ಬಿಗ್ ಬಾಸ್ ಮನೆಯಲ್ಲಿದ್ದಾರೆ ಸಂಬಂಧಿಕರು; ಯಾರ್ಯಾರು ಗೊತ್ತಾ?

ಈ ವಿಚಾರ ಕೇಳಿದ ಮನೆಯ ಅನೇಕ ಸದಸ್ಯರು ಅಚ್ಚರಿ ಹೊರ ಹಾಕಿದರು. ಅಷ್ಟೇ ಅಲ್ಲ, ವೀಕ್ಷಕರ ಪಾಲಿಗೂ ಇದು ಹೊಸ ವಿಷಯವೇ.

ಬಿಗ್ ಬಾಸ್ ಮನೆಯಲ್ಲಿದ್ದಾರೆ ಸಂಬಂಧಿಕರು; ಯಾರ್ಯಾರು ಗೊತ್ತಾ?
ಬಿಗ್​ ಬಾಸ್​ ಕನ್ನಡ
Follow us
| Updated By: ಮದನ್​ ಕುಮಾರ್​

Updated on: Jun 26, 2021 | 4:55 PM

‘ಬಿಗ್ ಬಾಸ್ ಕನ್ನಡ ಸೀಸನ್ 8’ ಎರಡನೇ ಇನ್ನಿಂಗ್ಸ್ ಆರಂಭವಾಗಿದೆ. ಕೊವಿಡ್​ನಿಂದ ಅರ್ಧಕ್ಕೆ ನಿಂತಿದ್ದ ದೊಡ್ಮನೆ ಶೋ ಮತ್ತೆ ಶುರುವಾಗಿರೋದು ಪ್ರೇಕ್ಷಕರಿಗೆ ಖುಷಿ ನೀಡಿದೆ. ಎಲ್ಲಾ ಸ್ಪರ್ಧಿಗಳು ಹೊಸ ಲೆಕ್ಕಾಚಾರದೊಂದಿಗೆ ಮನೆ ಸೇರಿದ್ದಾರೆ. ಈ ಮಧ್ಯೆ ಬಿಗ್ ಬಾಸ್ ಮನೆಯಲ್ಲಿ ಸಂಬಂಧಿಕರು ಇರುವ ವಿಚಾರ ಬಯಲಾಗಿದೆ.

ಶಮಂತ್ ಬ್ರೋ ಗೌಡ ಹಾಗೂ ಪ್ರಶಾಂತ್ ಸಂಬರಗಿ ರಿಲೇಟಿವ್ಸ್. ಈ ವಿಚಾರವನ್ನು ಪ್ರಶಾಂತ್ ಹೇಳಿಕೊಂಡಿದ್ದಾರೆ. ಬಿಗ್ ಬಾಸ್​ ಮೊದಲ ಇನ್ನಿಂಗ್ಸ್​ ಆರಂಭವಾದಾಗ ಪ್ರಶಾಂತ್ ಪರ ಇದ್ದವರು ಕೆಲವೇ ಕೆಲವು ಮಂದಿ. ಡಲ್ ಆಗಿದ್ದ ಶಮಂತ್​ಗೆ ಹೊಸ ಹುರುಪು ತುಂಬುವ ಮೂಲಕ ಅವರನ್ನು ಪ್ರಶಾಂತ್ ತಮ್ಮೆಡೆ ಸೆಳೆದುಕೊಂಡಿದ್ದರು. ಮೊದಲ ಇನ್ನಿಂಗ್ಸ್ ಕೊನೆ ಕೊನೆಯಲ್ಲಿ ಪ್ರಶಾಂತ್ ಪರ ನಿಲ್ಲುವ ಕೆಲಸವನ್ನು ಶಮಂತ್​ ಮಾಡಿದ್ದರು. ಅಚ್ಚರಿ ಎಂಬಂತೆ ಬಿಗ್ ಬಾಸ್ ಮನೆಯಿಂದ ಹೊರ ಬಂದ ನಂತರದಲ್ಲಿ ಇವರಿಗೆ ತಾವು ನೆಂಟರು ಎನ್ನುವ ವಿಚಾರ ಗೊತ್ತಾಗಿದೆ.

ಬಿಗ್ ಬಾಸ್ ಮನೆಯಲ್ಲಿ ಕೂರ್ಚಿ ಪಾಲಿಟಿಕ್ಸ್ ಟಾಸ್ಕ್ ನೀಡಲಾಗಿದೆ. ಈ ಟಾಸ್ಕ್​ನ ನಿಯಮದ ಪ್ರಕಾರ ಮನೆಯಲ್ಲಿರುವ ಎರಡು ತಂಡಗಳ ಸದಸ್ಯರು ಚೇರ್ ಮೇಲೆ ಕೂರಬೇಕು. ಎರಡೂ ತಂಡದ ತಲಾ ಮೂರು ಸದಸ್ಯರು ಕೂತಿದ್ದಾರೆ. ಶಮಂತ್-ಪ್ರಶಾಂತ್ ಅಕ್ಕಪಕ್ಕದಲ್ಲೇ ಕುಳಿತಿದ್ದಾರೆ.

ಈ ವೇಳೆ ಏನೋ ಚರ್ಚೆ ಬಂದಾಗ, ‘ಸಂಬಂಧಿಕರು ಅನ್ನೋದೆಲ್ಲ ಬಿಗ್ ಬಾಸ್ ಮನೆಯ ಹೊರಗೆ’ ಎಂದು ಪ್ರಶಾಂತ್​ಗೆ ಶಮಂತ್​ ಹೇಳಿದರು. ಆಗ ಮಂಜು ಪಾವಗಡ, ಯಾರು ರಿಲೇಟಿವ್ಸ್ ಎಂದು ಪ್ರಶ್ನೆ ಮಾಡಿದರು. ಅಲ್ಲೇ ಇದ್ದ ಚಕ್ರವರ್ತಿ ಚಂದ್ರಚೂಡ್, ‘ಅವರಿಬ್ಬರೂ ರಿಲೇಟಿವ್ಸ್. ಬ್ರೋ ಗೌಡ ದಾವಣಗೆರೆಯವನು. ಇವರು ನೆಂಟಸ್ತನ ಬೆಳೆಸಿದ್ದಲ್ಲ. ಅದಾಗಿಯೇ ಬೆಳೆದುಬಿಟ್ಟಿದೆ’ ಎಂದು ವಿವರಣೆ ನೀಡಿದರು. ಈ ವಿಚಾರದ ಬಗ್ಗೆ ಮಾತನಾಡಿದ ಪ್ರಶಾಂತ್, ‘ಒಂದೇ ಬೀಗರ ಕಡೆಯಿಂದ ಗಂಡು-ಹೆಣ್ಣು ಪಡೆದುಕೊಳ್ಳಲಾಗಿದೆ ಅಷ್ಟೇ’ ಎಂದು ಹೇಳುವ ಮೂಲಕ ತಾವಿಬ್ಬರೂ ನೆಂಟರು ಎಂಬುದನ್ನು ಒಪ್ಪಿಕೊಂಡರು.

ಈ ವಿಚಾರ ಕೇಳಿದ ಮನೆಯ ಅನೇಕ ಸದಸ್ಯರು ಅಚ್ಚರಿ ಹೊರ ಹಾಕಿದರು. ಅಷ್ಟೇ ಅಲ್ಲ, ವೀಕ್ಷಕರ ಪಾಲಿಗೂ ಇದು ಹೊಸ ವಿಷಯವೇ.

ಇದನ್ನೂ ಓದಿ:

ವಾರ್ನಿಂಗ್​ ನಂತರವೂ ಬಿಗ್​ ಬಾಸ್​ ಹೆಸರು ದುರ್ಬಳಕೆ ಮಾಡಿಕೊಂಡ 11 ಸ್ಪರ್ಧಿಗಳು; ಕಾದಿದೆಯಾ ದೊಡ್ಡ ಶಿಕ್ಷೆ?

ಕನ್ನಡ ಬಿಗ್​ ಬಾಸ್​ ಸೆಕೆಂಡ್​ ಇನ್ನಿಂಗ್ಸ್​ನಲ್ಲಿ ಮೊದಲು ಎಲಿಮಿನೇಟ್​ ಆಗೋರು ಇವರೇನಾ?

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ