ಸೊಸೆಯ ಶಿಕ್ಷಣಕ್ಕೆ ರೂ. 32 ಲಕ್ಷ ಖರ್ಚು ಮಾಡಿದ ಮಾವ; ಕೆನಡಾಗೆ ಓದಲೆಂದು ಹೋದ ಸೊಸೆ ಮಾಡಿದ್ದೇನು ಗೊತ್ತಾ?

ರಾಯಕೋಟ್‌ನ ಚಮಕೌರ್ ಸಿಂಗ್ ತನ್ನ ಸೊಸೆಯನ್ನು ಕೆನಡಾಕ್ಕೆ ಕಳುಹಿಸಲು 32 ಲಕ್ಷ ರೂ. ಖರ್ಚು ಮಾಡಿದ್ದಾರೆ. ಐದು ವರ್ಷ ಕಳೆದರೂ ಸೊಸೆಗೆ ಎರಡು ವರ್ಷದ ಡಿಪ್ಲೊಮಾ ವ್ಯಾಸಂಗ ಮುಗಿಸಲಾಗಿಲ್ಲ.

ಸೊಸೆಯ ಶಿಕ್ಷಣಕ್ಕೆ ರೂ. 32 ಲಕ್ಷ ಖರ್ಚು ಮಾಡಿದ ಮಾವ; ಕೆನಡಾಗೆ ಓದಲೆಂದು ಹೋದ ಸೊಸೆ ಮಾಡಿದ್ದೇನು ಗೊತ್ತಾ?
ಸಾಂದರ್ಭಿಕ ಚಿತ್ರImage Credit source: Unsplash
Follow us
|

Updated on: Aug 03, 2023 | 3:28 PM

ಯುವಕರು ದೇಶದ ಭವಿಷ್ಯ ಎಂದು ಹೇಳುತ್ತಾರೆ, ಆದರೆ ಪಂಜಾಬ್‌ನ (Punjab) ಯುವ ಪೀಳಿಗೆ ಉನ್ನತ ಶಿಕ್ಷಣದ ನೆಪದಲ್ಲಿ ವಿದೇಶಕ್ಕೆ ಹೋಗುತ್ತಿದ್ದಾರೆ. ಇದರಲ್ಲಿ ಹಲವಾರು ವ್ಯಾಸಂಗ ಮಾಡಲು ಹೋದರೆ ಕೆಲವರು ವಿದೇಶಕ್ಕೆ ಹೋಗಿರುವ ಉದ್ದೇಶವನ್ನು ಮರೆತುಬಿಡುತ್ತಾರೆ. ಅಂತಹ ಒಂದು ಪ್ರಕರಣವು ಪಂಜಾಬ್‌ನ ರಾಯ್ಕೋಟ್‌ನಲ್ಲಿ ನಡೆದಿದೆ. ಅಲ್ಲಿ ಚಮಕೌರ್ ಸಿಂಗ್ ಎಂಬ ವ್ಯಕ್ತಿ ತನ್ನ ಸೊಸೆ ನವಜೋತ್ ಕೌರ್‌ರನ್ನು ಉನ್ನತ ಶಿಕ್ಷಣಕ್ಕಾಗಿ ಕೆನಡಾಕ್ಕೆ ಕಳುಹಿಸಿದ್ದಾರೆ. ಅಷ್ಟೇ ಅಲ್ಲ ಆಕೆಯ ವಿದ್ಯಾಭ್ಯಾಸಕ್ಕೆ 32 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ ಎಂದು ಟಿವಿ9 ಪಂಜಾಬ್ ವರದಿ ಮಾಡಿದೆ.

ಆದರೆ ಐದು ವರ್ಷಗಳ ನಂತರವೂ ನವಜೋತ್ ಕೌರ್ ಎರಡು ವರ್ಷಗಳ ಡಿಪ್ಲೊಮಾ ಕೋರ್ಸ್‌ನಲ್ಲಿ ಉತ್ತೀರ್ಣರಾಗಲು ಸಾಧ್ಯವಾಗಲಿಲ್ಲ. ಇದಲ್ಲದೆ, ನವಜೋತ್ ಕೌರ್ ತನ್ನ ಎರಡು ವರ್ಷಗಳ ಡಿಪ್ಲೊಮಾವನ್ನು ಪೂರ್ಣಗೊಳಿಸಲು ಕೆನಡಾದಲ್ಲಿ ಐದು ಕಾಲೇಜುಗಳನ್ನು ಬದಲಾಯಿಸಿದ್ದಾಳೆ, ಆದರೆ ಇನ್ನೂ ಅವಳು ತನ್ನ ಶಿಕ್ಷಣವನ್ನು ಪೂರ್ಣಗೊಳಿಸಿಲ್ಲ.

ಶಿಕ್ಷಣಕ್ಕೆ ರೂ 32 ಲಕ್ಷ ನೀಡಿರುವ ಚಮಕೌರ್ ಸಿಂಗ್

ಚಮಕೌರ್ ಸಿಂಗ್ ದುರ್ಬಲ ಆರ್ಥಿಕ ಸ್ಥಿತಿಯಲ್ಲಿದ್ದರೂ, ಸೊಸೆ ನವಜೋತ್ ಕೌರ್ ಮತ್ತು ಮಗ ಇಂದರ್‌ಜಿತ್ ಸಿಂಗ್ ಅವರ ಉಜ್ವಲ ಭವಿಷ್ಯಕ್ಕಾಗಿ ಲಕ್ಷಗಟ್ಟಲೆ ಸಾಲ ತೆಗೆದುಕೊಂಡರು, ಆದರೆ ಅವರಂದುಕೊಂಡಂತೆ ಏನು ನಡೆಯಲಿಲ್ಲ. ಸೊಸೆಯು ತನ್ನ ಅಧ್ಯಯನವನ್ನು ಪೂರ್ಣಗೊಳಿಸಲಿಲ್ಲ ಅಲ್ಲದೆ, ಇಂದರ್‌ಜಿತ್‌ನನ್ನು ಕೆನಡಾಕ್ಕೆ ಕರೆಸಿಕೊಳ್ಳಲೂ ಇಲ್ಲ. ಪೊಲೀಸ್ ಠಾಣೆ ತೆರಳಿದ ಸೊಸೆಯ ಪೋಷಕರು 20 ಲಕ್ಷ ರೂಪಾಯಿ ವಾಪಸ್ ನೀಡಲು ಒಪ್ಪಿ ಚೆಕ್ ನೀಡಿದರು. ಆದರೆ ಅವರ ಬ್ಯಾಂಕ್‌ನಲ್ಲಿ ಹಣದ ಇಲ್ಲವಾದದ್ದರಿಂದ ಒಂದು ಚೆಕ್ ಬೌನ್ಸ್ ಆಗಿದೆ, ಇನ್ನೊಂದರ ಪಾವತಿ ಸ್ಥಗಿತಗೊಂಡಿತು.

ಚಮಕೌರ್ ಸಿಂಗ್ ಹೇಳಿಕೆಯ ಪ್ರಕಾರ, ಎರಡೂ ಚೆಕ್‌ಗಳು ಬೌನ್ಸ್ ಆದ ನಂತರ, ಅವರು ಪೊಲೀಸರಿಗೆ ದೂರು ನೀಡಿದರು. ಡಿಎಸ್ಪಿ ರಾಯ್ಕೋಟ್ ರಾಚ್ಪಾಲ್ ಸಿಂಗ್ ದಿಂಡ್ಸಾ ಅವರು ಪ್ರಕರಣವನ್ನು ತನಿಖೆ ಮಾಡಿದರು ಮತ್ತು ಚಮ್ಕೌರ್ ಸಿಂಗ್ ಅವರ ಆರೋಪಗಳು ನಿಜವೆಂದು ತಿಳಿದುಕೊಂಡರು. ಪೊಲೀಸರು ಸೊಸೆ ನವಜೋತ್ ಕೌರ್ ಮತ್ತು ಆಕೆಯ ತಂದೆ ಪ್ಯಾಟಿ ಗಿಲ್ ರಿಫಾರ್ಮ್ ನಿವಾಸಿ ಕೇವಲ್ ಸಿಂಗ್ ವಿರುದ್ಧ ವಂಚನೆ ಪ್ರಕರಣ ದಾಖಲಿಸಿದ್ದಾರೆ.

ಈ ವಿಚಾರವಾಗಿ ಕೆನಡಾದಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಹಾಗೂ ದೆಹಲಿಯಲ್ಲಿರುವ ಕೆನಡಾ ರಾಯಭಾರಿ ಕಚೇರಿಯೊಂದಿಗೆ ಮಾತುಕತೆ ನಡೆಸಿ, ಆಕೆಯನ್ನು ಭಾರತಕ್ಕೆ ಕರೆತರಲಾಗುವುದು ಎಂದು ತನಿಖಾಧಿಕಾರಿ ತಿಳಿಸಿದ್ದಾರೆ. ಇದಲ್ಲದೇ ನವಜೋತ್ ತಂದೆ ಕೇವಲ್ ಸಿಂಗ್ ಅವರಿಗೂ ಲೀಗಲ್ ನೋಟಿಸ್ ಕಳುಹಿಸಲಾಗುತ್ತಿದೆ.

ತನ್ನ ಸೊಸೆ ನವಜೋತ್ ಕೌರ್, ಆಕೆಯ ತಂದೆ ಕೇವಲ್ ಸಿಂಗ್, ತಾಯಿ ಹರ್ದೀಪ್ ಕೌರ್ ಮತ್ತು ಸಹೋದರ ತಲ್ವಿಂದರ್ ಸಿಂಗ್ ವಿರುದ್ಧ ದೂರು ನೀಡಿರುವುದಾಗಿ ಚಮಕೌರ್ ಸಿಂಗ್ ಸಿಂಗ್ ಹೇಳಿದ್ದಾರೆ, ಆದರೆ ಪೊಲೀಸರು ನವಜೋತ್ ಮತ್ತು ಆಕೆಯ ತಂದೆ ವಿರುದ್ಧ ಮಾತ್ರ ಪ್ರಕರಣ ದಾಖಲಿಸಿದ್ದಾರೆ. ಹರ್ದೀಪ್ ಕೌರ್ ಮತ್ತು ತಲ್ವಿಂದರ್ ಸಿಂಗ್ ವಿರುದ್ಧವೂ ಕೇಸ್ ಹಾಕುತ್ತೇನೆ ಎಂದು ಚಮಕೌರ್ ಸಿಂಗ್ ಹೇಳಿದ್ದಾರೆ.

ಇದನ್ನೂ ಓದಿ: ಪ್ರಾಡಕ್ಟ್ ಮ್ಯಾನೇಜ್ಮೆಂಟ್ ವೃತ್ತಿಪರ ಪ್ರಮಾಣೀಕರಣ ಕೋರ್ಸ್ ಪ್ರಾರಂಭಿಸಿದ ಐಐಟಿ ರೂರ್ಕಿ

ಕೆನಡಾದಲ್ಲಿ ಸೊಸೆ ಮಾಡಿದ್ದೇನು?

ಕೋವಿಡ್ -19 ಸಮಯದಲ್ಲಿ, ನವಜೋತ್ ಕೌರ್ ಅಧ್ಯಯನದಲ್ಲಿ ಯಾವುದೇ ಆಸಕ್ತಿಯನ್ನು ತೋರಿಸಲಿಲ್ಲ, ಬದಲಿಗೆ ಅವರು ಕಾಲೇಜುಗಳನ್ನು ಬದಲಾಯಿಸುತ್ತಿದ್ದರು. ನವಜೋತ್ ಮಾವನ ಬಳಿ ತೆಗೆದುಕೊಂಡ 32 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿ ಮತ್ತು ಹೆಚ್ಚಿನ ಹಣವನ್ನು ಕೇಳುತ್ತಿದ್ದಳು. ಆಕೆ ಸುಳ್ಳು ಹೇಳುವ ಮೂಲಕ ತನ್ನ ಗಂಡನ ಕುಟುಂಬಸ್ಥರಿಗೆ ಮೋಸ ಮಾಡುವುದನ್ನು ಮುಂದುವರೆಸಿದಳು.

ಶೈಕ್ಷಣಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್