AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bigg Boss Kannada: ದಿವ್ಯಾಗಾಗಿ ಬಿಗ್​ ಬಾಸ್​ ಬಿಟ್ಟುಕೊಡ್ತೀನಿ ಎಂದ ಅರವಿಂದ್​; ಹಾಗಾದ್ರೆ ದಿವ್ಯಾ ಆಯ್ಕೆ ಏನು?

‘ಒಂದು ವಾರದಲ್ಲಿ ನಿಮ್ಮಿಬ್ಬರೊಳಗೆ ಯಾರಾದರೂ ಒಬ್ಬರು ಹೊರಗಡೆ ಹೋಗಬೇಕು ಎನ್ನುವಂತಹ ಪರಿಸ್ಥಿತಿ ಬಂದರೆ ಏನು ಮಾಡುತ್ತೀರಿ’ ಎಂದು ಸುದೀಪ್​ ಪ್ರಶ್ನೆ ಕೇಳಿದರು. ದಿವ್ಯಾ ಉರುಡುಗ ಅವರಿಗೆ ಮೊದಲು ಈ ಪ್ರಶ್ನೆ ಕೇಳಲಾಯಿತು.

Bigg Boss Kannada: ದಿವ್ಯಾಗಾಗಿ ಬಿಗ್​ ಬಾಸ್​ ಬಿಟ್ಟುಕೊಡ್ತೀನಿ ಎಂದ ಅರವಿಂದ್​; ಹಾಗಾದ್ರೆ ದಿವ್ಯಾ ಆಯ್ಕೆ ಏನು?
ಅರವಿಂದ್​ ಕೆಪಿ, ದಿವ್ಯಾ ಉರುಡುಗ
Follow us
ಮದನ್​ ಕುಮಾರ್​
|

Updated on:Jun 27, 2021 | 9:00 AM

ಬಿಗ್​ ಬಾಸ್​ ಕನ್ನಡ ಸೀಸನ್​ 8ರಲ್ಲಿ ಅತಿ ಹೆಚ್ಚು ಗಮನ ಸೆಳೆದ ಜೋಡಿ ಎಂದರೆ ಅದು ದಿವ್ಯಾ ಉರುಡುಗ ಮತ್ತು ಅರವಿಂದ್​ ಕೆಪಿ. ಆರಂಭದಲ್ಲಿ ಅಷ್ಟೇನೂ ಆಪ್ತವಾಗಿಲ್ಲದ ಅವರು ‘ಜೋಡಿ ಟಾಸ್ಕ್​’ ಮುಗಿದ ಬಳಿಕ ತುಂಬ ಆತ್ಮೀಯರಾಗಿಬಿಟ್ಟರು. 42 ದಿನಗಳ ಗ್ಯಾಪ್​ ಬಳಿಕ ಈಗ ಬಿಗ್​ ಬಾಸ್​ ಎರಡನೇ ಇನ್ನಿಂಗ್ಸ್​ ಆರಂಭ ಆಗಿದೆ. ಹಾಗಿದ್ದರೂ ಇಬ್ಬರ ನಡುವಿನ ಬಾಂಧವ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಇದನ್ನು ತಿಳಿದುಕೊಳ್ಳುವ ಸಲುವಾಗಿಯೇ ಕಿಚ್ಚ ಸುದೀಪ್​ ಒಂದು ಪ್ರಶ್ನೆ ಕೇಳಿದರು. ಅದಕ್ಕೆ ಇಬ್ಬರಿಂದಲೂ ಬೇರೆ ಬೇರೆ ಉತ್ತರಗಳು ಬಂದವು.

‘ಒಂದು ವಾರದಲ್ಲಿ ನಿಮ್ಮಿಬ್ಬರೊಳಗೆ ಯಾರಾದರೂ ಒಬ್ಬರು ಹೊರಗಡೆ ಹೋಗಬೇಕು ಎನ್ನುವಂತಹ ಪರಿಸ್ಥಿತಿ ಬಂದರೆ ಏನು ಮಾಡುತ್ತೀರಿ’ ಎಂದು ಸುದೀಪ್​ ಪ್ರಶ್ನೆ ಕೇಳಿದರು. ದಿವ್ಯಾ ಉರುಡುಗ ಅವರಿಗೆ ಮೊದಲು ಈ ಪ್ರಶ್ನೆ ಕೇಳಲಾಯಿತು. ಅದಕ್ಕೆ ದಿವ್ಯಾ ಉತ್ತರಿಸುವ ಬದಲು ತಬ್ಬಿಬ್ಬಾದರು. ‘ಇದೊಂದು ಆಟ ಎಂದು ಪರಿಗಣಿಸಿ… ನಾನು..’ ಎಂದು ದಿವ್ಯಾ ವಿವರಣೆ ನೀಡಲು ಮುಂದಾದರು. ‘ನನಗೆ ವಿವರಣೆ ಬೇಡ. ಉತ್ತರ ಬೇಕು’ ಎಂದು ಸುದೀಪ್​ ಖಡಕ್​ ಆಗಿ ಹೇಳಿದರು.

ಆಗ ದಿವ್ಯಾ ಅವರಿಗೆ ಅನಿವಾರ್ಯ ಆಯಿತು. ‘ನಾನೇ ಉಳಿದುಕೊಳ್ಳುತ್ತೇನೆ’ ಎಂದು ಅವರು ಉತ್ತರಿಸಿದರು. ಅದೇ ಪ್ರಶ್ನೆಯನ್ನು ಅರವಿಂದ್​ಗೆ ಕೇಳಲಾಯಿತು. ಅವರು ನೇರವಾಗಿ ಉತ್ತರ ನೀಡಿದರು. ‘ನಾನು ಹೋಗ್ತೀನಿ ಸರ್​. ನಾನು ಬಿಟ್ಟುಕೊಡ್ತೀನಿ. ಅವರು ಇರಲಿ’ ಎಂದು ಹೇಳುವ ಮೂಲಕ ಅವರು ಎಲ್ಲರಿಗೂ ಅಚ್ಚರಿ ಮೂಡಿಸಿದರು. ಈ ಉತ್ತರ ಕೇಳಿಸಿಕೊಂಡ ದಿವ್ಯಾ ಎಮೋಷನಲ್​ ಆದರು.

ದಿವ್ಯಾ ಉರುಡುಗ ಮತ್ತು ಅರವಿಂದ್​ ಕೆಪಿ ನಡುವಿನ ಆಪ್ತತೆ ಕಂಡು ಎಲ್ಲರಿಗೂ ಕೆಲವು ಅನುಮಾನಗಳು ಮೂಡಿವೆ. ಅವರಿಬ್ಬರು ನಿಜಜೀವನದಲ್ಲಿ ಮದುವೆ ಆಗುತ್ತಾರೇನೋ ಎಂಬ ಗುಮಾನಿ ಕೂಡ ಹರಡಿದೆ. ಬಿಗ್​ ಬಾಸ್​ ಮನೆಯೊಳಗೆ ಈ ಬಗ್ಗೆ ಅನೇಕ ಬಾರಿ ಚರ್ಚೆ ಕೂಡ ನಡೆದಿದ್ದುಂಟು. ಆದರೆ ಈ ಕುರಿತು ಅವರಿಬ್ಬರು ಯಾವುದನ್ನೂ ಸ್ಪಷ್ಟವಾಗಿ ಹೇಳಿಲ್ಲ. 42 ದಿನಗಳ ಕಾಲ ಬಿಗ್​ ಬಾಸ್​ನಿಂದ ಹೊರಗಿದ್ದು ಬಂದ ಬಳಿಕವೂ ಅವರ ನಡುವಿನ ಆಪ್ತತೆ ಕಮ್ಮಿ ಆಗಿಲ್ಲ.

ಇದನ್ನೂ ಓದಿ:

Divya Uruduga: ಕೊವಿಡ್​ನಿಂದ ಕುಟುಂಬದವರನ್ನು ಕಳೆದುಕೊಂಡಿದ್ದಾರೆ ದಿವ್ಯಾ ಉರುಡುಗ; ಬಿಗ್​ ಬಾಸ್​ ಮನೆಯಲ್ಲಿ ಭಾವುಕ ನುಡಿ

Divya Uruduga: ಬಿಗ್​ ಬಾಸ್ ಟ್ರೋಫಿ ಅಥವಾ ದಿವ್ಯಾ ಉರುಡುಗ; ಇದರಲ್ಲಿ ಅರವಿಂದ್​ ಆಯ್ಕೆ ಯಾವುದು? ಹೊರಬಿತ್ತು ಅಚ್ಚರಿಯ ಉತ್ತರ

Published On - 8:52 am, Sun, 27 June 21

ವಿವಾಹ ವಾರ್ಷಿಕೋತ್ಸವ: ಪತ್ನಿ ವಿಜಯಲಕ್ಷ್ಮಿ ಜೊತೆ ನಟ ದರ್ಶನ್ ಡ್ಯಾನ್ಸ್
ವಿವಾಹ ವಾರ್ಷಿಕೋತ್ಸವ: ಪತ್ನಿ ವಿಜಯಲಕ್ಷ್ಮಿ ಜೊತೆ ನಟ ದರ್ಶನ್ ಡ್ಯಾನ್ಸ್
ಒಂದಂಕಿಗೆ ಸುಸ್ತಾದ ಪಂತ್; ಕೋಪಗೊಂಡ ಮಾಲೀಕ
ಒಂದಂಕಿಗೆ ಸುಸ್ತಾದ ಪಂತ್; ಕೋಪಗೊಂಡ ಮಾಲೀಕ
ಕೆರೆಯಂತಾದ ಬೆಂಗಳೂರು ರಸ್ತೆಗಳು: ಹೊಸೂರು ಹೆದ್ದಾರಿಯಲ್ಲಿ ಫುಲ್ ಟ್ರಾಫಿಕ್!
ಕೆರೆಯಂತಾದ ಬೆಂಗಳೂರು ರಸ್ತೆಗಳು: ಹೊಸೂರು ಹೆದ್ದಾರಿಯಲ್ಲಿ ಫುಲ್ ಟ್ರಾಫಿಕ್!
5 ಲಕ್ಷ ರೂ ಮೌಲ್ಯದ ಸಿಕ್ಸರ್ ಬಾರಿಸಿದ ಮಿಚೆಲ್ ಮಾರ್ಷ್
5 ಲಕ್ಷ ರೂ ಮೌಲ್ಯದ ಸಿಕ್ಸರ್ ಬಾರಿಸಿದ ಮಿಚೆಲ್ ಮಾರ್ಷ್
ಜೈಲಿನಲ್ಲಿ ಸುಹಾಸ್ ಶೆಟ್ಟಿ ಹತ್ಯೆ ಆರೋಪಿ ಮೇಲೆ ದಾಳಿ: ವಿಡಿಯೋ ನೋಡಿ
ಜೈಲಿನಲ್ಲಿ ಸುಹಾಸ್ ಶೆಟ್ಟಿ ಹತ್ಯೆ ಆರೋಪಿ ಮೇಲೆ ದಾಳಿ: ವಿಡಿಯೋ ನೋಡಿ
ಏಕೆ ಎಫ್‌ಐಆರ್ ಹಾಕಿಲ್ಲ?; ನ್ಯಾ. ವರ್ಮಾ ವಿವಾದದ ಬಗ್ಗೆ ಉಪರಾಷ್ಟ್ರಪತಿ ಟೀಕೆ
ಏಕೆ ಎಫ್‌ಐಆರ್ ಹಾಕಿಲ್ಲ?; ನ್ಯಾ. ವರ್ಮಾ ವಿವಾದದ ಬಗ್ಗೆ ಉಪರಾಷ್ಟ್ರಪತಿ ಟೀಕೆ
ಅಧಿಕಾರಿಗಳ ನಿರ್ಲಕ್ಷ್ಯ, ಉಡಾಫೆ ಗೊತ್ತಾಗುತ್ತಿದೆ;ಸರ್ಕಾರವೇನು ಮಾಡುತ್ತಿದೆ?
ಅಧಿಕಾರಿಗಳ ನಿರ್ಲಕ್ಷ್ಯ, ಉಡಾಫೆ ಗೊತ್ತಾಗುತ್ತಿದೆ;ಸರ್ಕಾರವೇನು ಮಾಡುತ್ತಿದೆ?
ಬಿಡದಿ ದಿವ್ಯಾಂಗ ಬಾಲಕಿ ಸಾವಿನ ಬಗ್ಗೆ ಮತ್ತಷ್ಟು ಸ್ಫೋಟಕ ಅಂಶ ಬಿಚ್ಚಿಟ್ಟ SP
ಬಿಡದಿ ದಿವ್ಯಾಂಗ ಬಾಲಕಿ ಸಾವಿನ ಬಗ್ಗೆ ಮತ್ತಷ್ಟು ಸ್ಫೋಟಕ ಅಂಶ ಬಿಚ್ಚಿಟ್ಟ SP
ಇವತ್ತೂ ನಗರದಲ್ಲಿ ಮಳೆ, ಮುಂದಿನ ಎರಡು ದಿನಗಳಲ್ಲೂ ಮಳೆ; ಬವಣೆ ತಪ್ಪಿದ್ದಲ್ಲ
ಇವತ್ತೂ ನಗರದಲ್ಲಿ ಮಳೆ, ಮುಂದಿನ ಎರಡು ದಿನಗಳಲ್ಲೂ ಮಳೆ; ಬವಣೆ ತಪ್ಪಿದ್ದಲ್ಲ
ಹಬ್ಬಕ್ಕೆಂದು ಬೆಂಗಳೂರಿನಿಂದ ಬಂದವರು ಮಸಣಕ್ಕೆ: ಇಲ್ಲಿದೆ ಕೊನೆಯ ಕ್ಷಣ
ಹಬ್ಬಕ್ಕೆಂದು ಬೆಂಗಳೂರಿನಿಂದ ಬಂದವರು ಮಸಣಕ್ಕೆ: ಇಲ್ಲಿದೆ ಕೊನೆಯ ಕ್ಷಣ