AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Divya Uruduga: ಬಿಗ್​ ಬಾಸ್ ಟ್ರೋಫಿ ಅಥವಾ ದಿವ್ಯಾ ಉರುಡುಗ; ಇದರಲ್ಲಿ ಅರವಿಂದ್​ ಆಯ್ಕೆ ಯಾವುದು? ಹೊರಬಿತ್ತು ಅಚ್ಚರಿಯ ಉತ್ತರ

Bigg Boss Kannada: ಅರವಿಂದ್​ ಕೆಪಿ ಅವರಿಗೆ ಪ್ರೇಕ್ಷಕರು ಹಲವು ಪ್ರಶ್ನೆಗಳನ್ನು ಕೇಳಿದರು. ದಿವ್ಯಾ ಉರುಡುಗ ಅಥವಾ ಬಿಗ್​ ಬಾಸ್​ ಇವೆರಡರಲ್ಲಿ ನಿಮ್ಮ ಆಯ್ಕೆ ಯಾವುದು ಎಂದು ಅವರಿಗೆ ಕೇಳಲಾಯಿತು. ಅದಕ್ಕೆ ಅವರು ತುಂಬ ಜಾಣತನದ ಉತ್ತರ ನೀಡಿದರು.

Divya Uruduga: ಬಿಗ್​ ಬಾಸ್ ಟ್ರೋಫಿ ಅಥವಾ ದಿವ್ಯಾ ಉರುಡುಗ; ಇದರಲ್ಲಿ ಅರವಿಂದ್​ ಆಯ್ಕೆ ಯಾವುದು? ಹೊರಬಿತ್ತು ಅಚ್ಚರಿಯ ಉತ್ತರ
ಅರವಿಂದ್​ ಕೆಪಿ - ದಿವ್ಯಾ ಉರುಡುಗ
ಮದನ್​ ಕುಮಾರ್​
| Edited By: |

Updated on:May 13, 2021 | 11:38 AM

Share

ಹತ್ತು ವಾರಗಳ ಕಾಲ ಯಶಸ್ವಿಯಾಗಿ ನಡೆದುಕೊಂಡು ಬಂದಿದ್ದ ‘ಬಿಗ್​ ಬಾಸ್​ ಕನ್ನಡ ಸೀಸನ್​ 8’ ಕೊರೊನಾ ಕಾರಣದಿಂದ ಅಂತ್ಯ ಕಂಡಿತು. ಅನಿರೀಕ್ಷಿತವಾಗಿ ಈ ರಿಲಿಯಾಟಿ ಶೋ ಕೊನೆಯಾಗುವಾಗ ಮನೆಯಲ್ಲಿ 11 ಜನ ಸ್ಪರ್ಧಿಗಳಿದ್ದರು. ಅದಕ್ಕೂ ಮುನ್ನವೇ ದಿವ್ಯಾ ಉರುಡುಗ ಅವರು ಅನಾರೋಗ್ಯದ ಕಾರಣದಿಂದ ಹೊರಬಂದಿದ್ದರು. ದಿವ್ಯಾ ನಿರ್ಗಮನದ ಬಳಿಕ, ಅವರನ್ನು ತುಂಬ ಹಚ್ಚಿಕೊಂಡಿದ್ದ ಅರವಿಂದ್​ ಕೆಪಿ ಕೊಂಚ ಡಲ್​ ಆದಂತೆ ಕಂಡರು. ಈಗ ಅವರು ಕೂಡ ಮನೆಯಿಂದ ಹೊರಬಂದಿದ್ದು, ದಿವ್ಯಾ ಬಗ್ಗೆ ಮನದ ಮಾತುಗಳನ್ನು ಹಂಚಿಕೊಂಡಿದ್ದಾರೆ.

ಕಲರ್ಸ್​ ಕನ್ನಡ ವಾಹಿನಿಯ ಸೋಶಿಯಲ್​ ಮೀಡಿಯಾ ಖಾತೆಯಲ್ಲಿ ಲೈವ್​ ಬಂದಿದ್ದ ಅರವಿಂದ್​ ಅವರಿಗೆ ಪ್ರೇಕ್ಷಕರು ಹಲವು ಪ್ರಶ್ನೆಗಳನ್ನು ಕೇಳಿದರು. ಅದರಲ್ಲಿ ದಿವ್ಯಾ ಉರುಡುಗ ಬಗ್ಗೆಯೂ ಪ್ರಶ್ನೆ ಎದುರಾಯಿತು. ದಿವ್ಯಾ ಉರುಡುಗ ಅಥವಾ ಬಿಗ್​ ಬಾಸ್​ ಇವೆರಡರಲ್ಲಿ ನಿಮ್ಮ ಆಯ್ಕೆ ಯಾವುದು ಎಂದು ಅರವಿಂದ್​ಗೆ ಕೇಳಲಾಯಿತು. ಅದಕ್ಕೆ ಅವರು ತುಂಬ ಜಾಣತನದ ಉತ್ತರ ನೀಡಿದರು.

‘ದಿವ್ಯಾ ಉರುಡುಗ ಈಗಾಗಲೇ ನನ್ನನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಹಾಗಾಗಿ ಮತ್ತೆ ನಾನು ಅವರನ್ನು ಆಯ್ಕೆ ಮಾಡಬೇಕಾಗಿಲ್ಲ. ನನ್ನ ಆಯ್ಕೆ ಬಿಗ್​ ಬಾಸ್​ ಆಗಿರುತ್ತದೆ. ಅಲ್ಲಿ ಎಲ್ಲರೂ ಬಂದಿದ್ದು ಕೂಡ ಬಿಗ್​ ಬಾಸ್​ ಗೆಲ್ಲೋದಕ್ಕೆ. ಅಲ್ಲಿ ಯಾರನ್ನೂ ಫ್ರೆಂಡ್ಸ್​ ಮಾಡಿಕೊಳ್ಳೋಕೆ ಅಲ್ಲ ಅಂತಾನೇ ನಾನು ಒಳಗಡೆ ಹೋಗಿದ್ದು. ಆಟ ಆಡುವಾಗ ಅದು ನಿಮಗೆ ಗೊತ್ತಾಗುತ್ತದೆ. ಆದರೆ ದಿವ್ಯಾ ಉರುಡುಗ ನನ್ನನ್ನು ಆಯ್ಕೆ ಮಾಡಿಕೊಂಡರು’ ಎಂದು ಅರವಿಂದ್​ ಹೇಳಿದ್ದಾರೆ.

ಬಿಗ್​ ಬಾಸ್​ ಮನೆಯಲ್ಲಿ ಒಮ್ಮೆ ದಿವ್ಯಾ ಅಡುಗೆ ಮಾಡಿದ್ದರು. ಅದನ್ನು ಸವಿದು ಅರವಿಂದ್​ ತುಂಬ ಖುಷಿಪಟ್ಟಿದ್ದರು. ಹಾಗಾಗಿ ನೀವು ಉಡುಪಿಯಲ್ಲಿ ಒಂದು ಹೋಟೆಲ್​ ಶುರು ಮಾಡಿದರೆ ಒಳ್ಳೆಯದು ಎಂದು ಅರವಿಂದ್​ ಸಲಹೆ ನೀಡಿದ್ದರಂತೆ. ಆ ವಿಚಾರ ಯಾರಿಗೂ ಗೊತ್ತಿರಲಿಲ್ಲ. ಅದನ್ನು​ ಲೈವ್​ನಲ್ಲಿ ಅವರು ತೆರೆದಿಟ್ಟರು. ‘ಹೊರಗೆ ಬಂದ ಬಳಿಕ ದಿವ್ಯಾಗೆ ಫೋನ್​ ಮಾಡಿದ್ದೆ. ಅವರು ಚೇತರಿಸಿಕೊಂಡಿದ್ದಾರೆ. ನಾರ್ಮಲ್​ ಆಗೋಕೆ ಇನ್ನೂ ಸ್ವಲ್ಪ ದಿನ ಬೇಕು. ದಿವ್ಯಾ ಕೊಟ್ಟ ರಿಂಗ್​ ಕೈಯಲ್ಲೇ ಇದೆ. ಅದನ್ನು ಯಾವಾಗಲೂ ತೆಗೆಯೋದಿಲ್ಲ’ ಎಂದು ಅರವಿಂದ್​ ಹೇಳಿದ್ದಾರೆ.

ಇದನ್ನೂ ಓದಿ:

ಬಿಗ್ ಬಾಸ್ ಮನೆ ಸೇರಿ ಕ್ಯಾಶ್​ ಪ್ರೈಜ್​ಗಿಂತ ಹೆಚ್ಚಿನದ್ದನ್ನೇ ಸಂಪಾದಿಸಿದ್ದಾರೆ ದಿವ್ಯಾ ಉರುಡುಗ

ನಂಗೆ ಒಂಥರಾ ಆಗ್ತಿದೆ; ಅರವಿಂದ್​ ಮಾಡಿದ ಸೇವೆ ನೋಡಿ ದಿವ್ಯಾ ಉರುಡುಗ ನಾಚಿ ನೀರಾದರು

Published On - 10:49 am, Thu, 13 May 21

ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?