SSLC, PUC ಯಲ್ಲಿ ದಕ್ಷಿಣ ಕನ್ನಡ ಹೆಚ್ಚಿನ ಬಾರಿ ಫಸ್ಟ್ ಬರಲು ಕಾರಣವೇನು?: ಇಲ್ಲಿಯ ಎಜುಕೇಷನ್ ಸಿಸ್ಟಂ ಹೇಗಿದೆ?
Dakshina Kannada Education System: ಮಂಗಳೂರು ಇನ್ನೋವೇಶನ್ ಹಬ್ ಅಲ್ಲದಿರಬಹುದು, ಆದರೆ ಇದು ಭಾರತದ ವಿವಿಧ ಸ್ಥಳಗಳಿಂದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಉತ್ತಮ ಯೋಗ್ಯ ಶಿಕ್ಷಣವನ್ನು ಪಡೆಯಲು ಸಹಾಯ ಮಾಡಿದ ಮತ್ತು ಸಹಾಯ ಮಾಡುತ್ತಿರುವ ನಗರವಾಗಿದೆ. ವಾಣಿಜ್ಯೇತರ ಮತ್ತು ಸಾಮಾನ್ಯ ಭಾರತೀಯ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣವನ್ನು ಪಡೆಯಲು ಸಹಾಯ ಮಾಡುವ ಅನೇಕ ಪ್ರತಿಷ್ಠಿತ ಸಂಸ್ಥೆಗಳು ಇಲ್ಲಿವೆ.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಬುದ್ಧಿವಂತರ ಜಿಲ್ಲೆ ಎಂದು ಕರೆಯಲ್ಲಡುತ್ತದೆ. ಅದು ಅಲ್ಲಿನ ಆಹಾರ ಪದ್ಧತಿಯ ಪ್ರಭಾವವೊ, ಆ ಮಣ್ಣಿನ ಗುಣವೋ, ಇಲ್ಲ ಶಿಕ್ಷಣದ ಗುಣಮಟ್ಟವೋ ಗೊತ್ತಿಲ್ಲ. ಪರಶುರಾಮನ ಸೃಷ್ಟಿ ಎಂದು ಪುರಾಣಗಳಲ್ಲಿ ಉಲ್ಲೇಖಿಸಲಾದ ಈ ನಾಡಿಗೆ ವಿದ್ಯೆ ವರವಾಗಿ ಬಂದಿದೆ ಎಂದೇ ಹೇಳಬಹುದು. ಇತ್ತೀಚೆಗಷ್ಟೆ ಕರ್ನಾಟದಲ್ಲಿ ಪಿಯುಸಿ ಫಲಿತಾಂಶ ಪ್ರಕಟಗೊಂಡಿತ್ತು. ಇದರಲ್ಲಿ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳು ಅಗ್ರಸ್ಥಾನದಲ್ಲಿವೆ. ಪಿಯುಸಿ ಮಾತ್ರವಲ್ಲ ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ಈ ಎರಡು ಜಿಲ್ಲೆ ಮೊದಲೆರಡು ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತದೆ. ಈ ಬಾರಿ ಪಿಯುಸಿಯಲ್ಲಿ 97.37 ಶೇಕಡ ಫಲಿತಾಂಶ ಪಡೆದ ದಕ್ಷಿಣ ಕನ್ನಡ ರಾಜ್ಯದಲ್ಲಿಯೇ ಮೊದಲ ಸ್ಥಾನ ಪಡೆದುಕೊಂಡಿದ್ದರೆ, 95.24 ಶೇಕಡಾ ಫಲಿತಾಂಶ ಪಡೆದು ಉಡುಪಿ ಜಿಲ್ಲೆ ಎರಡನೇ ಸ್ಥಾನ ಪಡೆದುಕೊಂಡಿದೆ. ಕಳೆದ ಮೂರು ವರ್ಷಗಳಲ್ಲಿ ಪಿಯುಸಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನವನ್ನು, ಉಡುಪಿ ಜಿಲ್ಲೆ ದ್ವಿತೀಯ ಸ್ಥಾನವನ್ನು ಪಡೆದುಕೊಂಡು ಬಂದಿದೆ. ಪ್ರತಿಬಾರಿ ಇದೇರೀತಿಯ ಫಲಿತಾಂಶಕ್ಕೆ ಕಾರಣವೇನು?. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಿಕ್ಷಣವನ್ನು ಯಾವರೀತಿ ಹೇಳಿಕೊಡಲಾಗುತ್ತದೆ?, ವಿವಿಧ ರಾಜ್ಯಗಳಿಂದ ಈ ಜಿಲ್ಲೆಗೆ ಕಲಿಯಲು ಅನೇಕರು ಬರುತ್ತಾರೆ, ಇದಕ್ಕೆ ಕಾರಣವೇನು?. ಮಂಗಳೂರು ಇನ್ನೋವೇಶನ್ ಹಬ್ ಅಲ್ಲದಿರಬಹುದು, ಆದರೆ ಇದು ಭಾರತದ ವಿವಿಧ ಸ್ಥಳಗಳಿಂದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಉತ್ತಮ ಯೋಗ್ಯ ಶಿಕ್ಷಣವನ್ನು ಪಡೆಯಲು ಸಹಾಯ ಮಾಡುತ್ತಿರುವ ನಗರವಾಗಿದೆ. ವಿಶೇಷ ಎಂದರೆ, ಇಲ್ಲಿನ ಹೆಚ್ಚಿನ ಶಿಕ್ಷಣ ಕೇಂದ್ರವನ್ನು ಅಲ್ಲಿಯ ಜನರೇ ಸೃಷ್ಟಿಸಿದ್ದಾರೆಯೇ ಹೊರತು ಸರ್ಕಾರವಲ್ಲ. ದಕ್ಷಿಣ ಕನ್ನಡದ ಶಿಕ್ಷಣದ ಕುರಿತು ಈ ಬಗ್ಗೆ ಟಿವಿ9 ಆ್ಯಪ್ ಜೊತೆ ಮಾತನಾಡಿದ ಅಲ್ಲಿನ ಖ್ಯಾತ ಉದ್ಯಮಿ ಭೀಮ್ ಭಟ್,...
Published On - 4:10 pm, Tue, 16 April 24