AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಅಮೃತಧಾರೆ’: ಅವನ್ಯಾರು ಗೊತ್ತೇ ಇಲ್ಲ; ಮಗ ಜೆಡಿ ವಿರುದ್ಧ ತಿರುಗಿಬಿದ್ದ ಶಕುಂತಲ

ಅಮೃತಧಾರೆ ಧಾರಾವಾಹಿಯಲ್ಲಿ ಶಕುಂತಲಾ ಜೆಡಿ ವಿರುದ್ಧ ತಿರುಗಿಬಿದ್ದಿದ್ದಾಳೆ. ಮಗ ಜೆಡಿ ಅವಳನ್ನು ತ್ಯಜಿಸಿದಾಗ, ಮಲಮಗ ಗೌತಮ್ ಆಕೆಗೆ ಆಸರೆಯಾದ. ಗೌತಮ್‌ನ ಒಳ್ಳೆಯತನದಿಂದ ಪಾಠ ಕಲಿತ ಶಕುಂತಲಾ ಈಗ ಜೆಡಿಗೆ ಸಹಾಯ ಮಾಡಲು ನಿರಾಕರಿಸಿದ್ದಾಳೆ. ಈ ಮಹತ್ವದ ತಿರುವು ಧಾರಾವಾಹಿಯ ಅಂತ್ಯಕ್ಕೆ ಕಾರಣವಾಗಬಹುದೇ ಎಂಬ ಕುತೂಹಲ ಮೂಡಿಸಿದೆ.

‘ಅಮೃತಧಾರೆ’: ಅವನ್ಯಾರು ಗೊತ್ತೇ ಇಲ್ಲ; ಮಗ ಜೆಡಿ ವಿರುದ್ಧ ತಿರುಗಿಬಿದ್ದ ಶಕುಂತಲ
ಅಮೃತಧಾರೆ
TV9 Web
| Edited By: |

Updated on: May 09, 2026 | 8:17 AM

Share

‘ಅಮೃತಧಾರೆ’ ಧಾರಾವಾಹಿಯಲ್ಲಿ (Amruthadhaare Serial) ಈಗ ಒಂದು ದೊಡ್ಡ ಬದಲಾವಣೆ ಬಂದಿದೆ. ವಿಲನ್ ಜೆಡಿ ವಿರುದ್ಧವೇ ಶಕುಂತಲ ತಿರುಗಿ ಬಿದ್ದಿದ್ದಾಳೆ. ಮಗನಿಗೋಸ್ಕರ ಆಕೆ ಎದುರು ಹಾಕಿಕೊಳ್ಳದ ಜನರೇ ಇರಲಿಲ್ಲ. ಆದರೆ, ಈಗ ಎಲ್ಲವೂ ಬದಲಾಗಿದೆ. ಶಕುಂತಲ ವಿರುದ್ಧ ಮಗನೇ ತಿರುಗಿಬಿದ್ದ. ಆ ಸಂದರ್ಭದಲ್ಲಿ ಕಾಪಾಡಿದ್ದು ಮಲ ಮಗ. ಈ ಋಣವನ್ನು ತೀರಿಸುವ ಸಮಯ ಈಗ ಬಂದಿದೆ. ಈ ಕಾರಣದಿಂದ ಆಕೆ ಜೆಡಿ ವಿರುದ್ಧವೇ ತಿರುಗಿಬಿದ್ದಿದ್ದಾಳೆ.

ಪ್ರತಿ ಹಂತದಲ್ಲೂ ಶಕುಂತಲ ಮಲ ಮಗ ಗೌತಮ್ ಹಾಗೂ ಭೂಮಿಕಾಳನ್ನು ದೂರ ತಳ್ಳುತ್ತಾ, ಅವರಿಗೆ ಕೆಟ್ಟದನ್ನು ಮಾಡುತ್ತಲೇ ಬಂದಳು. ಈ ವೇಳೆ ಜಯದೇವ್ನ ಶಕುಂತಲ ಬೆಂಬಲಿಸಿದಳು. ಕೊನೆಗೆ ಆಗಿದ್ದೇಬೆರೆ. ಹಣ ಕೇಳಿದ್ದಕ್ಕೆ ಜಯದೇವ್ ತಾಯಿಯನ್ನೇ ಹೊರಹಾಕಿದ್ದಾನೆ. ಇದರಿಂದ ಆಕೆ ಪಾಠ ಕಲಿತಿದ್ದಾಳೆ.

View this post on Instagram

A post shared by Zee Kannada (@zeekannada)

ಜಯದೇವ್ ಹೊರಹಾಕುತ್ತಿದ್ದಂತೆ ಶಕುಂತಲಾಳನ್ನು ಸಾಲ ಕೊಟ್ಟವರು ಬಂದು ಹಿಡಿದುಕೊಂಡು ಹೋದರು. ಆಕೆಗೆ ಟಾರ್ಚರ್ ಕೊಡೋಕೆ ಆರಂಭಿಸಿದರು. ಕೊನೆಗೆ ಆಕೆಯ ಸಹಾಯಕ್ಕೆ ಬಂದಿದ್ದು ಗೌತಮ್. ಈ ವಿಷಯದಲ್ಲಿ ಆಕೆಯ ಸಹಾಯಕ್ಕೆ ಗೌತಮ್ ನಿಂತಿದ್ದು ನೋಡಿ ಆಕೆಯ ಮನಸ್ಸು ಕರಗಿ ಹೋಯಿತು. ಅಷ್ಟೆಲ್ಲ ಕೆಟ್ಟದನ್ನು ಮಾಡಿದರೂ ಮಲತಾಯಿಗೆ ಗೌತಮ್ ಒಳ್ಳೆಯದ್ದನ್ನೇ ಬಯಸಿದ್ದ. ಈ ಘಟನೆ ಆಕೆಯನ್ನು ಸಾಕಷ್ಟು ಬದಲಾವಣೆ ಮಾಡಿತು.

ಇದನ್ನೂ ಓದಿ: ‘ಅಮೃತಧಾರೆ’: ಮೋಸ ಮಾಡಿ ಕಾಲ್ಕಿತ್ತ ಜೆಡಿ ಪತ್ನಿ ದಿಯಾ; ಬೀದಿಗೆ ಬಂದ ಜಯದೇವ್

ಈಗ ಜಯದೇವ್ ಕಷ್ಟದಲ್ಲಿ ಇದ್ದಾನೆ. ಆದರೆ, ಈ ಸಂದರ್ಭದಲ್ಲಿ ಜಯದೇವ್ಗೆ ಸಹಾಯ ಮಾಡಲು ಶಕುಂತಲ ರೆಡಿ ಇಲ್ಲ. ಆತನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಈ ವೇಳೆ ‘ತಾಯಿಗೆ ಕರೆ ಮಾಡುವಂತೆ’ ಕೋರಿದ. ಆದರೆ, ಶಕುಂತಲ ಅವನ್ಯಾರು ಗೊತ್ತೇ ಇಲ್ಲ ಎಂದಿದ್ದಾಳೆ. ಇದರಿಂದ ಆತನಿಗೆ ಏಟು ಬಿದ್ದಿದೆ. ಶೀಘ್ರವೇ ಧಾರಾವಾಹಿ ಪೂರ್ಣಗೊಳ್ಳಲಿದೆಯೇ ಎಂಬ ಕುತೂಹಲ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Web contact
Web contact

TV9 Kannada

Read More