Bigg Boss Kannada: ​19ನೇ ವಯಸ್ಸಿಗೆ ಇದು ದೊಡ್ಡದು ಅಂದುಕೊಂಡ್ರಾ? ವಿಶ್ವನಿಗೆ ಸುದೀಪ್​ ಮಾತಿನ ಪಂಚ್​!

Kichcha Sudeep: ವಿಶ್ವ ಕ್ಯಾಪ್ಟನ್​ ಆಗಿದ್ದಾಗ ಮನೆಯ ಸದಸ್ಯರಿಗೆ ಸ್ವಲ್ಪ ಕಷ್ಟದ ಟಾಸ್ಕ್​ಗಳನ್ನು ನೀಡಲಾಗಿತ್ತು. ಈ ಎಲ್ಲ ಸಂದರ್ಭಗಳನ್ನು ನಿಭಾಯಿಸುವಲ್ಲಿ ವಿಶ್ವ ಯಾಕೋ ವಿಫಲರಾದರು. ಆ ಬಗ್ಗೆ ವೀಕೆಂಡ್​ನಲ್ಲಿ ಚರ್ಚೆ ಆಗಿದೆ.

Bigg Boss Kannada: ​19ನೇ ವಯಸ್ಸಿಗೆ ಇದು ದೊಡ್ಡದು ಅಂದುಕೊಂಡ್ರಾ? ವಿಶ್ವನಿಗೆ ಸುದೀಪ್​ ಮಾತಿನ ಪಂಚ್​!
ವಿಶ್ವನಾಥ್​ - ಕಿಚ್ಚ ಸುದೀಪ್​ ಬಿಗ್​ ಬಾಸ್​
Edited By:

Updated on: Apr 04, 2021 | 5:42 PM

ಈ ಬಾರಿ ಬಿಗ್​ ಬಾಸ್​ ಮನೆಗೆ ಕಾಲಿಟ್ಟ ಸ್ಪರ್ಧಿಗಳ ಪೈಕಿ ವಿಶ್ವನಾಥ್​ ಅತಿ ಕಿರಿಯ ವ್ಯಕ್ತಿ. ಗಾಯಕನಾಗಿರುವ ಅವರ ವಯಸ್ಸು ಕೇವಲ 19. ಅವರ ಜೊತೆ ಈಗ ಹಣಾಹಣಿ ನಡೆಸುತ್ತಿರುವವರೆಲ್ಲ ದೊಡ್ಡವರು. ಹಾಗಿದ್ದರೂ ಕೂಡ ವಿಶ್ವನಾಥ್​ ಚೆನ್ನಾಗಿ ಆಡುತ್ತಿದ್ದಾರೆ. ಎಷ್ಟರಮಟ್ಟಿಗೆಂದರೆ ಅವರಿಗೆ ಕ್ಯಾಪ್ಟನ್​ ಆಗುವ ಅವಕಾಶ ಕೂಡ ಸಿಕ್ಕಿತು. ಆದರೆ ಅವರು ಆ ಜವಾಬ್ದಾರಿ ನಿಭಾಯಿಸುವಲ್ಲಿ ಎಡವಿದರು ಎಂಬುದು ಕೂಡ ಅಷ್ಟೇ ನಿಜ. ಈ ಬಗ್ಗೆ ಸುದೀಪ್​ ಕೂಡ ಪ್ರತಿಕ್ರಿಯೆ ನೀಡಿದ್ದಾರೆ.

ವಿಶ್ವ ಕ್ಯಾಪ್ಟನ್​ ಆಗಿದ್ದಾಗ ಮನೆಯ ಸದಸ್ಯರಿಗೆ ಸ್ವಲ್ಪ ಕಷ್ಟದ ಟಾಸ್ಕ್​ಗಳನ್ನು ನೀಡಲಾಗಿತ್ತು. ಪ್ರಶಾಂತ್​ ಸಂಬರಗಿ, ಶಂಕರ್​ ಅಶ್ವತ್ಥ್​ ಮುಂತಾದ ಹಿರಿಯರು ತುಂಬ ಆಕ್ರಮಣಕಾರಿಯಾಗಿ ನಡೆದುಕೊಂಡರು. ಅರವಿಂದ್​ ಮತ್ತು ಪ್ರಶಾಂತ್​ ನಡುವೆ ಮಾತಿಕ ಚಕಮಕಿ ಆಯಿತು. ಈ ಎಲ್ಲ ಸಂದರ್ಭಗಳನ್ನು ನಿಭಾಯಿಸುವಲ್ಲಿ ವಿಶ್ವನಾಥ್​ ಸ್ವಲ್ಪ ವಿಫಲರಾದರು. ಅದರ ಬಗ್ಗೆ ವೀಕೆಂಡ್​ನ ಕಿಚ್ಚನ ಪಂಚಾಯಿತಿಯಲ್ಲಿ ಚರ್ಚೆ ಆಗಿದೆ.

‘ನಿಮಗೆ ಕ್ಯಾಪ್ಟನ್​ ಆಗಿರೋಕೆ ಬರುತ್ತಿಲ್ಲ ಅಥವಾ ನಿಮ್ಮನ್ನು ಕ್ಯಾಪ್ಟನ್​ ಆಗಿ ಯಾರೂ ಸೀರಿಯಸ್​ ಆಗಿ ಪರಿಗಣಿಸಿಲ್ಲ. ನನಗೆ ಇದರಲ್ಲಿ ಎರಡನೆಯದು ಹೌದು ಎನಿಸುತ್ತಿದೆ. ಅವರು ನಿಮ್ಮನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದರೆ ಅದು ಅವರ ತಪ್ಪು. ಆದರೆ 19ನೇ ವಯಸ್ಸಿನವರು ಕ್ಯಾಪ್ಟನ್​ ಆಗಬಾರದು ಅಂತ ಎಲ್ಲದರೂ ನಿಯಮ ಇದೆಯಾ? 19ನೇ ವಯಸ್ಸಿಗೆ ಇಲ್ಲಿಯವರೆಗೆ ಬಂದಿದ್ದೇನೆ. ಇದೇ ದೊಡ್ಡದು. ಇಷ್ಟೇ ಸಾಕು ಎಂದುಕೊಂಡಿದ್ದೀರಾ’ ಎಂದು ವಿಶ್ವನಿಗೆ ಸುದೀಪ್​ ಪ್ರಶ್ನಿಸಿದರು.

‘ಇಲ್ಲ’ ಎಂಬ ಉತ್ತರ ವಿಶ್ವ ಅವರ ಕಡೆಯಿಂದ ಬಂತು. ‘ಹಾಗಾದರೆ ನಿಮ್ಮನ್ನು ತಡೆದಿದ್ದು ಯಾರು? ನಾಯಕತ್ವದಲ್ಲಿ ಒಂದು ಕ್ವಾಲಿಟಿ ಬೇಕು. ನಿರ್ಧಾರ ತಪ್ಪೋ ಸರಿಯೋ ಎಂಬುದನ್ನು ಆಮೇಲೆ ನೋಡಿಕೊಳ್ಳೋಣ. ಮೊದಲು ನಿರ್ಧಾರ ತೆಗೆದುಕೊಳ್ಳುವುದು ಮುಖ್ಯ. ಆ ನಿರ್ಧಾರ ತೆಗೆದುಕೊಂಡ ಮೇಲೆ ಅದಕ್ಕೆ ಬದ್ಧರಾಗಿ ನಿಲ್ಲಬೇಕು. ಅದು ನಾಯಕರ ಗುಣ. ಇಲ್ಲಿ ಎಲ್ಲರೂ ಮನುಷ್ಯರೇ. ಕ್ಯಾಪ್ಟನ್ಸಿಯನ್ನು ನೀವು ಸಂಪಾದಿಸಿರುವುದು. ಮನೆಯ ಜವಾಬ್ದಾರಿ ನಿಮ್ಮ ಮೇಲಿದೆ. ಕ್ಯಾಪ್ಟನ್ಸಿ ಎಂದರೆ ಬರೀ ಇಮ್ಯೂನಿಟಿ, ಬೆಡ್​ರೂಮ್​ ಮತ್ತು ಕಾಫಿ ಅಷ್ಟೇ ಅಲ್ಲ’ ಎಂದು ಸುದೀಪ್​ ಛಾಟಿ ಬೀಸಿದರು.

ಇದನ್ನೂ ಓದಿ: ಬಿಗ್​ ಬಾಸ್​ ಮನೆಗೆ ಮತ್ತೊಂದಷ್ಟು ವೈಲ್ಡ್​ ಕಾರ್ಡ್​ ಎಂಟ್ರಿ; ಸುದೀಪ್​ ಕೊಟ್ರು ಸೂಚನೆ

ವೈಲ್ಡ್​ ಕಾರ್ಡ್​ ಎಂಟ್ರಿ ಬೇಡ; ಬಿಗ್​ ಬಾಸ್​ ಮನೆಯಲ್ಲಿ ಹೊಸ ಬೇಡಿಕೆ ಇಟ್ಟ ಸ್ಪರ್ಧಿಗಳು

 

(Bigg Boss Kannada updates: Kichcha Sudeep criticizes Vishwanath captaincy in BBK8)

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us