AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಿವ್ಯಾ ಉರುಡುಗ ನನಗೆ ತಂಗಿ ಇದ್ದಂತೆ; ಎಲ್ಲರೆದುರು ಒಪ್ಪಿಕೊಂಡ ಪ್ರಶಾಂತ್​ ಸಂಬರಗಿ

ಟಾಸ್ಕ್​ ನಡೆಯುವಾಗ ನಿನ್ನ ಗರ್ಲ್​ಫ್ರೆಂಡ್​ ಮೇಲೆ ಕೈ ಹಾಕಿದ್ದಕ್ಕೆ ಬೇಜಾರು ಆಗಿರೋದಾ ಎಂದು ಅರವಿಂದ್​ ಅವರನ್ನು ಪ್ರಶ್ನೆ ಮಾಡಿದ್ದರು ಪ್ರಶಾಂತ್​. ಇದಕ್ಕೆ ಸಿಟ್ಟಾಗಿದ್ದ ದಿವ್ಯಾ, ಏಯ್​ ನೆಟ್ಟಗೆ ಮಾತನಾಡಿದ್ರೆ ಮಾತನಾಡುತ್ತೇನೆ ಎಂದು ಆವಾಜ್​ ಹಾಕಿದ್ದರು.

ದಿವ್ಯಾ ಉರುಡುಗ ನನಗೆ ತಂಗಿ ಇದ್ದಂತೆ; ಎಲ್ಲರೆದುರು ಒಪ್ಪಿಕೊಂಡ ಪ್ರಶಾಂತ್​ ಸಂಬರಗಿ
ಪ್ರಶಾಂತ್​ ಸಂಬರಗಿ-ದಿವ್ಯಾ ಉರುಡುಗ
ರಾಜೇಶ್ ದುಗ್ಗುಮನೆ
|

Updated on: Apr 02, 2021 | 3:12 PM

Share

ಪ್ರಶಾಂತ್​ ಸಂಬರಗಿ ಆರಂಭದ ದಿನಗಳಲ್ಲಿ ದಿವ್ಯಾ ಉರುಡುಗ ಜತೆ ಹೆಚ್ಚು ಆಪ್ತರಾಗಿದ್ದರು. ಇದನ್ನು ನೋಡಿದ ಪ್ರೇಕ್ಷಕರು ಗಾಸಿಪ್​ ಆರಂಭಿಸಿದ್ದರು. ಅವರ ಸಂಬಂಧ ಎಂತಹುದು ಎಂದು ಅನೇಕರು ಕೇಳಿಕೊಂಡಿದ್ದರು. ಆದರೆ, ಐದನೇ ವಾರಕ್ಕೆ ಇಬ್ಬರ ನಡುವೆ ಮುಚ್ಚಲಾರದಷ್ಟು ದೊಡ್ಡದಾದ ಕಂದಕ ಬಿದ್ದಿದೆ. ಮನೆಯಲ್ಲಿ ಇಬ್ಬರ ನಡುವೆ ದೊಡ್ಡ ರಾಮಾಯಣವೇ ನಡೆದು ಹೋಗಿದೆ.

ಟಾಸ್ಕ್​ ನಡೆಯುವಾಗ ನಿನ್ನ ಗರ್ಲ್​ಫ್ರೆಂಡ್​ ಮೇಲೆ ಕೈ ಹಾಕಿದ್ದಕ್ಕೆ ಬೇಜಾರು ಆಗಿರೋದಾ ಎಂದು ಅರವಿಂದ್​ ಅವರನ್ನು ಪ್ರಶ್ನೆ ಮಾಡಿದ್ದರು ಪ್ರಶಾಂತ್​. ಇದಕ್ಕೆ ಸಿಟ್ಟಾಗಿದ್ದ ದಿವ್ಯಾ, ಏಯ್​ ನೆಟ್ಟಗೆ ಮಾತನಾಡಿದ್ರೆ ಮಾತನಾಡುತ್ತೇನೆ. ನೀವು ಅರವಿಂದ್​ ಜತೆ ನನ್ನ ಹೆಸರನ್ನು ಏಕೆ ತಳುಕು ಹಾಕಿದ್ರಿ? ನಾನು ಅರವಿಂದ್​ ಗರ್ಲ್​ಫ್ರೆಂಡ್​ ಆಗಿರಬಹುದು, ತಂಗಿ ಆಗಿರಬಹುದು ಅಥವಾ ಹೆಂಡತೀನೂ ಆಗಿರಬಹುದು. ನೀವು ನನ್ನ ಹೆಸರನ್ನು ಮಧ್ಯೆ ತರುವ ಹಾಗೇ ಇಲ್ಲ ಎಂದು ಪ್ರಶಾಂತ್​ಗೆ ಹೇಳಿದರು.

ಆಗ ಮಾತನಾಡಿದ ಪ್ರಶಾಂತ್​, ನಾನೆಲ್ಲೂ ದಿವ್ಯಾ ಹೆಸರನ್ನೇ ಹೇಳಿಲ್ಲ. ಕಳ್ಳನ ಮನಸ್ಸು ಹುಳ್ಳುಳ್ಳಗೆ. ನಾನು ಹೇಳಿದ್ದರಲ್ಲಿ ತಪ್ಪೇನು ಇಲ್ಲ ಎಂದು ಸಮರ್ಥಿಸಿಕೊಂಡರು. ಇದಾದ ನಂತರ ಮತ್ತೊಮ್ಮೆ ಸಂಬರಗಿ ಜತೆ ದಿವ್ಯಾ ಉರುಡುಗ ಮಾತುಕತೆ ನಡೆಸಿದ್ದಾರೆ. ಆಗ ದಿವ್ಯಾ ಅವರನ್ನು ಹೇಗೆ ನೋಡುತ್ತಿದ್ದೇನೆ ಎನ್ನುವ ಬಗ್ಗೆ ಪ್ರಶಾಂತ್​ ಮಾತನಾಡಿದ್ದಾರೆ. ನಾನು ದಿವ್ಯಾ ಅವರನ್ನು ತಂಗಿಯಂತೆ ನೋಡುತ್ತಿದ್ದೇನೆ. ನನ್ನ ಬಗ್ಗೆ ಎಲ್ಲರೂ ತಪ್ಪಾಗಿ ಭಾವಿಸುತ್ತಿದ್ದಾರೆ ಎಂದು ಅಳಲು ತೋಡಿಕೊಂಡರು.

ಆದಾಗ್ಯೂ ದಿವ್ಯಾ ಉರುಡುಗ ಸುಮ್ಮನಾಗಲಿಲ್ಲ. ನೀವು ನಿಜವಾಗಲೂ ನನ್ನನ್ನು ತಂಗಿಯಂತೆ  ನೋಡುತ್ತಿದ್ದರೆ ಖಂಡಿತವಾಗಿಯೂ ಈ ರೀತಿ ಮಾಡುತ್ತಲೇ ಇರಲಿಲ್ಲ. ಬೇರೆಯವರ ಜತೆ ನನ್ನ ಹೆಸರನ್ನು ಹೇಳಿ ಗೇಲಿ ಮಾಡುತ್ತಿರಲಿಲ್ಲ ಎಂದು ಖಡಕ್​ ಆಗಿ ಉತ್ತರಿಸಿದರು. ಆಗ ಪ್ರಶಾಂತ್​ ಸಂಬರಗಿಗೆ ಏನು ಉತ್ತರ ಹೇಳಬೇಕು ಎನ್ನುವುದೇ ಗೊತ್ತಾಗದೆ ತಡವರಿಸಿದರು.

ಇದನ್ನೂ ಓದಿ: ದಿವ್ಯಾ ಉರುಡುಗ ಸೆಳೆತದಲ್ಲಿ ಬಿಗ್​ ಬಾಸ್​ ಮನೆಗೆ ಬಂದ ಉದ್ದೇಶವನ್ನೇ ಮರೆತರಾ ಅರವಿಂದ್?

 ದಿವ್ಯಾ ಉರುಡುಗ ಸೆಳೆತದಲ್ಲಿ ಬಿಗ್​ ಬಾಸ್​ ಮನೆಗೆ ಬಂದ ಉದ್ದೇಶವನ್ನೇ ಮರೆತರಾ ಅರವಿಂದ್?

Follow Us
ಅಂಗವಿಕಲನಂತೆ ನಟಿಸಿ ಮೊಬೈಲ್ ಕದಿಯುತ್ತಿದ್ದ ಉತ್ತರ ಪ್ರದೇಶದ ಭಿಕ್ಷುಕ ಸೆರೆ
ಅಂಗವಿಕಲನಂತೆ ನಟಿಸಿ ಮೊಬೈಲ್ ಕದಿಯುತ್ತಿದ್ದ ಉತ್ತರ ಪ್ರದೇಶದ ಭಿಕ್ಷುಕ ಸೆರೆ
ಕಾವೇರಿ ವಿವಾದ ನಡುವೆಯೂ ವಿಜಯ್ ಸ್ವಾಗತಕ್ಕೆ ವಿಧಾನಸೌಧದಲ್ಲಿ ಭರದ ಸಿದ್ಧತೆ!
ಕಾವೇರಿ ವಿವಾದ ನಡುವೆಯೂ ವಿಜಯ್ ಸ್ವಾಗತಕ್ಕೆ ವಿಧಾನಸೌಧದಲ್ಲಿ ಭರದ ಸಿದ್ಧತೆ!
ಕಾವೇರಿ ನೀರು ಹಂಚಿಕೆ ವಿವಾದ: ಸಚಿವ ರಾಮಲಿಂಗಾ ರೆಡ್ಡಿ ತುರ್ತು ಸಭೆ
ಕಾವೇರಿ ನೀರು ಹಂಚಿಕೆ ವಿವಾದ: ಸಚಿವ ರಾಮಲಿಂಗಾ ರೆಡ್ಡಿ ತುರ್ತು ಸಭೆ
ಗುರು ಪೂರ್ಣಿಮೆ 2026: ಸಾಯಿಬಾಬಾ ದರ್ಶನಕ್ಕೆ ಭಕ್ತ ಸಾಗರ
ಗುರು ಪೂರ್ಣಿಮೆ 2026: ಸಾಯಿಬಾಬಾ ದರ್ಶನಕ್ಕೆ ಭಕ್ತ ಸಾಗರ
ದೆಹಲಿಗೆ ತೆರಳಿದ ಜಮೀರ್​; ರಾಹುಲ್ ಗಾಂಧಿ ಭೇಟಿ ಸಾಧ್ಯತೆ
ದೆಹಲಿಗೆ ತೆರಳಿದ ಜಮೀರ್​; ರಾಹುಲ್ ಗಾಂಧಿ ಭೇಟಿ ಸಾಧ್ಯತೆ
ತಮಿಳುನಾಡಿಗೆ ನೀರು ಬಿಡುವಂತೆ ಆದೇಶಿಸಿದ್ದು ಸರಿಯಲ್ಲ: ದರ್ಶನ ಪುಟ್ಟಣಯ್ಯ
ತಮಿಳುನಾಡಿಗೆ ನೀರು ಬಿಡುವಂತೆ ಆದೇಶಿಸಿದ್ದು ಸರಿಯಲ್ಲ: ದರ್ಶನ ಪುಟ್ಟಣಯ್ಯ
ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ಖಂಡಿಸಿ ಅನ್ನದಾತರ ಆಕ್ರೋಶ
ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ಖಂಡಿಸಿ ಅನ್ನದಾತರ ಆಕ್ರೋಶ
ಮಾದಪ್ಪನ ಹುಂಡಿಯಲ್ಲಿ ಕೋಟಿ ಕೋಟಿ ಕಾಣಿಕೆ ಸಂಗ್ರಹ!
ಮಾದಪ್ಪನ ಹುಂಡಿಯಲ್ಲಿ ಕೋಟಿ ಕೋಟಿ ಕಾಣಿಕೆ ಸಂಗ್ರಹ!
ಕಾವೇರಿ ವಿವಾದ: ಮಂಡ್ಯದಲ್ಲಿ ರೈತರ ಆಕ್ರೋಶ, ರಾತ್ರಿ ಪಂಜಿನ ಪ್ರತಿಭಟನೆ
ಕಾವೇರಿ ವಿವಾದ: ಮಂಡ್ಯದಲ್ಲಿ ರೈತರ ಆಕ್ರೋಶ, ರಾತ್ರಿ ಪಂಜಿನ ಪ್ರತಿಭಟನೆ
ಇಂದು ಗುರು ಪೂರ್ಣಿಮೆ ಶುಭ ದಿನ: ಮೇಷಾದಿ 12 ರಾಶಿಗಳ ದಿನ ಭವಿಷ್ಯ
ಇಂದು ಗುರು ಪೂರ್ಣಿಮೆ ಶುಭ ದಿನ: ಮೇಷಾದಿ 12 ರಾಶಿಗಳ ದಿನ ಭವಿಷ್ಯ