AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bigg Boss Kannada: ಎರಡನೇ ವಾರವೂ ಶಮಂತ್​ ಬ್ರೋ ಗೌಡ ಕ್ಯಾಪ್ಟನ್​ ಆಗಿದ್ದು ಹೇಗೆ? ಹೊತ್ತಿಕೊಂಡಿದೆ ಅಸಮಾಧಾನದ ಬೆಂಕಿ!

ಮೊದಲ ವಾರ ಕ್ಯಾಪ್ಟನ್​ ಆಗಿದ್ದ ಶಮಂತ್​ ಗೌಡ ಅವರಿಗೆ ಎರಡನೇ ವಾರವೂ ಬಂಪರ್​ ಚಾನ್ಸ್​ ಸಿಕ್ಕಿದೆ. ಆದರೆ ಇದರಿಂದ ಮನೆಯಲ್ಲಿ ಕೆಲವು ಸದಸ್ಯರ ಮುಖ ಕೆಂಪಾಗಿದೆ.

Bigg Boss Kannada: ಎರಡನೇ ವಾರವೂ ಶಮಂತ್​ ಬ್ರೋ ಗೌಡ ಕ್ಯಾಪ್ಟನ್​ ಆಗಿದ್ದು ಹೇಗೆ? ಹೊತ್ತಿಕೊಂಡಿದೆ ಅಸಮಾಧಾನದ ಬೆಂಕಿ!
ಶಮಂತ್​ ಬ್ರೋ ಗೌಡ
ರಾಜೇಶ್ ದುಗ್ಗುಮನೆ
| Edited By: |

Updated on: Mar 05, 2021 | 7:37 PM

Share

ವೀಕೆಂಡ್​ ಹತ್ತಿರ ಆಗುತ್ತಿದ್ದಂತೆಯೇ ಬಿಗ್​ ಬಾಸ್​ ಸ್ಪರ್ಧಿಗಳ ಎದೆಯೊಳಗೆ ಢವಢವ ಶುರು ಆಗುತ್ತದೆ. ಆದರೆ ಕ್ಯಾಪ್ಟನ್​ ಆದವರಿಗೆ ಎಲಿಮಿನೇಷನ್​ ಭೀತಿ ಇರುವುದಿಲ್ಲ. ಹಾಗಾಗಿ ಕ್ಯಾಪ್ಟನ್​ ಸ್ಥಾನಕ್ಕಾಗಿ ಎಲ್ಲರೂ ಪೈಪೋಟಿ ನಡೆಸುತ್ತಾರೆ. ಅಚ್ಚರಿಯ ಬೆಳವಣಿಗೆಯಲ್ಲಿ ಶಮಂತ್​ ಬ್ರೋ ಗೌಡ ಅವರಿಗೆ ಎರಡನೇ ವಾರ ಕೂಡ ಕ್ಯಾಪ್ಟನ್​ ಆಗುವ ಅವಕಾಶ ಸಿಕ್ಕಿದೆ. ಇದರಿಂದ ಮನೆಯೊಳಗಿನ ವಾತಾವರಣ ಕೂಡ ಸ್ವಲ್ಪ ಬ್ಯಾನೆಲ್ಸ್​ ತಪ್ಪಿದೆ!

ಮೊದಲ ವೀಕೆಂಡ್​ ಹತ್ತಿರ ಆಗುತ್ತಿದ್ದಂತೆಯೇ ಎಲ್ಲ ಸ್ಪರ್ಧಿಗಳಿಗೆ ಬಿಗ್​ ಬಾಸ್​ ಒಂದು ಆಯ್ಕೆ ನೀಡಿದರು. ಎರಡನೇ ವಾರವೂ ಶಮಂತ್​ ಕ್ಯಾಪ್ಟನ್​ ಆಗಿ ಮುಂದುವರಿಯಬೇಕೇ ಬೇಡವೇ ಎಂಬುದನ್ನು ನಿರ್ಧರಿಸಲು ವೋಟಿಂಗ್​ ಮಾಡಿಸಲಾಯಿತು. ಮೊದಲಿಗೆ 8 ಜನ ‘ಬೇಡ’ ಎಂದು, ಇನ್ನುಳಿದ 8 ಜನರು ‘ಬೇಕು’ ಎಂದು ವೋಟ್​ ಮಾಡಿದರು. ಸರಿಯಾಗಿ ಇನ್ನೊಮ್ಮೆ ಯೋಚಿಸಿನೋಡಿ ಎಂದು ಬಿಗ್ ಬಾಸ್​ ಹೇಳಿದಾಗ ನಿರ್ಮಲಾ ಚೆನ್ನಪ್ಪ ಮನಸ್ಸು ಬದಲಾಯಿಸಿ ‘ಬೇಕು’ ಎಂದು ವೋಟ್​ ಮಾಡಿದರು. ಹಾಗಾಗಿ ಎರಡನೇ ವಾರವೂ ಕ್ಯಾಪ್ಟನ್​ ಆಗುವ ಅವಕಾಶ ಶಮಂತ್​ಗೆ ಸಿಕ್ಕಿದೆ.

ಎರಡನೇ ವಾರ ಶಮಂತ್​ ಕ್ಯಾಪ್ಟನ್​ ಆಗಿ ಮುಂದುವರಿಯುವುದು ಪ್ರಶಾಂತ್​ ಸಂಬರಗಿ, ದಿವ್ಯಾ ಸುರೇಶ್​, ರಘು, ವಿಶ್ವನಾಥ್​, ಶುಭಾಪೂಂಜಾ, ರಾಜೀವ್​, ದಿವ್ಯಾ ಉರುಡುಗ ಮುಂತಾದವರಿಗೆ ಕಿಂಚಿತ್ತೂ ಇಷ್ಟ ಇರಲಿಲ್ಲ. ಎಲ್ಲರಿಗೂ ಕ್ಯಾಪ್ಟನ್​ ಆಗುವ ಅವಕಾಶ ಸಿಗಬೇಕು ಎಂಬುದು ಇವರೆಲ್ಲರ ಆಶಯ ಆಗಿತ್ತು. ಆದರೆ ಅಂತಿಮವಾಗಿ ಹೆಚ್ಚು ವೋಟ್​ಗಳು ಶಮಂತ್​ ಪರವಾಗಿ ಬಂದಿದ್ದರಿಂದ ಅವರೇ ಕ್ಯಾಪ್ಟನ್​ ಆದರು.

ಮನೆಯೊಳಗಿನ ಕೆಲಸವನ್ನು ಶಮಂತ್​ ಸರಿಯಾಗಿ ಎಲ್ಲರಿಗೂ ಹಂಚಿಲ್ಲ. ಅವರಿಗೆ ಹೆಚ್ಚು ತಿಳುವಳಿಕೆ ಇಲ್ಲ ಎಂದು ಸಂಬರಗಿ ಆರೋಪಿಸಿದ್ದಾರೆ. ಅನೇಕ ಟೀಕೆಗಳನ್ನು ಶಮಂತ್​ ಎದುರಿಸಬೇಕಾಗಿದೆ. ಅದನ್ನೆಲ್ಲ ಗಮನದಲ್ಲಿ ಇಟ್ಟುಕೊಂಡು ಎರಡನೇ ವಾರ ಅವರು ಯಾವ ರೀತಿ ತಂತ್ರ ಮಾಡುತ್ತಾರೆ ಎಂಬ ಕೌತುಕ ಈಗ ನಿರ್ಮಾಣ ಆಗಿದೆ. ಎಲಿಮಿನೇಷನ್​ಗೆ ನಾಮಿನೇಟ್​ ಆಗಿರುವ ನಿಧಿ ಸುಬ್ಬಯ್ಯ, ಶುಭಾ ಪೂಂಜಾ, ವಿಶ್ವನಾಥ್​, ಧನುಶ್ರೀ ಪೈಕಿ ಯಾರು ಮೊದಲ ವಾರ ಎಲಿಮಿನೇಟ್​ ಆಗುತ್ತಾರೆ ಎಂಬುದನ್ನು ತಿಳಿದುಕೊಳ್ಳಲು ವೀಕೆಂಡ್​ಗಾಗಿ ವೀಕ್ಷಕರು ಕಾಯುತ್ತಿದ್ದಾರೆ.

ಇದನ್ನೂ ಓದಿ: BBK8: ಬಿಗ್​ ಬಾಸ್​ ಮೊದಲ ವಾರದಲ್ಲಿ ಹೊರ ಹೋಗೋದು ಶುಭಾ ಪೂಂಜಾ? ಮೂರನೇ ದಿನ ಹೊಸ ಟ್ವಿಸ್ಟ್​

Bigg Boss Kannada Day 1: ಬ್ರೋ ಗೌಡಗೆ ದಿವ್ಯಾ ಸುರೇಶ್ ಮೇಲೆ ಪ್ರೀತಿ?; ಬಿಗ್​ ಬಾಸ್​ ಮನೆಯಲ್ಲಿ ತ್ರಿಕೋನ ಪ್ರೇಮ ಕಥೆ!

Follow Us
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ