Bigg Boss Kannada: ಈ ಬಾರಿ ಬಿಗ್​ ಬಾಸ್​ ಗೆಲ್ಲುವ ಸ್ಪರ್ಧಿ ಇವರೇ.. ಎಂದು ಭವಿಷ್ಯ ನುಡಿದ ಶಂಕರ್​ ಅಶ್ವತ್ಥ್​! ಆದರೆ

Bigg Boss Kannada Updates (Day 5) : ‘ಬಿಗ್​ ಬಾಸ್​ ಕನ್ನಡ ಸೀಸನ್​ 8’ ಆರಂಭವಾಗಿ ಈಗತಾನೆ ಒಂದು ವಾರ ಕಳೆಯುತ್ತಿದೆ. ಅಷ್ಟರಲ್ಲಾಗಲೇ ವಿನ್ನರ್​ ಆಗುವವರು ಯಾರು ಎಂದು ಶಂಕರ್ ಅಶ್ವತ್ಥ್​ ಭವಿಷ್ಯ ನುಡಿದಿದ್ದಾರೆ.

Bigg Boss Kannada: ಈ ಬಾರಿ ಬಿಗ್​ ಬಾಸ್​ ಗೆಲ್ಲುವ ಸ್ಪರ್ಧಿ ಇವರೇ.. ಎಂದು ಭವಿಷ್ಯ ನುಡಿದ ಶಂಕರ್​ ಅಶ್ವತ್ಥ್​!  ಆದರೆ
ಮಂಜು ಪಾವಗಡ ಮತ್ತು ಶಂಕರ್​ ಅಶ್ವತ್ಥ್​
Edited By: ಸಾಧು ಶ್ರೀನಾಥ್​

Updated on: Mar 06, 2021 | 12:45 PM

ಬಿಗ್​ ಬಾಸ್​ ಆಟದ ಲೆಕ್ಕಾಚಾರವೇ ಬೇರೆ. ಪ್ರೇಕ್ಷಕರು ನಿರೀಕ್ಷೆಯೇ ಮಾಡಿರದ ಸ್ಪರ್ಧಿ ಏಕಾಏಕಿ ಹೈಲೈಟ್ ಆಗಿಬಿಡಬಹುದು. ಸದ್ಯ ಈ ಹೊಸ ಸೀಸನ್​ನಲ್ಲಿ ಅದೇ ರೀತಿ ಆಗುತ್ತಿದೆ. ಹಾಸ್ಯ ಕಲಾವಿದ ಮಂಜು ಪಾವಗಡ ಸಿಕ್ಕಾಪಟ್ಟೆ ಹೈಪ್​ ಪಡೆದುಕೊಳ್ಳುತ್ತಿದ್ದಾರೆ. ಹಲವು ಕಾರಣಗಳಿಗಾಗಿ ಅವರನ್ನು ಜನರು ಇಷ್ಟ ಪಡುತ್ತಿದ್ದಾರೆ. ಮನೆಯೊಳಗಿನ ಸದಸ್ಯರಿಗೂ ಅದೇ ಭಾವನೆ ವ್ಯಕ್ತವಾಗುತ್ತಿದೆ. ಎಷ್ಟರಮಟ್ಟಿಗೆಂದರೆ ಈ ಬಾರಿ ಬಿಗ್​ ಬಾಸ್​ ಗೆಲ್ಲುವುದು ಮಂಜು ಪಾವಗಡೆ ಅವರೇ ಎಂದು ಹಿರಿಯ ನಟ ಶಂಕರ್​ ಅಶ್ವತ್ಥ್​ ಭವಿಷ್ಯ ನುಡಿದಿದ್ದಾರೆ!

ಬಿಗ್​ ಬಾಸ್​ನಲ್ಲಿ 5ನೇ ದಿನ ಎಲ್ಲರೂ ತಮಗೆ ಇಷ್ಟ ಆಗುವ ಮತ್ತು ಇಷ್ಟ ಆಗದ ಸದಸ್ಯರ ಹೆಸರು ಹೇಳಿ, ಅವರಿಗೆ ಲೈಕ್​ ಹಾಗೂ ಡಿಸ್ಲೈಕ್​ ಬ್ಯಾಡ್ಜ್​ ನೀಡಬೇಕು ಎಂದು ಬಿಗ್​ ಬಾಸ್​ ಆದೇಶಿಸಿದರು. ಆ ಸಂದರ್ಭದಲ್ಲಿ ಮಂಜು ಪಾವಗಡ ಅವರ ಬಗ್ಗೆ ಭವಿಷ್ಯ ನುಡಿದಿದ್ದಾರೆ. ‘ಈ ಮನೆಯಲ್ಲಿ ಎಲ್ಲರೂ ಅವರನ್ನೇ ಇಷ್ಟಪಡುತ್ತಾರೆ. ಪ್ರಾಯಶಃ ಅವರೇ ವಿನ್​ ಆಗುತ್ತಾರೆ ಎಂದು ನನ್ನ ಮನಸ್ಸು ಹೇಳುತ್ತಿದೆ. ಇಲ್ಲಿ ಹೆಚ್ಚು ಜನರು ಅದನ್ನೇ ಒಪ್ಪಿಕೊಳ್ಳುತ್ತಿದ್ದಾರೆ’ ಎಂದಿದ್ದಾರೆ ಶಂಕರ್​. ಹಾಗಂತ ಮಂಜುಗೆ ಅವರು ಲೈಕ್​ ಬ್ಯಾಡ್ಜ್​ ನೀಡಿಲ್ಲ. ಬದಲಿಗೆ ಡಿಸ್ಲೈಕ್​ ಬ್ಯಾಡ್ಜ್​ ನೀಡಿದ್ದಾರೆ!

ಮಂಜು ವಿನ್​ ಆಗುತ್ತಾರೆ ಎಂದು ಭರವಸೆ ಮೂಡುವ ಮಟ್ಟಕ್ಕೆ ಅವರು ಎಲ್ಲರಿಗೂ ಇಷ್ಟವಾಗಿದ್ದಾರೆ. ಆದರೂ ಕೂಡ ಶಂಕರ್​ ಅಶ್ವತ್ಥ್​ ಅವರು ಮಂಜುಗೆ ಡಿಸ್ಲೈಕ್​ ಬ್ಯಾಡ್ಜ್​ ನೀಡಿದ್ದಕ್ಕೆ ಒಂದು ಬಲವಾದ ಕಾರಣ ಇದೆ. ಅದು ಕೂಡ ತುಂಬ ಫನ್ನಿ. ’ಯಾರಿಗೂ ಗೊತ್ತಿರದ ವಿಷಯದಲ್ಲಿ ಒಂದು ತೊಂದರೆ ಆಗಿದೆ. ಅದನ್ನು ಹೇಳುತ್ತೇನೆ. ಮಂಜು ರಾತ್ರಿ ಹೊತ್ತು ಒಳ್ಳೇ ಮೋಟಾರ್​ ಬೋಟ್​. ಅಷ್ಟು ಗೊರಕೆ ಹೊಡೆಯುತ್ತಾರೆ. ಅದಕ್ಕಾಗಿ ನಾನು ಅವರಿಗೆ ಡಿಸ್ಲೈಕ್​ ನೀಡುತ್ತೇನೆ’ ಎಂದು ಶಂಕರ್​ ಅಶ್ವತ್ಥ್​ ಹೇಳಿದ್ದಾರೆ.

ತಮ್ಮನ್ನು ಎಲ್ಲರೂ ಇಷ್ಟಪಡುತ್ತಿರುವುದಕ್ಕೆ ಮಂಜು ಸಂತಸ ವ್ಯಕ್ತಪಡಿಸಿದ್ದಾರೆ. ‘ಬಹಳ ಖುಷಿ ಆಗುತ್ತದೆ. ನನ್ನ ಕಲ್ಪನೆಯಲ್ಲಿ ಬಿಗ್​ ಬಾಸ್​ ಎಂದರೆ ಹೊಡೆದಾಟ, ಜಗಳ ಎಂದುಕೊಂಡಿದ್ದೆ. ನಾನು ಟಿವಿಯಲ್ಲಿ ನೋಡಿದ್ದು ಹಾಗೆಯೇ. ನನಗೆ ಈ ಬಾರಿ ಆಫರ್​ ಬಂದಾಗ ಅಯ್ಯಯ್ಯೋ ಎನಿಸಿತ್ತು. ಒಳಗಡಗೆ ಬಂದಾಗ ಎಲ್ಲರೂ ಅವರವರ ಪಾಡಿಗೆ ಊಟ ಮಾಡುತ್ತಿದ್ದರು. ಅಲ್ಲಿಂದಲೇ ಜಳಗ ಶುರು ಅಂದುಕೊಂಡಿದ್ದೆ. ಆದರೆ ಇಷ್ಟು ಬೇಗ ಹೊಂದಾಣಿಕೆಯೊಂದಿಗೆ ಎಲ್ಲರೂ ಖುಷಿಖುಷಿಯಾಗಿ ಇದ್ದೇವೆ’ ಎಂದಿದ್ದಾರೆ ಮಂಜು.

ಇದನ್ನೂ ಓದಿ: Bigg Boss Kannada: ಮಂಜು ಕಂಡರೆ ದಿವ್ಯಾಗೆ ಯಾಕಿಷ್ಟು ಲವ್​? ಬಯಲಾಯ್ತು ಅಸಲಿ ವಿಷಯ!

Bigg Boss Kannada: ಮಧ್ಯರಾತ್ರಿ ನಾಗವಲ್ಲಿ ರೀತಿ ವರ್ತಿಸಿದ ನಿರ್ಮಲಾ! ವಿಚಿತ್ರ ವೇಷ ಕಂಡು ಬೆಚ್ಚಿ ಬಿತ್ತು ದೊಡ್ಮನೆ

 

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us