AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bigg Boss Kannada: ಶುಭಾ ಪೂಂಜಾ ಬಾಯ್​ಫ್ರೆಂಡ್​ ಧ್ವನಿ ಕೇಳಿ ಗಳಗಳನೆ ಅತ್ತ ವಿಶ್ವನಾಥ್​! ಇದೆಂಥಾ ಕನೆಕ್ಷನ್​?

BBK8: ಕಣ್ಣೀರನ್ನು ತಡೆದುಕೊಳ್ಳಲು ಎಷ್ಟೇ ಪ್ರಯತ್ನಿಸಿದರೂ ವಿಶ್ವನಾಥ್​ಗೆ ಸಾಧ್ಯವಾಗಲಿಲ್ಲ. ಅಷ್ಟಕ್ಕೂ ಶುಭಾ ಪೂಂಜಾ ಅವರ ಬಾಯ್​ ಫ್ರೆಂಡ್​ ಧ್ವನಿ ಕೇಳಿ ಈ ಪುಟಾಣಿ ವಿಶ್ವ ಯಾಕೆ ಅಳುತ್ತಿದ್ದಾನೆ ಎಂದು ಮನೆಯ ಎಲ್ಲ ಸದಸ್ಯರಿಗೂ ಪ್ರಶ್ನೆ ಮೂಡಿತು.

Bigg Boss Kannada: ಶುಭಾ ಪೂಂಜಾ ಬಾಯ್​ಫ್ರೆಂಡ್​ ಧ್ವನಿ ಕೇಳಿ ಗಳಗಳನೆ ಅತ್ತ ವಿಶ್ವನಾಥ್​! ಇದೆಂಥಾ ಕನೆಕ್ಷನ್​?
ವಿಶ್ವನಾಥ್​ - ಶುಭಾ ಪೂಂಜಾ
ಮದನ್​ ಕುಮಾರ್​
| Edited By: |

Updated on: Mar 28, 2021 | 4:15 PM

Share

ಬಿಗ್​ ಬಾಸ್​ ಕನ್ನಡ ಸೀಸನ್​ 8ರಲ್ಲಿ ಭಾಗವಹಿಸಿರುವ ಅತಿ ಕಿರಿಯ ಸ್ಪರ್ಧಿ ವಿಶ್ವನಾಥ್​. ಚಿಕ್ಕವನು ಎಂಬ ಕಾರಣ ಪ್ರೀತಿ-ಪ್ರೇಮದ ಸಹವಾಸಕ್ಕೆ ವಿಶ್ವ ಕೈ ಹಾಕಿಲ್ಲ. ಮಹಿಳಾ ಸ್ಪರ್ಧಿಗಳನ್ನು ಅಕ್ಕ ಎಂದು ಕರೆಯುವ ಅವರು, ಟಾಸ್ಕ್​ನಲ್ಲಿಯೂ ಬಲು ಚೂಟಿ ಇದ್ದಾರೆ. ಆದರೆ ವೀಕೆಂಡ್​ ಎಪಿಸೋಡ್​ನಲ್ಲಿ ವಿಶ್ವ ಗಳಗಳನೆ ಅತ್ತಿದ್ದಾರೆ. ಅವರು ಹಾಗೆ ಬಿಕ್ಕಿ ಬಿಕ್ಕಿ ಅಳಲು ಕಾರಣ ಆಗಿರುವುದು ಶುಭ ಪೂಂಜಾ ಅವರ ಬಾಯ್​ ಫ್ರೆಂಡ್​ ಧ್ವನಿ!

ಬಿಗ್​ ಬಾಸ್​ನಲ್ಲಿ ಸ್ಪರ್ಧಿಸುತ್ತಿರುವವರು ತಮ್ಮ ಕುಟುಂಬದ ಎಲ್ಲರಿಂದಲೂ ದೂರ ಇರುತ್ತಾರೆ. ಹಾಗಾಗಿ ಬಿಗ್​ ಬಾಸ್​ ಆಗೊಮ್ಮೆ ಈಗೊಮ್ಮೆ ಒಂದು ಸರ್ಪ್ರೈಸ್​ ನೀಡುತ್ತಿರುತ್ತಾರೆ. ಸ್ಪರ್ಧಿಗಳ ಕುಟುಂಬದವರಿಂದ ಯಾರಾದರೊಬ್ಬರ ಧ್ವನಿಯನ್ನು ರೆಕಾರ್ಡ್​ ಮಾಡಿ ಕೇಳಿಸುತ್ತಾರೆ. ಈ ಬಾರಿ ಶುಭಾ ಪೂಂಜಾ ಅವರ ಬಾಯ್​ ಫ್ರೆಂಡ್​ ಧ್ವನಿ ಕೇಳಿಸಲಾಯಿತು. ಅದನ್ನು ಕೇಳಿಸಿಕೊಂಡು ಶುಭಾ ಪೂಂಜಾ ಅವರು ಸಿಕ್ಕಾಪಟ್ಟೆ ಖುಷಿ ಆದರು. ಆನಂದ ಭಾಷ್ಪ ಸುರಿಸಿದರು. ಆದರೆ ಅವರ ಜೊತೆಗೆ ವಿಶ್ವನಾಥ್​ ಕೂಡ ಅಳಲು ಶುರು ಮಾಡಿದರು!

‘ನೀನು ಬಿಗ್​ ಬಾಸ್​ಗೆ ಹೋಗುತ್ತಿದ್ದೀಯ ಅಂದಾಗ, ಅಬ್ಬಾ ಆರಾಮಾಗಿ ಇರೋಣ ಎಂದುಕೊಂಡಿದ್ದೆ. ಆದರೆ ನಿನ್ನನ್ನು ಎಷ್ಟು ಮಿಸ್​ ಮಾಡುತ್ತಿದ್ದೇನೆ ಅಂತ ನೀನು ಹೋದ ಮರುದಿನ ಗೊತ್ತಾಯಿತು. ಮನೆಯಲ್ಲಿ ತಲೆಹರಟೆ ಮಾಡುತ್ತಿದ್ದ ಮಗುವೇ ಕಾಣಿಸುತ್ತಿಲ್ಲ ಎಂಬಂತೆ ಅನಿಸುತ್ತಿದೆ. ಮೌನ ಆವರಿಸಿದೆ. ಕಳೆದ ವರ್ಷ ಲಾಕ್​ಡೌನ್​ನಲ್ಲಿ ನಾವು ಮಂಗಳೂರಿನಲ್ಲಿ ಇದ್ವಿ. ಬೇರೆ ಯಾರೂ ಇರಲಿಲ್ಲ. ಈಗ ಎಲ್ಲರೂ ಇದ್ದಾರೆ. ಆದರೆ ನೀನು ಇಲ್ಲ. ಇದೇ ನನಗೆ ಕಷ್ಟದ ಲಾಕ್​ಡೌನ್​ ಎನಿಸುತ್ತಿದೆ’ ಎಂದು ಶುಭಾ ಪೂಂಜಾ ಬಾಯ್​ಫ್ರೆಂಡ್​ ವಾಯ್ಸ್​ ಮೆಸೇಜ್​ ಕಳಿಸಿದ್ದರು.

ಇದನ್ನು ಕೇಳಿಸಿಕೊಂಡ ವಿಶ್ವ ಸಿಕ್ಕಾಪಟ್ಟೆ ಅತ್ತು ಬಿಟ್ಟರು. ಕಣ್ಣೀರನ್ನು ತಡೆದುಕೊಳ್ಳಲು ಅವರು ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಅಷ್ಟಕ್ಕೂ ಶುಭಾ ಪೂಂಜಾ ಅವರ ಬಾಯ್​ ಫ್ರೆಂಡ್​ ಧ್ವನಿ ಕೇಳಿ ಈ ಪುಟಾಣಿ ವಿಶ್ವ ಯಾಕೆ ಅಳುತ್ತಿದ್ದಾನೆ ಎಂದು ಮನೆಯ ಎಲ್ಲ ಸದಸ್ಯರಿಗೂ ಪ್ರಶ್ನೆ ಮೂಡಿತು. ಅಷ್ಟೇ ಅಲ್ಲದೆ, ನಿರೂಪಕ ಕಿಚ್ಚ ಸುದೀಪ್​ ಕೂಡ ವಿಶ್ವನಿಗೆ ಈ ಪ್ರಶ್ನೆ ಕೇಳಿದರು. ಆಗ ವಿಶ್ವ ಅಸಲಿ ಕಾರಣ ಬಾಯಿ ಬಿಟ್ಟರು.

‘ಮೊದಲು ಶುಭ ಅಕ್ಕನ್ನ ನೋಡಿದೆ. ಸಡನ್​ ಆಗಿ ಅಮ್ಮ ನೆನಪಾದರು. ಕಳೆದ ಬಾರಿ ನನಗೆ ಅಮ್ಮನ ವಾಯ್ಸ್​ ಮೆಸೇಜ್​ ಬಂದಿತ್ತು. ನಂತರ ಅಪ್ಪ ಮಾತನಾಡುತ್ತಾರೆ ಎಂದು ಕಾಯುತ್ತಿದ್ದೆ. ಆದರೆ ಅವರ ಧ್ವನಿ ಬರಲೇ ಇಲ್ಲ. ಅಂದು ನಾನು ಎಲ್ಲರ ಮುಂದೆ ಅಳು ತಡೆದುಕೊಂಡಿದ್ದೆ. ಆದರೆ ಇವತ್ತು ಏನೋ ಕನೆಕ್ಟ್​ ಆದಂತೆ ಆಯಿತು. ಅಪ್ಪನ ಧ್ವನಿ ನೆನಪಿಗೆ ಬಂತು’ ಸುದೀಪ್​ ಎದುರಿನಲ್ಲಿ ಎಲ್ಲವನ್ನೂ ಒಪ್ಪಿಕೊಂಡರು ವಿಶ್ವ.

ಇದನ್ನೂ ಓದಿ: Bigg Boss Elimination: ಬಿಗ್​ ಬಾಸ್​ನಿಂದ ಹೊರಬಿದ್ದ ಚಂದ್ರಕಲಾ ಮೋಹನ್​? ಎಲಿಮಿನೇಷನ್​ಗೆ ಆ ಒಂದು ವರ್ತನೆಯೇ ಕಾರಣ

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ