Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಬಾರಿ ಟಿಪ್ಪು ವರ್ಸಸ್ ಸಾವರ್ಕರ್ ಚುನಾವಣೆ ಎನ್ನುವ ಕಟೀಲ್​​ ಹೇಳಿಕೆಗೆ ನನ್ನ ಒಪ್ಪಿಗೆ ಇಲ್ಲ: ಯಡಿಯೂರಪ್ಪ

ಟಿಪ್ಪು ಹಾಗೂ ಸಾವರ್ಕರ್ ಹೆಸರಿನಲ್ಲೇ ಚುನಾವಣೆ ನಡೆಯಲಿದೆ ಎನ್ನುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಕೆಯನ್ನು ಬಿಎಸ್ ಯಡಿಯೂರಪ್ಪ ಒಪ್ಪುವುದಿಲ್ಲ ಎಂದಿದ್ದಾರೆ.

ಈ ಬಾರಿ ಟಿಪ್ಪು ವರ್ಸಸ್ ಸಾವರ್ಕರ್ ಚುನಾವಣೆ ಎನ್ನುವ ಕಟೀಲ್​​ ಹೇಳಿಕೆಗೆ ನನ್ನ ಒಪ್ಪಿಗೆ ಇಲ್ಲ: ಯಡಿಯೂರಪ್ಪ
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on: Feb 27, 2023 | 11:00 AM

ಬೆಂಗಳೂರು: ಈ ಬಾರಿ ಕಾಂಗ್ರೆಸ್​ ಮತ್ತು ಬಿಜೆಪಿಯ ಬದಲಾಗಿ ಸಾವರ್ಕರ್ (veer savarkar) ಹಾಗೂ ಟಿಪ್ಪುವಿನ (tipu sultan) ಸಿದ್ಧಾಂತಗಳ ನಡುವೆ ಚುನಾವಣೆ (Karnataka Assembly Elections 2023)ನಡೆಯಲಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್​  (Nalin Kumar Kateel) ಹೇಳಿದ್ದಾರೆ. ಈ ಹೇಳಿಕೆಯನ್ನು ಶಾಸಕ ಎಂ.ಪಿ. ರೇಣುಕಾಚಾರ್ಯ ಸೇರಿದಂತೆ ಇನ್ನೂ ಕೆಲ ಬಿಜೆಪಿ ನಾಯಕರು ಸಮರ್ಥಿಸಿಕೊಂಡಿದ್ದಾರೆ. ಆದ್ರೆ, ಇದಕ್ಕೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ (BS Yediyurappa) ಒಪ್ಪಿಗೆ ಇಲ್ಲ ಎಂದಿದ್ದಾರೆ.

ಇದನ್ನೂ ಓದಿ: ಈ ಬಾರಿ ಸಾವರ್ಕರ್- ಟಿಪ್ಪು ಹೆಸರಿನಲ್ಲೇ ಚುನಾವಣೆ ನಡೆಯಲಿ: ರೇಣುಕಾಚಾರ್ಯ

ಎನ್‌ಡಿಟಿವಿ ಜೊತೆಯಲ್ಲಿ ಮಾತನಾಡಿರುವ ಅವರು, ಟಿಪ್ಪು ವರ್ಸಸ್ ಸಾವರ್ಕರ್ ಎಂಬ ಕಟೀಲ್​ ಹೇಳಿಕೆಗೆ ನನ್ನ ಒಪ್ಪಿಗೆ ಇಲ್ಲ. ಆದ್ರೆ, ಅದಕ್ಕಿಂತ ಮುಖ್ಯವಾಗಿ ಹೆಚ್ಚು ಪರಿಶ್ರಮಪಡಬೇಕು. ಈ ಚುನಾವಣೆಯು ಬಿಜೆಪಿಯ ನೀತಿಗಳು ಮತ್ತು ಯೋಜನೆಗಳು ನಿರೂಪಣೆಯಾಗಿರುತ್ತದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರ ಜನಪ್ರಿಯ ಯೋಜನೆಗಳನ್ನು ಮನೆ-ಮನೆಗೆ ತಲುಪಿಸುವುದೇ ಮುಂದಿನ ಚುನಾವಣೆಯ ಮಂತ್ರ . ಇನ್ನು ಜೆಡಿಎಸ್​ಗೆ ಫೈಟ್ ಕೊಡಲು ಕಾಂಗ್ರೆಸ್ ಹಾಗೂ ಜೆಡಿಎಸ್ ಕಸರತ್ತು ನಡೆಸಿವೆ. ಆದರೂ ರಾಜ್ಯದಲ್ಲಿ ಬಿಜೆಪಿಗೆ ಬಹುಮತ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಭಟ್ಕಳ ತಾಲೂಕಿನ ಶರಾಲಿಯ ಜನತಾ ವಿದ್ಯಾಲಯದಲ್ಲಿ ಮಂಗಳವಾರ ಭಟ್ಕಳ ಹಾಗೂ ಹೊನ್ನಾವರ ವಿಧಾಸಭೆ ಕ್ಷೇತ್ರದ ಪೇಜ್ ಪ್ರಮುಖ ಸಮಾವೇಶ ಉದ್ಗಾಟಿಸಿ ಮಾತನಾಡಿದ್ದ ಕಟೀಲ್, ಸಾವರ್ಕರ್ ಹಾಗೂ ಟಿಪ್ಪುವಿನ ಸಿದ್ಧಾಂತಗಳ ನಡುವೆ ಚುನಾವಣೆ ನಡೆಯಲಿದೆ ಎಂದು ಹೇಳಿದ್ದರು.

ಈ ಬಾರಿ 2023ರ ವಿಧಾನಸಭೆ ಚುನಾವಣೆ ವಿವಾದಿತ ವ್ಯಕ್ತಿಗಳಾಗಿರುವ ಟಿಪ್ಪು ಸುಲ್ತಾನ್ ಹಾಗೂ ಸಾವರ್ಕರ್ ಮೇಲೆಯೇ ನಡೆಯಲಿದೆ ಎಂದು ನಮ್ಮ ರಾಜ್ಯಾಧ್ಯಕ್ಷರು ಹೇಳಿರುವ ಹೇಳಿಕೆ ಸರಿಯಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿರುವ ಹೇಳಿಕೆಯನ್ನ ಸಿಎಂ ರಾಜಕೀಯ ಕಾರ್ಯದರ್ಶಿ ಹಾಗೂ ಶಾಸಕ ಎಂ ಪಿ ರೇಣುಕಾಚಾರ್ಯ ಸಮರ್ಥಿಸಿಕೊಂಡಿದ್ದರು.

ದೇಶಪ್ರೇಮಿ ಸಾವರ್ಕರ್ ಆದರೆ ಟಿಪ್ಪು ಓರ್ವ ಮತಾಂಧ. ಕಾಂಗ್ರೆಸ್‌ನವರು ಓಟ್ ಬ್ಯಾಂಕ್ ರಾಜಕಾರಣಕ್ಕಾಗಿ ಟಿಪ್ಪು ಜಯಂತಿ ಮಾಡಿದ್ದಾರೆ. ಇದರಿಂದಲೇ ಕೊಡಗಿನಲ್ಲಿ ಕುಟ್ಟಪ್ಪ ಸೇರಿ ರಾಜ್ಯದಲ್ಲಿ 25 ರಿಂದ 30 ಜನ ಹಿಂದು ಯುವಕರ ಹತ್ಯೆಯಾಯಿತು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಲೂ ಹತ್ಯೆಯಾಗಿವೆ. ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ವರ್ಗಗಳು ಕಾಂಗ್ರೆಸ್‌ನಿಂದ ಸಂಪೂರ್ಣ ದೂರವಾಗುತ್ತಿದ್ದಾರೆ. 2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮುಕ್ತವಾಗಲಿದೆ. ಈ ಹಿನ್ನಲೆಯಲ್ಲಿ ನಮ್ಮ ರಾಜ್ಯಾಧ್ಯಕ್ಷರು ಹೇಳಿದ್ದು ಸರಿಯಿದೆ ಎಂದಿದ್ದರು.

Jasprit Bumrah: ಜಸ್​ಪ್ರೀತ್ ಬುಮ್ರಾ ಎಂಟ್ರಿ: RCB ಗೆ ಟೆನ್ಶನ್ ಶುರು
Jasprit Bumrah: ಜಸ್​ಪ್ರೀತ್ ಬುಮ್ರಾ ಎಂಟ್ರಿ: RCB ಗೆ ಟೆನ್ಶನ್ ಶುರು
ರಾಮನವಮಿ ದಿನವೇ ರಾಮೇಶ್ವರಂನಲ್ಲಿ ಪಂಬನ್ ರೈಲ್ವೆ ಸೇತುವೆ ಉದ್ಘಾಟಿಸಿದ ಮೋದಿ
ರಾಮನವಮಿ ದಿನವೇ ರಾಮೇಶ್ವರಂನಲ್ಲಿ ಪಂಬನ್ ರೈಲ್ವೆ ಸೇತುವೆ ಉದ್ಘಾಟಿಸಿದ ಮೋದಿ
ಕಾರಿನ ಟಾಪ್ ಮೇಲೆ ಕುಳಿತು ಹುಚ್ಚಾಟ: ಸ್ವಲ್ಪ ಹೆಚ್ಚು ಕಡಿಮೆ ಆದ್ರು ಯಮನಪಾದ!
ಕಾರಿನ ಟಾಪ್ ಮೇಲೆ ಕುಳಿತು ಹುಚ್ಚಾಟ: ಸ್ವಲ್ಪ ಹೆಚ್ಚು ಕಡಿಮೆ ಆದ್ರು ಯಮನಪಾದ!
ಅಯೋಧ್ಯೆಯಲ್ಲಿ ಬಾಲ ರಾಮನ ಹಣೆ ಸ್ಪರ್ಶಿಸಿದ ಸೂರ್ಯ ರಶ್ಮಿ
ಅಯೋಧ್ಯೆಯಲ್ಲಿ ಬಾಲ ರಾಮನ ಹಣೆ ಸ್ಪರ್ಶಿಸಿದ ಸೂರ್ಯ ರಶ್ಮಿ
ಬೇಕರಿಗೆ ಬಂದಿದ್ದ ಬಾಲಕಿಗೆ ಚಾಕೊಲೇಟ್ ಕೊಟ್ಟು ಲೈಂಗಿಕ ಕಿರುಕುಳ
ಬೇಕರಿಗೆ ಬಂದಿದ್ದ ಬಾಲಕಿಗೆ ಚಾಕೊಲೇಟ್ ಕೊಟ್ಟು ಲೈಂಗಿಕ ಕಿರುಕುಳ
2,300 ವರ್ಷ ಹಳೆಯ ಬೋಧಿ ವೃಕ್ಷವಿರುವ ಬೌದ್ಧ ದೇವಾಲಯಕ್ಕೆ ಮೋದಿ ಭೇಟಿ
2,300 ವರ್ಷ ಹಳೆಯ ಬೋಧಿ ವೃಕ್ಷವಿರುವ ಬೌದ್ಧ ದೇವಾಲಯಕ್ಕೆ ಮೋದಿ ಭೇಟಿ
ಬಿಜೆಪಿ ಮಾಜಿ ರಾಜ್ಯಾಧ್ಯಕ್ಷರ ಪರವಾಗಿ ಹಾಲಿ ಕಾಂಗ್ರೆಸ್ ಅಧ್ಯಕ್ಷ ಪ್ರಾರ್ಥನೆ
ಬಿಜೆಪಿ ಮಾಜಿ ರಾಜ್ಯಾಧ್ಯಕ್ಷರ ಪರವಾಗಿ ಹಾಲಿ ಕಾಂಗ್ರೆಸ್ ಅಧ್ಯಕ್ಷ ಪ್ರಾರ್ಥನೆ
ಬೆಂಗಳೂರಿನಲ್ಲಿ ಟಿವಿ9 ಶಿಕ್ಷಣ ಮೇಳಕ್ಕೆ ಭರ್ಜರಿ ಪ್ರತಿಕ್ರಿಯೆ
ಬೆಂಗಳೂರಿನಲ್ಲಿ ಟಿವಿ9 ಶಿಕ್ಷಣ ಮೇಳಕ್ಕೆ ಭರ್ಜರಿ ಪ್ರತಿಕ್ರಿಯೆ
ಪರೀಕ್ಷೆಯ ನಂತರದ ಗೊಂದಲ ನಿವಾರಣೆ, ಸರಿಯಾದ ಕೋರ್ಸ್​ ಆಯ್ಕೆ ಹೇಗೆ?
ಪರೀಕ್ಷೆಯ ನಂತರದ ಗೊಂದಲ ನಿವಾರಣೆ, ಸರಿಯಾದ ಕೋರ್ಸ್​ ಆಯ್ಕೆ ಹೇಗೆ?
Daily Devotional: ಶ್ರೀರಾಮ ನವಮಿಯ ಆಚರಣೆಯ ಮಹತ್ವ ತಿಳಿಯಿರಿ
Daily Devotional: ಶ್ರೀರಾಮ ನವಮಿಯ ಆಚರಣೆಯ ಮಹತ್ವ ತಿಳಿಯಿರಿ