AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

CBSE: ಸಿಬಿಎಸ್​ಇ 10ನೇ ತರಗತಿ ಫಸ್ಟ್​ ಟರ್ಮ್ ರಿಸಲ್ಟ್: ಶಾಲೆಗಳಿಗೆ ತಲುಪಿದೆ ಆಂಕಪಟ್ಟಿ

ಫಲಿತಾಂಶ ವಿವರವನ್ನು ಡೌನ್​ಲೋಡ್ ಮಾಡಿಕೊಂಡು, ಅಂಕಗಳನ್ನು ಪರಿಶೀಲಿಸಿದ ನಂತರ ಫಲಿತಾಂಶ ಘೋಷಣೆ ಸಾಧ್ಯವಾಗಲಿದೆ ಎಂದು ಸಿಬಿಎಸ್​ಇ ಹೇಳಿದೆ.

CBSE: ಸಿಬಿಎಸ್​ಇ 10ನೇ ತರಗತಿ ಫಸ್ಟ್​ ಟರ್ಮ್ ರಿಸಲ್ಟ್: ಶಾಲೆಗಳಿಗೆ ತಲುಪಿದೆ ಆಂಕಪಟ್ಟಿ
ಸಾಂಕೇತಿಕ ಚಿತ್ರ
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on:Mar 12, 2022 | 10:44 AM

Share

ಸಿಬಿಎಸ್​ಇ (CBSE) 2021-22ನೇ ಸಾಲಿನ 10ನೇ ತರಗತಿಯ ಮೊದಲ ಟರ್ಮ್ ಫಲಿತಾಂಶ ಪ್ರಕಟವಾಗಿದ್ದು, ಶಾಲೆಗಳಿಗೆ ಅಂಕಪಟ್ಟಿಯನ್ನು ಕಳುಹಿಸಲಾಗಿದೆ ಎಂದು ಸಿಬಿಎಸ್​ಇ ಮಂಡಳಿಯು ತಿಳಿಸಿದೆ. ಸೆಂಟ್ರಲ್ ಬೋರ್ಡ್ ಆಫ್ ಸೆಕಂಡರಿ ಎಜುಕೇಶನ್ (Central Board of Secondary Education – CBSE) ಮಂಡಳಿಯು ಈಗಾಗಲೇ ಸಂಬಂಧಿಸಿದ ಶಾಲೆಗಳಿಗೆ ವಿದ್ಯಾರ್ಥಿಗಳ ಅಂಕದ ವಿವರಗಳನ್ನು ಕಳುಹಿಸಿದೆ. ಫಲಿತಾಂಶ ವಿವರವನ್ನು ಡೌನ್​ಲೋಡ್ ಮಾಡಿಕೊಂಡು, ಅಂಕಗಳನ್ನು ಪರಿಶೀಲಿಸಿದ ನಂತರ ಫಲಿತಾಂಶ ಘೋಷಣೆ ಸಾಧ್ಯವಾಗಲಿದೆ ಎಂದು ಸಿಬಿಎಸ್​ಇ ಹೇಳಿದೆ.

‘ಪ್ರಿಯ ಪ್ರಾಚಾರ್ಯರೇ, 2021-22ನೇ ಸಾಲಿನ ಫಸ್ಟ್ ಟರ್ಮ್ ಫಲಿತಾಂಶಗಳನ್ನು ಗಮನಿಸಿ’ ಎಂದು ಶಾಲೆಗಳಿಗೆ ಕಳುಹಿಸಿರುವ ಇಮೇಲ್​ಗಳಲ್ಲಿ ಹೇಳಲಾಗಿದೆ. ಸಿಬಿಎಸ್​ಇ ಪಠ್ಯಕ್ರಮದ ವಿದ್ಯಾರ್ಥಿಗಳು ಮಂಡಳಿಯ ವೆಬ್​ಸೈಟ್ cbse.gov.in and cbseresults.nic.in ಮೂಲಕವೂ ಫಲಿತಾಂಶವನ್ನು ಪರಿಶೀಲಿಸಬಹುದು. ಈ ನಡುವೆ ವಿದ್ಯಾರ್ಥಿಗಳು ಕಾತರದಿಂದ ಕಾಯುತ್ತಿರುವ ಸಿಬಿಎಸ್​ಇ 12ನೇ ತರಗತಿಯ ಫಲಿತಾಂಶ ಈವರೆಗೆ ಘೋಷಣೆಯಾಗಿಲ್ಲ.

ಕಳೆದ ನವೆಂಬರ್-ಡಿಸೆಂಬರ್ ತಿಂಗಳಲ್ಲಿ ನಡೆದ ಫಸ್ಟ್​ ಟರ್ಮ್ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಪಡೆದಿರುವ ಅಂಕದ ವಿವರಗಳನ್ನು ಮಾತ್ರ ನೀಡುತ್ತದೆ. ಪರೀಕ್ಷೆಯ ಫಲಿತಾಂಶವನ್ನು ಪಾಸ್, ಫೇಲ್ ಅಥವಾ ರಿಪೀಟ್ ಎಂದು ಘೋಷಿಸುವುದಿಲ್ಲ. 2021-22ರ ಸಾಲಿನ ಅಂತಿಮ ಪರೀಕ್ಷೆಯು ಏಪ್ರಿಲ್-ಮೇ 2022ರಲ್ಲಿ ನಡೆಯಲಿದೆ.

ಸಿಬಿಎಸ್​ಇ 10ನೇ ತರಗತಿಗಾಗಿ ಎರಡು ದಿನಾಂಕ ಮಾಹಿತಿ ಪತ್ರಕಗಳನ್ನು ಪ್ರಕಟಿಸಿದೆ. (Date Sheets) ಪ್ರಕಟಿಸಿದೆ. 10ನೇ ತರಗತಿಯ ಪರೀಕ್ಷೆಯು ಏಪ್ರಿಲ್ 26ರಿಂದ ಮೇ 24ರವರೆಗೂ ನಡೆಯಲಿದೆ. ದಿನಾಂಕಗಳ ಸಂಪೂರ್ಣ ವಿವರ ಸಿಬಿಎಸ್​ಇಯ ಅಧಿಕೃತ ಜಾಲತಾಣದಲ್ಲಿ (cbse.gov.in) ಲಭ್ಯವಿದೆ.

ಏಪ್ರಿಲ್ 27ರಂದು ಇಂಗ್ಲಿಷ್, ಮೇ 5ರಂದು ಗಣಿತ, ಮೇ 10ರಂದು ವಿಜ್ಞಾನ, ಮೇ 18ರಂದು ಹಿಂದಿ, ಮೇ 23ಕ್ಕೆ ಕಂಪ್ಯೂಟರ್ ಅಪ್ಲಿಕೇಶನ್ ಪರೀಕ್ಷೆಗಳು ನಡೆಯಲಿವೆ. 10ನೇ ತರಗತಿ ಪರೀಕ್ಷೆಯು ಬೆಳಿಗ್ಗೆ 10.30ರಿಂದ ಮಧ್ಯಾಹ್ನ 12.30ರವರೆಗೆ ನಡೆಯಲಿದೆ.

ಇದನ್ನೂ ಓದಿ: ಸಿಬಿಎಸ್​ಇ 10ನೇ ತರಗತಿ ಪ್ರಶ್ನೆ ಪತ್ರಿಕೆ ವಿರುದ್ಧ ಪ್ರಿಯಾಂಕಾ ಗಾಂಧಿ, ನೆಟ್ಟಿಗರ ಕಿಡಿ; ಟ್ರೆಂಡ್ ಆಯ್ತು ಸ್ತ್ರೀನಿಂದಕ ಸಿಬಿಎಸ್​ಇ ಎಂಬ ಹ್ಯಾಷ್​ಟ್ಯಾಗ್​

ಇದನ್ನೂ ಓದಿ: 2002ರ ಗುಜರಾತ್​ ಹಿಂಸಾಚಾರ ಯಾವ ಸರ್ಕಾರದಡಿಯಲ್ಲಿ ನಡೆಯಿತು?-ಸಿಬಿಎಸ್​ಇ ಪರೀಕ್ಷೆಯಲ್ಲಿ ಕೇಳಲಾದ ಈ ಪ್ರಶ್ನೆಯಿಂದ ದೊಡ್ಡ ವಿವಾದ

Published On - 8:51 am, Sat, 12 March 22

ಯಡಿಯೂರಪ್ಪ ವಿರುದ್ಧ ನಾನು ವಾಗ್ದಾಳಿ ನಡೆಸಲೇ ಇಲ್ಲ: ಲಿಂಬಾವಳಿ
ಯಡಿಯೂರಪ್ಪ ವಿರುದ್ಧ ನಾನು ವಾಗ್ದಾಳಿ ನಡೆಸಲೇ ಇಲ್ಲ: ಲಿಂಬಾವಳಿ
ಕೇಸ್ ವಾಪಸ್ ತೆಗೆದುಕೊಂಡರೆ ಮನು ವಿರುದ್ಧ ಸಾಕ್ಷಿ ಬಿಡ್ತೀನಿ: ಸಂತ್ರಸ್ತೆ
ಕೇಸ್ ವಾಪಸ್ ತೆಗೆದುಕೊಂಡರೆ ಮನು ವಿರುದ್ಧ ಸಾಕ್ಷಿ ಬಿಡ್ತೀನಿ: ಸಂತ್ರಸ್ತೆ
ಸಿನಿಮಾ ಆರಿಸಿಕೊಂಡಿದ್ದೇಕೆ? ಜನಾರ್ಧನ ರೆಡ್ಡಿ ಪುತ್ರನ ಉತ್ತರ
ಸಿನಿಮಾ ಆರಿಸಿಕೊಂಡಿದ್ದೇಕೆ? ಜನಾರ್ಧನ ರೆಡ್ಡಿ ಪುತ್ರನ ಉತ್ತರ
ಪಕ್ಷದ ಕಾರ್ಯದರ್ಶಿ ಮತ್ತು ಅಧಿಕಾರಿಗಳ ಸಭೆ ರಾಮನಗರದಲ್ಲಿ ನಡೆಯಲಿದೆ: ಶಾಸಕ
ಪಕ್ಷದ ಕಾರ್ಯದರ್ಶಿ ಮತ್ತು ಅಧಿಕಾರಿಗಳ ಸಭೆ ರಾಮನಗರದಲ್ಲಿ ನಡೆಯಲಿದೆ: ಶಾಸಕ
ಮನೆಯಲ್ಲಿ ಯಾರೂ ಇಲ್ಲದಿದ್ದಾಗ 3ನೇ ಮಹಡಿಯ ಕಿಟಕಿಯಿಂದ ಹೊರಗೆ ನೇತಾಡಿದ ಮಗು
ಮನೆಯಲ್ಲಿ ಯಾರೂ ಇಲ್ಲದಿದ್ದಾಗ 3ನೇ ಮಹಡಿಯ ಕಿಟಕಿಯಿಂದ ಹೊರಗೆ ನೇತಾಡಿದ ಮಗು
ಸುರ್ಜೇವಾಲಾ ಶಾಸಕರನ್ನು ಭೇಟಿಯಾಗುತ್ತಿರುವುದು ಒಂದು ಪ್ರಕ್ರಿಯೆ: ಲಕ್ಷ್ಮಿ
ಸುರ್ಜೇವಾಲಾ ಶಾಸಕರನ್ನು ಭೇಟಿಯಾಗುತ್ತಿರುವುದು ಒಂದು ಪ್ರಕ್ರಿಯೆ: ಲಕ್ಷ್ಮಿ
ಸರ್ಕಾರೀ ಕೆಲಸದ ನಿಮಿತ್ತ ಸಿಎಂ, ಡಿಸಿಎಂ ದೆಹಲಿ ಹೋಗಿರಬಹುದು: ದೇಶಪಾಂಡೆ
ಸರ್ಕಾರೀ ಕೆಲಸದ ನಿಮಿತ್ತ ಸಿಎಂ, ಡಿಸಿಎಂ ದೆಹಲಿ ಹೋಗಿರಬಹುದು: ದೇಶಪಾಂಡೆ
ಐಶ್ವರ್ಯಾ ಗೌಡ ವಂಚನೆ ಪ್ರಕರಣ: ಮತ್ತೆ ಇಡಿ ವಿಚಾರಣೆಗೆ ಹಾಜರಾದ ಡಿಕೆ ಸುರೇಶ್
ಐಶ್ವರ್ಯಾ ಗೌಡ ವಂಚನೆ ಪ್ರಕರಣ: ಮತ್ತೆ ಇಡಿ ವಿಚಾರಣೆಗೆ ಹಾಜರಾದ ಡಿಕೆ ಸುರೇಶ್
ಊರಿಗೆ ರಸ್ತೆಗಿಂತ ಬಡವನ ಹೊಟ್ಟೆಗೆ ಅನ್ನ ಮತ್ತು ಮೈಗೆ ಬಟ್ಟೆ ಮುಖ್ಯ: ಸವದಿ
ಊರಿಗೆ ರಸ್ತೆಗಿಂತ ಬಡವನ ಹೊಟ್ಟೆಗೆ ಅನ್ನ ಮತ್ತು ಮೈಗೆ ಬಟ್ಟೆ ಮುಖ್ಯ: ಸವದಿ
ಇವತ್ತು ಸಿದ್ದೇಶ್ವರ ಹುಟ್ಟುಹಬ್ಬ, ವಿಶ್ ಮಾಡಲು ಬಂದಿದ್ದೇವೆ: ಹರೀಶ್
ಇವತ್ತು ಸಿದ್ದೇಶ್ವರ ಹುಟ್ಟುಹಬ್ಬ, ವಿಶ್ ಮಾಡಲು ಬಂದಿದ್ದೇವೆ: ಹರೀಶ್