
ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ‘ಅಮೃತಧಾರೆ’ ಧಾರಾವಾಹಿ ಶೀಘ್ರವೇ ಪೂರ್ಣಗೊಳ್ಳಲಿದೆ ಎಂಬ ಮಾಹಿತಿ ಒಂದು ಕಡೆಯಾದರೆ, ಈ ಧಾರಾವಾಹಿ ಪ್ರಮುಖ ತಿರುವುಗಳನ್ನು ಪಡೆದುಕೊಂಡು ಸಾಗುತ್ತಿದೆ ಎಂಬುದು ಮತ್ತೊಂದು ಕಡೆ. ಜೆಡಿ ದ್ವೇಷ ತೀರಿಸಿಕೊಳ್ಳಲು ಯಾವ ಹಂತಕ್ಕೆ ಬೇಕಿದ್ದರು ಹೋಗಲು ರೆಡಿ ಇದ್ದ. ಈಗ ಎರಡನೇ ಪತ್ನಿ ದಿಯಾನ್ನೇ ಕೊಂದು ಬಿಟ್ಟಿದ್ದಾನೆ ಎಂಬುದು ಶಾಕಿಂಗ್ ಬೆಳವಣಿಗೆ.
ಗೌತಮ್ ಹಾಗೂ ಭೂಮಿಕಾ ದಂಪತಿಗೆ ಇಬ್ಬರು ಮಕ್ಕಳು ಜನಿಸಿದ್ದರು. ಆದರೆ, ಜೆಡಿ ಮಾಡಿದ ಕೆಟ್ಟ ಕೆಲಸದಿಂದ ಒಂದು ಮಗು ಕಳೆದು ಹೋಯಿತು. ಆ ಮಗು ಬದುಕಿದೆ. ಅವಳೇ ಮಿಂಚು. ದತ್ತು ರೂಪದಲ್ಲಿ ಗೌತಮ್ ಮನೆ ಸೇರಿದ್ದಾಳೆ. ಇವಳೆ ತನ್ನ ಮಗಳು ಎಂಬ ಯಾವ ಸೂಚನೆಯೂ ಗೌತಮ್ಗಾಗಲಿ ಅಥವಾ ಭೂಮಿಕಾಗಾಗಲಿ ಇರಲಿಲ್ಲ. ದತ್ತು ಮಗಳು ಎಂದು ಅವರು ಸಾಕುತ್ತಿದ್ದಾರೆ.
ಈಗ ಗೌತಮ್ ಮಾವ ಆಶ್ರಮಕ್ಕೆ ಹೋಗಿ ಮಿಂಚುನೇ ಗೌತಮ್ ಮಗಳು ಎಂಬುದನ್ನು ಪತ್ತೆ ಹಚ್ಚಿದ್ದಾನೆ. ಹೀಗೆ ಪತ್ತೆ ಹಚ್ಚಿದ ಬೆನ್ನಲ್ಲೇ ಜೆಡಿಯು ಲಕ್ಷ್ಮೀಕಾಂತ್ನ ಕಿಡ್ನ್ಯಾಪ್ ಮಾಡಿದ್ದಾನೆ. ಈಗ ಮಿಂಚು, ಗೌತಮ್ ಮಗಳು ಎಂಬ ವಿಷಯ ಗೊತ್ತಾಗಿದೆ. ಈ ವಿಷಯ ಗೊತ್ತಾದ ಬೆನ್ನಲ್ಲೇ ಮಿಂಚುಗೆ ಒಂದು ಗತಿ ಕಾಣಿಸಬೇಕು ಎಂದು ಆತ ನಿರ್ಧರಿಸಿದ.
ಆದರೆ, ಇದು ದಿಯಾಗೆ ಇಷ್ಟ ಆಗಿಲ್ಲ. ಈ ಕಾರಣದಿಂದ ಆಕೆ ಈ ವಿಷಯವನ್ನು ಗೌತಮ್ಗೆ ಹೇಳಲು ಮುಂದಾದಳು. ಇದರಿಂದ ಸಿಟ್ಟಾದ ಜೆಡಿ ಆಕೆಯನ್ನೇ ಕೊಂದು ಬಿಟ್ಟಿದ್ದಾನೆ. ಇದು ಶಾಕಿಂಗ್ ಆಗಿದೆ.
ಇದನ್ನೂ ಓದಿ: ‘ಅಮೃತಧಾರೆ’: ಅವನ್ಯಾರು ಗೊತ್ತೇ ಇಲ್ಲ; ಮಗ ಜೆಡಿ ವಿರುದ್ಧ ತಿರುಗಿಬಿದ್ದ ಶಕುಂತಲ
ಆಕೆ ಜೆಡಿಯ ಹಣ ಹೊತ್ತು ತಂದಿದ್ದಾಳೆ. ಇದನ್ನು ಪಡೆದ ಬಳಿಕ ಆಕೆಯನ್ನು ಸಾಯಿಸಬೇಕು ಎಂಬುದು ಜೆಡಿಯ ಪ್ಲ್ಯಾನ್ ಆಗಿತ್ತು. ಆದರೆ, ಅದಕ್ಕೂ ಮೊದಲೇ ಈ ಘಟನೆ ನಡೆದು ಹೊಗಿದೆ. ಹಣ ಪಡೆಯುವ ಮೊದಲೇ ಕೊಂದೆನಲ್ಲ ಎಂದು ಜೆಡಿ ಬೇಸರ ಮಾಡಿಕೊಂಡಿದ್ದಾನೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 10:52 am, Mon, 1 June 26