AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪತ್ನಿ ಜಯಾ ಬಗ್ಗೆ ಅಮಿತಾಭ್​ ಬಚ್ಚನ್​ ಬಹಿರಂಗವಾಗಿ ಹೇಳಿಕೊಂಡ 5 ವಿಶೇಷ ಮಾತುಗಳು ಇಲ್ಲಿವೆ

Amitabh Bachchan Jaya Bachchan Wedding Anniversary: ಮದುವೆ ನಂತರವೂ ಬೇರೆ ನಟಿಯರ ಜೊತೆ ಅಮಿತಾಭ್​ ಹೆಸರು ತಳುಕು ಹಾಕಿಕೊಂಡಿತ್ತು. ಹತ್ತಾರು ಗಾಸಿಪ್​ಗಳು ಹರಿದಾಡಿದ್ದವು. ಆದರೂ ಅವುಗಳಿಂದ ಅಮಿತಾಭ್​ ಮತ್ತು ಜಯ ದಾಂಪತ್ಯಕ್ಕೆ ಧಕ್ಕೆ ಆಗಲಿಲ್ಲ.

ಪತ್ನಿ ಜಯಾ ಬಗ್ಗೆ ಅಮಿತಾಭ್​ ಬಚ್ಚನ್​ ಬಹಿರಂಗವಾಗಿ ಹೇಳಿಕೊಂಡ 5 ವಿಶೇಷ ಮಾತುಗಳು ಇಲ್ಲಿವೆ
ಅಮಿತಾಭ್​ ಬಚ್ಚನ್​ - ಜಯಾ ಬಚ್ಚನ್​ ಮದುವೆ ಫೋಟೋ
Follow us
ಮದನ್​ ಕುಮಾರ್​
|

Updated on: Jun 03, 2021 | 8:26 AM

ಸೆಲೆಬ್ರಿಟಿಗಳ ಜಗತ್ತಿನಲ್ಲಿ ಮದುವೆ ಎಷ್ಟು ಸುಲಭವೋ ವಿಚ್ಛೇದನವೂ ಅಷ್ಟೇ ಸುಲಭ ಎಂಬಂತಹ ವಾತಾವರಣ ಇದೆ. ಅದರ ನಡುವೆಯೂ ಆದರ್ಶ ದಂಪತಿಗಳಾಗಿ ಬಾಳುತ್ತಿರುವ ಸೆಲೆಬ್ರಿಟಿಗಳು ಅನೇಕರಿದ್ದಾರೆ. ಆ ಸಾಲಿನಲ್ಲಿ ಮುಂಚೂಣಿಯಾಗಿ ಕೇಳಿಬರುವ ಹೆಸರು ಅಮಿತಾಭ್​ ಬಚ್ಚನ್​ ಮತ್ತು ಜಯಾ ಬಚ್ಚನ್​ ಅವರದ್ದು. ಇಂದು (ಜೂ.3) ಈ ಜೋಡಿಗೆ 48ನೇ ವರ್ಷದ ವಿವಾಹ ವಾರ್ಷಿಕೋತ್ಸವ ಸಂಭ್ರಮ. ಕೊವಿಡ್​ ಇರುವುದರಿಂದ ಬಂಧು-ಬಾಂಧವರನ್ನು ಜೊತೆ ಸೇರಿಸಿಕೊಂಡು ಈ ದಿನವನ್ನು ಸಂಭ್ರಮಿಸಲು ಸಾಧ್ಯವಾಗುತ್ತಿಲ್ಲ.

ಮದುವೆ ನಂತರವೂ ಬೇರೆ ನಟಿಯರ ಜೊತೆ ಅಮಿತಾಭ್​ ಹೆಸರು ತಳುಕು ಹಾಕಿಕೊಂಡಿತ್ತು. ಹತ್ತಾರು ಗಾಸಿಪ್​ಗಳು ಹರಿದಾಡಿದ್ದವು. ಆದರೂ ಅವುಗಳಿಂದ ಅಮಿತಾಭ್​ ಮತ್ತು ಜಯ ದಾಂಪತ್ಯಕ್ಕೆ ಧಕ್ಕೆ ಆಗಲಿಲ್ಲ. ಕಳೆದ 48 ವರ್ಷಗಳಿಂದ ಪರಸ್ಪರ ನಂಬಿಕೆ, ಪ್ರೀತಿ, ಗೌರವಗಳೊಂದಿಗೆ ದಾಂಪತ್ಯ ಜೀವನ ನಡೆಸುತ್ತಿರುವ ಈ ಸ್ಟಾರ್​ಗಳಿಬ್ಬರು ಅನೇಕರಿಗೆ ಮಾದರಿ. ತಮ್ಮ ಪತ್ನಿ ಬಗ್ಗೆ ಅಮಿತಾಭ್​ ಹೇಳಿಕೊಂಡ 5 ಇಂಟರೆಸ್ಟಿಂಗ್​ ಮಾತುಗಳು ಇಲ್ಲಿವೆ.

1) ‘ನಾನು ಬಯಸಿದ ಎಲ್ಲ ಒಳ್ಳೆಯ ಗುಣಗಳು ಜಯಾ ಅವರಲ್ಲಿ ಇತ್ತು. ಅದೇ ಕಾರಣಕ್ಕಾಗಿ ನಾನು ಅವರನ್ನು ಮದುವೆ ಆದೆ. ಪ್ರೀತಿಯ ಭಾವನೆಗಳನ್ನು ಜಯಾ ಚೆನ್ನಾಗಿ ಅಭಿವ್ಯಕ್ತಿಸುತ್ತಾರೆ’ ಎನ್ನುವ ಮೂಲಕ 1998ರಲ್ಲಿ ಪತ್ನಿಯ ಗುಣಗಾನ ಮಾಡಿದ್ದರು ಬಿಗ್​ ಬಿ.

2) ‘ಕೆಟ್ಟ ಉದ್ದೇಶ ಹೊಂದಿರುವ ವ್ಯಕ್ತಿಗಳನ್ನು ಜಯಾ ತಕ್ಷಣಕ್ಕೆ ಪತ್ತೆ ಹಚ್ಚುತ್ತಾರೆ. ಅವರಿಗೆ ಸಿಕ್ಸ್ತ್ ​ಸೆನ್ಸ್​ ಇದೆ ಎನಿಸುತ್ತದೆ. ಅದೇ ಕಾರಣಕ್ಕಾಗಿ ಅವರು ಇಂಥವರನ್ನು ಬೇಗ ಕಂಡು ಹಿಡಿಯುತ್ತಾರೆ’ ಎಂದು ಕೌನ್​ ಬನೇಗಾ ಕರೋಡ್​ಪತಿ ಕಾರ್ಯಕ್ರಮದಲ್ಲಿ ಬಚ್ಚನ್​ ಹೇಳಿದ್ದರು.

3) ‘ಇಂದಿಗೂ ನಾನು ನನ್ನ ಪತ್ನಿಗೆ ಲವ್​ ಲೆಟರ್​ ಬರೆಯುತ್ತೇನೆ’ ಎಂದು ಕೌನ್​ ಬನೇಗಾ ಕರೋಡ್​ಪತಿ ಕಾರ್ಯಕ್ರಮದ ವೇದಿಕೆಯಲ್ಲಿ ಅಮಿತಾಭ್​ ಬಚ್ಚನ್​ ಹೇಳಿದ್ದರು. ಆ ಮೂಲಕ ತಮ್ಮ ರೊಮ್ಯಾಂಟಿಕ್​ ಬಾಂಧವ್ಯದ ಬಗ್ಗೆ ಅವರು ಬಾಯಿ ಬಿಟ್ಟಿದ್ದರು.

4) ಗಂಡಂದಿರು ತಮ್ಮ ಪತ್ನಿಯ ಹೆಸರನ್ನು ಮೊಬೈಲ್​ನಲ್ಲಿ ತಮ್ಮಿಷ್ಟದಂತೆ ಸೇವ್​ ಮಾಡಿಕೊಳ್ಳುತ್ತಾರೆ. ಹಾಗಾದರೆ ಅಮಿತಾಭ್​ ಮೊಬೈಲ್​ನಲ್ಲಿ ಜಯಾ ಹೆಸರು ಹೇಗೆ ಸೇವ್​ ಆಗಿದೆ? ‘JB’ ಎಂದು ಸೇವ್​ ಮಾಡಿಕೊಂಡಿರುವುದನ್ನು ಕೂಡ ಕೌನ್​ ಬನೇಗಾ ಕರೋಡ್​ಪತಿ ಕಾರ್ಯಕ್ರಮದಲ್ಲಿ ಅಮಿತಾಭ್​ ಹೇಳಿದ್ದರು.

5) ಇಂಥ ಪತ್ನಿ ಸಿಕ್ಕಿದ್ದು ಆ ದೇವರ ಕೃಪೆ ಎಂದೇ ಅಮಿತಾಭ್​ ಹೇಳುತ್ತಾರೆ. ಈ ಬಗ್ಗೆ ಅವರು ತಮ್ಮ ಬ್ಲಾಗ್​ನಲ್ಲಿ ಬರೆದುಕೊಂಡಿದ್ದರು. ‘ಫೋಟೋ ನೋಡಿ, ಜೊತೆಯಲ್ಲಿ ಕೆಲಸ ಮಾಡಿ, ಒಟ್ಟಿಗೆ ಸಮಯ ಕಳೆದು, ಒಟ್ಟಿಗೆ ನಿರ್ಧರಿಸಿ, ಮದುವೆ ಆಗಿ, ಮಕ್ಕಳು-ಮೊಮ್ಮಕ್ಕಳನ್ನು ಪಡೆದೆವು. ಎಷ್ಟೋ ಜನರಿಗೆ ಈ ಭಾಗ್ಯ ಇರುವುದಿಲ್ಲ. ನಮಗೆ ಅದೃಷ್ಟ ನೀಡಿದ್ದಕ್ಕೆ ದೇವರಿಗೆ ಧನ್ಯವಾದ ಹೇಳಲೇ ಬೇಕು’ ಎಂದು ಅಮಿತಾಭ್​ ಬರೆದುಕೊಂಡಿದ್ದರು.

ಇದನ್ನೂ ಓದಿ:

ಅಮಿತಾಭ್​ ಫ್ಲಾಪ್​ ಹೀರೋ ಎಂದು ನಾಯಕಿಯರು ದೂರ ಸರಿದಾಗ ಮುಂದೆ ಬಂದಿದ್ದು ಜಯಾ ಬಚ್ಚನ್​; ಅಲ್ಲಿಂದ ಶುರುವಾಯ್ತು ಪ್ರೇಮ ಕಹಾನಿ

‘ನಾನು ದೇಣಿಗೆ ಕೇಳಲ್ಲ, ಕೊಡ್ತೀನಿ’; ಬೇರೆ ಸ್ಟಾರ್​ಗಳಿಗಿಂತ ಭಿನ್ನ ಹೆಜ್ಜೆ ಇಟ್ಟ ಅಮಿತಾಭ್​

1 ತಿಂಗಳಲ್ಲಿ ಕೇದಾರನಾಥ ದೇವಾಲಯಕ್ಕೆ 6.5 ಲಕ್ಷ ಭಕ್ತರ ಭೇಟಿ
1 ತಿಂಗಳಲ್ಲಿ ಕೇದಾರನಾಥ ದೇವಾಲಯಕ್ಕೆ 6.5 ಲಕ್ಷ ಭಕ್ತರ ಭೇಟಿ
ಈಗಾಗಲೇ ಹತ್ತಕ್ಕೂ ಹೆಚ್ಚು ಕಡೆ ಕುಸಿದಿರುವ ಚಾರ್ಮಾಡಿ ಘಾಟ್
ಈಗಾಗಲೇ ಹತ್ತಕ್ಕೂ ಹೆಚ್ಚು ಕಡೆ ಕುಸಿದಿರುವ ಚಾರ್ಮಾಡಿ ಘಾಟ್
ಅಸ್ಸಾಂನ ಲಖಿಂಪುರದಲ್ಲಿ ಭಾರೀ ಪ್ರವಾಹ; 230 ಹಳ್ಳಿಗಳು ಮುಳುಗಡೆ
ಅಸ್ಸಾಂನ ಲಖಿಂಪುರದಲ್ಲಿ ಭಾರೀ ಪ್ರವಾಹ; 230 ಹಳ್ಳಿಗಳು ಮುಳುಗಡೆ
ವೀರಶೈವ ಸಮುದಾಯದ ಎಲ್ಲ ಉಪಪಂಗಡಗಳನ್ನು ಒಗ್ಗೂಡಿಸಬೇಕಿದೆ: ಪಾಟೀಲ್
ವೀರಶೈವ ಸಮುದಾಯದ ಎಲ್ಲ ಉಪಪಂಗಡಗಳನ್ನು ಒಗ್ಗೂಡಿಸಬೇಕಿದೆ: ಪಾಟೀಲ್
ಗುತ್ತಿಗೆದಾರನ ದ್ವಿಚಕ್ರವಾಹನ ಹಾಸನದ ಬಸ್​ ನಿಲ್ದಾಣದ ಬಳಿ ಪತ್ತೆ
ಗುತ್ತಿಗೆದಾರನ ದ್ವಿಚಕ್ರವಾಹನ ಹಾಸನದ ಬಸ್​ ನಿಲ್ದಾಣದ ಬಳಿ ಪತ್ತೆ
ಕೋಮು ನಿಗ್ರಹ ದಳ ರಚಿಸಿರುವುದು ಹಿಂದೂಗಳನ್ನು ಟಾರ್ಗೆಟ್ ಮಾಡಲು: ವಿಜಯೇಂದ್ರ
ಕೋಮು ನಿಗ್ರಹ ದಳ ರಚಿಸಿರುವುದು ಹಿಂದೂಗಳನ್ನು ಟಾರ್ಗೆಟ್ ಮಾಡಲು: ವಿಜಯೇಂದ್ರ
ಒಕ್ಕಲಿಗರ ಕೋಟೆಯಲ್ಲಿ ಲಿಂಗಾಯತ ಸಿಎಂ ಮಾತು: ಡಿಕೆಶಿ ಆಪ್ತನಿಂದಲೇ MB ಪಾಟೀಲ್
ಒಕ್ಕಲಿಗರ ಕೋಟೆಯಲ್ಲಿ ಲಿಂಗಾಯತ ಸಿಎಂ ಮಾತು: ಡಿಕೆಶಿ ಆಪ್ತನಿಂದಲೇ MB ಪಾಟೀಲ್
ಹೋರಿಗೆ ಕೇಕ್ ತಿನ್ನಿಸಿ ತಾನೂ ತಿಂದ ಮಾಜಿ ಸಚಿವ ರೇಣುಕಾಚಾರ್ಯ
ಹೋರಿಗೆ ಕೇಕ್ ತಿನ್ನಿಸಿ ತಾನೂ ತಿಂದ ಮಾಜಿ ಸಚಿವ ರೇಣುಕಾಚಾರ್ಯ
ಚಾರ್ಮಾಡಿ ಘಾಟಿ ಡೇಂಜರ್ ಡೇಂಜರ್ ಮತ್ತಷ್ಟು ಕುಸಿಯುವ ಆತಂಕ
ಚಾರ್ಮಾಡಿ ಘಾಟಿ ಡೇಂಜರ್ ಡೇಂಜರ್ ಮತ್ತಷ್ಟು ಕುಸಿಯುವ ಆತಂಕ
ಯಾದಗಿರಿ ಜಿಲ್ಲೆಯಾದ್ಯಂತ ಧಾರಾಕಾರ ಮಳೆ; ವಾಹನ ಸಂಚಾರ, ಜನಜೀವನ ಅಸ್ತವ್ಯಸ್ತ
ಯಾದಗಿರಿ ಜಿಲ್ಲೆಯಾದ್ಯಂತ ಧಾರಾಕಾರ ಮಳೆ; ವಾಹನ ಸಂಚಾರ, ಜನಜೀವನ ಅಸ್ತವ್ಯಸ್ತ