Sign In

By signing in or creating an account, you agree with Associated Broadcasting Company's Terms & Conditions and Privacy Policy.

Bigg Boss Kannada: ಮಧ್ಯರಾತ್ರಿ ನಾಗವಲ್ಲಿ ರೀತಿ ವರ್ತಿಸಿದ ನಿರ್ಮಲಾ! ವಿಚಿತ್ರ ವೇಷ ಕಂಡು ಬೆಚ್ಚಿ ಬಿತ್ತು ದೊಡ್ಮನೆ

ಬಿಗ್​ ಬಾಸ್​ ಮನೆಯಲ್ಲಿ ಈಗ ಹಾರರ್​ ವಾತಾವರಣ ನಿರ್ಮಾಣ ಆಗಿದೆ. ನಿರ್ಮಲಾ ಚೆನ್ನಪ್ಪ ಅವರ ವರ್ತನೆ ನೋಡಿ ಎಲ್ಲರೂ ಕಂಗಾಲಾಗಿದ್ದಾರೆ.

Bigg Boss Kannada: ಮಧ್ಯರಾತ್ರಿ ನಾಗವಲ್ಲಿ ರೀತಿ ವರ್ತಿಸಿದ ನಿರ್ಮಲಾ! ವಿಚಿತ್ರ ವೇಷ ಕಂಡು ಬೆಚ್ಚಿ ಬಿತ್ತು ದೊಡ್ಮನೆ
ನಿರ್ಮಲಾ ಚೆನ್ನಪ್ಪ
Follow us
ರಾಜೇಶ್ ದುಗ್ಗುಮನೆ
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Mar 05, 2021 | 8:22 PM

ಬಿಗ್ ಬಾಸ್​ಗೆ ಹಲವು ಬಗೆಯ ವ್ಯಕ್ತಿತ್ವದವರು ಎಂಟ್ರಿ ನೀಡುತ್ತಾರೆ. ಅದರಲ್ಲೂ ಕೆಲವರ ವರ್ತನೆ ವಿಚಿತ್ರವಾಗಿರುತ್ತೆದೆ. ಈಗ ನಿರ್ಮಲಾ ಚೆನ್ನಪ್ಪ ಅವರು ಅದೇ ಹಾದಿ ಹಿಡಿದಿದ್ದಾರೆ. ನಡುರಾತ್ರಿಯಲ್ಲಿ ಅವರು ನಾಗವಲ್ಲಿ ರೀತಿ ಮಾಡುತ್ತಿರುವುದು ಎಲ್ಲರ ಆತಂಕಕ್ಕೆ ಕಾರಣ ಆಗಿದೆ. ಕ್ಯಾಪ್ಟನ್​ ಶಮಂತ್​ ಬ್ರೋ ಗೌಡ ಕೂಡ ಹೆದರಿಕೊಂಡಿದ್ದಾರೆ.

ದಿನವಿಡೀ ತುಂಬಾ ಸಿಂಪಲ್​ ಆಗಿ ಬಟ್ಟೆ ಧರಿಸಿದ್ದ ನಿರ್ಮಲಾ ಚೆನ್ನಪ್ಪ ಅವರು ಮಧ್ಯರಾತ್ರಿ ಆಗುತ್ತಿದ್ದಂತೆಯೇ ಸೀರೆ ಧರಿಸಿದ್ದಾರೆ. ಅಷ್ಟೇ ಅಲ್ಲ, ಮೇಕಪ್​ ಮಾಡಿಕೊಂಡು ಕನ್ನಡಿ ಮುಂದೆ ನಿಂತಿದ್ದಾರೆ. ಅದೂ ಸಾಲದೆಂಬಂತೆ ಮೂಲೆಯಲ್ಲಿ ಕುಳಿತು ಒಬ್ಬೊಬ್ಬರೇ ಮಾತನಾಡಿಕೊಳ್ಳುತ್ತಿದ್ದಾರೆ! ಇದನ್ನು ನೋಡಿದ ಎಲ್ಲರೂ ಅಚ್ಚರಿಗೆ ಒಳಗಾಗಿದ್ದಾರೆ. ಮುಂದೇನಾಗುತ್ತೋ ಅಂತ ಭಯದ ವಾತಾವರಣ ನಿರ್ಮಾಣ ಆಗಿದೆ.

‘ನನಗೆ ತುಂಬ ಟೆನ್ಷನ್​ ಆಗ್ತಾ ಇದೆ. ತಲೆ ಕೆಡ್ತಾ ಇದೆ. ಸಡನ್​ ಆಗಿ ಅವರು ಸೀರೆ ಉಟ್ಟುಕೊಂಡಾಗ ನನಗೆ ಭಯ ಆಗಿಹೋಯ್ತು. ಮಲಗುವಾಗ ಡ್ರೆಸ್​ ಚೇಂಜ್​ ಮಾಡುತ್ತೇನೆ ಎಂದಿದ್ದರು. ಆದರೆ ಚೇಂಜ್​ ಮಾಡದೇ ಹಾಗೆಯೇ ಮಲಗಿದ್ದಾರೆ. ಅದಕ್ಕೆ ನನಗೆ ತುಂಬ ಭಯ ಆಗ್ತಾ ಇದೆ. ಎಲ್ಲರೂ ಆತಂಕಪಟ್ಟುಕೊಂಡಿದ್ದಾರೆ. ನನಗೆ ಏನು ಮಾಡಬೇಕು ಎಂಬುದು ಗೊತ್ತಾಗದೇ ಟೆನ್ಷನ್​ ಆಗುತ್ತಿದೆ’ ಎಂದು ಬಿಗ್​ ಬಾಸ್​ ಬಳಿ ಶಮಂತ್​ ಬ್ರೋ ಗೌಡ ಆತಂಕ ತೋಡಿಕೊಂಡಿದ್ದಾರೆ.

‘ನನಗೆ ಸೀರೆಯೇ ಇಷ್ಟ. ಇದರಲ್ಲೇ ಇರುತ್ತೇನೆ. ಚೆನ್ನಾಗಿ ಕಾಣುತ್ತಿದ್ದೇನೆ. ಮೂರು ದಿನದಿಂದ ಹೆಂಗೆಂಗೂ ಬಿದ್ದುಕೊಂಡಿದ್ದೆ’ ಎಂದು ಶಮಂತ್​ಗೆ ನಿರ್ಮಲಾ ಸಮಜಾಯಿಷಿ ನೀಡಿದ್ದಾರೆ. ಈ ಉತ್ತರದಿಂದ ಶಮಂತ್​ ಸಮಾಧಾನ ಆದಂತೆ ಕಾಣುತ್ತಿಲ್ಲ. ‘ದಿನದ 24 ಗಂಟೆ ಒಬ್ಬೊಬ್ಬರೆ ಮಾತನಾಡುತ್ತಾರೆ. ವೀಕ್ಷಕರ ಕಣ್ಣು ತನ್ನ ಕಡೆಗೆ ಬೀಳಲಿ ಎಂದು ರಾತ್ರಿ ಮೇಕಪ್​ ಮಾಡಿಕೊಂಡು ಬಂದಿದ್ದಾರೆ’ ಎಂದೆಲ್ಲ ಇತರೆ ಸ್ಪರ್ಧಿಗಳು ಗುಸುಗುಸು ಮಾತನಾಡಿಕೊಂಡಿದ್ದಾರೆ. ಮೂಲೆಯಲ್ಲಿ ಕುಳಿತುಕೊಂಡು, ‘ಇಲ್ಲಿ ನಾನು ಯಾರನ್ನೂ ಗೆಲ್ಲಲು ಬಂದಿಲ್ಲ. ನನ್ನನ್ನು ನಾನು ಗೆಲ್ಲಲು ಬಂದಿದ್ದೇನೆ’ ಎಂದು ನಿರ್ಮಲಾ ಒಬ್ಬರೇ ಮಾತನಾಡಿಕೊಂಡಿರುವುದರಿಂದ ಭಯದ ವಾತಾವರಣ ನಿರ್ಮಾಣ ಆಗಿದೆ.

ಇದನ್ನೂ ಓದಿ: Bigg Boss Kannada: ನಿರ್ಮಲಾಗೋಸ್ಕರ ಮನಸ್ಸು ಬದಲಾಯಿಸಿಕೊಂಡ ಪ್ರಶಾಂತ್​ ಸಂಬರಗಿ! ಇದು ಸಖತ್​ ಅನಿರೀಕ್ಷಿತ

Bigg Boss Kannada: ಎರಡನೇ ವಾರವೂ ಶಮಂತ್​ ಬ್ರೋ ಗೌಡ ಕ್ಯಾಪ್ಟನ್​ ಆಗಿದ್ದು ಹೇಗೆ? ಹೊತ್ತಿಕೊಂಡಿದೆ ಅಸಮಾಧಾನದ ಬೆಂಕಿ!

ಸಿಹಿ ಸುದ್ದಿ: ಚಿಕ್ಕಬಳ್ಳಾಪುರ ಹಾಲು ಒಕ್ಕೂಟದಿಂದ ರೈತರಿಗೆ ಯುಗಾದಿ ಬೋನಸ್​
ಸಿಹಿ ಸುದ್ದಿ: ಚಿಕ್ಕಬಳ್ಳಾಪುರ ಹಾಲು ಒಕ್ಕೂಟದಿಂದ ರೈತರಿಗೆ ಯುಗಾದಿ ಬೋನಸ್​
ಔರಂಗಜೇಬನ ಸಮಾಧಿ ಸಂಬಂಧಿತ ವಿವಾದ, ನಾಗ್ಪುರದಲ್ಲಿ ಹಿಂಸಾಚಾರ
ಔರಂಗಜೇಬನ ಸಮಾಧಿ ಸಂಬಂಧಿತ ವಿವಾದ, ನಾಗ್ಪುರದಲ್ಲಿ ಹಿಂಸಾಚಾರ
Daily Devotional: ದೇವಾಲಯದ ಹೊಸ್ತಿಲು ಮುಟ್ಟಿ ನಮಸ್ಕರಿಸುವುದರ ಹಿಂದಿನ ಫಲ
Daily Devotional: ದೇವಾಲಯದ ಹೊಸ್ತಿಲು ಮುಟ್ಟಿ ನಮಸ್ಕರಿಸುವುದರ ಹಿಂದಿನ ಫಲ
ಸೂರ್ಯ ಮೀನ ರಾಶಿಯಲ್ಲಿ ಸಂಚಾರ ಮಾಡುವ ಈ ದಿನದ ರಾಶಿ ಭವಿಷ್ಯ
ಸೂರ್ಯ ಮೀನ ರಾಶಿಯಲ್ಲಿ ಸಂಚಾರ ಮಾಡುವ ಈ ದಿನದ ರಾಶಿ ಭವಿಷ್ಯ
ನಮ್ಮ ಫ್ಯಾನ್ಸ್ ’ಬೊಂಬಾಟ್’ ಎಂದ ಕಿಂಗ್ ಕೊಹ್ಲಿ; ವಿಡಿಯೋ
ನಮ್ಮ ಫ್ಯಾನ್ಸ್ ’ಬೊಂಬಾಟ್’ ಎಂದ ಕಿಂಗ್ ಕೊಹ್ಲಿ; ವಿಡಿಯೋ
ಪುನೀತ್​ ರಾಜ್​ಕುಮಾರ್​ಗೆ ವಿಶೇಷ ಗೌರವ ಸಲ್ಲಿಸಿದ ಆರ್​ಸಿಬಿ
ಪುನೀತ್​ ರಾಜ್​ಕುಮಾರ್​ಗೆ ವಿಶೇಷ ಗೌರವ ಸಲ್ಲಿಸಿದ ಆರ್​ಸಿಬಿ
ಗುರುದ್ವಾರ ರಕಬ್‌ಗಂಜ್‌ನಲ್ಲಿ ಪೂಜೆ ಸಲ್ಲಿಸಿದ ಮೋದಿ, ನ್ಯೂಜಿಲೆಂಡ್ ಪಿಎಂ
ಗುರುದ್ವಾರ ರಕಬ್‌ಗಂಜ್‌ನಲ್ಲಿ ಪೂಜೆ ಸಲ್ಲಿಸಿದ ಮೋದಿ, ನ್ಯೂಜಿಲೆಂಡ್ ಪಿಎಂ
ನೂತನ ನಾಯಕನಿಗಾಗಿ ಫ್ಯಾನ್ಸ್ ಬಳಿ ಕಿಂಗ್ ಕೊಹ್ಲಿ ಮನವಿ
ನೂತನ ನಾಯಕನಿಗಾಗಿ ಫ್ಯಾನ್ಸ್ ಬಳಿ ಕಿಂಗ್ ಕೊಹ್ಲಿ ಮನವಿ
ಬೇರೆಯವರನ್ನು ನಿಂದಿಸುವ ಹಕ್ಕು ಪ್ರದೀಪ್ ಈಶ್ವರ್​ಗಿಲ್ಲ: ಮುನಿಸ್ವಾಮಿ
ಬೇರೆಯವರನ್ನು ನಿಂದಿಸುವ ಹಕ್ಕು ಪ್ರದೀಪ್ ಈಶ್ವರ್​ಗಿಲ್ಲ: ಮುನಿಸ್ವಾಮಿ
ಇಫ್ತಾರ್ ಕೂಟದಲ್ಲಿ ಭಾಗವಹಿಸಿದ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ
ಇಫ್ತಾರ್ ಕೂಟದಲ್ಲಿ ಭಾಗವಹಿಸಿದ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ