AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಾಟ್ಸಪ್​ ಗ್ರೂಪ್​ನಲ್ಲಿ ರಾಜಕೀಯ ಮಾಡಿದವರಿಗೆ ಚುನಾವಣಾ ಆಯೋಗ ಶಾಕ್, ಅಡ್ಮಿನ್‌ಗಳೇ ಎಚ್ಚರ

ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆ ರಾಜ್ಯದಲ್ಲಿ ಎಲ್ಲೆಡೆ ನೀತಿ ಸಂಹಿತೆ ಜಾರಿಯಲ್ಲಿದೆ. ಹಾಗಾಗಿ ರಾಜಕೀಯ ಸಂದೇಶಗಳನ್ನು ರವಾಸಿಸು ವಾಟ್ಸಾಪ್​ ಗ್ರೂಪ್​ ಅಡ್ಮಿನ್​ ವಿರುದ್ಧ ಕಠಿಣ ಕ್ರಮಕೊಳ್ಳಲಾಗುವುದು ಎಂದು ಚುನಾವಣಾ ಆಯೋಗ ಎಚ್ಚರಿಕೆ ನೀಡಿದೆ.

ವಾಟ್ಸಪ್​ ಗ್ರೂಪ್​ನಲ್ಲಿ ರಾಜಕೀಯ ಮಾಡಿದವರಿಗೆ ಚುನಾವಣಾ ಆಯೋಗ ಶಾಕ್, ಅಡ್ಮಿನ್‌ಗಳೇ ಎಚ್ಚರ
ಪ್ರಾತಿನಿಧಿಕ ಚಿತ್ರImage Credit source: gizbot.com
ಗಂಗಾಧರ​ ಬ. ಸಾಬೋಜಿ
| Edited By: |

Updated on:Apr 05, 2023 | 10:43 AM

Share

ಹುಬ್ಬಳ್ಳಿ: ಕರ್ನಾಟಕ ವಿಧಾನಸಭೆ ಚುನಾವಣೆಗೆ (Karnataka Assembly Elections 2023) ದಿನಗಣನೆ ಬಾಕಿ ಉಳಿದಿದೆ. ರಾಜ್ಯದಲ್ಲಿ ಎಲ್ಲೆಡೆ ನೀತಿ ಸಂಹಿತೆ ಜಾರಿಯಲ್ಲಿದೆ. ಈ ಹಿನ್ನೆಲೆ ರಾಜಕೀಯ ಸಂದೇಶಗಳನ್ನು ರವಾನಿಸುವ ವಾಟ್ಸಾಪ್​ ಗ್ರೂಪ್​ ಅಡ್ಮಿನ್​ ವಿರುದ್ಧ ಕಠಿಣ ಕ್ರಮಕೊಳ್ಳಲಾಗುವುದು ಎಂದು ಚುನಾವಣಾ ಆಯೋಗ ಎಚ್ಚರಿಕೆ ನೀಡಿದೆ. ಇತ್ತೀಚೆಗೆ ಕೊಡಗಿನಲ್ಲಿ ಗ್ರೂಪ್ ಅಡ್ಮಿನ್ ವಿರುದ್ಧ ಕ್ರಮಕೈಗೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಹಲವು ಅಡ್ಮಿನ್‌ಗಳು ಆತಂಕಕ್ಕೆ ಒಳಗಾಗಿದ್ದು, ಇಂತಹ ಸಂದೇಶಗಳಿಂದ ದೂರವಿರುವಂತೆ ಆಯಾ ಗುಂಪಿನ ಸದಸ್ಯರಿಗೆ ಅಡ್ಮಿನ್‌ಗಳು ಮನವಿ ಮಾಡಿಕೊಳ್ಳುತ್ತಿದ್ದಾರೆ. ಸಾಕಷ್ಟು ವಾಟ್ಸಾಪ್​ ಗ್ರೂಪ್​ ಅಡ್ಮಿನ್​ಗಳು ಸಂದೇಶ ರವಾನೆ ಅಧಿಕಾರವನ್ನು ತಮ್ಮಷ್ಟಕ್ಕೆ ಮಿತಿಗೊಳಿಸಿಕೊಂಡಿದ್ದಾರೆ. ಆದರೂ ಕೆಲ ಸ್ಥಳಿಯ ನಿವಾಸಿಗಳು, ಉದ್ಯಮಿಗಳು, ಕಾರ್ಯಕರ್ತರು ಮತ್ತು ಬರಹಗಾರರಂತಹ ಮುಕ್ತ ವಾಟ್ಸಾಪ್​ ಗ್ರೂಪ್​ಗಳಿಂದ ಬರುವಂತಹ ಸಂದೇಶಗಳಿಂದ ತೊಂದರೆ ಅನುಭವಿಸುತ್ತಿದ್ದಾರೆ.

ಇಂಥಹ ಸಂದೇಶಗಳನ್ನು ರವಾನಿಸುತ್ತಿದ್ದ ಕೆಲ ಸದಸ್ಯರನ್ನು ವಾಟ್ಸಾಪ್​ ಗ್ರೂಪ್​​ ಅಡ್ಮಿನ್​ಗಳು ಈಗಾಗಲೇ ತೆಗೆದುಹಾಕಿದ್ದಾರೆ. ಈ ಕುರಿತಾಗಿ ವ್ಯವಹಾರ, ಸಾಮಾಜಿಕ ಚಟುವಟಿಕೆ, ಸಮಾನ ಮನಸ್ಕ ಜನರು, ಕುಟುಂಬ ಮತ್ತು ಸ್ನೇಹಿತರು ಹೀಗೆ 4-5 ಗುಂಪುಗಳನ್ನು ನಿರ್ವಹಿಸುತ್ತಿರುವ ಹುಬ್ಬಳ್ಳಿ ಮೂಲದ ಲಿಂಗರಾಜ್​​​​ ಎಂಬುವವರು ಟೈಮ್ಸ್​ ಆಫ್​ ಇಂಡಿಯಾಗೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Karnataka Assembly Elections 2023: ಬೆಂಗಳೂರಿನಲ್ಲಿ ಸದ್ದಿಲ್ಲದೇ ಶೋಧ ಕಾರ್ಯ ಆರಂಭ​​: ಅಭ್ಯರ್ಥಿಗಳಲ್ಲದೇ ಬೆಂಬಲಿಗರ ಮೇಲೂ ಪೊಲೀಸರ ಹದ್ದಿನ ಕಣ್ಣು

ಕೊಡಗಿನ ಪ್ರಕರಣದಿಂದ ಎಚ್ಚೆತ್ತ ವಾಟ್ಸಾಪ್​ ಗ್ರೂಪ್​ ಅಡ್ಮಿನ್ಸ್​​ 

ಕೊಡಗಿನ ಪ್ರಕರಣವನ್ನು ನೋಡಿದ ಬಳಿಕ ರಾಜಕೀಯ ಸಂಬಂಧಿತ ಸಂದೇಶಗಳನ್ನು ರವಾನೆ ಮಾಡದಂತೆ  ನಮ್ಮ ಗುಂಪಿನ ಸದಸ್ಯರಿಗೆ ಸೂಚಿಸಿದ್ದೇವೆ. ಅಡ್ಮಿನ್‌ಗಳಿಗೆ ಮಾತ್ರ ಸಂದೇಶಗಳನ್ನು ಕಳುಹಿಸಲು ಅನುಮತಿಸುವ ಕೆಲವು ಗುಂಪುಗಳ ಸೆಟ್ಟಿಂಗ್‌ಗಳನ್ನು ಸಹ ನಾವು ಬದಲಾಯಿಸಿದ್ದೇವೆ. ಒಬ್ಬರ ಅಭಿವ್ಯಕ್ತಿಯನ್ನು ನಿಗ್ರಹಿಸುತ್ತಿದ್ದೇವೆ ಎಂದು ನಾವು ಭಾವಿಸಿದ್ದೇವೆ, ಆದರೆ ಅನೇಕ ಜನರು ನೀತಿ ಸಂಹಿತೆಯ ನಿಯಮಗಳನ್ನು ಪಾಲಿಸದ ಕಾರಣ ಅಸಹಾಯಕರಾಗಿದ್ದೇವೆ. ಕೆಲವರು ಯೋಚಿಸದೆ ಸಂದೇಶಗಳನ್ನು ಫಾರ್ವರ್ಡ್ ಮಾಡುತ್ತಾರೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಇಂದು ಸಿಎಂ 2 ಪ್ರತ್ಯೇಕ ಸುದ್ದಿಗೋಷ್ಠಿ: ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಬೊಮ್ಮಾಯಿ ನಡೆ

ತಮ್ಮ ಕಾಲೋನಿಯಲ್ಲಿರುವ ಲಿಂಗರಾಜ್ ನಗರ ಫ್ರೆಂಡ್ಸ್ ಗುಂಪಿನ ಅಡ್ಮಿನ್ ಆಗಿರುವ ಎಲ್‌ಐಸಿ ಅಧಿಕಾರಿ ಎಂಕೆ ಪಾಟೀಲ್ ಮಾತನಾಡಿ, ಅಡ್ಮಿನ್‌ಗಳು ಕಂಪನಿಗೆ ಸಂಬಂಧಿಸಿದ ಗುಂಪುಗಳಾಗಿರಬಹುದು ಅಥವಾ ಇಲಾಖೆಗಳು, ಅದೇ ವೃತ್ತಿಗಳು ಮತ್ತು ಕಂಪನಿಗಳಂತಹ ಉದ್ಯೋಗಿಗಳ ಗುಂಪಿನಲ್ಲಿರುವ ಸಂದೇಶಗಳನ್ನು ನಿಯಂತ್ರಿಸಬಹುದಾಗಿ ಎಂದು ತಿಳಿಸಿದ್ದಾರೆ.

ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅಶೋಕ್​ ಸಜ್ಜನ್​ ಮಾತನಾಡಿ, ಸದಸ್ಯರೆಲ್ಲರೂ ಸರ್ಕಾರಿ ಶಿಕ್ಷಕರಾಗಿರುವುದರಿಂದ ಅವರು ಅಂತಹ ಸಮಸ್ಯೆಗಳನ್ನು ಎದುರಿಸುತ್ತಿಲ್ಲ. ಮತ್ತು ಕೆಲವರು ಪರಿಸ್ಥತಿಯನ್ನು ಅರ್ಥ ಮಾಡಿಕೊಳ್ಳುತ್ತಿದ್ದಾರೆ. ಇತರೆ ಕೆಲ ಗ್ರೂಪ್ಪಿನ ಸದಸ್ಯರು ಇದ್ದಕ್ಕಿದ್ದಂತೆ ರಾಜಕೀಯ ಸಂದೇಶಗಳನ್ನು ಕಳುಹಿಸುತ್ತಿದ್ದು, ತಲೆನೋವಾಗಿದೆ ಹಾಗಾಗಿ ಅಂತಹ ಗ್ರೂಪ್​ಗಳಿಂದ ನಾವು ಹೊರಬರುತ್ತಿದ್ದೇವೆ ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 10:03 am, Wed, 5 April 23

ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ