AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bigg Boss Kannada: ‘ಅವರಿಬ್ಬರು ನನಗೆ ತುಂಬ ಹಿಂಸೆ ಕೊಡ್ತಿದ್ದಾರೆ’: ಪುರುಷ ಸ್ಪರ್ಧಿಗಳ ಬಗ್ಗೆ ಸುದೀಪ್​ ಎದುರು ಶುಭಾ ಅಳಲು!

Shubha Poonja: ನಟಿ ಶುಭಾ ಪೂಂಜಾ ಅವರು ಬಿಗ್​ ಬಾಸ್​ ಮನೆಯಲ್ಲಿ ನಾಲ್ಕು ವಾರಗಳನ್ನು ಯಶಸ್ವಿಯಾಗಿ ಪೂರೈಸಿದ್ದಾರೆ. ಐದನೇ ವಾರಕ್ಕೆ ಅವರ ಪಯಣ ಮುಂದುವರಿಸಿದೆ. ಈ ಸಂದರ್ಭದಲ್ಲಿ ಅವರು ಕೆಲವರ ಬಗ್ಗೆ ಅಸಮಾಧಾನ ತೋಡಿಕೊಂಡಿದ್ದಾರೆ.

Bigg Boss Kannada: ‘ಅವರಿಬ್ಬರು ನನಗೆ ತುಂಬ ಹಿಂಸೆ ಕೊಡ್ತಿದ್ದಾರೆ’: ಪುರುಷ ಸ್ಪರ್ಧಿಗಳ ಬಗ್ಗೆ ಸುದೀಪ್​ ಎದುರು ಶುಭಾ ಅಳಲು!
ಶುಭಾ ಪೂಂಜಾ
ಮದನ್​ ಕುಮಾರ್​
| Updated By: ರಾಜೇಶ್ ದುಗ್ಗುಮನೆ|

Updated on: Mar 28, 2021 | 4:46 PM

Share

ಬಿಗ್​ ಬಾಸ್​ ಕನ್ನಡ ಸೀಸನ್​ 8ರಲ್ಲಿ ನಟಿ ಶುಭಾ ಪೂಂಜಾ ಹಲವು ರೀತಿಯಲ್ಲಿ ಗಮನ ಸೆಳೆಯುತ್ತಿದ್ದಾರೆ. ಚಿಕ್ಕ ಮಗುವಿನ ರೀತಿ ಅವರು ವರ್ತಿಸುತ್ತಾರೆ. ಆ ಕಾರಣಕ್ಕಾಗಿ ಅವರು ಕ್ಯೂಟ್​ ಆಗಿ ಕಾಣುತ್ತಾರೆ ಎಂಬುದು ಮನೆಯ ಸದಸ್ಯರ ಭಾವನೆ. ಹೀಗೆ ನಗುನಗುತ್ತಾ ಕಾಲ ಕಳೆಯುತ್ತಿರುವ ಶುಭಾ ಪೂಂಜಾ ಯಾವಾಗ ಅಳುತ್ತಾರೆ ಎಂಬುದು ಕೂಡ ಗೊತ್ತಾಗುವುದಿಲ್ಲ. ಈ ವಿಚಾರ ಕೂಡ ಬಿಗ್​ ಬಾಸ್​ ಮನೆಯಲ್ಲಿ ಆಗಾಗ ಚರ್ಚೆ ಆಗುತ್ತದೆ. ಮೂರವೇ ವಾರದ ವೀಕೆಂಡ್​ ಪಂಚಾಯಿತಿಯಲ್ಲಿ ಶುಭಾ ಕೆಲವು ವಿಚಾರಗಳನ್ನು ಹೇಳಿಕೊಂಡಿದ್ದಾರೆ.

ಕಳೆದ ವಾರ ಒಂದು ಟಾಸ್ಕ್​ ನಿಭಾಯಿಸುವ ಸಂದರ್ಭದಲ್ಲಿ ಶುಭಾ ಪೂಜಾ ಅವರ ಕಾಲಿಗೆ ಗಾಯ ಆಗಿತ್ತು. ಆಗ ಅವರು ಚಿಕ್ಕ ಮಕ್ಕಳಂತೆ ಅಳಲು ಶುರು ಮಾಡಿದರು. ಅಂಗಾಲಿನಲ್ಲಿ ಗಾಯ ಆಗಲು ಕಾರಣ ಏನೆಂಬುದನ್ನು ಪತ್ತೆ ಹಚ್ಚಲು ರಾಜೀವ್​ ಮತ್ತು ಮಂಜು ಪ್ರಯತ್ನಿಸಿದರು. ಕಾಲಿಗೆ ಮುಳ್ಳು ಅಥವಾ ಗ್ಲಾಸ್​ ಚುಚ್ಚಿಕೊಂಡಿರಬಹುದು ಎಂದು ಅವರು ಪರಿಶೀಲಿಸುತ್ತಿದ್ದರು. ಆದರೆ ಆ ಗಾಯವನ್ನು ಮುಟ್ಟಲು ಶುಭಾ ಅವಕಾಶವೇ ನೀಡುತ್ತಿರಲಿಲ್ಲ. ಈ ಪ್ರಸಂಗ ಸಿಕ್ಕಾಪಟ್ಟೆ ಕಾಮಿಡಿ ಆಗಿತ್ತು.

ನಂತರ ಶುಭಾ ಅವರನ್ನು ಬಾತ್​ ರೂಮ್​ಗೆ ಕರೆದುಕೊಂಡು ಹೋಗಿ, ಗಾಯ ಆಗಿದ್ದ ಜಾಗವನ್ನು ಕ್ಲೀನ್​ ಮಾಡಲಾಯಿತು. ಆಗಲೂ ಶುಭಾ ಪೂಂಜಾ ಚಿಕ್ಕ ಹುಡುಗಿಯಂತೆ ಅಳುತ್ತಿದ್ದರು. ಅವರ ವರ್ತನೆ ನೋಡಿ ಮನೆಯ ಇನ್ನುಳಿದ ಸದಸ್ಯರು ಬಿದ್ದು ಬಿದ್ದು ನಗುತ್ತಿದ್ದರು. ಇದೇ ವಿಚಾರ ಸುದೀಪ್​ ಜೊತೆಗಿನ ವಾರದ ಪಂಚಾಯಿಯಲ್ಲಿ ಚರ್ಚೆಗೆ ಬಂತು. ಹೇಗಾದರೂ ಮಾಡಿ ಆ ಗಾಯದ ಚರ್ಮವನ್ನು ಕಿತ್ತು ಹಾಕಿ ಎಂದು ರಾಜೀವ್​ ಮತ್ತು ಮಂಜುಗೆ ಸುದೀಪ್​ ಸೂಚನೆ ನೀಡಿದರು. ಆ ಮಾತು ಕೇಳಿ ಶುಭಾಗೆ ಜೀವವೇ ಹಾರಿಹೋದಂತೆ ಆಯಿತು.

‘ಈಗಾಗಲೇ ಅವರಿಬ್ಬರು ನನಗೆ ತುಂಬ ಹಿಂಸೆ ಕೊಡ್ತಿದ್ದಾರೆ’ ಎಂದು ಮಂಜು ಪಾವಗಡ ಮತ್ತು ರಾಜೀವ್ ಬಗ್ಗೆ ಸುದೀಪ್​ ಬಳಿ ಶುಭಾ ಪೂಂಜಾ ಅಳಲು ತೋಡಿಕೊಂಡಿದ್ದಾರೆ. ಒಟ್ಟಾರೆ ಈ ಪ್ರಸಂಗ ಕಾಮಿಡಿ ಆಗಿತ್ತು. ಯಾವುದಾದರೂ ಟಾಸ್ಕ್​ ಇದ್ದಾಗ ಶುಭಾ ಕಾಲಿನ ಗಾಯದ ಚರ್ಮ ಕಿತ್ತು ಹಾಕಿ ಎಂದು ಕಿಚ್ಚ ಸುದೀಪ್​ ಕೂಡ ತಮಾಷೆ ಮಾಡುವ ಮೂಲಕ ಬಿಗ್​ ಬಾಸ್​ ಮನೆಯಲ್ಲಿ ನಗುವಿನ ವಾತಾವರಣ ಮೂಡಿಸಿದರು.

ಇನ್ನು, ಬಾಯ್​ಫ್ರೆಂಡ್​ನನ್ನು ಮಿಸ್​ ಮಾಡಿಕೊಳ್ಳುತ್ತಿರುವ ಶುಭಾ ಪೂಂಜಾಗೆ ಬಿಗ್​ ಬಾಸ್​ ಮಾ.27ರ ವೀಕೆಂಡ್​​ ಶೋನಲ್ಲಿ ಅಚ್ಚರಿವೊಂದನ್ನು ನೀಡಿದರು. ಶುಭಾ ಪೂಂಜಾ ಅವರ ಬಾಯ್​ ಫ್ರೆಂಡ್​ ಧ್ವನಿ ಕೇಳಿಸಲಾಯಿತು. ‘ನೀನು ಬಿಗ್​ ಬಾಸ್​ಗೆ ಹೋಗುತ್ತಿದ್ದೀಯ ಅಂದಾಗ, ಅಬ್ಬಾ ಆರಾಮಾಗಿ ಇರೋಣ ಎಂದುಕೊಂಡಿದ್ದೆ. ಆದರೆ ನಿನ್ನನ್ನು ಎಷ್ಟು ಮಿಸ್​ ಮಾಡುತ್ತಿದ್ದೇನೆ ಅಂತ ನೀನು ಹೋದ ಮರುದಿನ ಗೊತ್ತಾಯಿತು. ಮನೆಯಲ್ಲಿ ತಲೆಹರಟೆ ಮಾಡುತ್ತಿದ್ದ ಮಗುವೇ ಕಾಣಿಸುತ್ತಿಲ್ಲ ಎಂಬಂತೆ ಅನಿಸುತ್ತಿದೆ. ಮೌನ ಆವರಿಸಿದೆ’ ಎಂಬ ವಾಯ್ಸ್​ ಮೆಸೇಜ್​ ಕಳಿಸಿದ್ದರು. ಅದನ್ನು ಕೇಳಿಸಿಕೊಂಡು ಶುಭಾ ಪೂಂಜಾ ಅವರು ಸಿಕ್ಕಾಪಟ್ಟೆ ಖುಷಿ ಆದರು ಮತ್ತು ಆನಂದ ಭಾಷ್ಪ ಸುರಿಸಿದರು.

ಇದನ್ನೂ ಓದಿ: Bigg Boss Elimination: ಬಿಗ್​ ಬಾಸ್​ನಿಂದ ಹೊರಬಿದ್ದ ಚಂದ್ರಕಲಾ ಮೋಹನ್​? ಎಲಿಮಿನೇಷನ್​ಗೆ ಆ ಒಂದು ವರ್ತನೆಯೇ ಕಾರಣ

ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ