AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rajinikanth: ಸೂಪರ್​ಸ್ಟಾರ್​ ರಜನಿಕಾಂತ್​ ಸ್ಯಾಂಡಲ್​ವುಡ್​ನಲ್ಲಿ ಅವಕಾಶಕ್ಕಾಗಿ ಕಾಯುತ್ತಿದ್ದ ಆ ದಿನಗಳು!

ವಿಷ್ಣುವರ್ಧನ್​ ಜೊತೆ ನಟಿಸಿದ ‘ಸಹೋದರರ ಸವಾಲ್​’, ‘ಕಿಲಾಡಿ ಕಿಟ್ಟು’, ಅನಂತ್​ನಾಗ್​​ ಜೊತೆ ತೆರೆಹಂಚಿಕೊಂಡ ‘ಮಾತು ತಪ್ಪದ ಮಗ’ ಸಿನಿಮಾದಿಂದ ರಜನಿಕಾಂತ್​ಗೆ ಕನ್ನಡದಲ್ಲಿ ಹೆಚ್ಚು ಜನಪ್ರಿಯತೆ ಸಿಕ್ಕಿತು.

Rajinikanth: ಸೂಪರ್​ಸ್ಟಾರ್​ ರಜನಿಕಾಂತ್​ ಸ್ಯಾಂಡಲ್​ವುಡ್​ನಲ್ಲಿ ಅವಕಾಶಕ್ಕಾಗಿ ಕಾಯುತ್ತಿದ್ದ ಆ ದಿನಗಳು!
ರಜನಿಕಾಂತ್​
ಮದನ್​ ಕುಮಾರ್​
| Updated By: ರಾಜೇಶ್ ದುಗ್ಗುಮನೆ|

Updated on: Apr 01, 2021 | 6:52 PM

Share

ಸಿನಿಮಾ ಕ್ಷೇತ್ರದಲ್ಲಿನ ಸಾಧನೆಯಾಗಿ ಭಾರತ ಸರ್ಕಾರದಿಂದ ಏ.1ರಂದು ಸೂಪರ್​ ಸ್ಟಾರ್​ ರಜನಿಕಾಂತ್ ಅವರಿ​ಗೆ ದಾದಾಸಾಹೇಬ್​ ಫಾಲ್ಕೆ ಪ್ರಶಸ್ತಿ ಘೋಷಣೆ ಆಗಿದೆ. ಅವರಿಗೆ ಕರುನಾಡಿನ ಅನೇಕರು ಅಭಿನಂದನೆ ಸಲ್ಲಿಸುತ್ತಿದ್ದಾರೆ. ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ, ನಟ ಪುನೀತ್​ ರಾಜ್​ಕುಮಾರ್​ ಮುಂತಾದವರು ಶುಭಕೋರಿದ್ದಾರೆ.

ಭಾಷೆ-ರಾಜ್ಯಗಳ ಗಡಿ ಮೀರಿ ಬೆಳೆದ ಕಲಾವಿದ ರಜನಿಕಾಂತ್​. ನಾಲ್ಕೂವರೆ ದಶಕಗಳಿಂದಲೂ ಅಭಿಮಾನಿಗಳನ್ನು ಅವರು ರಂಜಿಸುತ್ತ ಬಂದಿದ್ದಾರೆ. ಸಿನಿಮಾ ಪರದೆಮೇಲೆ ಸೂಪರ್​ ಸ್ಟಾರ್​ ಆಗಿದ್ದರೂ ನಿಜಜೀವನದಲ್ಲಿ ಅವರದ್ದು ಸಿಂಪಲ್​ ವ್ಯಕ್ತಿತ್ವ. ಆ ಕಾರಣದಿಂದಲೂ ಅವರನ್ನು ಎಲ್ಲ ಭಾಷೆಯವರು ಇಷ್ಟಪಡುತ್ತಾರೆ. ಮೂಲತಃ ಕರ್ನಾಟಕದವರಾದ ರಜನಿಕಾಂತ್​ಗೆ ಸಿನಿಮಾರಂಗದಲ್ಲಿ ಹೊಸ ಜೀವನ ನೀಡಿದ್ದು ತಮಿಳುನಾಡು. ಅಲ್ಲಿನ ಜನರು ರಜನಿಯನ್ನು ಉತ್ತುಂಗಕ್ಕೆ ಏರಿಸಿದರು. ಬೇರೆ ಭಾಷೆಯ ಚಿತ್ರರಂಗದಲ್ಲೂ ತಲೈವಾ ಸಖತ್ ಬೇಡಿಕೆ ಸೃಷ್ಟಿ ಮಾಡಿಕೊಂಡರು.

ತಮಿಳು ಮಾತ್ರವಲ್ಲದೆ ಹಿಂದಿ, ತೆಲುಗು, ಮಲಯಾಳಂ ಮತ್ತು ಕನ್ನಡ ಸಿನಿಮಾಗಳಲ್ಲೂ ರಜನಿ ನಟಿಸಿದ್ದಾರೆ. ಆದರೆ ಹೆಚ್ಚು ಬಣ್ಣ ಹಚ್ಚಿದ್ದು ಕಾಲಿವುಡ್​ನಲ್ಲಿ. ಆರಂಭದ ದಿನಗಳಲ್ಲಿ ಕನ್ನಡ ಚಿತ್ರರಂಗದ ಜೊತೆ ಹೆಚ್ಚು ಸಂಪರ್ಕ ಹೊಂದಿದ್ದ ರಜನಿಗೆ ಅನೇಕ ಅವಕಾಶಗಳು ಸಿಕ್ಕವು. ಚಿಕ್ಕ ಪಾತ್ರವೇ ಆದರೂ ಆ ಅವಕಾಶಗಳನ್ನು ರಜನಿ ಚೆನ್ನಾಗಿ ಬಳಸಿಕೊಂಡರು. ಕೆಲವು ಕನ್ನಡ ಸಿನಿಮಾಗಳಲ್ಲೂ ಅವರು ಕಾಣಿಸಿಕೊಂಡರು.

ಪುಟ್ಟಣ್ಣ ಕಣಗಾಲ್​ ನಿರ್ದೇಶನದ ‘ಕಥಾ ಸಂಗಮ’ ರಜನಿ ನಟಿಸಿದ ಮೊದಲ ಕನ್ನಡ ಸಿನಿಮಾ. ಅದು 1976ರ ಸಮಯ. ತಮಿಳು ಚಿತ್ರರಂಗದಲ್ಲೂ ಅವರು ಇನ್ನೂ ನೆಲೆ ನಿಂತಿರಲಿಲ್ಲ. ಸ್ಯಾಂಡಲ್​ವುಡ್​ನಿಂದಲೂ ಅವರಿಗೆ ಸಣ್ಣ-ಪುಟ್ಟ ಅವಕಾಶಗಳು ಸಿಗುತ್ತಿದ್ದವು. ಬಾಳು ಜೇನು, ಒಂದು ಪ್ರೇಮದ ಕಥೆ, ಗಲಾಟೆ ಸಂಸಾರ ಮುಂತಾದ ಸಿನಿಮಾಗಳಲ್ಲಿ ನಟಿಸಿದರು.

ವಿಷ್ಣುವರ್ಧನ್​ ಜೊತೆ ನಟಿಸಿದ ‘ಸಹೋದರರ ಸವಾಲ್​’, ‘ಕಿಲಾಡಿ ಕಿಟ್ಟು’, ಅನಂತ್​ನಾಗ್​​ ಜೊತೆ ತೆರೆಹಂಚಿಕೊಂಡ ‘ಮಾತು ತಪ್ಪದ ಮಗ’ ಸಿನಿಮಾದಿಂದ ರಜನಿಕಾಂತ್​ಗೆ ಕನ್ನಡದಲ್ಲಿ ಹೆಚ್ಚು ಜನಪ್ರಿಯತೆ ಸಿಕ್ಕಿತು. ಆದರೆ ಅದಕ್ಕೂ ಮಿಗಿಲಾಗಿ ಅವರು ಕಾಲಿವುಡ್​ನಲ್ಲಿ ಮಿಂಚಲು ಆರಂಭಿಸಿದ್ದರು. ಮೊದಲು ಸಾಲು ಸಾಲು ನೆಗೆಟಿವ್​ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಅವರಿಗೆ ನಂತರ ಹೀರೋ ಪಾತ್ರಗಳು ಒಲಿದುಬರಲು ಆರಂಭಿಸಿದವು. ತಮಿಳು ಚಿತ್ರರಂಗ ಅವರನ್ನು ಕೈ ಹಿಡಿಯಿತು. ಪರಿಣಾಮ, ಸ್ಯಾಂಡಲ್​ವುಡ್​ ಕಡೆಗೆ ಅವರ ಗಮನ ಕಡಿಮೆ ಆಯಿತು. ಕನ್ನಡದಲ್ಲಿ ರಜನಿಕಾಂತ್ ನಟಿಸಿದ ಕೊನೇ ಸಿನಿಮಾ 1981ರಲ್ಲಿ ತೆರೆಕಂಡ ‘ಘರ್ಜನೆ’.

ಆ ಬಳಿಕ ರಜನಿಕಾಂತ್​ ಕನ್ನಡ ಸಿನಿಮಾಗಳಲ್ಲಿ ನಟಿಸಲಿಲ್ಲವಾದರೂ ಸ್ಯಾಂಡಲ್​ವುಡ್​ ಕಲಾವಿದರ ಜೊತೆ ಅವರು ಇಂದಿಗೂ ಉತ್ತಮ ಒಡನಾಟ ಇಟ್ಟುಕೊಂಡಿದ್ದಾರೆ. ರಾಜ್​ಕುಮಾರ್​ ಬಗ್ಗೆ ಅವರಿಗೆ ತುಂಬ ಅಭಿಮಾನವಿತ್ತು. ಈವರೆಗೂ ರಜನಿ ಅವರು ಆಟೋಗ್ರಾಫ್​ ಪಡೆದುಕೊಂಡಿರುವುದು ಅಣ್ಣಾವ್ರ ಬಳಿ ಮಾತ್ರ. ಡಾ. ರಾಜ್​ ರೀತಿಯೇ ರಜನಿಕಾಂತ್ ಕೂಡ ಸರಳತೆಯನ್ನು ಮೌಗೂಡಿಸಿಕೊಂಡರು. ವಿಷ್ಣುವರ್ಧನ್​, ಅಂಬರೀಷ್​ ಮುಂತಾದ ಕಲಾವಿದರ ಜೊತೆಗೆ ಅವರಿಗೆ ಉತ್ತರ ಸ್ನೇಹವಿತ್ತು.

ಇದನ್ನೂ ಓದಿ: Rajinikanth: ರಜನಿಕಾಂತ್​ ಬಾನೆತ್ತರಕ್ಕೆ ಬೆಳೆದರೂ ಕರುನಾಡಿನಲ್ಲೇ ಇದೆ ಈ ಹೆಮ್ಮರದ ಬೇರು!

ರಾಜಕಾರಣದಿಂದ ದೂರ ಹೋಗಬೇಡಿ, ನಿರ್ಧಾರ ಬದಲಿಸಿ: ನಟ ರಜನಿಕಾಂತ್​ಗೆ ಅಭಿಮಾನಿಗಳ ಮನವಿ

(Dadasaheb Phalke awardee Rajinikanth Acted in Kannada movies during early stage of his career)

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ