AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್ ಬಾಸ್ ಮನೆಯಲ್ಲಿದ್ದಾರೆ ಸಂಬಂಧಿಕರು; ಯಾರ್ಯಾರು ಗೊತ್ತಾ?

ಈ ವಿಚಾರ ಕೇಳಿದ ಮನೆಯ ಅನೇಕ ಸದಸ್ಯರು ಅಚ್ಚರಿ ಹೊರ ಹಾಕಿದರು. ಅಷ್ಟೇ ಅಲ್ಲ, ವೀಕ್ಷಕರ ಪಾಲಿಗೂ ಇದು ಹೊಸ ವಿಷಯವೇ.

ಬಿಗ್ ಬಾಸ್ ಮನೆಯಲ್ಲಿದ್ದಾರೆ ಸಂಬಂಧಿಕರು; ಯಾರ್ಯಾರು ಗೊತ್ತಾ?
ಬಿಗ್​ ಬಾಸ್​ ಕನ್ನಡ
TV9 Web
| Edited By: |

Updated on: Jun 26, 2021 | 4:55 PM

Share

‘ಬಿಗ್ ಬಾಸ್ ಕನ್ನಡ ಸೀಸನ್ 8’ ಎರಡನೇ ಇನ್ನಿಂಗ್ಸ್ ಆರಂಭವಾಗಿದೆ. ಕೊವಿಡ್​ನಿಂದ ಅರ್ಧಕ್ಕೆ ನಿಂತಿದ್ದ ದೊಡ್ಮನೆ ಶೋ ಮತ್ತೆ ಶುರುವಾಗಿರೋದು ಪ್ರೇಕ್ಷಕರಿಗೆ ಖುಷಿ ನೀಡಿದೆ. ಎಲ್ಲಾ ಸ್ಪರ್ಧಿಗಳು ಹೊಸ ಲೆಕ್ಕಾಚಾರದೊಂದಿಗೆ ಮನೆ ಸೇರಿದ್ದಾರೆ. ಈ ಮಧ್ಯೆ ಬಿಗ್ ಬಾಸ್ ಮನೆಯಲ್ಲಿ ಸಂಬಂಧಿಕರು ಇರುವ ವಿಚಾರ ಬಯಲಾಗಿದೆ.

ಶಮಂತ್ ಬ್ರೋ ಗೌಡ ಹಾಗೂ ಪ್ರಶಾಂತ್ ಸಂಬರಗಿ ರಿಲೇಟಿವ್ಸ್. ಈ ವಿಚಾರವನ್ನು ಪ್ರಶಾಂತ್ ಹೇಳಿಕೊಂಡಿದ್ದಾರೆ. ಬಿಗ್ ಬಾಸ್​ ಮೊದಲ ಇನ್ನಿಂಗ್ಸ್​ ಆರಂಭವಾದಾಗ ಪ್ರಶಾಂತ್ ಪರ ಇದ್ದವರು ಕೆಲವೇ ಕೆಲವು ಮಂದಿ. ಡಲ್ ಆಗಿದ್ದ ಶಮಂತ್​ಗೆ ಹೊಸ ಹುರುಪು ತುಂಬುವ ಮೂಲಕ ಅವರನ್ನು ಪ್ರಶಾಂತ್ ತಮ್ಮೆಡೆ ಸೆಳೆದುಕೊಂಡಿದ್ದರು. ಮೊದಲ ಇನ್ನಿಂಗ್ಸ್ ಕೊನೆ ಕೊನೆಯಲ್ಲಿ ಪ್ರಶಾಂತ್ ಪರ ನಿಲ್ಲುವ ಕೆಲಸವನ್ನು ಶಮಂತ್​ ಮಾಡಿದ್ದರು. ಅಚ್ಚರಿ ಎಂಬಂತೆ ಬಿಗ್ ಬಾಸ್ ಮನೆಯಿಂದ ಹೊರ ಬಂದ ನಂತರದಲ್ಲಿ ಇವರಿಗೆ ತಾವು ನೆಂಟರು ಎನ್ನುವ ವಿಚಾರ ಗೊತ್ತಾಗಿದೆ.

ಬಿಗ್ ಬಾಸ್ ಮನೆಯಲ್ಲಿ ಕೂರ್ಚಿ ಪಾಲಿಟಿಕ್ಸ್ ಟಾಸ್ಕ್ ನೀಡಲಾಗಿದೆ. ಈ ಟಾಸ್ಕ್​ನ ನಿಯಮದ ಪ್ರಕಾರ ಮನೆಯಲ್ಲಿರುವ ಎರಡು ತಂಡಗಳ ಸದಸ್ಯರು ಚೇರ್ ಮೇಲೆ ಕೂರಬೇಕು. ಎರಡೂ ತಂಡದ ತಲಾ ಮೂರು ಸದಸ್ಯರು ಕೂತಿದ್ದಾರೆ. ಶಮಂತ್-ಪ್ರಶಾಂತ್ ಅಕ್ಕಪಕ್ಕದಲ್ಲೇ ಕುಳಿತಿದ್ದಾರೆ.

ಈ ವೇಳೆ ಏನೋ ಚರ್ಚೆ ಬಂದಾಗ, ‘ಸಂಬಂಧಿಕರು ಅನ್ನೋದೆಲ್ಲ ಬಿಗ್ ಬಾಸ್ ಮನೆಯ ಹೊರಗೆ’ ಎಂದು ಪ್ರಶಾಂತ್​ಗೆ ಶಮಂತ್​ ಹೇಳಿದರು. ಆಗ ಮಂಜು ಪಾವಗಡ, ಯಾರು ರಿಲೇಟಿವ್ಸ್ ಎಂದು ಪ್ರಶ್ನೆ ಮಾಡಿದರು. ಅಲ್ಲೇ ಇದ್ದ ಚಕ್ರವರ್ತಿ ಚಂದ್ರಚೂಡ್, ‘ಅವರಿಬ್ಬರೂ ರಿಲೇಟಿವ್ಸ್. ಬ್ರೋ ಗೌಡ ದಾವಣಗೆರೆಯವನು. ಇವರು ನೆಂಟಸ್ತನ ಬೆಳೆಸಿದ್ದಲ್ಲ. ಅದಾಗಿಯೇ ಬೆಳೆದುಬಿಟ್ಟಿದೆ’ ಎಂದು ವಿವರಣೆ ನೀಡಿದರು. ಈ ವಿಚಾರದ ಬಗ್ಗೆ ಮಾತನಾಡಿದ ಪ್ರಶಾಂತ್, ‘ಒಂದೇ ಬೀಗರ ಕಡೆಯಿಂದ ಗಂಡು-ಹೆಣ್ಣು ಪಡೆದುಕೊಳ್ಳಲಾಗಿದೆ ಅಷ್ಟೇ’ ಎಂದು ಹೇಳುವ ಮೂಲಕ ತಾವಿಬ್ಬರೂ ನೆಂಟರು ಎಂಬುದನ್ನು ಒಪ್ಪಿಕೊಂಡರು.

ಈ ವಿಚಾರ ಕೇಳಿದ ಮನೆಯ ಅನೇಕ ಸದಸ್ಯರು ಅಚ್ಚರಿ ಹೊರ ಹಾಕಿದರು. ಅಷ್ಟೇ ಅಲ್ಲ, ವೀಕ್ಷಕರ ಪಾಲಿಗೂ ಇದು ಹೊಸ ವಿಷಯವೇ.

ಇದನ್ನೂ ಓದಿ:

ವಾರ್ನಿಂಗ್​ ನಂತರವೂ ಬಿಗ್​ ಬಾಸ್​ ಹೆಸರು ದುರ್ಬಳಕೆ ಮಾಡಿಕೊಂಡ 11 ಸ್ಪರ್ಧಿಗಳು; ಕಾದಿದೆಯಾ ದೊಡ್ಡ ಶಿಕ್ಷೆ?

ಕನ್ನಡ ಬಿಗ್​ ಬಾಸ್​ ಸೆಕೆಂಡ್​ ಇನ್ನಿಂಗ್ಸ್​ನಲ್ಲಿ ಮೊದಲು ಎಲಿಮಿನೇಟ್​ ಆಗೋರು ಇವರೇನಾ?

Follow Us
ಮೋದಿ ನೇತೃತ್ವದಲ್ಲಿ ಮಹತ್ವದ ಸಭೆ:ನಾಗರಿಕರ ಹಿತರಕ್ಷಣೆ ಮೊದಲ ಆದ್ಯತೆ
ಮೋದಿ ನೇತೃತ್ವದಲ್ಲಿ ಮಹತ್ವದ ಸಭೆ:ನಾಗರಿಕರ ಹಿತರಕ್ಷಣೆ ಮೊದಲ ಆದ್ಯತೆ
ದಾವಣಗೆರೆ ದಕ್ಷಿಣ ಉಪಚುನಾವಣೆ: ಆರಂಭದಲ್ಲೇ ಕಾಂಗ್ರೆಸ್​​​ಗೆ ಮರ್ಮಾಘಾತ
ದಾವಣಗೆರೆ ದಕ್ಷಿಣ ಉಪಚುನಾವಣೆ: ಆರಂಭದಲ್ಲೇ ಕಾಂಗ್ರೆಸ್​​​ಗೆ ಮರ್ಮಾಘಾತ
ಹಬ್ಬಕ್ಕೆ ಹೋಗಿದ್ದ ಜನ ಬೆಂಗಳೂರಿಗೆ ವಾಪಸ್: ನೆಲಮಂಗಲ ಬಳಿ ಫುಲ್ ಟ್ರಾಫಿಕ್
ಹಬ್ಬಕ್ಕೆ ಹೋಗಿದ್ದ ಜನ ಬೆಂಗಳೂರಿಗೆ ವಾಪಸ್: ನೆಲಮಂಗಲ ಬಳಿ ಫುಲ್ ಟ್ರಾಫಿಕ್
3ನೇ ವ್ಯಕ್ತಿಯ ಹಸ್ತಕ್ಷೇಪದ ಬಗ್ಗೆ ಉಮೇಶ್‌ ಮೇಟಿ ತಂಗಿ ಮಹಾದೇವಿ ಹೇಳಿದ್ದೇನು
3ನೇ ವ್ಯಕ್ತಿಯ ಹಸ್ತಕ್ಷೇಪದ ಬಗ್ಗೆ ಉಮೇಶ್‌ ಮೇಟಿ ತಂಗಿ ಮಹಾದೇವಿ ಹೇಳಿದ್ದೇನು
ಸಲ್ಮಾನ್ ಖಾನ್ ಮನೆ ಎದುರು ಅಭಿಮಾನಿಗಳ ದಂಡು: ಶುಭ ಕೋರಿದ ಸಲೀಂ ಖಾನ್
ಸಲ್ಮಾನ್ ಖಾನ್ ಮನೆ ಎದುರು ಅಭಿಮಾನಿಗಳ ದಂಡು: ಶುಭ ಕೋರಿದ ಸಲೀಂ ಖಾನ್
ದಾವಣಗೆರೆ ಬೈ ಎಲೆಕ್ಷನ್: ಕಾಂಗ್ರೆಸ್​​ ವಿರುದ್ಧವೇ ತೊಡೆತಟ್ಟಿದ ಪೈಲ್ವಾನ್
ದಾವಣಗೆರೆ ಬೈ ಎಲೆಕ್ಷನ್: ಕಾಂಗ್ರೆಸ್​​ ವಿರುದ್ಧವೇ ತೊಡೆತಟ್ಟಿದ ಪೈಲ್ವಾನ್
ಸ್ವಚ್ಛತಾ ಅಭಿಯಾನದಲ್ಲಿ ಭಾಗಿಯಾದ ಖ್ಯಾತ ನಟ ಅನಿರುದ್ಧ ಜತ್ಕರ್
ಸ್ವಚ್ಛತಾ ಅಭಿಯಾನದಲ್ಲಿ ಭಾಗಿಯಾದ ಖ್ಯಾತ ನಟ ಅನಿರುದ್ಧ ಜತ್ಕರ್
ಕಾಂಗ್ರೆಸ್​​ ಟಿಕೆಟ್​​ ಸಿಕ್ಕ ಬೆನ್ನಲ್ಲೇ ತಂದೆ ನೆನೆದು ಉಮೇಶ್ ಮೇಟಿ ಭಾವುಕ
ಕಾಂಗ್ರೆಸ್​​ ಟಿಕೆಟ್​​ ಸಿಕ್ಕ ಬೆನ್ನಲ್ಲೇ ತಂದೆ ನೆನೆದು ಉಮೇಶ್ ಮೇಟಿ ಭಾವುಕ
Video: ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆ, ಭೂಕುಸಿತ
Video: ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆ, ಭೂಕುಸಿತ
ಲ್ಯಾಂಬೋರ್ಗಿನಿ ಡ್ರಿಫ್ಟಿಂಗ್: ಹುಚ್ಚಾಟ ಮೆರೆದಿದ್ದು ಮುತ್ತಪ್ಪ ರೈ ಪುತ್ರ?
ಲ್ಯಾಂಬೋರ್ಗಿನಿ ಡ್ರಿಫ್ಟಿಂಗ್: ಹುಚ್ಚಾಟ ಮೆರೆದಿದ್ದು ಮುತ್ತಪ್ಪ ರೈ ಪುತ್ರ?