AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಂಡರ್​ಟೇಕರ್​ ಜತೆ ಗುದ್ದಾಡಿದ್ದ ಅಕ್ಷಯ್​ ಕುಮಾರ್​? ಫೋಟೋ ಹಂಚಿಕೊಂಡ ನಟ  

ಅಂಡರ್​ಟೇಕರ್​ ಅವರನ್ನು ಸೋಲಿಸುವ ದೃಶ್ಯವೊಂದು ‘ಖಿಲಾಡಿಯೋಂಕಾ ಕಾ ಖಿಲಾಡಿ’ ಸಿನಿಮಾದಲ್ಲಿ ಬರುತ್ತದೆ. ಈಗ ಚಿತ್ರ 25 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಮೀಮ್​ಗ​ಳು ಹರಿದಾಡುತ್ತಿವೆ.

ಅಂಡರ್​ಟೇಕರ್​ ಜತೆ ಗುದ್ದಾಡಿದ್ದ ಅಕ್ಷಯ್​ ಕುಮಾರ್​? ಫೋಟೋ ಹಂಚಿಕೊಂಡ ನಟ  
‘ಖಿಲಾಡಿಯೋಂಕಾ ಕಾ ಖಿಲಾಡಿ’ ಸಿನಿಮಾದ ದೃಶ್ಯ
ರಾಜೇಶ್ ದುಗ್ಗುಮನೆ
|

Updated on:Jun 13, 2021 | 8:43 PM

Share

ಅಕ್ಷಯ್​ ಕುಮಾರ್​ ನಟನೆಯ ‘ಖಿಲಾಡಿಯೋಂಕಾ ಕಾ ಖಿಲಾಡಿ’ ಸಿನಿಮಾ ತೆರೆಗೆ ಬಂದು 25 ವರ್ಷ ಕಳೆದಿದೆ. ಈ ಸಿನಿಮಾ ಅಭಿಮಾನಿಗಳಿಂದ ಅದ್ಭುತ ರೆಸ್ಪಾನ್ಸ್​ ಪಡೆದುಕೊಂಡಿತ್ತು. ಈ ಚಿತ್ರ ಅಕ್ಷಯ್​ ಕುಮಾರ್​ ಅವರ ಸಿನಿಮಾ ಕರಿಯರ್​ಗೆ ಒಳ್ಳೆಯ ಮೈಲೇಜ್​ ನೀಡಿತ್ತು. ಈ ಸಿನಿಮಾವನ್ನು ಅಕ್ಷಯ್​ ಕುಮಾರ್​ ನೆನಪಿಸಿಕೊಂಡಿದ್ದಾರೆ. ಅಲ್ಲದೆ, ಅಚ್ಚರಿಯ ವಿಚಾರ ಕೂಡ ಹಂಚಿಕೊಂಡಿದ್ದಾರೆ.

ಅಂಡರ್​ಟೇಕರ್​ ಅವರನ್ನು ಸೋಲಿಸುವ ದೃಶ್ಯವೊಂದು ‘ಖಿಲಾಡಿಯೋಂಕಾ ಕಾ ಖಿಲಾಡಿ’ ಸಿನಿಮಾದಲ್ಲಿ ಬರುತ್ತದೆ. ಈಗ ಚಿತ್ರ 25 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಮೀಮ್​ಗ​ಳು ಹರಿದಾಡುತ್ತಿವೆ. ಈ ಮೀಮ್​ನಲ್ಲಿ ಅಂಡರ್​ಟೇಕರ್​ ಅವರನ್ನು ಸೋಲಿಸಿದವರು ಯಾರ್ಯಾರು ಎಂಬುದನನ್ನು ತೋರಿಸುವ ವೇಳೆ ಅಕ್ಷಯ್​ ಕುಮಾರ್​ ಫೋಟೋ ಕೂಡ ಇತ್ತು.

ಹಾಗಾದರೆ, ನಿಜವಾಗಲೂ ಅಕ್ಷಯ್​ ಕುಮಾರ್​ ಅವರು ಅಂಡರ್​ಟೇಕರ್​ ವಿರುದ್ಧ ಹೋರಾಡಿದ್ದರಾ? ಅದಕ್ಕೂ ಉತ್ತರವಿದೆ. ‘ನಾನು ನಿಜವಾಗಲೂ ಅಂಡರ್​ಟೇಕರ್​ ಜತೆ ಸೆಣೆಸಿಲ್ಲ. ವ್ರೆಸ್ಲರ್​ ಬ್ರಿಯಾನ್​ ಲೀ ಅವರು ಅಂಡರ್​ಟೇಕರ್​ ಆಗಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು’ ಎಂದಿದ್ದಾರೆ.

ಅಕ್ಷಯ್​ ಕುಮಾರ್​ ಅವರು ಪೃಥ್ವಿರಾಜ್ ಚೌಹಾಣ್​​ ಅವರ ಜೀವನ ಆಧರಿಸಿ ಯಶ್​ ರಾಜ್​ ಫಿಲ್ಮ್ಸ್ ನಿರ್ಮಿಸುತ್ತಿರುವ ‘ಪೃಥ್ವಿರಾಜ್’​ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಅಕ್ಷಯ್​ ಕುಮಾರ್​ ಪೃಥ್ವಿರಾಜ್​ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮಾಡೆಲ್​ ಮಾನುಷಿ ಚಿಲ್ಲರ್​ ಅವರು ಸನ್ಯೋಗಿತಾ ಪಾತ್ರ ನಿರ್ವಹಿಸುತ್ತಿದ್ದು, ಈ ಚಿತ್ರದ ಮೂಲಕ ಅವರು ಸಿನಿಮಾ ರಂಗಕ್ಕೆ ಕಾಲಿಡುತ್ತಿದ್ದಾರೆ. ಇತ್ತೀಚೆಗೆ ಸಿನಿಮಾ ಟೈಟಲ್​ ಬದಲಿಸುವಂತೆ ಕರಣಿ ಸೇನಾದವರು ಪಟ್ಟು ಹಿಡಿದಿದ್ದರು. ಅಕ್ಷಯ್​ ಕುಮಾರ್​ ನಟನೆಯ ಸೂರ್ಯವಂಶಿ ಸಿನಿಮಾ ರಿಲೀಸ್​ಗೆ ರೆಡಿ ಇದೆ.

ಇದನ್ನೂ ಓದಿ: ‘ಪದ್ಮಾವತ್​ ಸಿನಿಮಾಗಾದ ಗತಿಯೇ ನಿಮಗೂ ಆಗುತ್ತದೆ’; ಚಿತ್ರದ ಟೈಟಲ್​ ಬದಲಿಸಲು ಅಕ್ಷಯ್​ ಕುಮಾರ್​ಗೆ ಬಂತು ಬೆದರಿಕೆ

Published On - 8:41 pm, Sun, 13 June 21

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ