AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎನ್​ಟಿಆರ್ ಕುಟುಂಬದಲ್ಲಿ ಎಲ್ಲವೂ ಸರಿಯಿಲ್ಲ? ಜೂ ಎನ್​ಟಿಆರ್ ಏರಿಗೆ, ಬಾಲಕೃಷ್ಣ-ಚಂದ್ರಬಾಬು ನೀರಿಗೆ

NTR Family: ಎನ್​ಟಿಆರ್ ಕುಟುಂಬದಲ್ಲಿ ಎಲ್ಲವೂ ಸರಿಯಿದ್ದಂತಿಲ್ಲ. ಚಂದ್ರಬಾಬು ನಾಯ್ಡು, ಬಾಲಕೃಷ್ಣ ಆಯೋಜಿಸಿದ್ದ ಎನ್​ಟಿಆರ್ 100 ಕಾರ್ಯಕ್ರಮಕ್ಕೆ ಜೂ ಎನ್​ಟಿಆರ್​ಗೆ ಆಹ್ವಾನವಿರಲಿಲ್ಲ. ಇದೀಗ ಜೂ ಎನ್​ಟಿಆರ್, ತೆಲಂಗಾಣ ಆಡಳಿತ ಪಕ್ಷ ಆಯೋಜಿಸಿರುವ ಎನ್​ಟಿಆರ್ ಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಎನ್​ಟಿಆರ್ ಕುಟುಂಬದಲ್ಲಿ ಎಲ್ಲವೂ ಸರಿಯಿಲ್ಲ? ಜೂ ಎನ್​ಟಿಆರ್ ಏರಿಗೆ, ಬಾಲಕೃಷ್ಣ-ಚಂದ್ರಬಾಬು ನೀರಿಗೆ
ಎನ್​ಟಿಆರ್
ಮಂಜುನಾಥ ಸಿ.
|

Updated on: May 03, 2023 | 8:35 PM

Share

ತೆಲುಗು ಚಿತ್ರರಂಗ (Tollywood) ಹಾಗೂ ರಾಜಕೀಯ (Politics) ಎರಡರಲ್ಲೂ ಎನ್​ಟಿಆರ್ (NTR) ಕುಟುಂಬ ಛಾಯೆ, ಪ್ರಭಾವ ಅತೀವವಾದುದು. ಎನ್​ಟಿಆರ್ ಕುಟುಂಬದ ಅಗ್ರಗಣ್ಯ ಸೀನಿಯರ್ ಎನ್​ಟಿಆರ್ ತೆಲುಗು ಚಿತ್ರರಂಗದ ದಂತಕತೆ ಎನಿಸಿಕೊಂಡವರು. ಜೊತೆಗೆ ತೆಲುಗುದೇಶಂ ಪಕ್ಷ ಕಟ್ಟಿ ಒಂದು ವರ್ಷದೊಳಗೆ ಅವಿಭಜತ ಆಂಧ್ರ ಪ್ರದೇಶದ ಸಿಎಂ ಆದವರು. ಆ ಕುಟುಂಬದ ಹಲವರು ಇಂದು ಸಿನಿಮಾ ಸ್ಟಾರ್ ನಟರಾಗಿ, ರಾಜಕೀಯದಲ್ಲಿ ನಾಯಕರುಗಳಾಗಿ ಮೆರೆಯುತ್ತಿದ್ದಾರೆ. ಬೃಹತ್ ಎನ್​ಟಿಆರ್ ಕುಟುಂಬದಲ್ಲಿ ಮೊದಲಿನಿಂದಲೂ ಸಣ್ಣ-ಪುಟ್ಟ ವೈಮಸ್ಸುಗಳು ಇದ್ದವು. ಈಗ ಮತ್ತೊಮ್ಮೆ ಎನ್​ಟಿಆರ್ ಕುಟುಂಬದ ವೈಮನ್ಯಸಗಳು ಮುನ್ನೆಲೆಗೆ ಬಂದಿವೆ.

ಎನ್​ಟಿಆರ್ ಅವರ 100ನೇ ಜನ್ಮಶತಮಾನೋತ್ಸವ ವರ್ಷ ಇದಾಗಿದ್ದು ಕೆಲವು ದಿನಗಳ ಮುಂಚೆಯಷ್ಟೆ ಎನ್​ಟಿಆರ್ ಅಳಿಯ ಚಂದ್ರಬಾಬು ನಾಯ್ಡು, ಪುತ್ರ ಬಾಲಕೃಷ್ಣ ಮುಂದಾಳತ್ವದಲ್ಲಿ ಎನ್​ಟಿಆರ್ 100 ಕಾರ್ಯಕ್ರಮವನ್ನು ವೈಜಾಗ್​ನಲ್ಲಿ ಅದ್ಧೂರಿಯಾಗಿ ನೆರವೇರಿಸಲಾಯ್ತು. ಈ ಕಾರ್ಯಕ್ರಮಕ್ಕೆ ರಜನೀಕಾಂತ್ ಅನ್ನು ವಿಶೇಷ ಅತಿಥಿಯಾಗಿ ಆಹ್ವಾನಿಸಲಾಗಿತ್ತು. ಆದರೆ ಈ ಕಾರ್ಯಕ್ರಮಕ್ಕೆ ಎನ್​ಟಿಆರ್ ಕುಟುಂಬದ ಜನಪ್ರಿಯ ಸದಸ್ಯ ಜೂ ಎನ್​ಟಿಆರ್ ಅವರನ್ನು ಆಹ್ವಾನಿಸಲಾಗಿರಲಿಲ್ಲ ಎನ್ನಲಾಗಿದೆ. ವಿಶೇಷವೆಂದರೆ ಆ ಕಾರ್ಯಕ್ರಮದಲ್ಲಿ ಜೂ ಎನ್​ಟಿಆರ್ ಪ್ರಸ್ತಾಪವೂ ಆಗಲಿಲ್ಲ ಎಂದು ಸಹ ಕೆಲವು ತೆಲುಗು ಮಾಧ್ಯಮಗಳು ವರದಿ ಮಾಡಿವೆ. ಆ ಕಾರ್ಯಕ್ರಮದ ಬಗ್ಗೆ ಜೂ ಎನ್​ಟಿಆರ್ ಸಹ ಯಾವುದೇ ಸೋಷಿಯಲ್ ಮೀಡಿಯಾ ಪೋಸ್ಟ್ ಆಗಲಿ ಹೇಳಿಕೆಯನ್ನಾಗಲಿ ನೀಡಿಲ್ಲ.

ಇದು ಹೀಗಿರುವಾಗ ಜೂ ಎನ್​ಟಿಆರ್ ಅವರನ್ನು ಇಂದು ತೆಲಂಗಾಣದ ಆಡಳಿತರೂಢ ಸರ್ಕಾರದ ಸಚಿವರೊಬ್ಬರು ಭೇಟಿಯಾಗಿದ್ದು, ತೆಲಂಗಾಣದಲ್ಲಿ ಜೂ ಎನ್​ಟಿಆರ್ ಅವರ ಮೂರ್ತಿ ಉದ್ಘಾಟನೆಗೆ ಆಹ್ವಾನಿಸಿದ್ದಾರೆ. ಆಹ್ವಾನ ಸ್ವೀಕರಿಸಿರುವ ಎನ್​ಟಿಆರ್ ಕಾರ್ಯಕ್ರಮಕ್ಕೆ ಹಾಜರಾಗುವುದಾಗಿ ತಿಳಿಸಿದ್ದಾರಂತೆ. ಇದು ಪ್ರಸ್ತುತ ಚಂದ್ರಬಾಬು ನಾಯ್ಡು ನಾಯಕತ್ವದಲ್ಲಿರುವ ತೆಲುಗು ದೇಶಂ ಪಾರ್ಟಿ ಸದಸ್ಯರಿಗೆ ಅಸಮಾಧಾನ ತಂದಿದೆ. ತಮ್ಮದೇ ಕುಟುಂಬದವರು ಮಾಡಿದ ಕಾರ್ಯಕ್ರಮಕ್ಕೆ ಹೋಗದ ಜೂ ಎನ್​ಟಿಆರ್ ಈಗ ವಿರೋಧಿ ಪಕ್ಷದವರ ಕಾರ್ಯಕ್ರಮಕ್ಕೆ ಹೋಗುತ್ತಿರುವುದು ಕುಟುಂಬದಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಸುದ್ದಿಗೆ ಪುಷ್ಠಿ ನೀಡಿದೆ.

ಎನ್​ಟಿಆರ್ ಕುಟುಂಬದಲ್ಲಿ ವೈಮಸ್ಯ ಹೊಸದೇನೂ ಅಲ್ಲ. ಭಾರಿ ಸಂಖ್ಯೆಯ ಅಭಿಮಾನಿಗಳು, ಜನಬೆಂಬಲ ಹೊಂದಿರುವ ಜೂ ಎನ್​ಟಿಆರ್ ಅನ್ನು ಬೇಕೆಂದೇ ಚಂದ್ರಬಾಬು ನಾಯ್ಡು, ಬಾಲಕೃಷ್ಣ ಇನ್ನಿತರರು ಟಿಡಿಪಿ ಪಕ್ಷದಿಂದ ದೂರ ಇಟ್ಟಿದ್ದಾರೆ ಎನ್ನಲಾಗುತ್ತಿದೆ. ಚಂದ್ರಬಾಬು ನಾಯ್ಡು, ತಮ್ಮ ಪುತ್ರ ನಾರಾ ಲೋಕೇಶ್ ಅನ್ನು ಟಿಡಿಪಿ ಪಕ್ಷದ ಭವಿಷ್ಯದ ನಾಯಕನನ್ನಾಗಿಸುವ ಯತ್ನ ಮಾಡುತ್ತಿದ್ದು, ಜೂ ಎನ್​ಟಿಆರ್, ಪಕ್ಷದ ಹತ್ತಿರಕ್ಕೆ ಬಂದರೆ ತಮ್ಮ ಉದ್ದೇಶ ಫಲಿಸುವುದಿಲ್ಲವೆಂಬ ಕಾರಣಕ್ಕೆ ಜೂ ಎನ್​ಟಿಆರ್ ಅನ್ನು ದೂರವಿಟ್ಟಿದ್ದಾರೆ ಎನ್ನುವ ಮಾತುಗಳು ಇವೆ.

ಇನ್ನು ಜೂ ಎನ್​ಟಿಆರ್​ ಚಿಕ್ಕಪ್ಪ, ನಟ ಬಾಲಕೃಷ್ಣ ಸಹ ಜೂ ಎನ್​ಟಿಆರ್ ವಿರುದ್ಧ ಕೆಲವು ಸಂದರ್ಶನಗಳಲ್ಲಿ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಿದೆ. ಹಿಂದೊಮ್ಮೆ, ಜೂ ಎನ್​ಟಿಆರ್ ಅನ್ನು ಏಕೆ ಪಕ್ಷದ ಕಾರ್ಯಕ್ರಮಗಳಿಗೆ ಆಹ್ವಾನಿಸುತ್ತಿಲ್ಲ, ಯುವಕರನ್ನು ಸೆಳೆಯಲು ಅವರು ಉಪಯೋಗವಾಗುತ್ತಾರಲ್ಲ ಎಂಬ ಪ್ರಶ್ನೆಗೆ, ಅವರ ಅವಶ್ಯಕತೆ ಏನಿದೆ? ನಾವೇ ಇಲ್ಲವೇ ಯುವಕರಿಗೆ ಸ್ಪೂರ್ತಿ ತುಂಬಲು, ನಾನು ಸಾಕಾಗುವುದಿಲ್ಲವೇ, ನಾನೇ ಆ ಕೆಲಸ ಮಾಡುತ್ತೇನೆ ಎಂದಿದ್ದರು.

ಅಲ್ಲದೆ, ಜೂ ಎನ್​ಟಿಆರ್ ಸಹ ಇತ್ತೀಚೆಗೆ ಬಿಜೆಪಿಯ ಕೇಂದ್ರ ಗೃಹ ಮಂತ್ರಿಯವರನ್ನು ಭೇಟಿಯಾಗಿದ್ದರು. ಈ ಮೊದಲು ಎನ್​ಡಿಎ ಭಾಗವಾಗಿದ್ದ ಟಿಡಿಪಿ ಕೆಲ ವರ್ಷಗಳ ಹಿಂದೆ ಮೈತ್ರಿ ಮುರಿದುಕೊಂಡು ಬಿಜೆಪಿಯನ್ನು ವಿರೋಧಿ ಪಕ್ಷವಾಗಿ ಪರಿಗಣಿಸಿದೆ. ಹೀಗಿರುವಾಗ ಜೂ ಎನ್​ಟಿಆರ್, ಬಿಜೆಪಿ ಮುಖಂಡರನ್ನು ಭೇಟಿಯಾಗಿದ್ದಕ್ಕೆ ಪಕ್ಷದ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ್ದರು. ಅಲ್ಲದೆ, ಆಂಧ್ರ ವಿಧಾನಸಭೆಯಲ್ಲಿ ತಮ್ಮ ಪತ್ನಿಯ ಹೆಸರು ಹೇಳಿ ಬೈದಿದ್ದಾರೆ ಎಂದು ಚಂದ್ರಬಾಬು ನಾಯ್ಡು ಪತ್ರಿಕಾಗೋಷ್ಠಿಯಲ್ಲಿ ಅತ್ತಾಗ, ಎನ್​ಟಿಆರ್ ಕುಟುಂಬದವರು ಒಕ್ಕೂರಲಾಗಿ ವಿಡಿಯೋ ಮಾಡಿ ಖಂಡಿಸಿದ್ದರು. ಕೆಲವರು ಕಟು ಪದಗಳನ್ನು ಆಡಳಿತ ಪಕ್ಷದ ವಿರುದ್ಧ ಬಳಸಿದ್ದರು. ಜೂ ಎನ್​ಟಿಆರ್ ಸಹ ಪ್ರತ್ಯೇಕ ವಿಡಿಯೋ ಮಾಡಿ ಆಡಳಿತ ಪಕ್ಷದ ನಡೆಯನ್ನು ಖಂಡಿಸಿದ್ದರು. ಆದರೆ ಜೂ ಎನ್​ಟಿಆರ್ ಬಹಳ ಮೃದು ಧೋರಣೆಯಲ್ಲಿ ವಿಡಿಯೋ ಮಾಡಿದ್ದಾರೆ ಎಂದು ಆಗಲೂ ಕೆಲವರು ಟೀಕಿಸಿದ್ದರು.

ಏನೇ ಆಗಲಿ, ಎನ್​ಟಿಆರ್ ಕುಟುಂಬದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಆದರೆ ಈ ಭಿನ್ನಾಭಿಪ್ರಾಯ ಕುಟುಂಬದಲ್ಲಿ ಒಡಕು ಮೂಡಿ, ಜೂ ಎನ್​ಟಿಆರ್, ಟಿಡಿಪಿ ಬಿಟ್ಟು ತಮ್ಮದೇ ಬೇರೆ ಹಾದಿ ಆಯ್ದುಕೊಳ್ಳುತ್ತಾರಾ? ಎಂಬುದನ್ನು ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಿಧಾನಸೌಧದ ವಿದ್ಯುತ್ ದೀಪಾಲಂಕಾರ ನೋಡಲು ತಂಡೋಪತಂಡವಾಗಿ ಬಂದ ಜನ
ವಿಧಾನಸೌಧದ ವಿದ್ಯುತ್ ದೀಪಾಲಂಕಾರ ನೋಡಲು ತಂಡೋಪತಂಡವಾಗಿ ಬಂದ ಜನ
ಬೆಂಗಳೂರಿನಲ್ಲಿ ಸಂಭವಿಸಿದ ನಿಗೂಢ ಸ್ಫೋಟಕ್ಕೆ ಕಾರಣವೇನು? DCM ಹೇಳಿದ್ದಿಷ್ಟು
ಬೆಂಗಳೂರಿನಲ್ಲಿ ಸಂಭವಿಸಿದ ನಿಗೂಢ ಸ್ಫೋಟಕ್ಕೆ ಕಾರಣವೇನು? DCM ಹೇಳಿದ್ದಿಷ್ಟು
ವೀರಶೈವ ಲಿಂಗಾಯತ ಸಂಪ್ರದಾಯದಂತೆ ನೆರವೇರಿದ ಶರಣಬಸವಪ್ಪ ಅಪ್ಪ ಅಂತ್ಯಕ್ರಿಯೆ
ವೀರಶೈವ ಲಿಂಗಾಯತ ಸಂಪ್ರದಾಯದಂತೆ ನೆರವೇರಿದ ಶರಣಬಸವಪ್ಪ ಅಪ್ಪ ಅಂತ್ಯಕ್ರಿಯೆ
ತಿರುಪತಿ ತಿಮ್ಮಪ್ಪನ ದಾಸೋಹಕ್ಕೆ 7 ಟನ್ ತರಕಾರಿ ಕಳುಹಿಸಿದ ಸ್ನೇಹಿತರು
ತಿರುಪತಿ ತಿಮ್ಮಪ್ಪನ ದಾಸೋಹಕ್ಕೆ 7 ಟನ್ ತರಕಾರಿ ಕಳುಹಿಸಿದ ಸ್ನೇಹಿತರು
ಎಕ್ಸ್​​ಪ್ರೆಸ್​ವೇನಲ್ಲಿ ಬೈಕ್​ ಸ್ಟಂಟ್, ಎರಡೂ ಬೈಕ್​ ಮುಖಾಮುಖಿ ಡಿಕ್ಕಿ
ಎಕ್ಸ್​​ಪ್ರೆಸ್​ವೇನಲ್ಲಿ ಬೈಕ್​ ಸ್ಟಂಟ್, ಎರಡೂ ಬೈಕ್​ ಮುಖಾಮುಖಿ ಡಿಕ್ಕಿ
ರಾಜಣ್ಣ ಪರ ಸಿದ್ದರಾಮಯ್ಯ ಮನವೊಲಿಸಿದ್ರೂ ಕೇಳಿಲ್ವಂತೆ ಹೈಕಮಾಂಡ್!
ರಾಜಣ್ಣ ಪರ ಸಿದ್ದರಾಮಯ್ಯ ಮನವೊಲಿಸಿದ್ರೂ ಕೇಳಿಲ್ವಂತೆ ಹೈಕಮಾಂಡ್!
ಮಕ್ಕಳನ್ನು ಕಚ್ಚಿದ್ದಕ್ಕೆ, ನಾಯಿಯ ಬೈಕ್​​ಗೆ ಕಟ್ಟಿ ಎಳೆದೊಯ್ದ ವ್ಯಕ್ತಿ
ಮಕ್ಕಳನ್ನು ಕಚ್ಚಿದ್ದಕ್ಕೆ, ನಾಯಿಯ ಬೈಕ್​​ಗೆ ಕಟ್ಟಿ ಎಳೆದೊಯ್ದ ವ್ಯಕ್ತಿ
ಚಿನ್ನಯ್ಯನಪಾಳ್ಯ ನಿಗೂಢ ಸ್ಫೋಟ: ಭಯಾನಕ ದೃಶ್ಯದ ಸಿಸಿಟಿವಿ ವಿಡಿಯೋ ಇಲ್ಲಿದೆ
ಚಿನ್ನಯ್ಯನಪಾಳ್ಯ ನಿಗೂಢ ಸ್ಫೋಟ: ಭಯಾನಕ ದೃಶ್ಯದ ಸಿಸಿಟಿವಿ ವಿಡಿಯೋ ಇಲ್ಲಿದೆ
ಇದ್ದಕ್ಕಿದ್ದಂತೆ ದೊಡ್ಡ ಸ್ಫೋಟವಾಯ್ತು ಎಂದ ಸ್ಥಳೀಯರು: ವಿಡಿಯೋ ನೋಡಿ
ಇದ್ದಕ್ಕಿದ್ದಂತೆ ದೊಡ್ಡ ಸ್ಫೋಟವಾಯ್ತು ಎಂದ ಸ್ಥಳೀಯರು: ವಿಡಿಯೋ ನೋಡಿ
ಅನುಮಾನಾಸ್ಪದ ಸ್ಫೋಟದ ಬಗ್ಗೆ ಪ್ರತ್ಯಕ್ಷದರ್ಶಿಗಳು ಹೇಳೋದೇನು ನೋಡಿ
ಅನುಮಾನಾಸ್ಪದ ಸ್ಫೋಟದ ಬಗ್ಗೆ ಪ್ರತ್ಯಕ್ಷದರ್ಶಿಗಳು ಹೇಳೋದೇನು ನೋಡಿ