AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಿವ್ಯಾ ಉರುಡುಗ ಸೆಳೆತದಲ್ಲಿ ಬಿಗ್​ ಬಾಸ್​ ಮನೆಗೆ ಬಂದ ಉದ್ದೇಶವನ್ನೇ ಮರೆತರಾ ಅರವಿಂದ್?

ಅಚ್ಚರಿ ಎಂಬಂತೆ ಅರವಿಂದ್​ಗೆ ದಿವ್ಯಾ ಉರುಡುಗ ಹತ್ತಿರವಾಗಿದ್ದರು. ಜೋಡಿ ಟಾಸ್ಕ್​ ಪೂರ್ಣಗೊಂಡ ನಂತರ ಇಬ್ಬರೂ ಒಟ್ಟಾಗಿರುತ್ತಿದ್ದಾರೆ. ಇವರಿಬ್ಬರ ನಡುವೆ ಬಲವಾದ ಸೆಳೆತವಿದೆ ಎಂಬುದನ್ನು ಮನೆಯವರು ಹೇಳುವುದು ಮಾತ್ರವಲ್ಲ ಇವರೂ ಒಪ್ಪಿಕೊಂಡಿದ್ದಾರೆ.

ದಿವ್ಯಾ ಉರುಡುಗ ಸೆಳೆತದಲ್ಲಿ ಬಿಗ್​ ಬಾಸ್​ ಮನೆಗೆ ಬಂದ ಉದ್ದೇಶವನ್ನೇ ಮರೆತರಾ ಅರವಿಂದ್?
ದಿವ್ಯಾ ಉರುಡುಗ-ಅರವಿಂದ್ ಕೆಪಿ
ರಾಜೇಶ್ ದುಗ್ಗುಮನೆ
|

Updated on: Apr 01, 2021 | 7:26 PM

Share

ಉಡುಪಿ ಮೂಲದ ಅರವಿಂದ್ ಕೆ.ಪಿ. ಬಿಗ್​ ಬಾಸ್​ ಮನೆ ಪ್ರವೇಶಿಸಿದಾಗ ವೀಕ್ಷಕರಲ್ಲಿ ಸಾಕಷ್ಟು ನಿರೀಕ್ಷೆಗಳು ಮೂಡಿದ್ದವು. ವೃತ್ತಿಪರ ಬೈಕರ್ ಆಗಿರುವ ಅವರ ಕ್ರೀಡಾಸ್ಫೂರ್ತಿ ನೋಡಿ ಎಲ್ಲರೂ ಮೆಚ್ಚಿಕೊಂಡಿದ್ದರು. ಅವರ ಗಾಂಭೀರ್ಯತೆ ಎಲ್ಲರಿಗೂ ಇಷ್ಟವಾಗಿತ್ತು. ಆದರೆ, ಈಗ ಅರವಿಂದ್​ ಕೆ.ಪಿ. ಬಿಗ್​ ಬಾಸ್​ ಮನೆಯಲ್ಲಿ ಮೊದಲಿನ ರೀತಿ ಇಲ್ಲ. ಪ್ರೀತಿಯ ಸೆಳೆತದಲ್ಲಿ ಅವರು ದಿಕ್ಕು ತಪ್ಪುತ್ತಿದ್ದಾರೆ. ಈ ಮಾತನ್ನು ನಾವು ಹೇಳುತ್ತಿಲ್ಲ. ಹೀಗೆ ಅಭಿಪ್ರಾಯ ಹೊರ ಹಾಕಿದ್ದು ಪ್ರೇಕ್ಷಕರು. ಬಿಗ್​ ಬಾಸ್​ ಮನೆ ಪ್ರವೇಶಿಸುವಾಗ ಒಂದು ಹೂವಿನ ಬೊಕ್ಕೆ ನೀಡಿ ಅದನ್ನು ಮನೆಯ ಒಳಗೆ ಯಾರಿಗಾದರೂ ನೀಡಿ ಎಂದು ಕಿಚ್ಚ ಸುದೀಪ್​ ಹೇಳಿದ್ದರು. ಈ ಹೂಗುಚ್ಚವನ್ನು ದಿವ್ಯಾ ಸುರೇಶ್​ಗೆ ನೀಡಬೇಕು ಎನ್ನುವುದು ಅರವಿಂದ್ ಉದ್ದೇಶವಾಗಿತ್ತು. ಆದರೆ, ಮಂಜುಗೆ ದಿವ್ಯಾ ಸುರೇಶ್​ ಹತ್ತಿರವಾಗಿದ್ದರು.

ಅಚ್ಚರಿ ಎಂಬಂತೆ ಅರವಿಂದ್​ಗೆ ದಿವ್ಯಾ ಉರುಡುಗ ಹತ್ತಿರವಾಗಿದ್ದರು. ಜೋಡಿ ಟಾಸ್ಕ್​ ಪೂರ್ಣಗೊಂಡ ನಂತರ ಇಬ್ಬರೂ ಒಟ್ಟಾಗಿರುತ್ತಿದ್ದಾರೆ. ಇವರಿಬ್ಬರ ನಡುವೆ ಬಲವಾದ ಸೆಳೆತವಿದೆ ಎಂಬುದನ್ನು ಮನೆಯವರು ಹೇಳುವುದು ಮಾತ್ರವಲ್ಲ ಇವರೂ ಒಪ್ಪಿಕೊಂಡಿದ್ದಾರೆ. ಮನೆಯಿಂದ ಹೊರ ಬಿದ್ದ ನಂತರ ಇಬ್ಬರ ಮದುವೆ ನಡೆದರೂ ಅಚ್ಚರಿ ಇಲ್ಲ ಎನ್ನುವಷ್ಟು ಇಬ್ಬರೂ ಹತ್ತಿರವಾಗಿದ್ದಾರೆ.

ಆದರೆ, ಇತ್ತೀಚೆಗೆ ಬಿಗ್​ ಬಾಸ್​ ಮನೆಯಲ್ಲಿ ಅರವಿಂದ್​ ತಮ್ಮ ಮೂಲ ಉದ್ದೇಶ ಮರೆತಿರುವುದು ಪ್ರೇಕ್ಷಕರಿಗೆ ಸ್ಪಷ್ಟವಾಗುತ್ತಿದೆ. ಯಾವುದೇ ಗೇಮ್​ ಇರಲಿ, ಅವರು ಉತ್ತಮವಾಗಿ ಆಡುತ್ತಾರೆ. ಆದರೆ, ಕೆಲವೊಮ್ಮೆ ಆಟದ ಬಗ್ಗೆ ತೋರಿಸುವುದಕ್ಕಿಂತ ಆಸಕ್ತಿಯನ್ನು ದಿವ್ಯಾಗೆ ತೋರಿಸುತ್ತಿದ್ದಾರೆ.

ಆಟ ಆಡುವಾಗ ದಿವ್ಯಾಗೆ ಯಾರಾದರೂ ಮೈಮುಟ್ಟಿದರೆ ಅಥವಾ ಅವರ ಜತೆಗೆ ತಪ್ಪಾಗಿ ನಡೆದುಕೊಂಡರೆ ಅರವಿಂದ್​ ನೇರವಾಗಿ ಅವರ ವಿರುದ್ಧ ತಿರುಗಿ ಬೀಳುತ್ತಿದ್ದಾರೆ. ನಾನು ಅವರ ಮೈಮುಟ್ಟಿದೆ ಎಂದು ನಿನಗೆ ಬೇಸರವೇ ಎಂದು ಪ್ರಶಾಂತ್​ ಸಂಬರಗಿ ಅರವಿಂದ್​ಗೆ ನೇರವಾಗಿ ಪ್ರಶ್ನಿಸಿದ್ದು ಉತ್ತಮ ಉದಾಹರಣೆ.

ಪ್ರತಿ ಸ್ಪರ್ಧಿಯೂ ತಾನು ಬಿಗ್​ ಬಾಸ್ ಗೆಲ್ಲಬೇಕು ಎನ್ನುವ ಉದ್ದೇಶ ಇಟ್ಟುಕೊಂಡು ಬಂದಿರುತ್ತಾರೆ. ಅರವಿಂದ್​ ಅವರಲ್ಲಿ ಈ ಆಸೆ ಅದಮ್ಯವಾಗಿತ್ತು. ಆದರೆ, ಇತ್ತೀಚೆಗೆ ಅವರ ಆದ್ಯತೆ ಬದಲಾಗುತ್ತಿರುವುದು ವೀಕ್ಷಕರಿಗೆ ಸ್ಪಷ್ಟವಾಗುತ್ತಿದೆ. ಈ ಬಾರಿ ಅವರು ಡೇಂಜರ್​ ಜೋನ್​ನಲ್ಲಿ ಇರುವುದರಿಂದ ಅತ್ಯುತ್ತಮ ಪರ್ಫಾರ್ಮೆನ್ಸ್​ ಕೊಡಲೇಬೇಕಿದೆ.

ಇದನ್ನೂ ಓದಿ: ಎಷ್ಟೇ ಹೇಳಿದರೂ ಬಿಗ್​ ಬಾಸ್​ ನಿಯಮ ಉಲ್ಲಂಘನೆ ಮಾಡಿದ ದಿವ್ಯಾ ಉರುಡುಗಗೆ ಯಾವ ಶಿಕ್ಷೆ?

Bigg Boss Kannada: ಬಿಗ್​ ಬಾಸ್​ ಮನೆಗೆ ವೈಲ್ಡ್​ ಕಾರ್ಡ್​ ಎಂಟ್ರಿ; ಯಾರದು?

Follow Us
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ