AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದ್ವೇಷದ ಆಟ, ಉಡಾಫೆ ಮಾತಿನಿಂದ ಮೆರೆಯುತ್ತಿದ್ದ ಮಂಜು​ಗೆ ಕ್ಲಾಸ್​ ತೆಗೆದುಕೊಂಡ ಸುದೀಪ್​!

ದ್ವೇಷದ ಆಟ ಆಡಿದ್ದನ್ನು ಮತ್ತು ಕ್ಯಾಪ್ಟನ್​ ಜವಾಬ್ದಾರಿಯನ್ನು ಮರೆತು ಉಡಾಫೆಯಲ್ಲಿ ಮಾತನಾಡಿದ್ದನ್ನು ಮಂಜು ಒಪ್ಪಿಕೊಂಡರು. ಅಲ್ಲದೆ, ಚಕ್ರವರ್ತಿ ಚಂದ್ರಚೂಡ್​ ಬಳಿ ಹೋಗಿ ಅವರು ಕ್ಷಮೆ ಕೂಡ ಕೇಳಿದರು.

ದ್ವೇಷದ ಆಟ, ಉಡಾಫೆ ಮಾತಿನಿಂದ ಮೆರೆಯುತ್ತಿದ್ದ ಮಂಜು​ಗೆ ಕ್ಲಾಸ್​ ತೆಗೆದುಕೊಂಡ ಸುದೀಪ್​!
ಸುದೀಪ್​ - ಮಂಜು ಪಾವಗಡ
ಮದನ್​ ಕುಮಾರ್​
| Updated By: ರಾಜೇಶ್ ದುಗ್ಗುಮನೆ

Updated on: Apr 04, 2021 | 3:35 PM

Share

ಬಿಗ್​ ಬಾಸ್​ ಕನ್ನಡ ಸೀಸನ್​ 8ರಲ್ಲಿ ಅತ್ಯುತ್ತಮ ಸ್ಪರ್ಧಿ ಯಾರು ಎಂಬ ಪ್ರಶ್ನೆ ಎದುರಾದರೆ ಮಂಜು ಪಾವಗಡ ಹೆಸರು ಮುಂಚೂಣಿಯಲ್ಲಿ ಕೇಳಿಬರುತ್ತದೆ. ವೀಕ್ಷಕರು ಕೂಡ ಮಂಜುಗೆ ಹೆಚ್ಚು ವೋಟ್​ ಮಾಡುತ್ತಿದ್ದಾರೆ. ಮನೆಯೊಳಗಿನ ಸದಸ್ಯರ ಅಭಿಪ್ರಾಯದಲ್ಲೂ ಮಂಜು ದಿ ಬೆಸ್ಟ್​. ಹಾಗಂತ ಮಂಜು ಮಾಡುವ ಎಲ್ಲ ಕೆಲಸವನ್ನೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಅವರು ಮಾಡಿದ ತಪ್ಪನ್ನು ಸುದೀಪ್​ ಖಂಡಿಸಿದ್ದಾರೆ. ವೀಕೆಂಡ್​ ಎಪಿಸೋಡ್​ನಲ್ಲಿ ಕಿಚ್ಚ ಕ್ಲಾಸ್​ ತೆಗೆದುಕೊಂಡಿದ್ದಾರೆ.

ಐದನೇ ವಾರದಲ್ಲಿ ಮಂಜು ಪಾವಗಡ ಕ್ಯಾಪ್ಟನ್​ ಆಗಿ ಆಯ್ಕೆಯಾದರು. ಹಾಗಾಗಿ ಅವರಿಗೆ ವಿಶೇಷವಾದ ಬೆಡ್​ರೂಮ್​ ಸಿಕ್ಕಿತು. ಅಲ್ಲಿ ತನ್ನ ಸ್ನೇಹಿತರನ್ನೆಲ್ಲ ಸೇರಿಸಿಕೊಂಡು ಮಂಜು ಹರಟೆ ಹೊಡಿದಿದ್ದಾರೆ. ಅದು ಕೂಡ ರಾತ್ರಿ ಹೊತ್ತು ಮನೆಯ ಲೈಟ್​ ಆಫ್​ ಆದಮೇಲೆ. ಇದರಿಂದಾಗಿ ಇತರೆ ಸದಸ್ಯರ ನಿದ್ರೆಗೆ ತೊಂದರೆ ಆಗಿದೆ. ಅವರ ಗಲಾಟೆ ತಾಳಲಾರದೆ ಅರವಿಂದ್​ ಕೆ.ಪಿ. ಮತ್ತು ಚಕ್ರವರ್ತಿ ಚಂದ್ರಚೂಡ್​ ಅವರು ಗಾರ್ಡನ್​ ಏರಿಯಾಗೆ ಬಂದು ಮಲಗುವಂತಾಯಿತು.

ಇದೇ ವಿಚಾರವನ್ನು ಇಟ್ಟುಕೊಂಡು ವೀಕೆಂಡ್​ನಲ್ಲಿ ಸುದೀಪ್​ ಚರ್ಚೆ ಮಾಡಿದ್ದಾರೆ. ನೀವು ಮಾಡಿದ್ದು ಸರೀನಾ ಎಂದು ಮಂಜುಗೆ ಕಿಚ್ಚ ಪ್ರಶ್ನೆ ಮಾಡಿದರು. ‘ನಿಮ್ಮ ಮಾತುಕತೆಯಿಂದ ತೊಂದರೆ ಆಗಿದ್ದಕ್ಕೆ ಅರವಿಂದ್​ ಮತ್ತು ಚಕ್ರವರ್ತಿ ಚಂದ್ರಚೂಡ್​ ಹೊರಗೆ ಹೋಗಿ ಗಾರ್ಡನ್​ ಏರಿಯಾದಲ್ಲಿ ಮಲಗಿದ್ದು ನಿಮ್ಮ ಗಮನಕ್ಕೆ ಬರುತ್ತದೆ. ಆದರೆ ನೀವು ಉಡಾಫೆಯಲ್ಲಿ ಮಾತನಾಡಿದ್ರಿ. ಸ್ಪರ್ಧಿಯಾಗಿ ನೀವು ಹಾಗೆ ಮಾತನಾಡಿದ್ರೆ ನಡೆಯುತ್ತಿತ್ತು. ಆದರೆ ಕ್ಯಾಪ್ಟನ್​ ಆಗಿ ಹಾಗೆ ನಡೆದುಕೊಳ್ಳಬಾರದಾಗಿತ್ತು’ ಎಂದು ಕಿಚ್ಚ ಛಾಟಿ ಬೀಸಿದ್ದಾರೆ.

ಟಾಸ್ಕ್​ ಒಂದರಲ್ಲಿ ಔಟ್​ ಆದಮೇಲೂ ಕೂಡ ಮಂಜು ಪಾಲ್ಗೊಂಡಿದ್ದರು. ಅದನ್ನು ಗಮನಿಸಿರುವ ಸುದೀಪ್​ ಅವರು ಮಂಜುಗೆ ಕ್ಲಾಸ್​ ತೆಗೆದುಕೊಂಡಿದ್ದಾರೆ. ‘ಹಠ, ಕೋಪ ಸಹಜ. ಆದರೆ ಇಂಥ ವರ್ತನೆಯನ್ನು ದ್ವೇಷ ಎನ್ನುತ್ತಾರೆ. ಆಟ ಎನ್ನುವುದಿಲ್ಲ’ ಎಂದು ಖಾರವಾಗಿಯೇ ಹೇಳಿದ್ದಾರೆ. ಒಟ್ಟಿನಲ್ಲಿ ದ್ವೇಷದ ಆಟ ಆಡಿದ್ದನ್ನು ಮತ್ತು ಕ್ಯಾಪ್ಟನ್​ ಜವಾಬ್ದಾರಿಯನ್ನು ಮರೆತು ಉಡಾಫೆಯಲ್ಲಿ ಮಾತನಾಡಿದ್ದನ್ನು ಮಂಜು ಒಪ್ಪಿಕೊಂಡರು. ಅಲ್ಲದೆ, ಚಕ್ರವರ್ತಿ ಚಂದ್ರಚೂಡ್​ ಬಳಿ ಹೋಗಿ ಅವರು ಕ್ಷಮೆ ಕೂಡ ಕೇಳಿದರು.

ರಾತ್ರಿ ದೊಡ್ಡದಾಗಿ ಮಾತನಾಡಿದ ವಿಚಾರದಲ್ಲಿ ಮಂಜು ಅವರ ಪರವಾಗಿ ದಿವ್ಯಾ ಸುರೇಶ್​ ವಾದ ಮಾಡಿದ್ದರು. ಅದನ್ನೂ ಸುದೀಪ್​ ವಿರೋಧಿಸಿದ್ದಾರೆ. ‘ಬೇಕಿದ್ದರೆ ಅವರು ಗಾರ್ಡನ್​ ಏರಿಯಾದಲ್ಲಿ ಹೋಗಿ ಮಲಗಿಕೊಳ್ಳಲಿ ಎಂದು ನೀವು ಹೇಳಿದ್ದು ಸರಿಯೇ? ನಿಮಗೆ ಇದೆಲ್ಲ ಅರ್ಥವಾಗಬೇಕು’ ಎಂದು ಕಿಚ್ಚ ಹೇಳಿದ ನಂತರ ದಿವ್ಯಾ ಸಹ ಕ್ಷಮೆ ಕೇಳಿದರು.

ಇದನ್ನೂ ಓದಿ: ‘ಆ ಡೋರ್​ ಓಪನ್​ ಆದರೆ ಸಾವಿನ ಕದ ತೆರೆದಂತಾಗುತ್ತದೆ’: ಮಂಜು ಪಾವಗಡ ಹೀಗೆ ಬೆಚ್ಚಿ ಬಿದ್ದಿದ್ಯಾಕೆ?

‘ಮಂಜುನ ನಾನು ಸುಮ್ನೆ ಬಿಡಲ್ಲ’: ಸವಾಲು ಹಾಕಿ ಯುದ್ಧ ಶುರು ಮಾಡಿದ ಚಕ್ರವರ್ತಿ ಚಂದ್ರಚೂಡ್!

(Bigg Boss Kannada updates: Kichcha Sudeep warns Manju Pavagada and Divya suresh for their irresponsible Behavior)

2 ದಿನಗಳ ಘಾನಾ ಭೇಟಿ ಮುಗಿಸಿ ಟ್ರಿನಿಡಾಡ್ ಮತ್ತು ಟೊಬೆಗೊಗೆ ತೆರಳಿದ ಮೋದಿ
2 ದಿನಗಳ ಘಾನಾ ಭೇಟಿ ಮುಗಿಸಿ ಟ್ರಿನಿಡಾಡ್ ಮತ್ತು ಟೊಬೆಗೊಗೆ ತೆರಳಿದ ಮೋದಿ
ಹೊಳೆ ನೀರಿನ ಮಧ್ಯದಲ್ಲೇ ಕೆಟ್ಟು ನಿಂತ ಲಾಂಚ್..ಮುಂದೇನಾಯ್ತು..!
ಹೊಳೆ ನೀರಿನ ಮಧ್ಯದಲ್ಲೇ ಕೆಟ್ಟು ನಿಂತ ಲಾಂಚ್..ಮುಂದೇನಾಯ್ತು..!
ಆನ್‍ಲೈನ್ ಗೇಮ್‍ನಲ್ಲಿ ಹಣ ಕಳೆದುಕೊಂಡ:ವಿಡಿಯೋ ಮಾಡಿಟ್ಟು ನೇಣಿಗೆ ಶರಣಾದ
ಆನ್‍ಲೈನ್ ಗೇಮ್‍ನಲ್ಲಿ ಹಣ ಕಳೆದುಕೊಂಡ:ವಿಡಿಯೋ ಮಾಡಿಟ್ಟು ನೇಣಿಗೆ ಶರಣಾದ
ಅಮರನಾಥ ಯಾತ್ರೆ; ಕಾಲ್ನಡಿಗೆಯಲ್ಲೇ ಬೋಲೆನಾಥನ ದರ್ಶನ ಪಡೆದ ಶೋಭಾ ಕರಂದ್ಲಾಜೆ
ಅಮರನಾಥ ಯಾತ್ರೆ; ಕಾಲ್ನಡಿಗೆಯಲ್ಲೇ ಬೋಲೆನಾಥನ ದರ್ಶನ ಪಡೆದ ಶೋಭಾ ಕರಂದ್ಲಾಜೆ
ಸಿಎಂ ಬದಲಾವಣೆ ಟಿವಿ ಡಿಬೇಟ್​ಗಳನ್ನು ವೀಕ್ಷಿಸುತ್ತಿದ್ದೇನೆ: ಹರಿಪ್ರಸಾದ್
ಸಿಎಂ ಬದಲಾವಣೆ ಟಿವಿ ಡಿಬೇಟ್​ಗಳನ್ನು ವೀಕ್ಷಿಸುತ್ತಿದ್ದೇನೆ: ಹರಿಪ್ರಸಾದ್
ಅಮರನಾಥ ಗುಹೆಯ ಹಿಮಲಿಂಗಕ್ಕೆ ಇಂದು ಮೊದಲ ಆರತಿ; ಭಕ್ತರ ಹರ್ಷೋದ್ಘಾರ
ಅಮರನಾಥ ಗುಹೆಯ ಹಿಮಲಿಂಗಕ್ಕೆ ಇಂದು ಮೊದಲ ಆರತಿ; ಭಕ್ತರ ಹರ್ಷೋದ್ಘಾರ
ಜನರಿಗೆ ತಮ್ಮ ಮನೆಯಲ್ಲೇ ಭೂದಾಖಲೆಗಳು ಸಿಗುವಂತಾಗಬೇಕು: ಕೃಷ್ಣ ಭೈರೇಗೌಡ
ಜನರಿಗೆ ತಮ್ಮ ಮನೆಯಲ್ಲೇ ಭೂದಾಖಲೆಗಳು ಸಿಗುವಂತಾಗಬೇಕು: ಕೃಷ್ಣ ಭೈರೇಗೌಡ
ಆಸ್ಪತ್ರೆಯಲ್ಲಿ ಡೇಟಾ ಆಪರೇಟರ್ ಆಗಿದ್ದ ಹರೀಶ್​ಗೆ ಮದುವೆ ಇಷ್ಟವಿರಲಿಲ್ಲವೇ?
ಆಸ್ಪತ್ರೆಯಲ್ಲಿ ಡೇಟಾ ಆಪರೇಟರ್ ಆಗಿದ್ದ ಹರೀಶ್​ಗೆ ಮದುವೆ ಇಷ್ಟವಿರಲಿಲ್ಲವೇ?
ಹಾಸನ ವ್ಯಕ್ತಿಯ ಮರಣೋತ್ತರ ಪರೀಕ್ಷೆಯಲ್ಲಿ ಸ್ಫೋಟಕ ಅಂಶ ಬಯಲು
ಹಾಸನ ವ್ಯಕ್ತಿಯ ಮರಣೋತ್ತರ ಪರೀಕ್ಷೆಯಲ್ಲಿ ಸ್ಫೋಟಕ ಅಂಶ ಬಯಲು
ಕೆಪಿಸಿಸಿಯಿಂದ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರಿಗೆ ದೂರು
ಕೆಪಿಸಿಸಿಯಿಂದ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರಿಗೆ ದೂರು