AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್ ಬಾಸ್ ಮನೆಯಲ್ಲಿದ್ದಾರೆ ಸಂಬಂಧಿಕರು; ಯಾರ್ಯಾರು ಗೊತ್ತಾ?

ಈ ವಿಚಾರ ಕೇಳಿದ ಮನೆಯ ಅನೇಕ ಸದಸ್ಯರು ಅಚ್ಚರಿ ಹೊರ ಹಾಕಿದರು. ಅಷ್ಟೇ ಅಲ್ಲ, ವೀಕ್ಷಕರ ಪಾಲಿಗೂ ಇದು ಹೊಸ ವಿಷಯವೇ.

ಬಿಗ್ ಬಾಸ್ ಮನೆಯಲ್ಲಿದ್ದಾರೆ ಸಂಬಂಧಿಕರು; ಯಾರ್ಯಾರು ಗೊತ್ತಾ?
ಬಿಗ್​ ಬಾಸ್​ ಕನ್ನಡ
TV9 Web
| Edited By: |

Updated on: Jun 26, 2021 | 4:55 PM

Share

‘ಬಿಗ್ ಬಾಸ್ ಕನ್ನಡ ಸೀಸನ್ 8’ ಎರಡನೇ ಇನ್ನಿಂಗ್ಸ್ ಆರಂಭವಾಗಿದೆ. ಕೊವಿಡ್​ನಿಂದ ಅರ್ಧಕ್ಕೆ ನಿಂತಿದ್ದ ದೊಡ್ಮನೆ ಶೋ ಮತ್ತೆ ಶುರುವಾಗಿರೋದು ಪ್ರೇಕ್ಷಕರಿಗೆ ಖುಷಿ ನೀಡಿದೆ. ಎಲ್ಲಾ ಸ್ಪರ್ಧಿಗಳು ಹೊಸ ಲೆಕ್ಕಾಚಾರದೊಂದಿಗೆ ಮನೆ ಸೇರಿದ್ದಾರೆ. ಈ ಮಧ್ಯೆ ಬಿಗ್ ಬಾಸ್ ಮನೆಯಲ್ಲಿ ಸಂಬಂಧಿಕರು ಇರುವ ವಿಚಾರ ಬಯಲಾಗಿದೆ.

ಶಮಂತ್ ಬ್ರೋ ಗೌಡ ಹಾಗೂ ಪ್ರಶಾಂತ್ ಸಂಬರಗಿ ರಿಲೇಟಿವ್ಸ್. ಈ ವಿಚಾರವನ್ನು ಪ್ರಶಾಂತ್ ಹೇಳಿಕೊಂಡಿದ್ದಾರೆ. ಬಿಗ್ ಬಾಸ್​ ಮೊದಲ ಇನ್ನಿಂಗ್ಸ್​ ಆರಂಭವಾದಾಗ ಪ್ರಶಾಂತ್ ಪರ ಇದ್ದವರು ಕೆಲವೇ ಕೆಲವು ಮಂದಿ. ಡಲ್ ಆಗಿದ್ದ ಶಮಂತ್​ಗೆ ಹೊಸ ಹುರುಪು ತುಂಬುವ ಮೂಲಕ ಅವರನ್ನು ಪ್ರಶಾಂತ್ ತಮ್ಮೆಡೆ ಸೆಳೆದುಕೊಂಡಿದ್ದರು. ಮೊದಲ ಇನ್ನಿಂಗ್ಸ್ ಕೊನೆ ಕೊನೆಯಲ್ಲಿ ಪ್ರಶಾಂತ್ ಪರ ನಿಲ್ಲುವ ಕೆಲಸವನ್ನು ಶಮಂತ್​ ಮಾಡಿದ್ದರು. ಅಚ್ಚರಿ ಎಂಬಂತೆ ಬಿಗ್ ಬಾಸ್ ಮನೆಯಿಂದ ಹೊರ ಬಂದ ನಂತರದಲ್ಲಿ ಇವರಿಗೆ ತಾವು ನೆಂಟರು ಎನ್ನುವ ವಿಚಾರ ಗೊತ್ತಾಗಿದೆ.

ಬಿಗ್ ಬಾಸ್ ಮನೆಯಲ್ಲಿ ಕೂರ್ಚಿ ಪಾಲಿಟಿಕ್ಸ್ ಟಾಸ್ಕ್ ನೀಡಲಾಗಿದೆ. ಈ ಟಾಸ್ಕ್​ನ ನಿಯಮದ ಪ್ರಕಾರ ಮನೆಯಲ್ಲಿರುವ ಎರಡು ತಂಡಗಳ ಸದಸ್ಯರು ಚೇರ್ ಮೇಲೆ ಕೂರಬೇಕು. ಎರಡೂ ತಂಡದ ತಲಾ ಮೂರು ಸದಸ್ಯರು ಕೂತಿದ್ದಾರೆ. ಶಮಂತ್-ಪ್ರಶಾಂತ್ ಅಕ್ಕಪಕ್ಕದಲ್ಲೇ ಕುಳಿತಿದ್ದಾರೆ.

ಈ ವೇಳೆ ಏನೋ ಚರ್ಚೆ ಬಂದಾಗ, ‘ಸಂಬಂಧಿಕರು ಅನ್ನೋದೆಲ್ಲ ಬಿಗ್ ಬಾಸ್ ಮನೆಯ ಹೊರಗೆ’ ಎಂದು ಪ್ರಶಾಂತ್​ಗೆ ಶಮಂತ್​ ಹೇಳಿದರು. ಆಗ ಮಂಜು ಪಾವಗಡ, ಯಾರು ರಿಲೇಟಿವ್ಸ್ ಎಂದು ಪ್ರಶ್ನೆ ಮಾಡಿದರು. ಅಲ್ಲೇ ಇದ್ದ ಚಕ್ರವರ್ತಿ ಚಂದ್ರಚೂಡ್, ‘ಅವರಿಬ್ಬರೂ ರಿಲೇಟಿವ್ಸ್. ಬ್ರೋ ಗೌಡ ದಾವಣಗೆರೆಯವನು. ಇವರು ನೆಂಟಸ್ತನ ಬೆಳೆಸಿದ್ದಲ್ಲ. ಅದಾಗಿಯೇ ಬೆಳೆದುಬಿಟ್ಟಿದೆ’ ಎಂದು ವಿವರಣೆ ನೀಡಿದರು. ಈ ವಿಚಾರದ ಬಗ್ಗೆ ಮಾತನಾಡಿದ ಪ್ರಶಾಂತ್, ‘ಒಂದೇ ಬೀಗರ ಕಡೆಯಿಂದ ಗಂಡು-ಹೆಣ್ಣು ಪಡೆದುಕೊಳ್ಳಲಾಗಿದೆ ಅಷ್ಟೇ’ ಎಂದು ಹೇಳುವ ಮೂಲಕ ತಾವಿಬ್ಬರೂ ನೆಂಟರು ಎಂಬುದನ್ನು ಒಪ್ಪಿಕೊಂಡರು.

ಈ ವಿಚಾರ ಕೇಳಿದ ಮನೆಯ ಅನೇಕ ಸದಸ್ಯರು ಅಚ್ಚರಿ ಹೊರ ಹಾಕಿದರು. ಅಷ್ಟೇ ಅಲ್ಲ, ವೀಕ್ಷಕರ ಪಾಲಿಗೂ ಇದು ಹೊಸ ವಿಷಯವೇ.

ಇದನ್ನೂ ಓದಿ:

ವಾರ್ನಿಂಗ್​ ನಂತರವೂ ಬಿಗ್​ ಬಾಸ್​ ಹೆಸರು ದುರ್ಬಳಕೆ ಮಾಡಿಕೊಂಡ 11 ಸ್ಪರ್ಧಿಗಳು; ಕಾದಿದೆಯಾ ದೊಡ್ಡ ಶಿಕ್ಷೆ?

ಕನ್ನಡ ಬಿಗ್​ ಬಾಸ್​ ಸೆಕೆಂಡ್​ ಇನ್ನಿಂಗ್ಸ್​ನಲ್ಲಿ ಮೊದಲು ಎಲಿಮಿನೇಟ್​ ಆಗೋರು ಇವರೇನಾ?

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?