AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಿವ್ಯಾ ಉರುಡುಗ ನನಗೆ ತಂಗಿ ಇದ್ದಂತೆ; ಎಲ್ಲರೆದುರು ಒಪ್ಪಿಕೊಂಡ ಪ್ರಶಾಂತ್​ ಸಂಬರಗಿ

ಟಾಸ್ಕ್​ ನಡೆಯುವಾಗ ನಿನ್ನ ಗರ್ಲ್​ಫ್ರೆಂಡ್​ ಮೇಲೆ ಕೈ ಹಾಕಿದ್ದಕ್ಕೆ ಬೇಜಾರು ಆಗಿರೋದಾ ಎಂದು ಅರವಿಂದ್​ ಅವರನ್ನು ಪ್ರಶ್ನೆ ಮಾಡಿದ್ದರು ಪ್ರಶಾಂತ್​. ಇದಕ್ಕೆ ಸಿಟ್ಟಾಗಿದ್ದ ದಿವ್ಯಾ, ಏಯ್​ ನೆಟ್ಟಗೆ ಮಾತನಾಡಿದ್ರೆ ಮಾತನಾಡುತ್ತೇನೆ ಎಂದು ಆವಾಜ್​ ಹಾಕಿದ್ದರು.

ದಿವ್ಯಾ ಉರುಡುಗ ನನಗೆ ತಂಗಿ ಇದ್ದಂತೆ; ಎಲ್ಲರೆದುರು ಒಪ್ಪಿಕೊಂಡ ಪ್ರಶಾಂತ್​ ಸಂಬರಗಿ
ಪ್ರಶಾಂತ್​ ಸಂಬರಗಿ-ದಿವ್ಯಾ ಉರುಡುಗ
ರಾಜೇಶ್ ದುಗ್ಗುಮನೆ
|

Updated on: Apr 02, 2021 | 3:12 PM

Share

ಪ್ರಶಾಂತ್​ ಸಂಬರಗಿ ಆರಂಭದ ದಿನಗಳಲ್ಲಿ ದಿವ್ಯಾ ಉರುಡುಗ ಜತೆ ಹೆಚ್ಚು ಆಪ್ತರಾಗಿದ್ದರು. ಇದನ್ನು ನೋಡಿದ ಪ್ರೇಕ್ಷಕರು ಗಾಸಿಪ್​ ಆರಂಭಿಸಿದ್ದರು. ಅವರ ಸಂಬಂಧ ಎಂತಹುದು ಎಂದು ಅನೇಕರು ಕೇಳಿಕೊಂಡಿದ್ದರು. ಆದರೆ, ಐದನೇ ವಾರಕ್ಕೆ ಇಬ್ಬರ ನಡುವೆ ಮುಚ್ಚಲಾರದಷ್ಟು ದೊಡ್ಡದಾದ ಕಂದಕ ಬಿದ್ದಿದೆ. ಮನೆಯಲ್ಲಿ ಇಬ್ಬರ ನಡುವೆ ದೊಡ್ಡ ರಾಮಾಯಣವೇ ನಡೆದು ಹೋಗಿದೆ.

ಟಾಸ್ಕ್​ ನಡೆಯುವಾಗ ನಿನ್ನ ಗರ್ಲ್​ಫ್ರೆಂಡ್​ ಮೇಲೆ ಕೈ ಹಾಕಿದ್ದಕ್ಕೆ ಬೇಜಾರು ಆಗಿರೋದಾ ಎಂದು ಅರವಿಂದ್​ ಅವರನ್ನು ಪ್ರಶ್ನೆ ಮಾಡಿದ್ದರು ಪ್ರಶಾಂತ್​. ಇದಕ್ಕೆ ಸಿಟ್ಟಾಗಿದ್ದ ದಿವ್ಯಾ, ಏಯ್​ ನೆಟ್ಟಗೆ ಮಾತನಾಡಿದ್ರೆ ಮಾತನಾಡುತ್ತೇನೆ. ನೀವು ಅರವಿಂದ್​ ಜತೆ ನನ್ನ ಹೆಸರನ್ನು ಏಕೆ ತಳುಕು ಹಾಕಿದ್ರಿ? ನಾನು ಅರವಿಂದ್​ ಗರ್ಲ್​ಫ್ರೆಂಡ್​ ಆಗಿರಬಹುದು, ತಂಗಿ ಆಗಿರಬಹುದು ಅಥವಾ ಹೆಂಡತೀನೂ ಆಗಿರಬಹುದು. ನೀವು ನನ್ನ ಹೆಸರನ್ನು ಮಧ್ಯೆ ತರುವ ಹಾಗೇ ಇಲ್ಲ ಎಂದು ಪ್ರಶಾಂತ್​ಗೆ ಹೇಳಿದರು.

ಆಗ ಮಾತನಾಡಿದ ಪ್ರಶಾಂತ್​, ನಾನೆಲ್ಲೂ ದಿವ್ಯಾ ಹೆಸರನ್ನೇ ಹೇಳಿಲ್ಲ. ಕಳ್ಳನ ಮನಸ್ಸು ಹುಳ್ಳುಳ್ಳಗೆ. ನಾನು ಹೇಳಿದ್ದರಲ್ಲಿ ತಪ್ಪೇನು ಇಲ್ಲ ಎಂದು ಸಮರ್ಥಿಸಿಕೊಂಡರು. ಇದಾದ ನಂತರ ಮತ್ತೊಮ್ಮೆ ಸಂಬರಗಿ ಜತೆ ದಿವ್ಯಾ ಉರುಡುಗ ಮಾತುಕತೆ ನಡೆಸಿದ್ದಾರೆ. ಆಗ ದಿವ್ಯಾ ಅವರನ್ನು ಹೇಗೆ ನೋಡುತ್ತಿದ್ದೇನೆ ಎನ್ನುವ ಬಗ್ಗೆ ಪ್ರಶಾಂತ್​ ಮಾತನಾಡಿದ್ದಾರೆ. ನಾನು ದಿವ್ಯಾ ಅವರನ್ನು ತಂಗಿಯಂತೆ ನೋಡುತ್ತಿದ್ದೇನೆ. ನನ್ನ ಬಗ್ಗೆ ಎಲ್ಲರೂ ತಪ್ಪಾಗಿ ಭಾವಿಸುತ್ತಿದ್ದಾರೆ ಎಂದು ಅಳಲು ತೋಡಿಕೊಂಡರು.

ಆದಾಗ್ಯೂ ದಿವ್ಯಾ ಉರುಡುಗ ಸುಮ್ಮನಾಗಲಿಲ್ಲ. ನೀವು ನಿಜವಾಗಲೂ ನನ್ನನ್ನು ತಂಗಿಯಂತೆ  ನೋಡುತ್ತಿದ್ದರೆ ಖಂಡಿತವಾಗಿಯೂ ಈ ರೀತಿ ಮಾಡುತ್ತಲೇ ಇರಲಿಲ್ಲ. ಬೇರೆಯವರ ಜತೆ ನನ್ನ ಹೆಸರನ್ನು ಹೇಳಿ ಗೇಲಿ ಮಾಡುತ್ತಿರಲಿಲ್ಲ ಎಂದು ಖಡಕ್​ ಆಗಿ ಉತ್ತರಿಸಿದರು. ಆಗ ಪ್ರಶಾಂತ್​ ಸಂಬರಗಿಗೆ ಏನು ಉತ್ತರ ಹೇಳಬೇಕು ಎನ್ನುವುದೇ ಗೊತ್ತಾಗದೆ ತಡವರಿಸಿದರು.

ಇದನ್ನೂ ಓದಿ: ದಿವ್ಯಾ ಉರುಡುಗ ಸೆಳೆತದಲ್ಲಿ ಬಿಗ್​ ಬಾಸ್​ ಮನೆಗೆ ಬಂದ ಉದ್ದೇಶವನ್ನೇ ಮರೆತರಾ ಅರವಿಂದ್?

 ದಿವ್ಯಾ ಉರುಡುಗ ಸೆಳೆತದಲ್ಲಿ ಬಿಗ್​ ಬಾಸ್​ ಮನೆಗೆ ಬಂದ ಉದ್ದೇಶವನ್ನೇ ಮರೆತರಾ ಅರವಿಂದ್?

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ