AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಿಮ್ಮನ್ನು ನೋಡಲು ನಾನು ಕಾಯ್ತಾ ಇರ್ತೀನಿ‘; ಬರ್ತ್​ಡೇ ದಿನ ಅಭಿಮಾನಿಗಳ ಆಮಂತ್ರಿಸಿದ ಶ್ರೀಮುರಳಿ

ಈ ಬಾರಿ ಶ್ರೀಮುರಳಿ ಕುಟುಂಬದಲ್ಲಿ ಒಂದು ಕಹಿ ಘಟನೆ ನಡೆಯಿತು. ಆದಾಗ್ಯೂ ಶ್ರೀಮುರಳಿ ಅವರು ಈ ಬಾರಿ ಬರ್ತ್​​ಡೇನ ಅಭಿಮಾನಿಗಳಿಗೋಸ್ಕರ ಆಚರಿಸಿಕೊಳ್ಳು ನಿರ್ಧರಿಸಿದ್ದಾರೆ. ಈ ಬಗ್ಗೆ ಅವರು ಮಾಹಿತಿ ನೀಡಿದ್ದಾರೆ.

‘ನಿಮ್ಮನ್ನು ನೋಡಲು ನಾನು ಕಾಯ್ತಾ ಇರ್ತೀನಿ‘; ಬರ್ತ್​ಡೇ ದಿನ ಅಭಿಮಾನಿಗಳ ಆಮಂತ್ರಿಸಿದ ಶ್ರೀಮುರಳಿ
ಶ್ರೀಮುರಳಿ
Follow us
ರಾಜೇಶ್ ದುಗ್ಗುಮನೆ
|

Updated on:Dec 16, 2023 | 11:59 AM

ನಟ ಶ್ರೀಮುರಳಿ (Srimurali) ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಅವರು ಡಿಸೆಂಬರ್ 17ರಂದು ಬರ್ತ್​ಡೇ ಆಚರಿಸಿಕೊಳ್ಳುತ್ತಿದ್ದಾರೆ. ಈ ವರ್ಷ ಅವರು ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳಲು ನಿರ್ಧರಿಸಿದ್ದಾರೆ. ಕುಟುಂಬದಲ್ಲಿ ಸಾಕಷ್ಟು ನೋವುಗಳು ಇದ್ದರೂ ಅದನ್ನು ಬದಿಗಿಟ್ಟು ಅಭಿಮಾನಿಗಳನ್ನು ಭೇಟಿ ಮಾಡುತ್ತಿದ್ದಾರೆ. ಈ ಬಗ್ಗೆ ಅವರು ವಿಡಿಯೋ ಮೆಸೇಜ್ ನೀಡಿದ್ದಾರೆ. ಭೇಟಿ ಮಾಡಲು ಬರುವ ಅಭಿಮಾನಿಗಳ ಬಳಿ ಶ್ರೀಮುರಳಿ ವಿಶೇಷ ಮನವಿ ಒಂದನ್ನು ಮಾಡಿಕೊಂಡಿದ್ದಾರೆ.

ಈ ಬಾರಿ ಶ್ರೀಮುರಳಿ ಕುಟುಂಬದಲ್ಲಿ ಒಂದು ಕಹಿ ಘಟನೆ ನಡೆಯಿತು. ಅವರ ಸಹೋದರ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರು ಅಕಾಲಿಕ ಮರಣ ಹೊಂದಿದರು. ಈ ನೋವು ಸದ್ಯಕ್ಕೆ ಮರೆ ಆಗುವಂಥದ್ದಲ್ಲ. ಆದಾಗ್ಯೂ ಶ್ರೀಮುರಳಿ ಅವರು ಈ ಬಾರಿ ಬರ್ತ್​​ಡೇನ ಅಭಿಮಾನಿಗಳಿಗೋಸ್ಕರ ಆಚರಿಸಿಕೊಳ್ಳು ನಿರ್ಧರಿಸಿದ್ದಾರೆ. ಈ ಬಗ್ಗೆ ಅವರು ಮಾಹಿತಿ ನೀಡಿದ್ದಾರೆ.

‘ಎಲ್ಲರಿಗೂ ನಮಸ್ಕಾರ. ನನ್ನ ಪ್ರೀತಿಯ ಅಭಿಮಾನಿಗಳೇ ಇಷ್ಟು ವರ್ಷ ನನ್ನ ಬರ್ತ್​ಡೇಗೆ ಸೇರೋಕೆ ಆಗಿರಲಿಲ್ಲ. ಯಾಕೆ ಅನ್ನೋದು ನಿಮಗೆ ಗೊತ್ತು. ಈ ಬಾರಿಯೂ ಸೇರೋ ಪರಿಸ್ಥಿತಿ ಇರಲಿಲ್ಲ. ಆದರೆ, ಅಭಿಮಾನಿಗಳ ಒತ್ತಾಯದ ಮೇರೆಗೆ ನೀವು ಕೊಡೋ ಪ್ರೀತಿಗೆ ಬರ್ತ್​ಡೇ ಆಚರಿಸಿಕೊಳ್ಳುತ್ತಿದ್ದೇನೆ. ಎಲ್ಲವೂ ನಿಮ್ಮ ಆಜ್ಞೆಯಂತೆ ನಡೆಯಬೇಕು. ಡಿಸೆಂಬರ್ 17ರಂದು ವಸಂತ ನಗರದಲ್ಲಿರುವ ಮಿಲ್ಲರ್ಸ್​ ರೋಡ್​ನ ದೇವರಾಜ್ ಅರಸ ಭವನದಲ್ಲಿ ಬೆಳಿಗ್ಗೆ ಹತ್ತೂವರೆ ನಂತರ ಭೇಟಿ ಮಾಡುವೆ’ ಎಂದಿದ್ದಾರೆ ಶ್ರೀಮುರಳಿ.

ಇದನ್ನೂ ಓದಿ: ‘ಕಲಾವಿದರನ್ನು ಕರೆಸಿ ಪ್ರತಿ ದಿನ ಕರ್ನಾಟಕ ಬಂದ್​ ಮಾಡ್ತೀರಾ?’; ಕಾವೇರಿ ಹೋರಾಟದ ಬಗ್ಗೆ ಶ್ರೀಮುರಳಿ ಮಾತು

‘ನನ್ನದೊಂದು ಕೋರಿಕೆ. ಯಾರೂ ಹಾರ ಉಡುಗೊರೆ ತರಬೇಡಿ. ಅದು ನಿಮ್ಮ ದುಡಿಮೆ. ಅದರಿಂದ ನಿಮಗೆ ಒಳ್ಳೆಯದಾಗಬೇಕು. ಖಾಲಿ ಕೈಯಲ್ಲಿ ಬನ್ನಿ. ಯಾವುದೇ ವಿಚಾರದಲ್ಲಿ ಖರ್ಚು ಮಾಡಬೇಡಿ. ನಿಮಗಾಗಿ ಸೇರುತ್ತಾ ಇರೋದು. ನಿಮ್ಮನ್ನು ನೋಡಲು ನಾನು ಕಾಯ್ತಾ ಇರ್ತೀನಿ’ ಎಂದು ಶ್ರೀಮುರಳಿ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 11:44 am, Sat, 16 December 23

ಬೆಂಗಳೂರಿನ ಜಯನಗರದಲ್ಲಿ ಧರೆಗೆ ಉರುಳಿದ ಮರ
ಬೆಂಗಳೂರಿನ ಜಯನಗರದಲ್ಲಿ ಧರೆಗೆ ಉರುಳಿದ ಮರ
ನೆಲೆಮಂಗಲ: ಮನೆ ಮುಂದೆ ಕಟ್ಟಿದ್ದ ಹಸುಗಳನ್ನ ಕದ್ದು ಪರಾರಿ, ರೈತ ಕಂಗಾಲು
ನೆಲೆಮಂಗಲ: ಮನೆ ಮುಂದೆ ಕಟ್ಟಿದ್ದ ಹಸುಗಳನ್ನ ಕದ್ದು ಪರಾರಿ, ರೈತ ಕಂಗಾಲು
ಗಂಗಾವತಿ ಉಪ ಚುನಾವಣೆಗೆ ಅನ್ಸಾರಿ ಟಿಕೆಟ್ ಬಯಸಿದ್ದರೆ ತಪ್ಪಿಲ್ಲ: ಸಂಗಣ್ಣ
ಗಂಗಾವತಿ ಉಪ ಚುನಾವಣೆಗೆ ಅನ್ಸಾರಿ ಟಿಕೆಟ್ ಬಯಸಿದ್ದರೆ ತಪ್ಪಿಲ್ಲ: ಸಂಗಣ್ಣ
ದೇಶಕ್ಕಿಂತ ದೊಡ್ಡವರು ಯಾರೂ ಇಲ್ಲ, ದೇಶವುಳಿದರೆ ನಾವು ಉಳಿದಂತೆ: ಶಾಸಕ
ದೇಶಕ್ಕಿಂತ ದೊಡ್ಡವರು ಯಾರೂ ಇಲ್ಲ, ದೇಶವುಳಿದರೆ ನಾವು ಉಳಿದಂತೆ: ಶಾಸಕ
ತಿಂಗಳ ಅವಧಿಯಲ್ಲಿ ಭಕ್ತರಿಂದ ಹುಂಡಿಯಲ್ಲಿ ₹59, 28, 876 ಕಾಣಿಕೆ ಸಂಗ್ರಹ
ತಿಂಗಳ ಅವಧಿಯಲ್ಲಿ ಭಕ್ತರಿಂದ ಹುಂಡಿಯಲ್ಲಿ ₹59, 28, 876 ಕಾಣಿಕೆ ಸಂಗ್ರಹ
ಎರಡು ವರ್ಷಗಳಿಂದ ತಮ್ಮಯ್ಯ-ರವಿ ಮಧ್ಯೆ ಆಗಾಗ್ಗೆ ನಡೆಯುತ್ತಿದೆ ಮಾತಿನ ಕಲಹ
ಎರಡು ವರ್ಷಗಳಿಂದ ತಮ್ಮಯ್ಯ-ರವಿ ಮಧ್ಯೆ ಆಗಾಗ್ಗೆ ನಡೆಯುತ್ತಿದೆ ಮಾತಿನ ಕಲಹ
ಡಿಜೆ ಸೌಂಡ್, ಅತಿಯಾದ ಬೆಳಕು ಹೃದಯಾಘಾತಕ್ಕೆ ಕಾರಣವಾಗುತ್ತದೆಯೇ?
ಡಿಜೆ ಸೌಂಡ್, ಅತಿಯಾದ ಬೆಳಕು ಹೃದಯಾಘಾತಕ್ಕೆ ಕಾರಣವಾಗುತ್ತದೆಯೇ?
ಐಪಿಎಲ್: ಬೆಂಗಳೂರಿನ ಈ ರಸ್ತೆಗಳಲ್ಲಿ ಕಿಲೋಮೀಟರ್​ಗಟ್ಟಲೇ ಟ್ರಾಫಿಕ್ ಜಾಮ್
ಐಪಿಎಲ್: ಬೆಂಗಳೂರಿನ ಈ ರಸ್ತೆಗಳಲ್ಲಿ ಕಿಲೋಮೀಟರ್​ಗಟ್ಟಲೇ ಟ್ರಾಫಿಕ್ ಜಾಮ್
ಒಡಿಷಾದಿಂದ ಬಂದಿರುವ ಕೊಹ್ಲಿ ಕಟ್ಟಾಭಿಮಾನಿಗೆ ಟಿಕೆಟ್ ಸಿಕ್ಕಿಲ್ಲ
ಒಡಿಷಾದಿಂದ ಬಂದಿರುವ ಕೊಹ್ಲಿ ಕಟ್ಟಾಭಿಮಾನಿಗೆ ಟಿಕೆಟ್ ಸಿಕ್ಕಿಲ್ಲ
ತಾಳಿ ಕಟ್ಟಿದ ಕೆಲವೇ ಕ್ಷಣದಲ್ಲಿ ಮದುಮಗ ಸಾವು: ಅಸಲಿಗೆ ಆಗಿದ್ದೇನು?
ತಾಳಿ ಕಟ್ಟಿದ ಕೆಲವೇ ಕ್ಷಣದಲ್ಲಿ ಮದುಮಗ ಸಾವು: ಅಸಲಿಗೆ ಆಗಿದ್ದೇನು?