AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಂಗೆ ಒಂಥರಾ ಆಗ್ತಿದೆ; ಅರವಿಂದ್​ ಮಾಡಿದ ಸೇವೆ ನೋಡಿ ದಿವ್ಯಾ ಉರುಡುಗ ನಾಚಿ ನೀರಾದರು

ದಿವ್ಯಾ ಉರುಡುಗ ಅವರಿಗೆ ಬಿಗ್​ ಬಾಸ್​ ಮನೆಯಲ್ಲಿ ಅನಾರೋಗ್ಯ ಕಾಣಿಸಿಕೊಂಡಿದೆ. ವೈದ್ಯರು ಅವರಿಗೆ ಕೆಲ ಮಾತ್ರೆಗಳನ್ನು ಕೂಡ ಬರೆದುಕೊಟ್ಟಿದ್ದಾರೆ. ದಿವ್ಯಾ ಊಟ ಮಾಡಿದ ನಂತರದಲ್ಲಿ ಮಾತ್ರೆ ತಿನ್ನಿಸುತ್ತಿದ್ದಾರೆ. ಅರವಿಂದ್ ಸೇವೆ ಇಷ್ಟಕ್ಕೆ ನಿಂತಿಲ್ಲ.

ನಂಗೆ ಒಂಥರಾ ಆಗ್ತಿದೆ; ಅರವಿಂದ್​ ಮಾಡಿದ ಸೇವೆ ನೋಡಿ ದಿವ್ಯಾ ಉರುಡುಗ ನಾಚಿ ನೀರಾದರು
ದಿವ್ಯಾ ಉರುಡುಗ - ಅರವಿಂದ್​ ಕೆಪಿ
ರಾಜೇಶ್ ದುಗ್ಗುಮನೆ
| Edited By: |

Updated on: May 04, 2021 | 12:24 PM

Share

ಬಿಗ್​ ಬಾಸ್ ಮನೆಯಲ್ಲಿ ಅರವಿಂದ್​ ಕೆ.ಪಿ. ಹಾಗೂ ದಿವ್ಯಾ ಉರುಡುಗ ಅವರ ಪ್ರೇಮ್​ ಕಹಾನಿ ಎಲ್ಲರ ಗಮನ ಸೆಳೆಯುತ್ತಿದೆ. ನಮ್ಮಿಬ್ಬರ ನಡುವೆ ಇರೋದು ಕೇವಲ ಫ್ರೆಂಡ್​ಶಿಪ್​ ಎಂದು ದಿವ್ಯಾ ಸಾಕಷ್ಟು ಬಾರಿ ಸ್ಪಷ್ಟನೆ ನೀಡಿದ್ದಾರೆ. ಅವರು ಮಾತಿನಲ್ಲಿ ಏನೇ ಹೇಳಿದರೂ ಕೃತಿಯಲ್ಲಿ ಎಲ್ಲಾ ವಿಚಾರಗಳು ವೀಕ್ಷಕರಿಗೆ ಸ್ಪಷ್ಟವಾಗುತ್ತಿದೆ. ಮೇ 3ರಂದು ನಡೆದ ಘಟನೆ ಇದಕ್ಕೆ ಹೊಸ ಸೇರ್ಪಡೆ.

ದಿವ್ಯಾ ಉರುಡುಗ ಅವರಿಗೆ ಬಿಗ್​ ಬಾಸ್​ ಮನೆಯಲ್ಲಿ ಅನಾರೋಗ್ಯ ಕಾಣಿಸಿಕೊಂಡಿದೆ. ವೈದ್ಯರು ಅವರಿಗೆ ಕೆಲ ಮಾತ್ರೆಗಳನ್ನು ಕೂಡ ಬರೆದುಕೊಟ್ಟಿದ್ದಾರೆ. ದಿವ್ಯಾ ಊಟ ಮಾಡಿದ ನಂತರದಲ್ಲಿ ಅರವಿಂದ್​ ಮಾತ್ರೆ ತಿನ್ನಿಸುತ್ತಿದ್ದಾರೆ. ಅಷ್ಟೇ ಅಲ್ಲ, ಅವರ ಕೇರಿಂಗ್​ ಜಾಸ್ತಿ ಆಗಿದೆ. ಇದು ದಿವ್ಯಾ ಅವರಿಗೂ ಗೊತ್ತಾಗುತ್ತಿದೆ.

ದಿವ್ಯಾಗೆ ಅನಾರೋಗ್ಯ ಕಾಡುತ್ತಿದೆ ಎಂಬುದನ್ನು ಗಮನಿಸಿದ ಅರವಿಂದ್, ಅವರ ಪ್ಯಾಂಟ್​ ತೊಳೆದಿದ್ದಾರೆ. ಇದನ್ನು ನೋಡಿದ ದಿವ್ಯಾ ಉರುಡುಗ ನಾಚಿಕೆ ಮಾಡಿಕೊಂಡಿದ್ದಾರೆ. ಯಾಕೆ ಹೀಗೆ ಮಾಡಿದ್ದು? ನಂಗೆ ಒಂಥರಾ ಆಗ್ತಿದೆ ಎಂದು ದಿವ್ಯಾ ಹೇಳಿಕೊಂಡರು. ಈ ವೇಳೆ ವೈಷ್ಣವಿ ಕೂಡ ಅಲ್ಲಿಯೇ ಇದ್ದರು. ನೀವಿಬ್ಬರೂ ಫ್ರೆಂಡ್ಸ್​ ಅಲ್ಲವಾ. ಫ್ರೆಂಡ್​ಶಿಪ್​ ಮೇಲೆ ತೊಳೆದುಕೊಟ್ಟಿದ್ದಾರೆ ಅಷ್ಟೆ. ನೀವು ಇನ್ನೊಂದು ದಿನ ಅವರ ಪ್ಯಾಂಟ್​ ತೊಳೆದುಕೊಡಿ ಎಂದರು ವೈಷ್ಣವಿ. ಹೌದು, ನಾನು ಹಾಗೆ ಮಾಡ್ತೀನಿ ಎಂದರು ದಿವ್ಯಾ.

ಬಿಗ್​ ಬಾಸ್​ ಮನೆಯಲ್ಲಿ ಸುದೀಪ್​ ವಾಯ್ಸ್​ ನೋಟ್​ ಕಳುಹಿಸಿದ್ದರು. ಈ ವೇಳೆ ದಿವ್ಯಾ ಅವರನ್ನು ಸುದೀಪ್​ ಪರೋಕ್ಷವಾಗಿ ಎಚ್ಚರಿಸಿದ್ದಾರೆ. ಆಟದ ಮೇಲೆ ಗಮನ ಹೆಚ್ಚಿರಲಿ. ಕೆಲವರು ಬಂದ ಉದ್ದೇಶವನ್ನೇ  ಮರೆಯುತ್ತಿದ್ದಾರೆ ಎಂದು ಹೇಳುವ ಮೂಲಕ ಅರವಿಂದ್ ಅವರ ಗುಂಗಿನಲ್ಲಿ ದಿವ್ಯಾ ಹೆಚ್ಚು ಸಮಯ ಕಳೆಯುತ್ತಿದ್ದಾರೆ ಎಂಬುದನ್ನು ನೆನಪಿಸಿದರು.

ಇದನ್ನೂ ಓದಿ: Kichcha Sudeep: ಸುದೀಪ್​ ಗುಣಮುಖರಾದ ಬೆನ್ನಲ್ಲೇ ಕಹಿ ಸುದ್ದಿ; ಈ ವಾರವೂ ಬಿಗ್ ಬಾಸ್​ಗೆ ಕಿಚ್ಚ ಗೈರು

Follow Us
Rajesh Duggumane
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More