‘ಹನುಮಾನ್’ ನಂತರ ಟಾಲಿವುಡ್​ನಲ್ಲಿ ಮತ್ತೊಂದು ಹನುಮ ಭಕ್ತನ ಸಿನಿಮಾ

Hanuman: ಹನುಮಂತನ ಭಕ್ತನ ಕತೆಯುಳ್ಳ ಸೂಪರ್ ಹೀರೋ ಸಿನಿಮಾ ‘ಹನುಮಾನ್’ ಹಿಟ್ ಆಗುತ್ತಿದ್ದಂತೆ, ಅದೇ ಮಾದರಿಯ ಕತೆಯುಳ್ಳ ಇನ್ನೊಂದು ಸಿನಿಮಾದ ಶೂಟಿಂಗ್​ ಚುರುಕುಗೊಂಡಿದೆ.

‘ಹನುಮಾನ್’ ನಂತರ ಟಾಲಿವುಡ್​ನಲ್ಲಿ ಮತ್ತೊಂದು ಹನುಮ ಭಕ್ತನ ಸಿನಿಮಾ
Follow us
|

Updated on: Jan 17, 2024 | 9:03 PM

ಇತ್ತೀಚೆಗಷ್ಟೆ ಬಿಡುಗಡೆ ಆದ ತೆಲುಗಿನ ಪ್ಯಾನ್ ಇಂಡಿಯಾ (Pan India) ಸಿನಿಮಾ ‘ಹನುಮಾನ್’ (Hanuman) ಗಮನ ಸೆಳೆಯುತ್ತಿದೆ. ಸೂಪರ್ ಹಿಟ್ ಆಗುವತ್ತ ಮುನ್ನುಗ್ಗುತ್ತಿದೆ. ಆಂಧ್ರ-ತೆಲಂಗಾಣಗಳಲ್ಲಿ ಮಾತ್ರವೇ ಅಲ್ಲದೆ, ಕರ್ನಾಟಕ ಸೇರಿದಂತೆ ಇತರೆ ರಾಜ್ಯಗಳಲ್ಲಿಯೂ ಸಿನಿಮಾ ಉತ್ತಮ ಪ್ರದರ್ಶನವನ್ನೇ ಕಾಣುತ್ತಿದೆ. ‘ಹನುಮಾನ್’ ಸಿನಿಮಾ ಹನುಮಂತನ ಭಕ್ತನೊಬ್ಬನ ಕತೆಯಾಗಿದ್ದು, ಸೂಪರ್ ಹೀರೋ ಸಿನಿಮಾ ಆಗಿದೆ. ಸಿನಿಮಾದ ವಿಎಫ್​ಎಕ್ಸ್, ಗ್ರಾಫಿಕ್ಸ್​ ಬಗ್ಗೆ ಮೆಚ್ಚುಗೆ ಕೇಳಿ ಬರುತ್ತಿದೆ. ‘ಹನುಮಾನ್’ ಸಿನಿಮಾ ಹಿಟ್ ಆಗುತ್ತಿದ್ದಂತೆ ಟಾಲಿವುಡ್​ನಲ್ಲಿ ‘ಸ್ವಯಂಭು’ ಹೆಸರಿನ ಸಿನಿಮಾ ಕುರಿತು ಚರ್ಚೆ ಆರಂಭವಾಗಿದೆ.

ನಿಖಿಲ್ ಸಿದ್ಧಾರ್ಥ್ ಹಾಗೂ ಸಂಯುಕ್ತ ಮೆನನ್ ನಟಿಸುತ್ತಿರುವ ‘ಸ್ವಯಂಭು’ ಸಿನಿಮಾದ ಮುಹೂರ್ತ ಕಳೆದ ವರ್ಷವೇ ನಡೆದಿದೆ. ಈ ಸಿನಿಮಾ ಸಹ ಹನುಮಾನ್ ಭಕ್ತನೊಬ್ಬನ ಕತೆಯನ್ನು ಒಳಗೊಂಡಿದೆ. ಆದರೆ ಕೆಲವು ಕಾರಣಗಳಿಂದ ಈ ಸಿನಿಮಾ ತಡವಾಗಿತ್ತು. ಸಿನಿಮಾದ ಪೋಸ್ಟರ್ ಬಿಡುಗಡೆ ಆಗಿ, ಮುಹೂರ್ತ ಆಗಿತ್ತು. ಆದರೆ ಪ್ರಾಜೆಕ್ಟ್ ಬಹಳ ನಿಧಾನವಾಗಿ ಸಾಗುತ್ತಿತ್ತು. ಇದೀಗ ‘ಹನುಮಾನ್’ ಸಿನಿಮಾ ಹಿಟ್ ಆದ ಬೆನ್ನಲ್ಲೆ ಈ ಸಿನಿಮಾಕ್ಕೆ ವೇಗ ದೊರೆತಿದೆ.

ನಿಖಿಲ್ ಸಿದ್ಧಾರ್ಥ್ ಇತ್ತೀಚೆಗೆ ಇದೇ ಮಾದರಿಯ ಸಿನಿಮಾಗಳನ್ನೇ ಒಂದರ ಹಿಂದೊಂದರಂತೆ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಶ್ರೀಕೃಷ್ಣನ ಕತೆಯನ್ನು ಒಳಗೊಂಡ ‘ಕಾರ್ತಿಕೇಯ 2’ ಸಿನಿಮಾದಲ್ಲಿ ನಿಖಿಲ್ ನಟಿಸಿದ್ದರು. ಆ ಸಿನಿಮಾ ದೊಡ್ಡ ಹಿಟ್ ಆಗಿತ್ತು. ಇದೀಗ ‘ಸ್ವಯಂಭು’ ಸಿನಿಮಾದ ಚಿತ್ರೀಕರಣವನ್ನು ಪ್ರಾರಂಭ ಮಾಡಿರುವ ಸಿದ್ಧಾರ್ಥ್, ಸಿನಿಮಾದ ಅಪ್​ಡೇಟ್ ಅನ್ನು ನಿರ್ಮಾಣ ಸಂಸ್ಥೆ ಹಂಚಿಕೊಂಡಿದೆ.

ಇದನ್ನೂ ಓದಿ:ಶಿವರಾಜ್​ಕುಮಾರ್​ ಬಳಿಕ ‘ಹನುಮಾನ್​’ ಸಿನಿಮಾ ನೋಡಲಿರುವ ಸಂಸದ ತೇಜಸ್ವಿ ಸೂರ್ಯ

ನಿಖಿಲ್ ಕುದುರೆ ಓಡಿಸುತ್ತಿರುವ ವಿಡಿಯೋ ಒಂದನ್ನು ಕಾಕಿನಾಡ ಟಾಕೀಸ್ ಹೆಸರಿನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ‘ನಮ್ಮ ‘ಸ್ವಯಂಭು’ ಸಿನಿಮಾದ ಚಿತ್ರೀಕರಣ ಸಾಗಿದೆ. ಸಿನಿಮಾದ ಕೆಲವು ಮುಖ್ಯ ಭಾಗಗಳ ಚಿತ್ರೀಕರಣ ಈಗಾಗಲೇ ಮುಗಿದಿದೆ. ಈ ಸಿನಿಮಾದಲ್ಲಿ ನಿಖಿಲ್, ಹನುಮಾನ್ ಭಕ್ತನ ಪಾತ್ರದಲ್ಲಿ ನಟಿಸುತ್ತಿದ್ದಾರೆ’ ಎಂದು ಮಾಹಿತಿ ಹಂಚಿಕೊಳ್ಳಲಾಗಿದೆ. ಈ ಸಿನಿಮಾಕ್ಕೆ ಕನ್ನಡದ ರವಿ ಬಸ್ರೂರು ಸಂಗೀತ ನೀಡಿರುವುದು ವಿಶೇಷ. ಈ ಸಿನಿಮಾ ರಾಜರ ಕಾಲದಲ್ಲಿ ನಡೆಯುವ ಕತೆಯನ್ನು ಒಳಗೊಂಡಿದೆ.

ನಿಖಿಲ್ ಸಿದ್ಧಾರ್ಥ್, ದೇವರು, ದೇಶ, ಧರ್ಮ ಈ ರೀತಿಯ ವಿಷಯಗಳನ್ನೇ ಸಿನಿಮಾಕ್ಕೆ ಇತ್ತೀಚೆಗೆ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ‘ಕಾರ್ತಿಕೇಯ’ ಸಿನಿಮಾದ ಮೂಲಕ ಗೆಲುವು ಸಾಧಿಸಿದ ನಿಖಿಲ್, ಅದಾದ ಬಳಿಕ ಸುಭಾಷ್ ಚಂದ್ರ ಭೋಸ್ ರ ಕುರಿತ ಅಂಶಗಳನ್ನು ಹೊಂದಿದ್ದ ‘ಸ್ಪೈ’ ಸಿನಿಮಾದಲ್ಲಿ ನಟಿಸಿದ್ದರು. ಸುಭಾಷ್ ಚಂದ್ರ ಭೋಸ್​ರ ಜೀವನ ಕುರಿತ ಫೈಲ್​ಗಳನ್ನು ತರುವ ಗೂಢಚಾರಿಯ ಪಾತ್ರ ಅವರದ್ದು. ಇದೀಗ ಸ್ವಾತಂತ್ರ್ಯ ಹೋರಾಟದ ಕತೆಯುಳ್ಳ ‘ದಿ ಇಂಡಿಯಾ ಹೌಸ್’ ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅದರ ಜೊತೆಗೆ ಹನುಮಂತನ ಭಕ್ತನ ಸಿನಿಮಾ ‘ಸ್ವಯಂಭು’ನಲ್ಲಿ ನಟಿಸುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ