ಅಮೃತಧಾರೆ: ಆ ಒಂದು ವಿಷಯಕ್ಕೆ ದಿಯಾಳನ್ನು ಕೊಂದೇ ಬಿಟ್ಟ ಜೆಡಿ

ಜೀ ಕನ್ನಡದ ಜನಪ್ರಿಯ ಧಾರಾವಾಹಿ 'ಅಮೃತಧಾರೆ' ಶೀಘ್ರವೇ ಪೂರ್ಣಗೊಳ್ಳಲಿದೆ. ಪ್ರಮುಖ ತಿರುವುಗಳಲ್ಲಿ, ಜೆಡಿ ತನ್ನ ಎರಡನೇ ಪತ್ನಿ ದಿಯಾರನ್ನು ಕೊಂದು ಶಾಕ್ ನೀಡಿದ್ದಾನೆ. ಅತ್ತ, ಗೌತಮ್-ಭೂಮಿಕಾ ಕಳೆದುಕೊಂಡಿದ್ದ ಮಗಳು ಮಿಂಚು, ದತ್ತು ರೂಪದಲ್ಲಿ ಅವರ ಮನೆಯಲ್ಲೇ ಬೆಳೆಯುತ್ತಿದ್ದ ರಹಸ್ಯ ಬಯಲಾಗಿದೆ. ಈ ಘಟನೆಗಳು ಧಾರಾವಾಹಿಗೆ ಅನಿರೀಕ್ಷಿತ ಅಂತ್ಯ ತರಲಿವೆ.

ಅಮೃತಧಾರೆ: ಆ ಒಂದು ವಿಷಯಕ್ಕೆ ದಿಯಾಳನ್ನು ಕೊಂದೇ ಬಿಟ್ಟ ಜೆಡಿ
ಅಮೃತಧಾರೆ
Edited By:

Updated on: Jun 01, 2026 | 10:54 AM

ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ‘ಅಮೃತಧಾರೆ’ ಧಾರಾವಾಹಿ ಶೀಘ್ರವೇ ಪೂರ್ಣಗೊಳ್ಳಲಿದೆ ಎಂಬ ಮಾಹಿತಿ ಒಂದು ಕಡೆಯಾದರೆ, ಈ ಧಾರಾವಾಹಿ ಪ್ರಮುಖ ತಿರುವುಗಳನ್ನು ಪಡೆದುಕೊಂಡು ಸಾಗುತ್ತಿದೆ ಎಂಬುದು ಮತ್ತೊಂದು ಕಡೆ. ಜೆಡಿ ದ್ವೇಷ ತೀರಿಸಿಕೊಳ್ಳಲು ಯಾವ ಹಂತಕ್ಕೆ ಬೇಕಿದ್ದರು ಹೋಗಲು ರೆಡಿ ಇದ್ದ. ಈಗ ಎರಡನೇ ಪತ್ನಿ ದಿಯಾನ್ನೇ ಕೊಂದು ಬಿಟ್ಟಿದ್ದಾನೆ ಎಂಬುದು ಶಾಕಿಂಗ್ ಬೆಳವಣಿಗೆ.

ಗೌತಮ್ ಹಾಗೂ ಭೂಮಿಕಾ ದಂಪತಿಗೆ ಇಬ್ಬರು ಮಕ್ಕಳು ಜನಿಸಿದ್ದರು. ಆದರೆ, ಜೆಡಿ ಮಾಡಿದ ಕೆಟ್ಟ ಕೆಲಸದಿಂದ ಒಂದು ಮಗು ಕಳೆದು ಹೋಯಿತು. ಆ ಮಗು ಬದುಕಿದೆ. ಅವಳೇ ಮಿಂಚು. ದತ್ತು ರೂಪದಲ್ಲಿ ಗೌತಮ್ ಮನೆ ಸೇರಿದ್ದಾಳೆ. ಇವಳೆ ತನ್ನ ಮಗಳು ಎಂಬ ಯಾವ ಸೂಚನೆಯೂ ಗೌತಮ್‌ಗಾಗಲಿ ಅಥವಾ ಭೂಮಿಕಾಗಾಗಲಿ ಇರಲಿಲ್ಲ. ದತ್ತು ಮಗಳು ಎಂದು ಅವರು ಸಾಕುತ್ತಿದ್ದಾರೆ.

ಈಗ ಗೌತಮ್ ಮಾವ ಆಶ್ರಮಕ್ಕೆ ಹೋಗಿ ಮಿಂಚುನೇ ಗೌತಮ್ ಮಗಳು ಎಂಬುದನ್ನು ಪತ್ತೆ ಹಚ್ಚಿದ್ದಾನೆ. ಹೀಗೆ ಪತ್ತೆ ಹಚ್ಚಿದ ಬೆನ್ನಲ್ಲೇ ಜೆಡಿಯು ಲಕ್ಷ್ಮೀಕಾಂತ್​​ನ ಕಿಡ್ನ್ಯಾಪ್ ಮಾಡಿದ್ದಾನೆ. ಈಗ ಮಿಂಚು, ಗೌತಮ್ ಮಗಳು ಎಂಬ ವಿಷಯ ಗೊತ್ತಾಗಿದೆ. ಈ ವಿಷಯ ಗೊತ್ತಾದ ಬೆನ್ನಲ್ಲೇ ಮಿಂಚುಗೆ ಒಂದು ಗತಿ ಕಾಣಿಸಬೇಕು ಎಂದು ಆತ ನಿರ್ಧರಿಸಿದ.

ಆದರೆ, ಇದು ದಿಯಾಗೆ ಇಷ್ಟ ಆಗಿಲ್ಲ. ಈ ಕಾರಣದಿಂದ ಆಕೆ ಈ ವಿಷಯವನ್ನು ಗೌತಮ್​​ಗೆ ಹೇಳಲು ಮುಂದಾದಳು. ಇದರಿಂದ ಸಿಟ್ಟಾದ ಜೆಡಿ ಆಕೆಯನ್ನೇ ಕೊಂದು ಬಿಟ್ಟಿದ್ದಾನೆ. ಇದು ಶಾಕಿಂಗ್ ಆಗಿದೆ.

ಇದನ್ನೂ ಓದಿ: ‘ಅಮೃತಧಾರೆ’: ಅವನ್ಯಾರು ಗೊತ್ತೇ ಇಲ್ಲ; ಮಗ ಜೆಡಿ ವಿರುದ್ಧ ತಿರುಗಿಬಿದ್ದ ಶಕುಂತಲ

ಆಕೆ ಜೆಡಿಯ ಹಣ ಹೊತ್ತು ತಂದಿದ್ದಾಳೆ. ಇದನ್ನು ಪಡೆದ ಬಳಿಕ ಆಕೆಯನ್ನು ಸಾಯಿಸಬೇಕು ಎಂಬುದು ಜೆಡಿಯ ಪ್ಲ್ಯಾನ್ ಆಗಿತ್ತು. ಆದರೆ, ಅದಕ್ಕೂ ಮೊದಲೇ ಈ ಘಟನೆ ನಡೆದು ಹೊಗಿದೆ. ಹಣ ಪಡೆಯುವ ಮೊದಲೇ ಕೊಂದೆನಲ್ಲ ಎಂದು ಜೆಡಿ ಬೇಸರ ಮಾಡಿಕೊಂಡಿದ್ದಾನೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 10:52 am, Mon, 1 June 26

Shreelaxmi H

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Follow Us