ಬಿಗ್​ ಬಾಸ್​ ಮನೆಯಲ್ಲಿ ಅಶ್ವತ್ಥ್​ ಶಂಕರ್​ ನಿಜವಾದ ಬಣ್ಣ ಬಯಲು..

ಶಂಕರ್​ ಅಶ್ವತ್ಥ್​ ಈ ಸೀಸನ್​​ನ ಅತಿ ಹಿರಿಯ ಸ್ಪರ್ಧಿ. ಇದೇ ಕಾರಣಕ್ಕೆ ಮನೆ ಮಂದಿಗೆಲ್ಲ ಅವರ ಮೇಲೆ ವಿಶೇಷ ಗೌರವವಿದೆ. ಈ ವಿಚಾರದ ಬಗ್ಗೆ ಶಂಕರ್​ ಅಶ್ವತ್ಥ್​ ಭಿನ್ನವಾಗಿ ಮಾತನಾಡಿದ್ದಾರೆ.

ಬಿಗ್​ ಬಾಸ್​ ಮನೆಯಲ್ಲಿ ಅಶ್ವತ್ಥ್​ ಶಂಕರ್​ ನಿಜವಾದ ಬಣ್ಣ ಬಯಲು..
ಶಂಕರ್​ ಆಶ್ವತ್ಥ್​
Follow us
|

Updated on:Mar 17, 2021 | 8:31 PM

ಬಿಗ್​ ಬಾಸ್​ ಮನೆಯಲ್ಲಿ ಈಗ 15 ಮಂದಿ ಇದ್ದಾರೆ. ಒಬ್ಬೊಬ್ಬರದ್ದೂ ಒಂದೊಂದು ಮುಖ. ಇಷ್ಟು ದಿನ ತಮ್ಮ ನಿಜವಾದ ಮುಖವನ್ನು ಮುಚ್ಚಿಡಲು ಪ್ರಯತ್ನಿಸಿದ್ದವರ ಅಸಲಿ ಬಣ್ಣ ಹೊರಬರುತ್ತಿದೆ. ರೀತಿ ಬಿಗ್​ ಬಾಸ್​ ಮನೆಯಲ್ಲಿರುವ ಶಂಕರ್​ ಅಶ್ವತ್ಥ್​ ಅವರ ನಿಜವಾದ ಬಣ್ಣ ಈಗ ಬಯಲಾಗಿದೆ. ಶಂಕರ್​ ಅಶ್ವತ್ಥ್​ ಈ ಸೀಸನ್​​ನ ಅತಿ ಹಿರಿಯ ಸ್ಪರ್ಧಿ. ಇದೇ ಕಾರಣಕ್ಕೆ ಮನೆ ಮಂದಿಗೆಲ್ಲ ಅವರ ಮೇಲೆ ವಿಶೇಷ ಗೌರವವಿದೆ. ಎರಡು ಬಾರಿ ಅವರು ಎಲಿಮಿನೇಷನ್​ಗೆ ನಾಮಿನೇಟ್​ ಆದಾಗ ಅವರನ್ನು ಕ್ಯಾಪ್ಟನ್​ ಸೇವ್​ ಮಾಡಿದ್ದು ಚರ್ಚೆಗೆ ಕಾರಣವಾಗಿತ್ತು. ಮನೆ ಮಂದಿ ನೀಡುತ್ತಿರುವ ವಿಶೇಷ ಗೌರವದಿಂದ ಅವರು ಮುಕ್ತಿ ಹೊಂದಬೇಕು ಎಂದು ಬಯಸಿದಂತೆ ಕಾಣುತ್ತಿದೆ.

ಟಾಸ್ಕ್​ವೊಂದರಲ್ಲಿ ಗೆದ್ದ ಅರವಿಂದ್​-ದಿವ್ಯಾ ಉರುಡುಗ ಜೋಡಿಗೆ ವಿಶೇಷವಾದ ಚಾರ್ಜರ್​ ಸಿಕ್ಕಿತು. ಅದನ್ನು ಅವರೇ ಇಟ್ಟುಕೊಳ್ಳಬಹುದು ಅಥವಾ ಅದನ್ನು ತ್ಯಾಗ ಮಾಡಿ ಮನೆಯ ಎಲ್ಲರಿಗೂ ಬೆಡ್​ ರೂಮ್​ ಕೊಡಿಸಬಹುದು. ಈ ಎರಡು ಅವಕಾಶಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಲು ದಿವ್ಯಾ ಮತ್ತು ಅರವಿಂದ್​ 10 ನಿಮಿಷ ಸಮಯಾವಕಾಶ ಕೇಳಿದರು. ಖಂಡಿತವಾಗಿಯೂ ಅವರು ಆ ಚಾರ್ಜರ್​ ತ್ಯಾಗ ಮಾಡಿ, ಮನೆಯ ಸದಸ್ಯರಿಗೆ ಬೆಡ್​ ರೂಮ್​ ಕೊಡಿಸುತ್ತಾರೆ ಎಂದೇ ಎಲ್ಲರೂ ನಿರೀಕ್ಷಿಸಿದ್ದರು. ಆದರೆ ಅವರ ಊಹೆ ತಪ್ಪಾಯಿತು. ದಿವ್ಯಾ ಮತ್ತು ಅರವಿಂದ್​ ಚಾರ್ಜರ್​ ಅನ್ನು ತಮ್ಮ ಬಳಿಯೇ ಇಟ್ಟುಕೊಳ್ಳಲು ನಿರ್ಧರಿಸಿದರು. ಈ ವಿಚಾರದಲ್ಲಿ ಮನೆ ಮಂದಿ ಬೇಸರಗೊಂಡಿದ್ದಾರೆ. ಆದರೆ ಶಂಕರ್​ ಅಶ್ವತ್ಥ್​ ಮಾತ್ರ ಭಿನ್ನವಾಗಿ ಉತ್ತರಿಸಿದ್ದಾರೆ.

ನನಗೆ ವಯಸ್ಸಾಗಿದೆ, ನನಗೆ ತೊಂದರೆ ಆಗಿದೆ ಎಂದು ಭಾವಿಸಬೇಡಿ. ಎಲ್ಲರಿಗೂ ಹೇಗೆ ಹೇಳ್ತಾರೋ ಹಾಗೆ ಮಾಡ್ತೇನೆ. ನನ್ನ ಬಗ್ಗೆ ಚಿಂತಿಸಬೇಡಿ. ಬಿಗ್​ ಬಾಸ್​ ಕೊಟ್ಟಿದ್ದನ್ನು ಇಟ್ಟುಕೊಳ್ಳುವ ಎಲ್ಲಾ ಹಕ್ಕು ನಿಮಗಿದೆ ಎಂದು ದಿವ್ಯಾ ಹಾಗೂ ಅರವಿಂದ್​ ಬಳಿ ಹೇಳಿದ್ದಾರೆ ಶಂಕರ್​ ಅಶ್ವತ್ಥ್​. ಈ ವಿಚಾರ ಕೇಳಿ ದಿವ್ಯಾ-ಅರವಿಂದ್ ನಿಜಕ್ಕೂ ಖುಷಿಪಟ್ಟಿದ್ದಾರೆ.

ಇದನ್ನೂ ಓದಿ: Bigg Boss Kannada: ಮನೆಯೊಳಗಿನ ಕಷ್ಟ ತಾಳಲಾರದೆ ಬಿಕ್ಕಿ ಬಿಕ್ಕಿ ಅತ್ತ ನಿಧಿ ಸುಬ್ಬಯ್ಯ, ಶುಭಾ ಪೂಂಜಾ!

Published On - 8:29 pm, Wed, 17 March 21

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ