Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಾತ ತೀರಿಹೋದಾಗ ಅಲ್ಲು ಅರ್ಜುನ್​ಗೆ ಸಿಕ್ಕಿತ್ತು ಲಕ್ಷ ಲಕ್ಷ ಹಣ; ಮೊಮ್ಮೊಗನ ಮೇಲಿರಲಿಲ್ಲ ನಂಬಿಕೆ?

ಅಲ್ಲು ಅರ್ಜುನ್ ಕುಟುಂಬ ಸಿನಿಮಾ ರಂಗದಲ್ಲಿ ಸಾಕಷ್ಟು ವರ್ಷಗಳಿಂದ ಆ್ಯಕ್ಟೀವ್ ಆಗಿದೆ. ಅವರ ತಾತ ದೊಡ್ಡ ಕಾಮಿಡಿ ಹೀರೋ ಆಗಿದ್ದರು. 1950ರಲ್ಲಿ ರಿಲೀಸ್ ಆದ ‘ಪುಟ್ಟಿಲ್ಲು’ ಅವರ ನಟನೆಯ ಮೊದಲ ಸಿನಿಮಾ. ನೂರಾರು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಅವರಿಂದ ಅಲ್ಲುಗೆ 17 ಲಕ್ಷ ಸಿಕ್ಕಿತ್ತು.

ತಾತ ತೀರಿಹೋದಾಗ ಅಲ್ಲು ಅರ್ಜುನ್​ಗೆ ಸಿಕ್ಕಿತ್ತು ಲಕ್ಷ ಲಕ್ಷ ಹಣ; ಮೊಮ್ಮೊಗನ ಮೇಲಿರಲಿಲ್ಲ ನಂಬಿಕೆ?
ಅಲ್ಲು ರಾಮಲಿಂಗಯ್ಯ-ಅಲ್ಲು ಅರ್ಜುನ್
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Apr 20, 2024 | 8:00 AM

ಅಲ್ಲು ಅರ್ಜುನ್ (Allu Arjun) ಅವರು ಭಾರತ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಹೆಸರು ಮಾಡಿದ್ದಾರೆ. ಅವರು ಕೇವಲ ತೆಲುಗು ಸಿನಿಮಾಗಳಲ್ಲಿ ನಟಿಸಿದ ಹೊರತಾಗಿಯೂ ಅವರು ಬಾಲಿವುಡ್ ಮಂದಿಗೆ ಪರಿಚಯ ಇದ್ದಾರೆ. ಇದಕ್ಕೆ ಕಾರಣ ಆಗಿದ್ದು ‘ಪುಷ್ಪ’ ಸಿನಿಮಾ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆದ ಈ ಚಿತ್ರ ದೊಡ್ಡ ಮಟ್ಟದಲ್ಲಿ ಕಮಾಯಿ ಮಾಡಿತು. ಅಲ್ಲು ಅರ್ಜುನ್ ಅವರು ಈಗಾಗ ಸಾಕಷ್ಟು ಹಣ ಮಾಡಿದ್ದಾರೆ. ಅಚ್ಚರಿಯ ವಿಚಾರ ಎಂದರೆ ಅವರ ತಾತ ಮೃತಪಟ್ಟಾಗ ಇವರಿಗೆ 17 ಲಕ್ಷ ರೂಪಾಯಿ ಸಿಕ್ಕಿತ್ತಂತೆ. ಇದಕ್ಕೆ ಕಾರಣವೇನು ಎಂಬುದನ್ನು ಅಲ್ಲು ಅರ್ಜುನ್ ವಿವರಿಸಿದ್ದರು.

ಅಲ್ಲು ಅರ್ಜುನ್ ಅವರು ಶೋ ಒಂದಕ್ಕೆ ಬಂದಿದ್ದರು. ಈ ವೇಳೆ ಅಚ್ಚರಿಯ ವಿಚಾರ ಒಂದನ್ನು ವಿವರಿಸಿದ್ದಾರೆ. ‘ನನ್ನ ತಾತನಿಗೆ ನಾವು ಎಂಟು ಜನ ಮೊಮ್ಮಕ್ಕಳು. ಅವರು ಮೃತಪಟ್ಟ ನಂತರ ಎಂಟರಲ್ಲಿ ನನಗೆ ಮಾತ್ರ 17 ಲಕ್ಷ ರೂಪಾಯಿ ವಿಮೆ ಹಣ ಬಂದಿತ್ತು. ನಾನು ನಾಲ್ಕನೇ ಕ್ಲಾಸ್​ನಲ್ಲಿದ್ದಾಗಿನಿಂದಲೇ ನನಗಾಗಿ ತಾತ ಹಣ ಕಟ್ಟುತ್ತಾ ಬರುತ್ತಿದ್ದರು’ ಎಂದು ಅಲ್ಲು ಅರ್ಜುನ್ ಹೇಳಿಕೊಂಡಿದ್ದರು.

ಎಂಟು ಜನರಲ್ಲಿ ಅಲ್ಲು ಅರ್ಜುನ್​ಗೆ ಮಾತ್ರ ಹಣ ಬಂದಿದ್ದು ಏಕೆ? ಇದಕ್ಕೆ ಕಾರಣ ಆಸಕ್ತಿಕರವಾಗಿದೆ. ಅಲ್ಲು ಅರ್ಜುನ್​ ಮೇಲೆ ಅವರ ತಾತ ಅಲ್ಲು ರಾಮಲಿಂಗಂಗೆ ನಂಬಿಕೆ ಇರಲಿಲ್ಲವಂತೆ. ‘8 ಮೊಮ್ಮಕಳ ಪೈಕಿ ನಾನು ಕೆಲಸಕ್ಕೆ ಬಾರದವನು, ಹೇಗೆ ಬದುಕುತ್ತಾನೋ ಎಂದು ಭಾವಿಸಿ ಅವರು ನನ್ನ ಹೆಸರಿನಲ್ಲಿ ಹಣ ಕೂಡಿಟ್ಟಿದ್ದರು’ ಎಂದು ಅಲ್ಲು ಅರ್ಜುನ್ ಹೇಳಿಕೊಂಡಿದ್ದರು.

ಅಲ್ಲು ರಾಮಲಿಂಗಯ್ಯಾ ಬಗ್ಗೆ

ಅಲ್ಲು ಅರ್ಜುನ್ ಕುಟುಂಬ ಸಿನಿಮಾ ರಂಗದಲ್ಲಿ ಸಾಕಷ್ಟು ವರ್ಷಗಳಿಂದ ಆ್ಯಕ್ಟೀವ್ ಆಗಿದೆ. ಅವರ ತಾತ ದೊಡ್ಡ ಕಾಮಿಡಿ ಹೀರೋ ಆಗಿದ್ದರು. 1950ರಲ್ಲಿ ರಿಲೀಸ್ ಆದ ‘ಪುಟ್ಟಿಲ್ಲು’ ಅವರ ನಟನೆಯ ಮೊದಲ ಸಿನಿಮಾ. ನೂರಾರು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. 2003ರಲ್ಲಿ ರಿಲೀಸ್ ಆದ ‘ಕಲ್ಯಾಣ ರಾಮುಡು’ ಅವರ ನಟನೆಯ ಕೊನೆಯ ಸಿನಿಮಾ. 2004ರ ಜುಲೈ 31ರಂದು ಅವರು ನಿಧನ ಹೊಂದಿದರು.

ಇದನ್ನೂ ಓದಿ: 51 ಟೇಕ್​ ತೆಗೆದುಕೊಂಡ ಅಲ್ಲು ಅರ್ಜುನ್​; ‘ಪುಷ್ಪ 2’ ಟೀಸರ್​ ಹಿಂದಿದೆ ಅಚ್ಚರಿ ವಿಷಯ

ಅಲ್ಲು ಅರ್ಜುನ್ ಸಿನಿಮಾ

‘ಪುಷ್ಪ 2’ ಸಿನಿಮಾ ಕೆಲಸಗಳಲ್ಲಿ ಅಲ್ಲು ಅರ್ಜುನ್ ಅವರು ಬ್ಯುಸಿ ಇದ್ದಾರೆ. ಈ ಸಿನಿಮಾ ಬಗ್ಗೆ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಈ ಚಿತ್ರ ರಿಲೀಸ್​ಗೂ ಮೊದಲೇ ಸಾವಿರ ಕೋಟಿ ರೂಪಾಯಿ ಬಿಸ್ನೆಸ್​ ಮಾಡಿದೆ ಎಂದು ವರದಿ ಆಗಿದೆ. ಈ ಸಿನಿಮಾ ಆಗಸ್ಟ್ 15ರಂದು ರಿಲೀಸ್ ಆಗುತ್ತಿದೆ. ಈ ಚಿತ್ರಕ್ಕೆ ಸುಕುಮಾರ್ ಅವರು ನಿರ್ದೇಶನ ಮಾಡಿದ್ದಾರೆ. ರಶ್ಮಿಕಾ ಮಂದಣ್ಣ, ಡಾಲಿ ಧನಂಜಯ್ ಸೇರಿ ಅನೇಕರು ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಯತ್ನಾಳ್ ಉಚ್ಛಾಟನೆ: ವಿಜಯಪುರದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಕಾಳಿ ಪೂಜೆ
ಯತ್ನಾಳ್ ಉಚ್ಛಾಟನೆ: ವಿಜಯಪುರದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಕಾಳಿ ಪೂಜೆ
ಕನ್ನಡಿಗ ವೈಶಾಕ್​ನನ್ನು ಕಣಕ್ಕಿಳಿಸಿ ಪಂದ್ಯ ಗೆದ್ದ ಪಂಜಾಬ್
ಕನ್ನಡಿಗ ವೈಶಾಕ್​ನನ್ನು ಕಣಕ್ಕಿಳಿಸಿ ಪಂದ್ಯ ಗೆದ್ದ ಪಂಜಾಬ್
ದೆಹಲಿಯಲ್ಲಿ ಹೆಚ್​ಡಿಕೆ ಮತ್ತು ದೇವೇಗೌಡರನ್ನು ಭೇಟಿಯಾಗಿರುವ ಜಾರಕಿಹೊಳಿ
ದೆಹಲಿಯಲ್ಲಿ ಹೆಚ್​ಡಿಕೆ ಮತ್ತು ದೇವೇಗೌಡರನ್ನು ಭೇಟಿಯಾಗಿರುವ ಜಾರಕಿಹೊಳಿ
‘ಅವಕಾಶ ಕೊಡಿ, ನಾನು ಕೆಟ್ಟ ನಟ ಅಲ್ಲ’ ಹೀಗೆಂದರ್ಯಾಕೆ ಮೋಹನ್​ಲಾಲ್
‘ಅವಕಾಶ ಕೊಡಿ, ನಾನು ಕೆಟ್ಟ ನಟ ಅಲ್ಲ’ ಹೀಗೆಂದರ್ಯಾಕೆ ಮೋಹನ್​ಲಾಲ್
ಸದ್ಯಕ್ಕೆ ವಾಪಸ್ಸು ಹೋಗುತ್ತಿದ್ದೇನೆ ಎಂದಷ್ಟೇ ಹೇಳಿದ ಬಸನಗೌಡ ಯತ್ನಾಳ್
ಸದ್ಯಕ್ಕೆ ವಾಪಸ್ಸು ಹೋಗುತ್ತಿದ್ದೇನೆ ಎಂದಷ್ಟೇ ಹೇಳಿದ ಬಸನಗೌಡ ಯತ್ನಾಳ್
ಯುವ ಕ್ರಿಕೆಟಿಗನ ಕ್ವಾಟ್ಲೆ ನೋಡಿ ಶಾಕ್ ಆದ ಇಡೀ ಆರ್​ಸಿಬಿ ತಂಡ
ಯುವ ಕ್ರಿಕೆಟಿಗನ ಕ್ವಾಟ್ಲೆ ನೋಡಿ ಶಾಕ್ ಆದ ಇಡೀ ಆರ್​ಸಿಬಿ ತಂಡ
ನಮ್ಮ ಸಿಎಂ ಕಚೇರಿಯೂ ಇಷ್ಟು ಭವ್ಯವಾಗಿಲ್ಲವೆಂದು ಉದ್ಗರಿಸಿದ ಪರಮೇಶ್ವರ್!
ನಮ್ಮ ಸಿಎಂ ಕಚೇರಿಯೂ ಇಷ್ಟು ಭವ್ಯವಾಗಿಲ್ಲವೆಂದು ಉದ್ಗರಿಸಿದ ಪರಮೇಶ್ವರ್!
ಬಿಜೆಪಿ ಶಾಸಕರು ಪೀಠಕ್ಕೆ ಅಗೌರವ ತೋರಿಲ್ಲ,ಸದನ ದೇಗುಲವಿದ್ದಂತೆ: ಸುರೇಶ್ ಗೌಡ
ಬಿಜೆಪಿ ಶಾಸಕರು ಪೀಠಕ್ಕೆ ಅಗೌರವ ತೋರಿಲ್ಲ,ಸದನ ದೇಗುಲವಿದ್ದಂತೆ: ಸುರೇಶ್ ಗೌಡ
ಸಿಎಂ ಸಿದ್ದರಾಮಯ್ಯಕ್ಕಿಂತ ಮೊದಲು ಡಿಸಿಎಂ ಶಿವಕುಮಾರ್ ದೆಹಲಿ ಪಯಣ
ಸಿಎಂ ಸಿದ್ದರಾಮಯ್ಯಕ್ಕಿಂತ ಮೊದಲು ಡಿಸಿಎಂ ಶಿವಕುಮಾರ್ ದೆಹಲಿ ಪಯಣ
ಕರಾಟೆಯಲ್ಲಿ ಪುಟ್ಟ ಹುಡುಗನ ಅದ್ಭುತ ಸಾಧನೆ, ಏಷ್ಯಾ ಬುಕ್ ಆಫ್​ಗೆ ಸೇರ್ಪಡೆ
ಕರಾಟೆಯಲ್ಲಿ ಪುಟ್ಟ ಹುಡುಗನ ಅದ್ಭುತ ಸಾಧನೆ, ಏಷ್ಯಾ ಬುಕ್ ಆಫ್​ಗೆ ಸೇರ್ಪಡೆ