ದೆಹಲಿಗೆ ಪ್ರಯಾಣಿಸಿದ ಡಿಕೆ ಶಿವಕುಮಾರ್; ಯಾರಾಗುತ್ತಾರೆ ತೆಲಂಗಾಣ ಸಿಎಂ?

ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನೊಳಗೊಂಡ ಸಮಿತಿಯು ಪಕ್ಷದ ಚುನಾವಣಾ ವೀಕ್ಷಕರನ್ನು ಭೇಟಿ ಮಾಡಿದ ನಂತರವೇ ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ತೆಲಂಗಾಣ ಸಿಎಂ ಹೆಸರನ್ನು ಘೋಷಿಸಲಿದ್ದಾರೆ ಎಂದು ಈ ಮೂಲಗಳು ತಿಳಿಸಿವೆ. ವೀಕ್ಷಕರು ಮಂಗಳವಾರ ದೆಹಲಿಗೆ  ಪ್ರಯಾಣಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ದೆಹಲಿಗೆ ಪ್ರಯಾಣಿಸಿದ ಡಿಕೆ ಶಿವಕುಮಾರ್; ಯಾರಾಗುತ್ತಾರೆ ತೆಲಂಗಾಣ ಸಿಎಂ?
ಡಿಕೆ ಶಿವಕುಮಾರ್
Follow us
|

Updated on: Dec 04, 2023 | 8:16 PM

ದೆಹಲಿ ಡಿಸೆಂಬರ್ 04: ತೆಲಂಗಾಣದಲ್ಲಿ (Telangana) 119 ಕ್ಷೇತ್ರಗಳಲ್ಲಿ 64 ಸ್ಥಾನ ಗಳಿಸಿರುವ ಕಾಂಗ್ರೆಸ್ (Congress) ಪಕ್ಷ ಸರ್ಕಾರ ಅಧಿಕಾರಕ್ಕೇರಲು ಸಿದ್ದತೆ ನಡೆಸಿದ್ದು ಸಿಎಂ ಯಾರಾಗುತ್ತಾರೆ ಎಂಬುದರ ಬಗ್ಗೆ  ಇನ್ನೂ ನಿರ್ಧಾರ ಆಗಿಲ್ಲ. ಸೋಮವಾರ ಎಲಾ ಹೋಟೆಲ್‌ನಲ್ಲಿ ಸಿಎಲ್‌ಪಿ ಸಭೆ ನಡೆದಿದೆ. ಈ ಸಭೆಯಲ್ಲಿ ಡಿಕೆ ಶಿವಕುಮಾರ್ (DK Shivakumar) ಅವರೊಂದಿಗೆ ಎಐಸಿಸಿ ವೀಕ್ಷಕರಾಗಿ ದೀಪದಾಸ್ ಮುನ್ಶಿ, ಜಾರ್ಜ್, ಅಜಯ್, ಮುರಳೀಧರನ್ ಸಿಎಲ್‌ಪಿ ಸಭೆಯಲ್ಲಿ ಭಾಗವಹಿಸಿದ್ದರು. 40 ನಿಮಿಷಗಳ ಕಾಲ ನಡೆದ ಸಿಎಲ್‌ಪಿ ಸಭೆಯಲ್ಲಿ ವೀಕ್ಷಕರು ಶಾಸಕರ ಅಭಿಪ್ರಾಯಗಳನ್ನು ತಿಳಿದುಕೊಂಡರು. ಸಿಎಂ ರೇಸ್ ನಲ್ಲಿದ್ದವರ ಜತೆಯೂ ಮಾತುಕತೆ ನಡೆಸಿದರು. ಆದರೆ, ಸಿಎಂ ಹೆಸರು ನಿರ್ಧಾರಕ್ಕೆ ಬರಲಿಲ್ಲ.ಸಿಎಂ ರೇಸ್ ನಲ್ಲಿದ್ದವರು ಹಿಂದೆ ಸರಿಯದ ಕಾರಣ ವೀಕ್ಷಕರು ದೆಹಲಿಗೆ ತೆರಳಿದ್ದಾರೆ. ಡಿ.ಕೆ.ಶಿವಕುಮಾರ್ ಎಲಾ ಹೋಟೆಲ್ ನಿಂದ ದೆಹಲಿಗೆ ತೆರಳಿದ್ದಾರೆ. ವೀಕ್ಷಕರು ಕೂಡ ನಾಳೆ ದೆಹಲಿ ತಲುಪಲಿದ್ದಾರೆ. ಆ ಬಳಿಕ ಸೋನಿಯಾ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಲಿದ್ದಾರೆ ಎನ್ನಲಾಗಿದೆ.

ಇದರೊಂದಿಗೆ ಸಿಎಂ ಯಾರಾಗುತ್ತಾರೆ ಎಂಬ ಸಸ್ಪೆನ್ಸ್ ಮುಂದುವರಿದಿದೆ. ಇದೇ ವೇಳೆ ರಾಜಭವನದಲ್ಲಿ ವ್ಯವಸ್ಥೆ ಪೂರ್ಣಗೊಂಡಿದೆ.

ಮುಂದಿನ ತೆಲಂಗಾಣ ಮುಖ್ಯಮಂತ್ರಿ ಯಾರು ಎಂಬುದರ ಕುರಿತು ಕಾಂಗ್ರೆಸ್‌ನಲ್ಲಿ ಒಮ್ಮತವಿಲ್ಲ ಎಂದು ಮೂಲಗಳು ಎನ್‌ಡಿಟಿವಿಗೆ ಸೋಮವಾರ ಮಧ್ಯಾಹ್ನ ತಿಳಿಸಿವೆ. ಕಾಂಗ್ರೆಸ್‌ನ ಗೆಲುವು ಖಚಿತವಾದ ಕೆಲವೇ ದಿನಗಳಲ್ಲಿ ಅದರ ರಾಜ್ಯ ಘಟಕದ ಮುಖ್ಯಸ್ಥ, ಯಶಸ್ಸನ್ನು ಸಂಘಟಿಸಿದ ಕೀರ್ತಿಗೆ ಪಾತ್ರರಾದ ರೇವಂತ್ ರೆಡ್ಡಿ ಅವರು ಉನ್ನತ ಹುದ್ದೆಗೆ ಹೆಚ್ಚು ಸಂಭಾವ್ಯ ಅಭ್ಯರ್ಥಿಯಾಗಿ ಹೊರಹೊಮ್ಮಿದ್ದರು. ಆದಾಗ್ಯೂ  54 ವರ್ಷದ, BRS ಮತ್ತು ಬಿಜೆಪಿಯ ಯುವ ವಿಭಾಗದ ಮಾಜಿ ಸದಸ್ಯ ರೇವಂತ್ ರೆಡ್ಡಿ ಸಿಎಂ ರೇಸ್ ನಲ್ಲಿ ಮುಂಚೂಣಿಯಲ್ಲಿದ್ದಾರೆ.

ಸಿಎಂ ಸ್ಥಾನಕ್ಕೆ ರೇವಂತ್ ರೆಡ್ಡಿ ಮೊದಲ ಆಯ್ಕೆ; ವೀಕ್ಷಕರು ಸಲ್ಲಿಸಿದ ವರದಿಯ ಆಧಾರದ ಮೇಲೆ ನಾವು ನಿರ್ಧಾರ ತೆಗೆದುಕೊಳ್ಳುತ್ತೇವೆ.ರೇವಂತ್ ರೆಡ್ಡಿ ಅವರು ಸ್ಪಷ್ಟ ಮುಂಚೂಣಿಯಲ್ಲಿದ್ದಾರೆ  ಎಂದು ಮೂಲಗಳು ಎನ್‌ಡಿಟಿವಿಗೆ ತಿಳಿಸಿವೆ .ರೆಡ್ಡಿ ಈ ಬಾರಿಯ ಚುನಾವಣೆಯಲ್ಲಿ ಕೊಡಂಗಲ್‌ನಿಂದ ಸ್ಪರ್ಧಿಸಿ ಗೆದ್ದಿದ್ದರು. ಆದರೆ ಕಾಮರೆಡ್ಡಿಯಲ್ಲಿ ಬಿಜೆಪಿಯ ಕೆವಿ ರಮಣ ರೆಡ್ಡಿ ವಿರುದ್ಧ ಪರಾಭವಗೊಂಡಿದ್ದಾರೆ.

ಆದಾಗ್ಯೂ, ಪ್ರಮಾಣವಚನ ಸಮಾರಂಭದ ಯೋಜನೆಗಳನ್ನ – “ಮುಖ್ಯಮಂತ್ರಿ ನಿರ್ಧಾರವನ್ನು ತೆಗೆದುಕೊಳ್ಳುವವರೆಗೆ” ಮುಂದೂಡಲಾಗಿದೆ.

ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನೊಳಗೊಂಡ ಸಮಿತಿಯು ಪಕ್ಷದ ಚುನಾವಣಾ ವೀಕ್ಷಕರನ್ನು ಭೇಟಿ ಮಾಡಿದ ನಂತರವೇ ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಹೆಸರನ್ನು ಘೋಷಿಸಲಿದ್ದಾರೆ ಎಂದು ಈ ಮೂಲಗಳು ತಿಳಿಸಿವೆ. ವೀಕ್ಷಕರು ಮಂಗಳವಾರ ದೆಹಲಿಗೆ  ಪ್ರಯಾಣಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಏತನ್ಮಧ್ಯೆ, ಪಕ್ಷದ ಹೊಸದಾಗಿ ಆಯ್ಕೆಯಾದ ಶಾಸಕರ ಸಭೆ ಹೈದರಾಬಾದ್‌ನಲ್ಲಿ ನಡೆಯಿತು ಮತ್ತು ನಿರೀಕ್ಷೆಯಂತೆ, ಅವರು ಹೊಸ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲು ಖರ್ಗೆ ಅವರಿಗೆ ಅಧಿಕಾರ ನೀಡುವ ನಿರ್ಣಯವನ್ನು ಅಂಗೀಕರಿಸಿದರು.

ರಾಜ್ಯ ಸರ್ಕಾರದ ಉನ್ನತ ಹುದ್ದೆಗೆ ಇನ್ನಿಬ್ಬರು ಸಂಭಾವ್ಯ ಅಭ್ಯರ್ಥಿಗಳಿದ್ದಾರೆ. ಅದರಲ್ಲಿ ಒಬ್ಬರು ಮಲ್ಲು ಭಟ್ಟಿ ವಿಕ್ರಮಾರ್ಕ. ಅವರು ಕಾಂಗ್ರೆಸ್ ಪ್ರಚಾರದಲ್ಲಿ ಪ್ರಮುಖರು. ಮತದಾನಕ್ಕೂ ಮುನ್ನ ವಿಕ್ರಮಾರ್ಕ ಅವರು 1,400 ಕಿ.ಮೀ ರಾಜ್ಯಾದ್ಯಂತ ಪಾದಯಾತ್ರೆ ನಡೆಸಿ ಮತದಾರರ ಕಳವಳವನ್ನು ಅರಿಯಲು ನೆರವಾದರು. 62 ವರ್ಷದ ನಾಯಕನ ಯಾತ್ರೆ ಕಾಂಗ್ರೆಸ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಬೆಳಗಾವಿ ಅಧಿವೇಶನ; ತೆಲಂಗಾಣದಲ್ಲಿ ಕೆಸಿಅರ್ ವಿರುದ್ಧ ಆಡಳಿತ ವಿರೋಧಿ ಅಲೆಯಿದ್ದ ಕಾರಣ ಕಾಂಗ್ರೆಸ್ ಗೆದ್ದಿದೆ: ಆರ್ ಅಶೋಕ, ವಿಪಕ್ಷ ನಾಯಕ

ಮತ್ತೊಬ್ಬರು ರೇವಂತ್ ರೆಡ್ಡಿ ಅಧಿಕಾರ ವಹಿಸಿಕೊಳ್ಳುವವರೆಗೂ ಕಾಂಗ್ರೆಸ್ ನ ರಾಜ್ಯಾಧ್ಯಕ್ಷರಾಗಿದ್ದ ಉತ್ತಮ್ ಕುಮಾರ್ ರೆಡ್ಡಿ. ಅವರು ಪಕ್ಷದ ಕಾರ್ಯಕರ್ತರಲ್ಲಿ ಜನಪ್ರಿಯ ಮುಖವಾಗಿ ಉಳಿದಿದ್ದಾರೆ. ಪಕ್ಷಕ್ಕೆ ಸೇರಿದ 10 ವರ್ಷಗಳ ನಂತರ ರೇವಂತ್ ರೆಡ್ಡಿಯನ್ನು ಉನ್ನತ ಹುದ್ದೆಗೆ ಏರಿಸುವ ಮೂಲಕ ಭವಿಷ್ಯದ ಬಿರುಕುಗಳನ್ನು ತಪ್ಪಿಸಿದ್ದಾರೆ.

ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಢದಲ್ಲಿ ಬಿಜೆಪಿಯಿಂದ ಸೋತ ಕಾಂಗ್ರೆಸ್ – ತೆಲಂಗಾಣದಲ್ಲಿ ಗೆಲುವು ಸಾಧಿಸುವ ಮೂಲಕ ಒಂದು ರೀತಿಯ ಸಮಾಧಾನವನ್ನು ಪಡೆದುಕೊಂಡಿದೆ. ಪಕ್ಷವು 64 ಸ್ಥಾನಗಳನ್ನು ಪಡೆದುಕೊಂಡಿದೆ. ಬಿಆರ್‌ಎಸ್ 2018 ರಲ್ಲಿ 88 ಸ್ಥಾನಗಳೊಂದಿಗೆ ರಾಜ್ಯವನ್ನು ಮುನ್ನಡೆಸಿದ್ದು ಈ ಬಾರಿ ಕೇವಲ 39 ಸ್ಥಾನಗಳನ್ನು ಗಳಿಸಿದೆ.

ಬಿಜೆಪಿ  111 ಸ್ಥಾನಗಳಲ್ಲಿ ಕಣಕ್ಕಿಳಿದ್ದು ಅದರಲ್ಲಿ ಕೇವಲ ಎಂಟು ಸ್ಥಾನಗಳನ್ನು ಪಡೆದುಕೊಂಡಿತು. ಇದು 2018 ರಲ್ಲಿ ಗಳಿಸಿದ್ದಕ್ಕಿಂತ ಏಳು ಹೆಚ್ಚು. ಈ ಬಾರಿ ಬಿಜೆಪಿ ಮತಗಳ ಹಂಚಿಕೆ ಶೇಕಡಾ 6.98 ರಿಂದ ಸುಮಾರು 14 ಶೇಕಡಾಕ್ಕೆ ಜಿಗಿದಿದೆ.

ಮತ್ತಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ