಿದ್ದೆ. ಸದಾನಂದ್ ಮನೆಗೆ ಹಿಂದಿರುಗಿದಾಗ, ಶೀತಲ್ ಮನೆಯ ಕೆಲಸಗಳನ್ನು ಮುಗಿಸಿಕೊಂಡು ಅಂಗಳದಲ್ಲಿದ್ದರು. ಮಕ್ಕಳ ಬಗ್ಗೆ ಕೇಳಿದಾಗ ಅವರು ಮನೆಯೊಳಗೆ ಮಲಗಿದ್ದಾರೆ ಎಂದು ಹೇಳಿದ್ದಾಳೆ.

ಸಂಜೆ 6 ಗಂಟೆಯಿಂದ ಮಕ್ಕಳು ಮಲಗಿದ್ದರು, ಪತಿ ಹೋದ ನಂತರ ಬೇರೆ ಯಾರೂ ಮನೆಯೊಳಗೆ ಬರಲಿಲ್ಲ, ಮಕ್ಕಳು ಹೊರಗೆ ಕಾಲಿಡಲಿಲ್ಲ ಎಂದು ಶೀತಲ್ ಪೊಲೀಸರಿಗೆ ತಿಳಿಸಿದ್ದಾರೆ. ಇದು ಅನುಮಾನಕ್ಕೆ ಎಡೆಮಾಡಿಕೊಟ್ಟಿದ್ದು, ಪೊಲೀಸರು ಮಕ್ಕಳ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

ಪೊಲೀಸರು ಶೀತಲ್ ಅವರ ಫೋನ್ ಅನ್ನು ಪರಿಶೀಲಿಸಿದಾಗ ಸಾಯಿನಾಥ್ ಜಾಧವ್ ಎಂಬ ವ್ಯಕ್ತಿಗೆ ಮಾಡಿದ ಸಂದೇಶಗಳು ಮತ್ತು ಕರೆಗಳು ಕಂಡುಬಂದವು. ನಂತರ ಶೀತಲ್ ಪೋಷಕರು ಮತ್ತು ಸಾಯಿನಾಥ್ ಅವರನ್ನು ವಿಚಾರಣೆಗಾಗಿ ಮಾಂಡ್ವಾಕ್ಕೆ ಕರೆತರಲಾಯಿತು.

ಇದೇ ವೇಳೆ ಪದೇ ಪದೇ ವಿಚಾರಣೆ ನಡೆಸಿದ ಬಳಿಕ ಶೀತಲ್ ತನ್ನ ಮಕ್ಕಳನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾಳೆ. ಬಾಯಿ ಮತ್ತು ಮೂಗನ್ನು ಮುಚ್ಚಲು ಬಳಸುತ್ತಿದ್ದ ಟವಲ್‌ನಿಂದ ಉಸಿರುಗಟ್ಟಿಸಿ ಸಾಯಿಸಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾಳೆ. ಪತಿ ಮಾರುಕಟ್ಟೆಗೆ ತೆರಳಿದಾಗ ಆಕೆ ತನ್ನ ಮಕ್ಕಳನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾಳೆ.

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 8:25 am, Wed, 10 April 24