AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bigg Boss Kannada: ಈ ಬಾರಿ ಬಿಗ್​ ಬಾಸ್​ ಗೆಲ್ಲುವ ಸ್ಪರ್ಧಿ ಇವರೇ.. ಎಂದು ಭವಿಷ್ಯ ನುಡಿದ ಶಂಕರ್​ ಅಶ್ವತ್ಥ್​! ಆದರೆ

Bigg Boss Kannada Updates (Day 5) : ‘ಬಿಗ್​ ಬಾಸ್​ ಕನ್ನಡ ಸೀಸನ್​ 8’ ಆರಂಭವಾಗಿ ಈಗತಾನೆ ಒಂದು ವಾರ ಕಳೆಯುತ್ತಿದೆ. ಅಷ್ಟರಲ್ಲಾಗಲೇ ವಿನ್ನರ್​ ಆಗುವವರು ಯಾರು ಎಂದು ಶಂಕರ್ ಅಶ್ವತ್ಥ್​ ಭವಿಷ್ಯ ನುಡಿದಿದ್ದಾರೆ.

Bigg Boss Kannada: ಈ ಬಾರಿ ಬಿಗ್​ ಬಾಸ್​ ಗೆಲ್ಲುವ ಸ್ಪರ್ಧಿ ಇವರೇ.. ಎಂದು ಭವಿಷ್ಯ ನುಡಿದ ಶಂಕರ್​ ಅಶ್ವತ್ಥ್​!  ಆದರೆ
ಮಂಜು ಪಾವಗಡ ಮತ್ತು ಶಂಕರ್​ ಅಶ್ವತ್ಥ್​
ರಾಜೇಶ್ ದುಗ್ಗುಮನೆ
| Edited By: |

Updated on: Mar 06, 2021 | 12:45 PM

Share

ಬಿಗ್​ ಬಾಸ್​ ಆಟದ ಲೆಕ್ಕಾಚಾರವೇ ಬೇರೆ. ಪ್ರೇಕ್ಷಕರು ನಿರೀಕ್ಷೆಯೇ ಮಾಡಿರದ ಸ್ಪರ್ಧಿ ಏಕಾಏಕಿ ಹೈಲೈಟ್ ಆಗಿಬಿಡಬಹುದು. ಸದ್ಯ ಈ ಹೊಸ ಸೀಸನ್​ನಲ್ಲಿ ಅದೇ ರೀತಿ ಆಗುತ್ತಿದೆ. ಹಾಸ್ಯ ಕಲಾವಿದ ಮಂಜು ಪಾವಗಡ ಸಿಕ್ಕಾಪಟ್ಟೆ ಹೈಪ್​ ಪಡೆದುಕೊಳ್ಳುತ್ತಿದ್ದಾರೆ. ಹಲವು ಕಾರಣಗಳಿಗಾಗಿ ಅವರನ್ನು ಜನರು ಇಷ್ಟ ಪಡುತ್ತಿದ್ದಾರೆ. ಮನೆಯೊಳಗಿನ ಸದಸ್ಯರಿಗೂ ಅದೇ ಭಾವನೆ ವ್ಯಕ್ತವಾಗುತ್ತಿದೆ. ಎಷ್ಟರಮಟ್ಟಿಗೆಂದರೆ ಈ ಬಾರಿ ಬಿಗ್​ ಬಾಸ್​ ಗೆಲ್ಲುವುದು ಮಂಜು ಪಾವಗಡೆ ಅವರೇ ಎಂದು ಹಿರಿಯ ನಟ ಶಂಕರ್​ ಅಶ್ವತ್ಥ್​ ಭವಿಷ್ಯ ನುಡಿದಿದ್ದಾರೆ!

ಬಿಗ್​ ಬಾಸ್​ನಲ್ಲಿ 5ನೇ ದಿನ ಎಲ್ಲರೂ ತಮಗೆ ಇಷ್ಟ ಆಗುವ ಮತ್ತು ಇಷ್ಟ ಆಗದ ಸದಸ್ಯರ ಹೆಸರು ಹೇಳಿ, ಅವರಿಗೆ ಲೈಕ್​ ಹಾಗೂ ಡಿಸ್ಲೈಕ್​ ಬ್ಯಾಡ್ಜ್​ ನೀಡಬೇಕು ಎಂದು ಬಿಗ್​ ಬಾಸ್​ ಆದೇಶಿಸಿದರು. ಆ ಸಂದರ್ಭದಲ್ಲಿ ಮಂಜು ಪಾವಗಡ ಅವರ ಬಗ್ಗೆ ಭವಿಷ್ಯ ನುಡಿದಿದ್ದಾರೆ. ‘ಈ ಮನೆಯಲ್ಲಿ ಎಲ್ಲರೂ ಅವರನ್ನೇ ಇಷ್ಟಪಡುತ್ತಾರೆ. ಪ್ರಾಯಶಃ ಅವರೇ ವಿನ್​ ಆಗುತ್ತಾರೆ ಎಂದು ನನ್ನ ಮನಸ್ಸು ಹೇಳುತ್ತಿದೆ. ಇಲ್ಲಿ ಹೆಚ್ಚು ಜನರು ಅದನ್ನೇ ಒಪ್ಪಿಕೊಳ್ಳುತ್ತಿದ್ದಾರೆ’ ಎಂದಿದ್ದಾರೆ ಶಂಕರ್​. ಹಾಗಂತ ಮಂಜುಗೆ ಅವರು ಲೈಕ್​ ಬ್ಯಾಡ್ಜ್​ ನೀಡಿಲ್ಲ. ಬದಲಿಗೆ ಡಿಸ್ಲೈಕ್​ ಬ್ಯಾಡ್ಜ್​ ನೀಡಿದ್ದಾರೆ!

ಮಂಜು ವಿನ್​ ಆಗುತ್ತಾರೆ ಎಂದು ಭರವಸೆ ಮೂಡುವ ಮಟ್ಟಕ್ಕೆ ಅವರು ಎಲ್ಲರಿಗೂ ಇಷ್ಟವಾಗಿದ್ದಾರೆ. ಆದರೂ ಕೂಡ ಶಂಕರ್​ ಅಶ್ವತ್ಥ್​ ಅವರು ಮಂಜುಗೆ ಡಿಸ್ಲೈಕ್​ ಬ್ಯಾಡ್ಜ್​ ನೀಡಿದ್ದಕ್ಕೆ ಒಂದು ಬಲವಾದ ಕಾರಣ ಇದೆ. ಅದು ಕೂಡ ತುಂಬ ಫನ್ನಿ. ’ಯಾರಿಗೂ ಗೊತ್ತಿರದ ವಿಷಯದಲ್ಲಿ ಒಂದು ತೊಂದರೆ ಆಗಿದೆ. ಅದನ್ನು ಹೇಳುತ್ತೇನೆ. ಮಂಜು ರಾತ್ರಿ ಹೊತ್ತು ಒಳ್ಳೇ ಮೋಟಾರ್​ ಬೋಟ್​. ಅಷ್ಟು ಗೊರಕೆ ಹೊಡೆಯುತ್ತಾರೆ. ಅದಕ್ಕಾಗಿ ನಾನು ಅವರಿಗೆ ಡಿಸ್ಲೈಕ್​ ನೀಡುತ್ತೇನೆ’ ಎಂದು ಶಂಕರ್​ ಅಶ್ವತ್ಥ್​ ಹೇಳಿದ್ದಾರೆ.

ತಮ್ಮನ್ನು ಎಲ್ಲರೂ ಇಷ್ಟಪಡುತ್ತಿರುವುದಕ್ಕೆ ಮಂಜು ಸಂತಸ ವ್ಯಕ್ತಪಡಿಸಿದ್ದಾರೆ. ‘ಬಹಳ ಖುಷಿ ಆಗುತ್ತದೆ. ನನ್ನ ಕಲ್ಪನೆಯಲ್ಲಿ ಬಿಗ್​ ಬಾಸ್​ ಎಂದರೆ ಹೊಡೆದಾಟ, ಜಗಳ ಎಂದುಕೊಂಡಿದ್ದೆ. ನಾನು ಟಿವಿಯಲ್ಲಿ ನೋಡಿದ್ದು ಹಾಗೆಯೇ. ನನಗೆ ಈ ಬಾರಿ ಆಫರ್​ ಬಂದಾಗ ಅಯ್ಯಯ್ಯೋ ಎನಿಸಿತ್ತು. ಒಳಗಡಗೆ ಬಂದಾಗ ಎಲ್ಲರೂ ಅವರವರ ಪಾಡಿಗೆ ಊಟ ಮಾಡುತ್ತಿದ್ದರು. ಅಲ್ಲಿಂದಲೇ ಜಳಗ ಶುರು ಅಂದುಕೊಂಡಿದ್ದೆ. ಆದರೆ ಇಷ್ಟು ಬೇಗ ಹೊಂದಾಣಿಕೆಯೊಂದಿಗೆ ಎಲ್ಲರೂ ಖುಷಿಖುಷಿಯಾಗಿ ಇದ್ದೇವೆ’ ಎಂದಿದ್ದಾರೆ ಮಂಜು.

ಇದನ್ನೂ ಓದಿ: Bigg Boss Kannada: ಮಂಜು ಕಂಡರೆ ದಿವ್ಯಾಗೆ ಯಾಕಿಷ್ಟು ಲವ್​? ಬಯಲಾಯ್ತು ಅಸಲಿ ವಿಷಯ!

Bigg Boss Kannada: ಮಧ್ಯರಾತ್ರಿ ನಾಗವಲ್ಲಿ ರೀತಿ ವರ್ತಿಸಿದ ನಿರ್ಮಲಾ! ವಿಚಿತ್ರ ವೇಷ ಕಂಡು ಬೆಚ್ಚಿ ಬಿತ್ತು ದೊಡ್ಮನೆ

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ