AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Pushpa 2: ತುಟಿಗೆ ಬಣ್ಣ, ಕೈಗೆ ಬಳೆ, ಕಿವಿಗೆ ಓಲೆ ಏನಿದು ಅಲ್ಲು ಅರ್ಜುನ್ ಅವತಾರ

Pushpa 2: ತುಟಿಗೆ ಬಣ್ಣ, ಕಿವಿಗೆ ಓಲೆ, ಮೂಗಿಗೆ ಮೂಗುತಿ, ಕೈಗೆ ಬಳೆ, ಮೆಹಂದಿ ಏನಿದು ಅಲ್ಲು ಅರ್ಜುನ್ ಅವತಾರ?

Pushpa 2: ತುಟಿಗೆ ಬಣ್ಣ, ಕೈಗೆ ಬಳೆ, ಕಿವಿಗೆ ಓಲೆ ಏನಿದು ಅಲ್ಲು ಅರ್ಜುನ್ ಅವತಾರ
ಪುಷ್ಪ 2
Follow us
ಮಂಜುನಾಥ ಸಿ.
|

Updated on:Apr 07, 2023 | 9:01 PM

ಅಲ್ಲು ಅರ್ಜುನ್ (Allu Arjun) ಹುಟ್ಟುಹಬ್ಬದ (Birthday) ಪ್ರಯುಕ್ತ ಅವರ ನಟನೆಯ ಬಹುನಿರೀಕ್ಷಿತ ಸಿನಿಮಾ ಪುಷ್ಪ 2 (Pushpa 2) ನ ಟೀಸರ್ ಬಿಡುಗಡೆ ಆಗಿ ಭಾರಿ ಸದ್ದು ಮಾಡುತ್ತಿದೆ. ಟೀಸರ್ ಜೊತೆಗೆ ಪೋಸ್ಟರ್ ಒಂದನ್ನು ಸಹ ಚಿತ್ರತಂಡ ಬಿಡುಗಡೆ ಮಾಡಿದ್ದು, ಪೋಸ್ಟರ್​ನಲ್ಲಿ ಅಲ್ಲು ಅರ್ಜುನ್ ಅವತಾರ ಕಂಡು ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಸ್ಟೈಲಿಷ್ ಸ್ಟಾರ್ ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಅಲ್ಲು ಅರ್ಜುನ್, ಪುಷ್ಪ 2 ಸಿನಿಮಾದ ಪೋಸ್ಟರ್​ನಲ್ಲಿ ಮಹಿಳೆಯ ವೇಷದಲ್ಲಿ ಕಾಣಿಸಿಕೊಂಡಿದ್ದಾರೆ. ಅದೂ ಸಾಮಾನ್ಯ ಮಹಿಳೆಯಲ್ಲ, ಶಕ್ತಿದೇವತೆ ಕಾಳಿಯ ಅವತಾರದಲ್ಲಿ!

ಮೂಗಿಗೆ ಮೂಗುತಿ, ನತ್ತು, ಕಿವಿಯಲ್ಲಿ ತೂಗಾಡುವ ಓಲೆ, ತುಟಿಗೆ ಕೆಂಪು ಬಣ್ಣದ ಲಿಪ್​ಸ್ಟಿಕ್ಕು, ತೋಳಿಗೆ ತೋಳುಬಂಧಿ, ಕೊರಳಿಗೆ ಎರಡೆರಡು ಸರ ಜೊತೆಗೆ ನಿಂಬೆ ಹಾರ, ಕೆಂಪು ಬಣ್ಣದ ರವಿಕೆ, ಅದರ ಮೇಲೆ ನೀಲಿ ಸೀರೆ, ಕೈಗೆ ಕೆಂಪು ಬಳೆ, ಉಗುರಿಗೆ ಬಣ್ಣ, ಕೈಗೆ ಮೆಹಂದಿ, ಬೆರಳುಗಳಿಗೆ ಹಲವು ಉಂಗುರ ಧರಿಸಿರುವ ಜೊತೆಗೆ ಕೈಯಲ್ಲಿ ಬಂದೂಕು ಹಿಡಿದು, ಬಹು ತೀಕ್ಷಣ ದೃಷ್ಟಿಯಿಂದ ನೋಡುತ್ತಿರುವ ಅಲ್ಲು ಅರ್ಜುನ್ ಅಂದವಾಗಿ ಕಾಣುತ್ತಿರುವ ಜೊತೆಗೆ ಭಯಾನಕವಾಗಿಯೂ ಕಾಣುತ್ತಿದ್ದಾರೆ. ಯಾರನ್ನೋ ಸಂಹರಿಸಲು ಹೊರಟಂತಿದೆ ಅವರ ಅವತಾರ. ಆದರೆ ಈ ಕಾಳಿ ಅವತಾರದಲ್ಲಿಯೂ ಗಡ್ಡ ಹಾಗೆಯೇ ಬಿಟ್ಟಿದ್ದಾರೆ ಅಲ್ಲು.

ಪುಷ್ಪ 2 ಸಿನಿಮಾದ ಪೋಸ್ಟರ್ ಇದಾಗಿದ್ದು, ಸ್ವತಃ ಅಲ್ಲು ಅರ್ಜುನ್ ಈ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಪುಷ್ಪ 2 ಪ್ರಾರಂಭ ಎಂದು ಬರೆದುಕೊಂಡಿದ್ದಾರೆ. ಹಲವರು, ಅಲ್ಲು ಅರ್ಜುನ್​ರ ಈ ಪೋಸ್ಟರ್ ಅನ್ನು ಬಹುವಾಗಿ ಮೆಚ್ಚಿಕೊಂಡಿದ್ದಾರೆ ಅಭಿಮಾನಿಗಳು. ದೊಡ್ಡ ಸ್ಟಾರ್ ಆಗಿದ್ದರು ಪಾತ್ರಕ್ಕಾಗಿ ಮಹಿಳೆಯ ಅಥವಾ ದೇವತೆಯ ವೇಷ ಧರಿಸಿರುವುದಕ್ಕೆ ಭರಪೂರ ಮೆಚ್ಚುಗೆಯೂ ವ್ಯಕ್ತವಾಗಿದೆ.

ಇದೇ ದಿನ ಪುಷ್ಪ 2 ಸಿನಿಮಾದ ಟೀಸರ್ ಸಹ ಬಿಡುಗಡೆ ಆಗಿದ್ದು, ಟೀಸರ್​ನಲ್ಲಿ ಸಿನಿಮಾದ ಕತೆಯ ಬಗ್ಗೆ ಕೆಲವು ಸುಳಿವುಗಳನ್ನು ಬಿಟ್ಟುಕೊಡಲಾಗಿದೆ. ಮೊದಲ ಭಾಗದಲ್ಲಿ ಸಾಮಾನ್ಯ ಕೂಲಿಯವನಾಗಿದ್ದ ಪುಷ್ಪ, ಈಗ ದೊಡ್ಡ ವ್ಯಕ್ತಿಯಾಗಿ ಬೆಳೆದಿದ್ದಾನೆ. ರಕ್ತ ಚಂದನ ಸಾಗಾಣಿಕೆಯಿಂದ ಕೋಟ್ಯಂತರ ಹಣ ಸಂಪಾದನೆ ಮಾಡಿದ್ದಾನೆ. ಆ ಹಣವನ್ನು ಬಡವರ ಏಳ್ಗೆಗಾಗಿ ಖರ್ಚು ಮಾಡಿ ದೊಡ್ಡ ಸಂಖ್ಯೆಯ ಜನರನ್ನು ತನ್ನ ಬೆಂಬಲಿಗರನ್ನಾಗಿ ಮಾಡಿಕೊಂಡಿದ್ದಾನೆ. ಮಕ್ಕಳ ಆಪರೇಷನ್​ಗೆ, ಶಿಕ್ಷಣಕ್ಕೆ ಹಣ ಕೊಟ್ಟಿದ್ದಾನೆ, ನಿರಾಶ್ರಿತರಿಗೆ ಮನೆ ಕಟ್ಟಿಸಿಕೊಟ್ಟಿದ್ದಾನೆ. ಆದರೆ ರಾಜಕಾರಣಿಗಳಿಗೆ, ಪೊಲೀಸರಿಗೆ ಮಾಧ್ಯಮದವರಿಗೆ ಅವನು ಸಂಪಾದಿಸಿರುವ ಕೋಟ್ಯಂತರ ಹಣದ ಮೇಲಷ್ಟೆ ಕಣ್ಣು, ಆ ಹಣವನ್ನು ಅವನು ಏನು ಮಾಡಿದ ಎಂಬುದು ಅವರಿಗೆ ಬೇಕಿಲ್ಲ. ಪೊಲೀಸರು ರಾಜಕಾರಣಿಗಳು ಪುಷ್ಪನ ಬೆನ್ನು ಬಿದ್ದಿದ್ದಾರೆ ಇದರ ಫಲಿತವಾಗಿ ಪುಷ್ಪ ಜೈಲು ಸಹ ಸೇರಿದ್ದಾನೆ, ಅಲ್ಲಿಂದ ತಪ್ಪಿಸಿಕೊಂಡಿದ್ದಾನೆ ಸಹ.

ಏಪ್ರಿಲ್ 8 ರಂದು ಅಲ್ಲು ಅರ್ಜುನ್ ಹುಟ್ಟುಹಬ್ಬವಿದ್ದು ಇದೇ ಕಾರಣಕ್ಕೆ ಪುಷ್ಪ 2 ಸಿನಿಮಾದ ಟೀಸರ್ ಹಾಗೂ ಪೋಸ್ಟರ್ ಅನ್ನು ಬಿಡುಗಡೆ ಮಾಡಲಾಗಿದೆ. ಈ ಸಿನಿಮಾವನ್ನು ಸುಕುಮಾರ್ ನಿರ್ದೇಶನ ಮಾಡಿದ್ದು, ರಶ್ಮಿಕಾ ಮಂದಣ್ಣ ನಾಯಕಿ. ಫಹಾದ್ ಫಾಸಿಲ್ ವಿಲನ್. ಸಿನಿಮಾದಲ್ಲಿ ಡಾಲಿ ಧನಂಜಯ್ ಸಹ ನಟಿಸಿದ್ದಾರೆ. ಸಿನಿಮಾದ ಬಿಡುಗಡೆ ದಿನಾಂಕ ಇನ್ನೂ ಘೋಷಣೆ ಆಗಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:30 pm, Fri, 7 April 23

ಗಂಗಾವತಿಯಲ್ಲಿ ಬೆಂಬಲಿಗರ ಸಭೆ ನಡೆಸಿದ ಜನಾರ್ಧನ ರೆಡ್ಡಿ ಪತ್ನಿ ಅರುಣಾ
ಗಂಗಾವತಿಯಲ್ಲಿ ಬೆಂಬಲಿಗರ ಸಭೆ ನಡೆಸಿದ ಜನಾರ್ಧನ ರೆಡ್ಡಿ ಪತ್ನಿ ಅರುಣಾ
ಲಿಫ್ಟ್​ನಲ್ಲಿದ್ದ9 ಜನರನ್ನ ಗೋಡೆ ಕೊರೆದು ರಕ್ಷಿಸಿದ ರೋಚಕ ವಿಡಿಯೋ!
ಲಿಫ್ಟ್​ನಲ್ಲಿದ್ದ9 ಜನರನ್ನ ಗೋಡೆ ಕೊರೆದು ರಕ್ಷಿಸಿದ ರೋಚಕ ವಿಡಿಯೋ!
ಪುರುಷರು ವಾಹನ ಓಡಿಸಲು ಪರದಾಡಿದ ರಸ್ತೇಲಿ ಸಲೀಸಾಗಿ ಸ್ಕೂಟರ್ ಓಡಿಸಿದ ಯುವತಿ
ಪುರುಷರು ವಾಹನ ಓಡಿಸಲು ಪರದಾಡಿದ ರಸ್ತೇಲಿ ಸಲೀಸಾಗಿ ಸ್ಕೂಟರ್ ಓಡಿಸಿದ ಯುವತಿ
ರಾಕೇಶ್ ಪೂಜಾರಿಗೆ ಆರೋಗ್ಯ ಸಮಸ್ಯೆ ಇತ್ತ: ಗೆಳೆಯ ಕೊಟ್ಟ ಉತ್ತರ
ರಾಕೇಶ್ ಪೂಜಾರಿಗೆ ಆರೋಗ್ಯ ಸಮಸ್ಯೆ ಇತ್ತ: ಗೆಳೆಯ ಕೊಟ್ಟ ಉತ್ತರ
ಪಾಕಿಸ್ತಾನ ಎಸೆದ ಜೀವಂತ ಶೆಲ್​ಗಳನ್ನು ನಿಷ್ಕ್ರಿಯಗೊಳಿಸಿದ ಭಾರತೀಯ ಸೇನೆ
ಪಾಕಿಸ್ತಾನ ಎಸೆದ ಜೀವಂತ ಶೆಲ್​ಗಳನ್ನು ನಿಷ್ಕ್ರಿಯಗೊಳಿಸಿದ ಭಾರತೀಯ ಸೇನೆ
ಮಳೆಗಾಲ ಸಮೀಪದಲ್ಲಿದೆ, ನಗರದಲ್ಲಿ ಮರ ಗಣತಿ ಶುರುಮಾಡಲು ಇದು ಸಕಾಲ
ಮಳೆಗಾಲ ಸಮೀಪದಲ್ಲಿದೆ, ನಗರದಲ್ಲಿ ಮರ ಗಣತಿ ಶುರುಮಾಡಲು ಇದು ಸಕಾಲ
ಮನೆಯೊಳಗೆ ನುಗ್ಗಿ ಕೊಲ್ಲುತ್ತೇವೆ; ಪಾಕಿಸ್ತಾನಕ್ಕೆ ಮೋದಿ ಖಡಕ್ ಎಚ್ಚರಿಕೆ
ಮನೆಯೊಳಗೆ ನುಗ್ಗಿ ಕೊಲ್ಲುತ್ತೇವೆ; ಪಾಕಿಸ್ತಾನಕ್ಕೆ ಮೋದಿ ಖಡಕ್ ಎಚ್ಚರಿಕೆ
ಹೊತ್ತಿ ಉರಿದ ಗೋದಾಮು, 60ಕ್ಕೂ ಹೆಚ್ಚು ಗಾಡಿ ನೀರು ಹಾಕಿದ್ರೂ ಆರದ ಬೆಂಕಿ
ಹೊತ್ತಿ ಉರಿದ ಗೋದಾಮು, 60ಕ್ಕೂ ಹೆಚ್ಚು ಗಾಡಿ ನೀರು ಹಾಕಿದ್ರೂ ಆರದ ಬೆಂಕಿ
ಸಾಮಾನ್ಯ ಸಂಗತಿಯೆಂಬಂತೆ ಘಟನೆ ವಿವರಿಸಿದ ಮೃತ ಬಾಲಕನ ತಂದೆ
ಸಾಮಾನ್ಯ ಸಂಗತಿಯೆಂಬಂತೆ ಘಟನೆ ವಿವರಿಸಿದ ಮೃತ ಬಾಲಕನ ತಂದೆ
ಮದುವೆಗೆಂದು ಮಂಗಳೂರಿಗೆ ಹೊರಟ್ಟಿದ್ದ ಬಸ್ ಶಿರಾಡಿ ಘಾಟಿನಲ್ಲಿ ಪಲ್ಟಿ
ಮದುವೆಗೆಂದು ಮಂಗಳೂರಿಗೆ ಹೊರಟ್ಟಿದ್ದ ಬಸ್ ಶಿರಾಡಿ ಘಾಟಿನಲ್ಲಿ ಪಲ್ಟಿ