AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಬೊಮ್ಮರಿಲ್ಲು’ ರಿ-ರಿಲೀಸ್, ನಾಯಕ ಪಾತ್ರ ಮಾಡಬೇಕಿತ್ತು ಜೂ ಎನ್​ಟಿಆರ್, ಕೈಬಿಟ್ಟಿದ್ದೇಕೆ?

ತೆಲುಗು ಚಿತ್ರರಂಗದ ಸುಂದರ ಪ್ರೇಮಕತೆಗಳಲ್ಲಿ ಒಂದಾದ ‘ಬೊಮ್ಮರಿಲ್ಲು’ ರಿ ರಿಲೀಸ್ ಆಗಿ ಮೊದಲ ದಿನ ತುಂಬಿದ ಗೃಹದ ಪ್ರದರ್ಶನ ನೀಡಿದೆ. ಅಂದಹಾಗೆ ಈ ಸಿನಿಮಾದ ನಾಯಕನ ಪಾತ್ರ ಮಾಡಬೇಕಿದ್ದಿದ್ದು ಜೂ ಎನ್​ಟಿಆರ್ ಆದರೆ ಅವರು ನಟಿಸಲಿಲ್ಲ ಏಕೆ?

‘ಬೊಮ್ಮರಿಲ್ಲು’ ರಿ-ರಿಲೀಸ್, ನಾಯಕ ಪಾತ್ರ ಮಾಡಬೇಕಿತ್ತು ಜೂ ಎನ್​ಟಿಆರ್, ಕೈಬಿಟ್ಟಿದ್ದೇಕೆ?
ಮಂಜುನಾಥ ಸಿ.
|

Updated on: Sep 22, 2024 | 8:28 AM

Share

ಸಿದ್ಧಾರ್ಥ್-ಜೆನಿಲಿಯಾ ನಟನೆಯ ‘ಬೊಮ್ಮರಿಲ್ಲು’ ಸಿನಿಮಾ ತೆಲುಗು ಚಿತ್ರರಂಗದ ಅತ್ಯುತ್ತಮ ಪ್ರೇಮಕಥಾ ಸಿನಿಮಾಗಳಲ್ಲಿ ಒಂದು. ಇದು ಕೇವಲ ಪ್ರೇಮಕಥಾ ಸಿನಿಮಾ ಮಾತ್ರವಲ್ಲ, ಪ್ರೇಮಕತೆಯ ಮೂಲಕ ಅಪ್ಪ ಹಾಗೂ ಮಗನ ನಡುವಿನ ಬಾಂಧವ್ಯದ ಕತೆ, ಪ್ರತಿ ಅಪ್ಪ-ಮಗನ ನಡುವೆ ಇರುವ ಅಂತರದ ಬಗ್ಗೆ ಭಿನ್ನಾಭಿಪ್ರಾಯಗಳ ಕತೆ ಹೇಳಿತ್ತು. ದೊಡ್ಡ ಸ್ಟಾರ್ ಕಾಸ್ಟ್ ಇಲ್ಲದಿದ್ದರೂ ಭಾರಿ ಯಶಸ್ಸನ್ನು ಗಳಿಸಿದ ಸಿನಿಮಾ ಆಗಿತ್ತು ‘ಬೊಮ್ಮರಿಲ್ಲು’. ಈ ಬ್ಲಾಕ್ ಬಸ್ಟರ್ ಸಿನಿಮಾ ಇತ್ತಿಚೆಗೆ ಮರು ಬಿಡುಗಡೆ ಆಗಿದ್ದು, ಮತ್ತೊಮ್ಮೆ ಪ್ರೇಕ್ಷಕರನ್ನು ರಂಜಿಸಿದೆ. ಆದರೆ ಈ ಸಿನಿಮಾದ ನಾಯಕ ಪಾತ್ರದಲ್ಲಿ ನಟಿಸುವ ಅವಕಾಶ ಮೊದಲು ಸಿಕ್ಕಿದ್ದು ಜೂ ಎನ್​ಟಿಆರ್​ಗೆ ಆದರೆ ಆ ಸಿನಿಮಾವನ್ನು ಬಹಳ ಬೇಸರದಿಂದ ಕೈಬಿಟ್ಟರು, ಅದಕ್ಕೆ ಕಾರಣವೂ ಇದೆ.

ಇತ್ತೀಚೆಗಿನ ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿರುವ ಜೂ ಎನ್​ಟಿಆರ್, ‘ಯಾವುದಾದರೂ ಸಿನಿಮಾದಿಂದ ನನ್ನ ಇಮೇಜಿಗೆ ಸಮಸ್ಯೆಯಾದರೆ ನನಗೆ ಅದು ಬಹಳ ಬೇಸರ ಆಗುವುದಿಲ್ಲ, ಆದರೆ ನನ್ನ ಇಮೇಜಿನ ಭಾರದಿಂದ ಸಿನಿಮಾಕ್ಕೆ ಸಮಸ್ಯೆಯಾದರೆ, ಅದು ಕೊಡಬೇಕಾದ ಸಂದೇಶವನ್ನು ಕೊಡದೇ ಹೋದರೆ ನನಗೆ ಬಹಳ ಬೇಸರವಾಗುತ್ತದೆ. ಇದೇ ಕಾರಣದಿಂದ ನಾನು ‘ಬೊಮ್ಮರಿಲ್ಲು’ ಅನ್ನುವ ಸುಂದರವಾದ ಸಿನಿಮಾವನ್ನು ಕಳೆದುಕೊಳ್ಳಬೇಕಾಯ್ತು’ ಎಂದಿದ್ದಾರೆ ಜೂ ಎನ್​ಟಿಆರ್.

ಇದನ್ನೂ ಓದಿ:ತೆಲಂಗಾಣ ಸಿಎಂ ರೇವಂತ್ ರೆಡ್ಡಿಗೆ ಕ್ಷಮೆ ಕೋರಿದ ನಟ ಸಿದ್ಧಾರ್ಥ್, ಕಾರಣ?

‘ಬೊಮ್ಮರಿಲ್ಲು’ ಸಿನಿಮಾದ ಅವಕಾಶ ಮೊದಲಿಗೆ ಜೂ ಎನ್​ಟಿಆರ್​ಗೆ ನೀಡಲಾಯ್ತಂತೆ. ಅದಾಗಲೆ ದೊಡ್ಡ ಸ್ಟಾರ್ ನಟ, ಆಕ್ಷನ್ ಹೀರೋ ಎಂದೆಲ್ಲ ಅನಿಸಿಕೊಂಡಿದ್ದ ಜೂ ಎನ್​ಟಿಆರ್​ ಇಮೇಜಿಗೆ, ಅಪ್ಪ-ಮಗನ ಸಂಬಂಧದ ಸೂಕ್ಷ್ಮ ವಿಷಯ ಹೊಂದಿದ್ದು, ಮೆದು ಪ್ರೇಮಕತೆಯ, ಯಾವುದೇ ಆಕ್ಷನ್ ಇಲ್ಲದ ‘ಬೊಮ್ಮರಿಲ್ಲು’ ಸಿನಿಮಾ ಸೂಟ್ ಆಗುವುದಿಲ್ಲ. ಒಂದೊಮ್ಮೆ ಜೂ ಎನ್​ಟಿಆರ್ ‘ಬೊಮ್ಮರಿಲ್ಲು’ ಸಿನಿಮಾದಲ್ಲಿ ನಟಿಸಿದರೆ ಅವರ ಇಮೇಜಿಗೆ ತಕ್ಕಂತೆ ಕತೆ ಬದಲಾವಣೆ ಮಾಡಿದರೆ ಕತೆಯ ಗುಣಮಟ್ಟ ಕೆಡುತ್ತದೆ, ನೀಡಬೇಕಾದ ಸಂದೇಶ ನೀಡುವುದಿಲ್ಲ ಎಂದು ನಿರ್ಧರಿಸಿ ಸಿನಿಮಾವನ್ನು ಜೂ ಎನ್​ಟಿಆರ್ ಕೈಬಿಟ್ಟರಂತೆ. ಆ ಸಿನಿಮಾ ಸಿದ್ಧಾರ್ಥ್​ ಕೈಗೆ ಹೋಗಿ ಬ್ಲಾಕ್ ಬಸ್ಟರ್ ಆಯ್ತು. ಸಿದ್ಧಾರ್ಥ್, ಜೆನಿಲಿಯಾ ಜೀವನದಲ್ಲಿ ಮಾತ್ರವೇ ತೆಲಗು ಚಿತ್ರರಂಗದಲ್ಲಿಯೇ ಅತ್ಯುತ್ತಮ ಸಿನಿಮಾ ಆಯ್ತು.

ಇತ್ತೀಚೆಗಷ್ಟೆ ‘ಬೊಮ್ಮರಿಲ್ಲು’ ಸಿನಿಮಾ ಮರು ಬಿಡುಗಡೆ ಆಗಿದೆ. ಕೆಲವು ಚಿತ್ರಮಂದಿರಗಳಲ್ಲಿ ಸಿನಿಮಾ ಮರು ಬಿಡುಗಡೆ ಆಗಿದ್ದು, ಪ್ರೇಕ್ಷಕರು ಮತ್ತೊಮ್ಮೆ ‘ಬೊಮ್ಮರಿಲ್ಲು’ ಸಿನಿಮಾವನ್ನು ಚಿತ್ರಮಂದಿರಗಳಲ್ಲಿ ನೋಡಿ ಸಂಭ್ರಮಿಸಿದ್ದಾರೆ. ಸಿನಿಮಾದ ಹಾಡುಗಳಿಗೆ ಕುಣಿದಿದ್ದಾರೆ, ಡೈಲಾಗ್​ಗಳಲ್ಲಿ ಚಪ್ಪಾಳೆ, ಶಿಳ್ಳೆ ಹೊಡೆದಿದ್ದಾರೆ. ಮರು ಬಿಡುಗಡೆಯಲ್ಲಿಯೂ ಸಿನಿಮಾ ಹಿಟ್ ಎನಿಸಿಕೊಂಡಿದೆ. ಮೊದಲ ದಿನ ಉತ್ತಮ ಕಲೆಕ್ಷನ್ ಅನ್ನೇ ಮಾಡಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಬೆಂಗಳೂರಿನಲ್ಲಿ ಉತ್ತರ ಕರ್ನಾಟಕದ ಸಂಸ್ಕೃತಿಯ ಸೊಗಡು
ಬೆಂಗಳೂರಿನಲ್ಲಿ ಉತ್ತರ ಕರ್ನಾಟಕದ ಸಂಸ್ಕೃತಿಯ ಸೊಗಡು
ವಂದೇ ಮಾತರಂಗೆ ಅವಮಾನಿಸಿದ ಆರೋಪ: ಸೋನಿಯಾ ಗಾಂಧಿ ವಿರುದ್ಧ ಕೇಸ್ ಬುಕ್!
ವಂದೇ ಮಾತರಂಗೆ ಅವಮಾನಿಸಿದ ಆರೋಪ: ಸೋನಿಯಾ ಗಾಂಧಿ ವಿರುದ್ಧ ಕೇಸ್ ಬುಕ್!
ಮತ್ತೆ ಮುನ್ನೆಲೆಗೆ ಬಂದ ನೈಸ್ ರಸ್ತೆ ಟೋಲ್:ಸಿಡಿದೆದ್ದ ಪ್ರತಿಪಕ್ಷಗಳು
ಮತ್ತೆ ಮುನ್ನೆಲೆಗೆ ಬಂದ ನೈಸ್ ರಸ್ತೆ ಟೋಲ್:ಸಿಡಿದೆದ್ದ ಪ್ರತಿಪಕ್ಷಗಳು
ಹಾನೂರು ಶೂಟೌಟ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಹೇಳಿದ್ದಿಷ್ಟು
ಹಾನೂರು ಶೂಟೌಟ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಹೇಳಿದ್ದಿಷ್ಟು
ತಿಪಟೂರು​ ಶಾಸಕನಿಂದ ಪ್ರತ್ಯೇಕ ಜಿಲ್ಲೆಯ ಕೂಗು!
ತಿಪಟೂರು​ ಶಾಸಕನಿಂದ ಪ್ರತ್ಯೇಕ ಜಿಲ್ಲೆಯ ಕೂಗು!
ಮೊಳಕಾಲ್ಮೂರು ಕ್ಷೇತ್ರವನ್ನು ಆಂಧ್ರಕ್ಕೆ ಸೇರಿಸಿ: ಎನ್​.ವೈ. ಗೋಪಾಲಕೃಷ್ಣ
ಮೊಳಕಾಲ್ಮೂರು ಕ್ಷೇತ್ರವನ್ನು ಆಂಧ್ರಕ್ಕೆ ಸೇರಿಸಿ: ಎನ್​.ವೈ. ಗೋಪಾಲಕೃಷ್ಣ
ಮಹಿಳೆ ಜೊತೆ ಅಸಭ್ಯ ವರ್ತನೆ; ತಮ್ಮೇನಹಳ್ಳಿ ಸ್ವಾಮೀಜಿಗೆ ಜನರಿಂದ ಗೂಸಾ!
ಮಹಿಳೆ ಜೊತೆ ಅಸಭ್ಯ ವರ್ತನೆ; ತಮ್ಮೇನಹಳ್ಳಿ ಸ್ವಾಮೀಜಿಗೆ ಜನರಿಂದ ಗೂಸಾ!
ಬೆಳೆ ವಿಮೆ ವಿಚಾರಕ್ಕೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಿವಲಿಂಗೇಗೌಡ ಗರಂ
ಬೆಳೆ ವಿಮೆ ವಿಚಾರಕ್ಕೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಿವಲಿಂಗೇಗೌಡ ಗರಂ
ಆಗಸ್ಟ್ 17ರಿಂದ 23ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿ ತಿಳಿದುಕೊಳ್ಳಿ
ಆಗಸ್ಟ್ 17ರಿಂದ 23ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿ ತಿಳಿದುಕೊಳ್ಳಿ
ರವಿಚಂದ್ರನ್ ಮನೆ ಮಾರಿದ್ದು ನಿಜವೇ? ಅಸಲಿ ವಿಷಯ ತೆರೆದಿಟ್ಟ ದಿಲ್ ಸೇ ದಿಲೀಪ್
ರವಿಚಂದ್ರನ್ ಮನೆ ಮಾರಿದ್ದು ನಿಜವೇ? ಅಸಲಿ ವಿಷಯ ತೆರೆದಿಟ್ಟ ದಿಲ್ ಸೇ ದಿಲೀಪ್