‘ಧುರಂಧರ್’ ನಟಿ ಮೇಲೆ ನಡೆದಿತ್ತು ಅತ್ಯಾಚಾರ ಪ್ರಯತ್ನ; ಈಗಲೂ ಕಾಡುತ್ತೆ ಭಯ

ಬಿಗ್ ಬಾಸ್ 17 ಖ್ಯಾತಿಯ ಆಯೇಷಾ ಖಾನ್ 'ಶರಾರತ್' ಹಾಡಿನ ಸುತ್ತ ಎದುರಿಸಿದ ಟ್ರೋಲ್‌ಗಳ ಬಳಿಕ ಸಾರ್ವಜನಿಕ ಜೀವನದಲ್ಲಿ ಮಹಿಳೆಯರು ಎದುರಿಸುವ ಆಘಾತಕಾರಿ ಸವಾಲುಗಳನ್ನು ಬಹಿರಂಗಪಡಿಸಿದ್ದಾರೆ. ಋತುಚಕ್ರದ ಕುರಿತ ಹೇಳಿಕೆ ಟ್ರೋಲ್‌ಗೆ ಕಾರಣವಾಗಿ, ಅತ್ಯಾಚಾರ ಬೆದರಿಕೆಗಳು, ಆನ್‌ಲೈನ್ ದೌರ್ಜನ್ಯ ಹಾಗೂ ಹಿಂದೊಮ್ಮೆ ನಡೆದ ಅತ್ಯಾಚಾರ ಯತ್ನದ ಘಟನೆಯನ್ನೂ ನೆನಪಿಸಿಕೊಂಡಿದ್ದಾರೆ.

‘ಧುರಂಧರ್’ ನಟಿ ಮೇಲೆ ನಡೆದಿತ್ತು ಅತ್ಯಾಚಾರ ಪ್ರಯತ್ನ; ಈಗಲೂ ಕಾಡುತ್ತೆ ಭಯ
ಆಯೇಶಾ ಖಾನ್
Edited By:

Updated on: Mar 05, 2026 | 11:23 AM

ಬಿಗ್ ಬಾಸ್ 17 ಖ್ಯಾತಿಯ ಆಯೇಷಾ ಖಾನ್ ‘ಧುರಂಧರ್’ ಚಿತ್ರದ ಹಾಡಿನ ಮೂಲಕ ಸುದ್ದಿಯಲ್ಲಿದ್ದಾರೆ.
ಈ ಚಿತ್ರದ ಶರಾರತ್ ಹಾಡು ಗಮನ ಸೆಳೆದಿದೆ. ಈ ಹಾಡನ್ನು ಹಲವು ಸ್ಥಳಗಳಲ್ಲಿ ಪ್ಲೇ ಮಾಡಲಾಗುತ್ತಿದೆ. ಜನರು ಈ ಹಾಡಿನ ಹುಕ್ ಸ್ಟೆಪ್ ಅನ್ನು ಮೆಚ್ಚಿಕೊಂಡಿದ್ದಾರೆ. ಈಗ ಆಯೇಷಾ ಖಾನ್ ಇತ್ತೀಚೆಗೆ ಆಘಾತಕಾರಿ ವಿಷಯ ಹೇಳಿದ್ದಾರೆ. ಸಾರ್ವಜನಿಕ ಜೀವನದಲ್ಲಿ ಮಹಿಳೆಯರು ಎದುರಿಸಬೇಕಾದ ಸವಾಲುಗಳು ಮತ್ತು ಕಷ್ಟಕರ ಸಂದರ್ಭಗಳ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ.

‘ಶರಾರತ್’ ಹಾಡಿನ ಚಿತ್ರೀಕರಣದ ಸಮಯದಲ್ಲಿ ಋತುಚಕ್ರದಲ್ಲಿದ್ದೆ ಎಂದು ಅವರು ಪ್ರಾಮಾಣಿಕವಾಗಿ ಒಪ್ಪಿಕೊಂಡಿದ್ದರು. ಈ ಹೇಳಿಕೆಯಿಂದ ಅವರು ಬಹಳಷ್ಟು ತೊಂದರೆಗಳನ್ನು ಅನುಭವಿಸಬೇಕಾಯಿತು. ಅವರು ಬಹಳಷ್ಟು ಟ್ರೋಲ್​ಗೆ ಒಳಗಾದರಂತೆ. ಅವರು ಪ್ರತಿದಿನ ತನಗೆ ಬರುವ ಅತ್ಯಾಚಾರ ಬೆದರಿಕೆಗಳ ಬಗ್ಗೆ ಹೇಳಿದ್ದಲ್ಲದೆ, ತಮ್ಮ ಮೇಲೆ ಅತ್ಯಾಚಾರಕ್ಕೆ ಪ್ರಯತ್ನಿಸಲಾಯಿತು ಎಂದಿದ್ದಾರೆ..

‘ನಾನು ಸರಳ ಟಾಪ್ ಧರಿಸಿದರೆ ಜನರಿಗೆ ಸಮಸ್ಯೆ ಇರುತ್ತದೆ ಮತ್ತು ನಾನು ಸ್ಕರ್ಟ್ ಧರಿಸಿದರೂ ಅವರಿಗೆ ಸಮಸ್ಯೆ ಇರುತ್ತದೆ. ಪೋಸ್ಟ್ ಮಾಡುವ ಮೊದಲು ನಾನು ಏನು ಧರಿಸಬೇಕೆಂದು ಸಾಕಷ್ಟು ಯೋಚಿಸಬೇಕು’ ಎಂದು ಆಯೇಷಾ ಹೇಳಿದರು. ‘ನಾನು ಪ್ರತಿ ಬಾರಿ ಪೋಸ್ಟ್ ಮಾಡಿದಾಗ ಅಥವಾ ಉಡುಗೆ ಧರಿಸಿದಾಗ ಜನರು ಏನು ಯೋಚಿಸುತ್ತಾರೆ, ಅವರು ನನ್ನನ್ನು ತಪ್ಪಾಗಿ ಅರ್ಥಮಾಡಿಕೊಳ್ಳುತ್ತಾರೆಯೇ ಎಂಬುದರ ಬಗ್ಗೆ ನಾನು ಚಿಂತಿಸಬೇಕು ಎಂದರೆ ಅದು ದುಃಖಕರ ಮನಸ್ಥಿತಿ’ ಎಂದು ಅವರು ಹೇಳಿದರು.

ತಮ್ಮ ಜೀವನದ ಅತ್ಯಂತ ಭಯಾನಕ ಮತ್ತು ನೋವಿನ ಅನುಭವವನ್ನು ವಿವರಿಸಿದರು. ‘ನನ್ನ ಮೇಲೆ ಅತ್ಯಾಚಾರಕ್ಕೆ ಪ್​ರಯತ್ನ ನಡೆದಿತ್ತು. ನಾನು ಅದರ ಬಗ್ಗೆ ಹೆಚ್ಚು ಮಾತನಾಡಲು ಬಯಸುವುದಿಲ್ಲ. ಆದರೆ ಕೆಲವೊಮ್ಮೆ ಆ ಗಾಯ ಮತ್ತೆ ತೆರೆದುಕೊಳ್ಳುತ್ತದೆ. ನಾನು ಸೆಟ್‌ನಲ್ಲಿರುವಾಗ ಅಥವಾ ಪ್ರಯಾಣಿಸುವಾಗಲೆಲ್ಲಾ, ಅದೇ ದುರದೃಷ್ಟಕರ ಘಟನೆ ಮತ್ತೆ ಸಂಭವಿಸುತ್ತದೆ ಎಂದು ನಾನು ನಿರಂತರವಾಗಿ ಭಯಪಡುತ್ತೇನೆ’ ಎಂದು ಆಯೇಷಾ ಹೇಳಿದರು.

ಇದನ್ನೂ ಓದಿ: ಪತ್ನಿ ಬಿಗ್ ಬಾಸ್​ ಮನೆಯಲ್ಲಿದ್ದಾರೆಂದು ಬೇರೆ ನಟಿಯರ ಜೊತೆ ಪಾರ್ಟಿ ಮಾಡಿದ ವಿಕ್ಕಿ

‘ನಾನು ಒಮ್ಮೆ ಒಂದು ಚಿತ್ರದ ಚಿತ್ರೀಕರಣದಲ್ಲಿದ್ದೆ. ನನ್ನ ತಂದೆಯೂ ಅಲ್ಲಿದ್ದರು. ಇದ್ದಕ್ಕಿದ್ದಂತೆ, ನಾನು ಇನ್‌ಸ್ಟಾಗ್ರಾಮ್ ಪರಿಶೀಲಿಸಿದಾಗ ಒಬ್ಬ ವ್ಯಕ್ತಿ ಬಹಳ ಸಮಯದಿಂದ ವಾಯ್ಸ್​ ನೋಟ್ ಕಳುಹಿಸುತ್ತಿರುವುದನ್ನು ಗಮನಿಸಿದೆ. ಅದನ್ನು ಪರಿಶೀಲಿಸಿದ ನಂತರ, ಅವನು ತನ್ನ ಸೆಟ್‌ನ ಸ್ಪಾಟ್‌ಬಾಯ್ ಎಂದು ನನಗೆ ಅರಿವಾಯಿತು. ಅದರ ನಂತರ, ಆಯೇಷಾ ತಕ್ಷಣ ತನ್ನ ತಂದೆ ಮತ್ತು ನಿರ್ಮಾಣ ತಂಡಕ್ಕೆ ದೂರು ನೀಡಿದರು. ಆರೋಪಿಯ ವಿರುದ್ಧ ಕ್ರಮ ಕೈಗೊಳ್ಳಲಾಯಿತು’ ಎಂದು ಅವರು ವಿವರಿಸಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 11:18 am, Thu, 5 March 26

Shreelaxmi H

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Follow Us