Bigg Boss Kannada: ಶುಭಾ ಪೂಂಜಾ ಬಾಯ್​ಫ್ರೆಂಡ್​ ಧ್ವನಿ ಕೇಳಿ ಗಳಗಳನೆ ಅತ್ತ ವಿಶ್ವನಾಥ್​! ಇದೆಂಥಾ ಕನೆಕ್ಷನ್​?

BBK8: ಕಣ್ಣೀರನ್ನು ತಡೆದುಕೊಳ್ಳಲು ಎಷ್ಟೇ ಪ್ರಯತ್ನಿಸಿದರೂ ವಿಶ್ವನಾಥ್​ಗೆ ಸಾಧ್ಯವಾಗಲಿಲ್ಲ. ಅಷ್ಟಕ್ಕೂ ಶುಭಾ ಪೂಂಜಾ ಅವರ ಬಾಯ್​ ಫ್ರೆಂಡ್​ ಧ್ವನಿ ಕೇಳಿ ಈ ಪುಟಾಣಿ ವಿಶ್ವ ಯಾಕೆ ಅಳುತ್ತಿದ್ದಾನೆ ಎಂದು ಮನೆಯ ಎಲ್ಲ ಸದಸ್ಯರಿಗೂ ಪ್ರಶ್ನೆ ಮೂಡಿತು.

Bigg Boss Kannada: ಶುಭಾ ಪೂಂಜಾ ಬಾಯ್​ಫ್ರೆಂಡ್​ ಧ್ವನಿ ಕೇಳಿ ಗಳಗಳನೆ ಅತ್ತ ವಿಶ್ವನಾಥ್​! ಇದೆಂಥಾ ಕನೆಕ್ಷನ್​?
ವಿಶ್ವನಾಥ್​ - ಶುಭಾ ಪೂಂಜಾ
Follow us
| Updated By: ರಾಜೇಶ್ ದುಗ್ಗುಮನೆ

Updated on: Mar 28, 2021 | 4:15 PM

ಬಿಗ್​ ಬಾಸ್​ ಕನ್ನಡ ಸೀಸನ್​ 8ರಲ್ಲಿ ಭಾಗವಹಿಸಿರುವ ಅತಿ ಕಿರಿಯ ಸ್ಪರ್ಧಿ ವಿಶ್ವನಾಥ್​. ಚಿಕ್ಕವನು ಎಂಬ ಕಾರಣ ಪ್ರೀತಿ-ಪ್ರೇಮದ ಸಹವಾಸಕ್ಕೆ ವಿಶ್ವ ಕೈ ಹಾಕಿಲ್ಲ. ಮಹಿಳಾ ಸ್ಪರ್ಧಿಗಳನ್ನು ಅಕ್ಕ ಎಂದು ಕರೆಯುವ ಅವರು, ಟಾಸ್ಕ್​ನಲ್ಲಿಯೂ ಬಲು ಚೂಟಿ ಇದ್ದಾರೆ. ಆದರೆ ವೀಕೆಂಡ್​ ಎಪಿಸೋಡ್​ನಲ್ಲಿ ವಿಶ್ವ ಗಳಗಳನೆ ಅತ್ತಿದ್ದಾರೆ. ಅವರು ಹಾಗೆ ಬಿಕ್ಕಿ ಬಿಕ್ಕಿ ಅಳಲು ಕಾರಣ ಆಗಿರುವುದು ಶುಭ ಪೂಂಜಾ ಅವರ ಬಾಯ್​ ಫ್ರೆಂಡ್​ ಧ್ವನಿ!

ಬಿಗ್​ ಬಾಸ್​ನಲ್ಲಿ ಸ್ಪರ್ಧಿಸುತ್ತಿರುವವರು ತಮ್ಮ ಕುಟುಂಬದ ಎಲ್ಲರಿಂದಲೂ ದೂರ ಇರುತ್ತಾರೆ. ಹಾಗಾಗಿ ಬಿಗ್​ ಬಾಸ್​ ಆಗೊಮ್ಮೆ ಈಗೊಮ್ಮೆ ಒಂದು ಸರ್ಪ್ರೈಸ್​ ನೀಡುತ್ತಿರುತ್ತಾರೆ. ಸ್ಪರ್ಧಿಗಳ ಕುಟುಂಬದವರಿಂದ ಯಾರಾದರೊಬ್ಬರ ಧ್ವನಿಯನ್ನು ರೆಕಾರ್ಡ್​ ಮಾಡಿ ಕೇಳಿಸುತ್ತಾರೆ. ಈ ಬಾರಿ ಶುಭಾ ಪೂಂಜಾ ಅವರ ಬಾಯ್​ ಫ್ರೆಂಡ್​ ಧ್ವನಿ ಕೇಳಿಸಲಾಯಿತು. ಅದನ್ನು ಕೇಳಿಸಿಕೊಂಡು ಶುಭಾ ಪೂಂಜಾ ಅವರು ಸಿಕ್ಕಾಪಟ್ಟೆ ಖುಷಿ ಆದರು. ಆನಂದ ಭಾಷ್ಪ ಸುರಿಸಿದರು. ಆದರೆ ಅವರ ಜೊತೆಗೆ ವಿಶ್ವನಾಥ್​ ಕೂಡ ಅಳಲು ಶುರು ಮಾಡಿದರು!

‘ನೀನು ಬಿಗ್​ ಬಾಸ್​ಗೆ ಹೋಗುತ್ತಿದ್ದೀಯ ಅಂದಾಗ, ಅಬ್ಬಾ ಆರಾಮಾಗಿ ಇರೋಣ ಎಂದುಕೊಂಡಿದ್ದೆ. ಆದರೆ ನಿನ್ನನ್ನು ಎಷ್ಟು ಮಿಸ್​ ಮಾಡುತ್ತಿದ್ದೇನೆ ಅಂತ ನೀನು ಹೋದ ಮರುದಿನ ಗೊತ್ತಾಯಿತು. ಮನೆಯಲ್ಲಿ ತಲೆಹರಟೆ ಮಾಡುತ್ತಿದ್ದ ಮಗುವೇ ಕಾಣಿಸುತ್ತಿಲ್ಲ ಎಂಬಂತೆ ಅನಿಸುತ್ತಿದೆ. ಮೌನ ಆವರಿಸಿದೆ. ಕಳೆದ ವರ್ಷ ಲಾಕ್​ಡೌನ್​ನಲ್ಲಿ ನಾವು ಮಂಗಳೂರಿನಲ್ಲಿ ಇದ್ವಿ. ಬೇರೆ ಯಾರೂ ಇರಲಿಲ್ಲ. ಈಗ ಎಲ್ಲರೂ ಇದ್ದಾರೆ. ಆದರೆ ನೀನು ಇಲ್ಲ. ಇದೇ ನನಗೆ ಕಷ್ಟದ ಲಾಕ್​ಡೌನ್​ ಎನಿಸುತ್ತಿದೆ’ ಎಂದು ಶುಭಾ ಪೂಂಜಾ ಬಾಯ್​ಫ್ರೆಂಡ್​ ವಾಯ್ಸ್​ ಮೆಸೇಜ್​ ಕಳಿಸಿದ್ದರು.

ಇದನ್ನು ಕೇಳಿಸಿಕೊಂಡ ವಿಶ್ವ ಸಿಕ್ಕಾಪಟ್ಟೆ ಅತ್ತು ಬಿಟ್ಟರು. ಕಣ್ಣೀರನ್ನು ತಡೆದುಕೊಳ್ಳಲು ಅವರು ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಅಷ್ಟಕ್ಕೂ ಶುಭಾ ಪೂಂಜಾ ಅವರ ಬಾಯ್​ ಫ್ರೆಂಡ್​ ಧ್ವನಿ ಕೇಳಿ ಈ ಪುಟಾಣಿ ವಿಶ್ವ ಯಾಕೆ ಅಳುತ್ತಿದ್ದಾನೆ ಎಂದು ಮನೆಯ ಎಲ್ಲ ಸದಸ್ಯರಿಗೂ ಪ್ರಶ್ನೆ ಮೂಡಿತು. ಅಷ್ಟೇ ಅಲ್ಲದೆ, ನಿರೂಪಕ ಕಿಚ್ಚ ಸುದೀಪ್​ ಕೂಡ ವಿಶ್ವನಿಗೆ ಈ ಪ್ರಶ್ನೆ ಕೇಳಿದರು. ಆಗ ವಿಶ್ವ ಅಸಲಿ ಕಾರಣ ಬಾಯಿ ಬಿಟ್ಟರು.

‘ಮೊದಲು ಶುಭ ಅಕ್ಕನ್ನ ನೋಡಿದೆ. ಸಡನ್​ ಆಗಿ ಅಮ್ಮ ನೆನಪಾದರು. ಕಳೆದ ಬಾರಿ ನನಗೆ ಅಮ್ಮನ ವಾಯ್ಸ್​ ಮೆಸೇಜ್​ ಬಂದಿತ್ತು. ನಂತರ ಅಪ್ಪ ಮಾತನಾಡುತ್ತಾರೆ ಎಂದು ಕಾಯುತ್ತಿದ್ದೆ. ಆದರೆ ಅವರ ಧ್ವನಿ ಬರಲೇ ಇಲ್ಲ. ಅಂದು ನಾನು ಎಲ್ಲರ ಮುಂದೆ ಅಳು ತಡೆದುಕೊಂಡಿದ್ದೆ. ಆದರೆ ಇವತ್ತು ಏನೋ ಕನೆಕ್ಟ್​ ಆದಂತೆ ಆಯಿತು. ಅಪ್ಪನ ಧ್ವನಿ ನೆನಪಿಗೆ ಬಂತು’ ಸುದೀಪ್​ ಎದುರಿನಲ್ಲಿ ಎಲ್ಲವನ್ನೂ ಒಪ್ಪಿಕೊಂಡರು ವಿಶ್ವ.

ಇದನ್ನೂ ಓದಿ: Bigg Boss Elimination: ಬಿಗ್​ ಬಾಸ್​ನಿಂದ ಹೊರಬಿದ್ದ ಚಂದ್ರಕಲಾ ಮೋಹನ್​? ಎಲಿಮಿನೇಷನ್​ಗೆ ಆ ಒಂದು ವರ್ತನೆಯೇ ಕಾರಣ

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ