AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಬಿಎಸ್​ಇ 12ನೇ ತರಗತಿ ಫಲಿತಾಂಶವು 30:30:40 ಮಾದರಿಯಲ್ಲಿರಲಿದೆ; ಸುಪ್ರೀಂಗೆ ಮಾಹಿತಿ ನೀಡಿರುವ ಬೋರ್ಡ್​

CBSE Class 12 Exam: 10 ಮತ್ತು 11ನೇ ತರಗತಿಯಿಂದ ಪರಿಗಣಿಸಲ್ಪಡುವ ಶೇ.60ರಷ್ಟು ಅಂಕಗಳಲ್ಲಿ ಶೇ.30ರಷ್ಟು ಅಂಕ 11ನೇ ತರಗತಿಯ ಅಂತಿಮ ಪರೀಕ್ಷೆಯದ್ದಾಗಿರಲಿದ್ದು, ಇನ್ನುಳಿದ ಶೇ.30ರಷ್ಟು ಅಂಕ 10ನೇ ತರಗತಿಗಳಲ್ಲಿ ನಡೆಸಲಾದ ಪರೀಕ್ಷೆಗಳಿಂದ ಬೆಸ್ಟ್ ಆಫ್​ ತ್ರೀ ಮಾದರಿಯಲ್ಲಿ ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ ಎಂದು ಬೋರ್ಡ್​ ಅಭಿಪ್ರಾಯ ವ್ಯಕ್ತಪಡಿಸಿದೆ.

ಸಿಬಿಎಸ್​ಇ 12ನೇ ತರಗತಿ ಫಲಿತಾಂಶವು 30:30:40 ಮಾದರಿಯಲ್ಲಿರಲಿದೆ; ಸುಪ್ರೀಂಗೆ ಮಾಹಿತಿ ನೀಡಿರುವ ಬೋರ್ಡ್​
ಸುಪ್ರೀಂ​ ಕೋರ್ಟ್
TV9 Web
| Edited By: |

Updated on:Jun 17, 2021 | 12:55 PM

Share

ದೆಹಲಿ: ಸಿಬಿಎಸ್​ಇ 12ನೇ ತರಗತಿಯ ಫಲಿತಾಂಶ ಜುಲೈ 31ರ ಹಾಗೆ ಪ್ರಕಟವಾಗುವ ಸಾಧ್ಯತೆ ಇದೆ. ಇದಕ್ಕೂ ಮೊದಲು ಫಲಿತಾಂಶಕ್ಕೆ ಸಂಬಂಧಿಸಿದಂತೆ ಅಂಕ ಪರಿಗಣನೆಯ ಮಾನದಂಡದ ಕುರಿತು ಸುಪ್ರೀಂಕೋರ್ಟ್​ಗೆ ಮಾಹಿತಿ ನೀಡುತ್ತಿರುವ ಸಿಬಿಎಸ್​ಇ ಬೋರ್ಡ್​, 12ನೇ ತರಗತಿ ಮಕ್ಕಳ ಅಂಕವನ್ನು 11ನೇ ತರಗತಿ ಮತ್ತು 10ನೇ ತರಗತಿ ಪರೀಕ್ಷಾ ಫಲಿತಾಂಶದ ಸಹಾಯದೊಂದಿಗೆ ನಿರ್ಧರಿಸುವುದಾಗಿ ತಿಳಿಸಿದೆ. ಅಲ್ಲದೇ, ಒಟ್ಟಾರೆ ಫಲಿತಾಂಶಕ್ಕೆ 12ನೇ ತರಗತಿ ಮಕ್ಕಳ ಈ ಹಿಂದಿನ ಪೂರ್ವ ಸಿದ್ಧತಾ ಪರೀಕ್ಷೆಗಳ ಅಂಕವೂ ಪರಿಗಣಿಸಲ್ಪಡುತ್ತದೆ ಎಂದು ಮಾಹಿತಿ ನೀಡಿದೆ.

ಈ ಪೈಕಿ ಶೇ.40ರಷ್ಟು ಅಂಕವು 12ನೇ ತರಗತಿಯಲ್ಲಿ ನಡೆಸಲಾದ ಬೇರೆ ಪರೀಕ್ಷೆಗಳ ಆಧಾರದಿಂದ ಪರಿಗಣಿಸಲ್ಪಟ್ಟರೆ ಶೇ.60ರಷ್ಟು ಅಂಕವು 11 ಹಾಗೂ 10ನೇ ತರಗತಿಯ ಪರೀಕ್ಷೆಗಳ ಮೇಲೆ ಅವಲಂಬಿತವಾಗಿರುತ್ತದೆ ಎಂದು ಸುಪ್ರೀಂಕೋರ್ಟ್​ಗೆ ತಿಳಿಸಲಾಗಿದೆ. ನ್ಯಾಯಮೂರ್ತಿ ಎ ಎಂ ಖಾನ್​ವಿಲ್ಕರ್ ಹಾಗೂ ದಿನೇಶ್ ಮಹೇಶ್ವರಿ ಅವರನ್ನೊಳಗೊಂಡ ಪೀಠವು ಬೋರ್ಡ್​ನ ಅಭಿಪ್ರಾಯವನ್ನು ಇಂದು (ಜೂನ್ 17) ಆಲಿಸುತ್ತಿದ್ದು, ಶೀಘ್ರದಲ್ಲಿ ಸ್ಪಷ್ಟ ಚಿತ್ರಣ ದೊರಕಲಿದೆ.

ಈ ಮಾನದಂಡದ ಆಧಾರದಲ್ಲಿ ಫಲಿತಾಂಶ ನೀಡುವ ಬಗ್ಗೆ 13 ಸದಸ್ಯರ ಸಮಿತಿ ಸಿಬಿಎಸ್​ಇಗೆ ಶಿಫಾರಸು ಮಾಡಿದ್ದು, ಇಂದು ಈ ಬಗ್ಗೆ ಸುಪ್ರೀಂಕೋರ್ಟ್​ಗೆ ಸಿಬಿಎಸ್ಇ ತನ್ನ ತೀರ್ಮಾನ ತಿಳಿಸುತ್ತಿದೆ. ಸದ್ಯ ಸುಪ್ರೀಂಕೋರ್ಟ್​ನಲ್ಲಿ ವಿಚಾರಣೆ ಆರಂಭವಾಗಿದ್ದು, ಸಿಬಿಎಸ್ಇ ಪರ ಅಟಾರ್ನಿ ಜನರಲ್ ಕೆ.ಕೆ‌.ವೇಣುಗೋಪಾಲ್ ವಾದ ಮಂಡಿಸುತ್ತಿದ್ದಾರೆ. 1929 ರಿಂದ ಸಿಬಿಎಸ್ಇ ಆಸ್ತಿತ್ವದಲ್ಲಿದೆ, ಈ ರೀತಿಯ ಪರಿಸ್ಥಿತಿ ಹಿಂದೆಂದೂ ಬಂದಿರಲಿಲ್ಲ ಎಂದು ತಿಳಿಸಿದ್ದಾರೆ.

ಸಿಬಿಎಸ್ಇ, ಐಸಿಎಸ್ಇ ಫಲಿತಾಂಶದ ಮಾನದಂಡದ ವಿವರ ನೀಡಿದ್ದಾರೆ. ಅದನ್ನು ಈಗ ಸಿಬಿಎಸ್ಇ ಪರ ವಕೀಲರು ವಿವರಿಸಲಿ ಎಂದು ಸುಪ್ರೀಂಕೋರ್ಟ್​ ಅಪೇಕ್ಷಿಸಿದ್ದು, ನ್ಯಾಯಮೂರ್ತಿ ಎ ಎಂ ಖಾನ್​ವಿಲ್ಕರ್ ಹಾಗೂ ದಿನೇಶ್ ಮಹೇಶ್ವರಿ ಅವರನ್ನೊಳಗೊಂಡ ಪೀಠ ವಿಚಾರಣೆ ನಡೆಸುತ್ತಿದೆ.

30:30:40 ರ ಅನುಪಾತದಲ್ಲಿ ಅಂಕ ನೀಡಿ 12 ನೇ ತರಗತಿಯ ಫಲಿತಾಂಶ ಪ್ರಕಟ 10 ಮತ್ತು 11ನೇ ತರಗತಿಯಿಂದ ಪರಿಗಣಿಸಲ್ಪಡುವ ಶೇ.60ರಷ್ಟು ಅಂಕಗಳಲ್ಲಿ ಶೇ.30ರಷ್ಟು ಅಂಕ 11ನೇ ತರಗತಿಯ ಅಂತಿಮ ಪರೀಕ್ಷೆಯದ್ದಾಗಿರಲಿದ್ದು, ಇನ್ನುಳಿದ ಶೇ.30ರಷ್ಟು ಅಂಕ 10ನೇ ತರಗತಿಗಳಲ್ಲಿ ನಡೆಸಲಾದ ಪರೀಕ್ಷೆಗಳಿಂದ ಬೆಸ್ಟ್ ಆಫ್​ ತ್ರೀ ಮಾದರಿಯಲ್ಲಿ ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ ಎಂದು ಬೋರ್ಡ್​ ಅಭಿಪ್ರಾಯ ವ್ಯಕ್ತಪಡಿಸಿದೆ. ಈ ಮಾದರಿಯನ್ನು ಅನುಸರಿಸಿದ ನಂತರವೂ ಯಾರೂ ಉತ್ತೀರ್ಣರಾಗುವ ಹಂತ ತಲುಪುವುದಿಲ್ಲವೋ ಅವರಿಗೆ ಮತ್ತೊಂದು ಅವಕಾಶ ನೀಡಲಾಗುವುದು. ಜತೆಗೆ, ಫಲಿತಾಂಶದ ಬಗ್ಗೆ ಅಸಮಾಧಾನ ಹೊಂದಿರುವ ವಿದ್ಯಾರ್ಥಿಗಳು ಕೂಡಾ ಪರಿಸ್ಥಿತಿ ತಿಳಿಯಾದ ನಂತರ ಪರೀಕ್ಷೆ ಬರೆಯಲು ಅವಕಾಶ ಪಡೆಯವಬಹುದು ಎಂದು ಹೇಳಲಾಗಿದೆ.

ಕೊರೊನಾ ಕಾರಣದಿಂದ ಈ ಬಾರಿ 12ನೇ ತರಗತಿ ಪರೀಕ್ಷೆ ರದ್ದಾದ ನಂತರ ಫಲಿತಾಂಶ ಪ್ರಕಟಣೆ ಬಗ್ಗೆ ಬೋರ್ಡ್​ ಸಾಕಷ್ಟು ಚಿಂತೆ ಮಾಡಿತ್ತು. ಪರೀಕ್ಷೆ ನಡೆಸದಿದ್ದರೂ ವಿದ್ಯಾರ್ಥಿಗಳಿಗೆ ಸೂಕ್ತ ನ್ಯಾಯ ದೊರಕಿಸಿಕೊಡಬಲ್ಲ ಫಲಿತಾಂಶ ನೀಡಲಿದ್ದೇವೆ. ಯಾವುದೇ ಗೊಂದಲಗಳಿಗೆ ಆಸ್ಪದ ನೀಡದ ರೀತಿಯಲ್ಲಿ ಪಾರದರ್ಶಕವಾಗಿ ಅಂಕ ನೀಡುವುದಾಗಿ ಭರವಸೆ ನೀಡಿತ್ತು.

ಇದನ್ನೂ ಓದಿ: CBSE 12th Board Exam 2021: 12 ನೇ ತರಗತಿಯ ಸಿಬಿಎಸ್‌ಇ, ಸಿಐಎಸ್‌ಸಿಇ ಪರೀಕ್ಷೆ ರದ್ದು: ಪ್ರಧಾನಿ ಮೋದಿ

Published On - 12:48 pm, Thu, 17 June 21

Follow Us
ಸಚಿವ ಸಂಪುಟ ಸಭೆಯಲ್ಲಿ ಒಳ ಮೀಸಲಾತಿ ಬಗ್ಗೆ ಭಾರೀ ಚರ್ಚೆ: ಫೈನಲಿ ಏನಾಯ್ತು?
ಸಚಿವ ಸಂಪುಟ ಸಭೆಯಲ್ಲಿ ಒಳ ಮೀಸಲಾತಿ ಬಗ್ಗೆ ಭಾರೀ ಚರ್ಚೆ: ಫೈನಲಿ ಏನಾಯ್ತು?
ವಿಚಾರಣೆಗೆ ಬಂದಿದ್ದ ಮಲ್ಲಿಕಾರ್ಜುನ ಮುತ್ಯಾಗೆ ಶಾಕ್ ಕೊಟ್ಟ ಪೊಲೀಸ್ರು
ವಿಚಾರಣೆಗೆ ಬಂದಿದ್ದ ಮಲ್ಲಿಕಾರ್ಜುನ ಮುತ್ಯಾಗೆ ಶಾಕ್ ಕೊಟ್ಟ ಪೊಲೀಸ್ರು
ಇಸ್ರೇಲ್ ಮೇಲೆ 2,000 ಕಿ.ಮೀ ವ್ಯಾಪ್ತಿಯ ಕ್ಷಿಪಣಿ ಉಡಾಯಿಸಿದ ಇರಾನ್
ಇಸ್ರೇಲ್ ಮೇಲೆ 2,000 ಕಿ.ಮೀ ವ್ಯಾಪ್ತಿಯ ಕ್ಷಿಪಣಿ ಉಡಾಯಿಸಿದ ಇರಾನ್
ಬುರ್ಖಾ ಧರಿಸಿ ಹೋಳಿ ಆಚರಣೆ: ಅಪಮಾನ ಮಾಡಿದ್ದಾರೆಂದು ದಲಿತ ಮುಖಂಡ ದೂರು
ಬುರ್ಖಾ ಧರಿಸಿ ಹೋಳಿ ಆಚರಣೆ: ಅಪಮಾನ ಮಾಡಿದ್ದಾರೆಂದು ದಲಿತ ಮುಖಂಡ ದೂರು
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾಗೆ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾಗೆ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್
ಅಜೆರ್ಬೈಜಾನ್ ವಿಮಾನ ನಿಲ್ದಾಣದ ಮೇಲೆ ಇರಾನ್​ನ ಡ್ರೋನ್ ದಾಳಿ
ಅಜೆರ್ಬೈಜಾನ್ ವಿಮಾನ ನಿಲ್ದಾಣದ ಮೇಲೆ ಇರಾನ್​ನ ಡ್ರೋನ್ ದಾಳಿ
ಪತಿ, ಅತ್ತೆ-ಮಾವನಿಗೆ ಪತ್ನಿಯಿಂದ ಕಿರುಕುಳ
ಪತಿ, ಅತ್ತೆ-ಮಾವನಿಗೆ ಪತ್ನಿಯಿಂದ ಕಿರುಕುಳ
ಜನ ಮನೆಯಲ್ಲಿ ಕಾಯುತ್ತಿದ್ದರೆ, ಇತ್ತ ನದಿಯಲ್ಲಿ ತೇಲಿಬಂದವು ಆಧಾರ್ ಕಾರ್ಡ್
ಜನ ಮನೆಯಲ್ಲಿ ಕಾಯುತ್ತಿದ್ದರೆ, ಇತ್ತ ನದಿಯಲ್ಲಿ ತೇಲಿಬಂದವು ಆಧಾರ್ ಕಾರ್ಡ್
ವಿಷ್ಣುವರ್ಧನ್ ಅವರ ‘ಸೂರ್ಯವಂಶ’ ಪಾತ್ರ ನೆನಪಿಸಿಕೊಂಡ ಎಸ್ ನಾರಾಯಣ್
ವಿಷ್ಣುವರ್ಧನ್ ಅವರ ‘ಸೂರ್ಯವಂಶ’ ಪಾತ್ರ ನೆನಪಿಸಿಕೊಂಡ ಎಸ್ ನಾರಾಯಣ್
ವಿಷಕಾರಿ ಅಂಶ ಪತ್ತೆ: ಮಕ್ಕಳಿಗೆ ತಂಪು ಪಾನೀಯ ಕುಡಿಯುವವರೇ ಎಚ್ಚರ!
ವಿಷಕಾರಿ ಅಂಶ ಪತ್ತೆ: ಮಕ್ಕಳಿಗೆ ತಂಪು ಪಾನೀಯ ಕುಡಿಯುವವರೇ ಎಚ್ಚರ!