AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಲ್ಮಾನ್ ಖಾನ್ ಸಿನಿಮಾ ಸೇರಿದ ಮತ್ತೊಬ್ಬ ದಕ್ಷಿಣದ ಜನಪ್ರಿಯ ನಟ

Salman Khan: ಸಲ್ಮಾನ್ ಖಾನ್ ಕಳೆದ ಕೆಲ ವರ್ಷಗಳಿಂದಲೂ ಸತತ ಸೋಲಿನಲ್ಲೇ ಇದ್ದಾರೆ. ಅವರ ಇತ್ತೀಚೆಗಿನ ಕೆಲ ಸಿನಿಮಾಗಳಂತೂ ಧಾರುಣ ಸೋಲು ಕಂಡಿವೆ. ಇದೀಗ ಮತ್ತೊಮ್ಮೆ ಅವರು ದಕ್ಷಿಣದ ನಿರ್ದೇಶಕನ ಕೈ ಹಿಡಿದಿದ್ದು, ಈ ಸಿನಿಮಾನಲ್ಲಿ ನಿರ್ದೇಶಕ ಮಾತ್ರವಲ್ಲದೆ, ನಿರ್ಮಾಪಕ, ನಾಯಕಿ, ಮುಖ್ಯ ಪೋಷಕ ನಟ, ವಿಲನ್ ಸಹ ದಕ್ಷಿಣದವರೇ ಆಗಿದ್ದಾರೆ.

ಸಲ್ಮಾನ್ ಖಾನ್ ಸಿನಿಮಾ ಸೇರಿದ ಮತ್ತೊಬ್ಬ ದಕ್ಷಿಣದ ಜನಪ್ರಿಯ ನಟ
Salman Khan
ಮಂಜುನಾಥ ಸಿ.
|

Updated on: Apr 01, 2026 | 3:24 PM

Share

ಪ್ಯಾನ್ ಇಂಡಿಯಾ (Pan India) ಸಿನಿಮಾಗಳ ಹವಾ ಹೆಚ್ಚಾದ ಬಳಿಕ, ದಕ್ಷಿಣದವರ ಮೇಲೆ ಬಾಲಿವುಡ್​ಗೆ ಪ್ರೀತಿ, ಗೌರವ ಉಕ್ಕಿ ಹರಿಯುತ್ತಿದೆ. ಎದುರೇ ಇಲ್ಲದಂತಿದ್ದ ಖಾನ್​ ತ್ರಯರೂ ಸಹ ಸತತ ಸೋಲಿನ ಬಳಿಕ ಗೆಲುವಿಗಾಗಿ ದಕ್ಷಿಣದ ನಿರ್ದೇಶಕರು, ನಟರ ಜೊತೆಗೆ ಕೈಜೋಡಿಸುತ್ತಿದ್ದಾರೆ. ಸಲ್ಮಾನ್ ಖಾನ್ ಕಳೆದ ಕೆಲ ವರ್ಷಗಳಿಂದಲೂ ಸತತ ಸೋಲಿನಲ್ಲೇ ಇದ್ದಾರೆ. ಅವರ ಇತ್ತೀಚೆಗಿನ ಕೆಲ ಸಿನಿಮಾಗಳಂತೂ ಧಾರುಣ ಸೋಲು ಕಂಡಿವೆ. ಇದೀಗ ಮತ್ತೊಮ್ಮೆ ಅವರು ದಕ್ಷಿಣದ ನಿರ್ದೇಶಕನ ಕೈ ಹಿಡಿದಿದ್ದು, ಈ ಸಿನಿಮಾನಲ್ಲಿ ನಿರ್ದೇಶಕ ಮಾತ್ರವಲ್ಲದೆ, ನಿರ್ಮಾಪಕ, ನಾಯಕಿ, ಮುಖ್ಯ ಪೋಷಕ ನಟ, ವಿಲನ್ ಸಹ ದಕ್ಷಿಣದವರೇ ಆಗಿದ್ದಾರೆ.

ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರ ಮುಂಬರುವ ಸಿನಿಮಾವನ್ನು ಟಾಲಿವುಡ್ ಖ್ಯಾತ ನಿರ್ದೇಶಕ ವಂಶಿ ಪೈಡಿಪಲ್ಲಿ ನಿರ್ದೇಶನ ಮಾಡಲಿದ್ದಾರೆ. ಈ ಸಿನಿಮಾನಲ್ಲಿ ನಾಯಕಿಯಾಗಿ ದಕ್ಷಿಣದ ಸ್ಟಾರ್ ನಟಿ ನಯನತಾರಾ ನಟಿಸಲಿದ್ದಾರೆ. ನಯನತಾರಾ ಪಾಲಿಗೆ ಇದು ಅವರ ಎರಡನೇ ಹಿಂದಿ ಸಿನಿಮಾ ಆಗಿರಲಿದೆ. ಈ ಹಿಂದೆ ಅವರು ಶಾರುಖ್ ಖಾನ್ ಜೊತೆಗೆ ‘ಜವಾನ್’ ಸಿನಿಮಾನಲ್ಲಿ ನಟಿಸಿದ್ದರು. ಈಗ ಸಲ್ಮಾನ್ ಖಾನ್ ಜೊತೆಗೆ ನಟಿಸುತ್ತಿದ್ದಾರೆ.

ಇದನ್ನೂ ಓದಿ:ಚೈತ್ರಾ ಆಚಾರ್​​ಗೆ ಸಿಕ್ತು ದೊಡ್ಡ ಅವಕಾಶ, ಪ್ಯಾನ್ ಇಂಡಿಯಾ ಸ್ಟಾರ್ ಜೊತೆ ಸಿನಿಮಾ

ಇದೀಗ ಈ ಸಿನಿಮಾಕ್ಕೆ ದಕ್ಷಿಣದ ಮತ್ತೊಬ್ಬ ಜನಪ್ರಿಯ ನಟ ಅರವಿಂದ ಸ್ವಾಮಿ ಎಂಟ್ರಿ ಕೊಟ್ಟಿದ್ದಾರೆ. ‘ರೋಜಾ’, ‘ಬಾಂಬೆ’ ಸೇರಿದಂತೆ ತಮಿಳಿನ ಹಲವು ಕಲ್ಟ್ ಸಿನಿಮಾಗಳಲ್ಲಿ ನಟಿಸಿರುವ ಕ್ಲಾಸ್ ನಟ ಅರವಿಂದ ಸ್ವಾಮಿ, ಇತ್ತೀಚೆಗೆ ಸಹ ‘ಮೇಯಳಗನ್’, ‘ಚೆಕ್ಕ ಚಿವಂತ ವಾನಂ’ ಇನ್ನೂ ಕೆಲ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇದೀಗ ಅರವಿಂದ ಸ್ವಾಮಿ ಅವರು ಸಲ್ಮಾನ್ ಖಾನ್ ಸಿನಿಮಾನಲ್ಲಿ ನಟಿಸಲಿದ್ದಾರೆ. ಇವರದ್ದು ವಿಲನ್ ಪಾತ್ರ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಆ ಬಗ್ಗೆ ಖಾತ್ರಿ ಇಲ್ಲ. ಇನ್ನು ಇದೇ ಸಿನಿಮಾಕ್ಕೆ ಅನಿಲ್ ಕಪೂರ್ ಸಹ ಎಂಟ್ರಿ ಕೊಟ್ಟಿದ್ದು, ಅನಿಲ್ ಅವರದ್ದು ಪ್ರಧಾನ ಪೋಷಕ ಪಾತ್ರವಂತೆ.

ತೆಲುಗಿನ ‘ಮಹರ್ಷಿ’ ತಮಿಳಿನ ‘ವಾರಿಸು’ ಅಂತಹ ಹಿಟ್ ಚಿತ್ರಗಳನ್ನು ನೀಡಿರುವ ವಂಶಿ ಪೈಡಿಪಲ್ಲಿ, ಸಾಮಾಜಿಕ ಸಂದೇಶವುಳ್ಳ ಕಮರ್ಶಿಯಲ್ ಸಿನಿಮಾ ನಿರ್ದೇಶನಕ್ಕೆ ಜನಪ್ರಿಯರು. ಇದೀಗ ಸಲ್ಮಾನ್ ಖಾನ್ ಸಿನಿಮಾ ಮೂಲಕ ಬಾಲಿವುಡ್‌ಗೆ ದೊಡ್ಡ ಮಟ್ಟದಲ್ಲಿ ಪಾದಾರ್ಪಣೆ ಮಾಡುತ್ತಿದ್ದಾರೆ. ಈ ಸಿನಿಮಾ ನಿರ್ಮಾಣ ಮಾಡುತ್ತಿರುವುದು ದಕ್ಷಿಣದ ಬಲು ಜನಪ್ರಿಯ ನಿರ್ಮಾಪಕ ದಿಲ್ ರಾಜು. ಹಲವಾರು ಬಹುಕೋಟಿ ಬಜೆಟ್ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ದಿಲ್ ರಾಜು ಅವರು ಇದೀಗ ಸಲ್ಮಾನ್ ಖಾನ್ ಸಿನಿಮಾದ ಮೇಲೆ ಬಂಡವಾಳ ಹೂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us