AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಘು ಗೌಡಗೆ ಪ್ರೀತಿಸಿದ ಹುಡುಗಿ ಕೈಕೊಟ್ಟಿದ್ದು ಆರು ತಿಂಗಳ ನಂತರ ಗೊತ್ತಾಗಿತ್ತಂತೆ!

ಆರಂಭದಲ್ಲಿ ರಘು ಗೌಡ ಅವರು ತಾವು ಜೀವನದಲ್ಲಿ ಅನುಭವಿಸಿದ ಕಹಿ ನೆನಪನ್ನು ಹಂಚಿಕೊಂಡಿದ್ದರು. ಈಗ ಅವರ ಖುಷಿಯ ದಿನಗಳು ಅನಾವರಣಗೊಂಡಿದೆ.

ರಘು ಗೌಡಗೆ ಪ್ರೀತಿಸಿದ ಹುಡುಗಿ ಕೈಕೊಟ್ಟಿದ್ದು ಆರು ತಿಂಗಳ ನಂತರ ಗೊತ್ತಾಗಿತ್ತಂತೆ!
ರಘು - ಬಿಗ್ ಬಾಸ್​ ಕನ್ನಡ ಸೀಸನ್​ 8
ರಾಜೇಶ್ ದುಗ್ಗುಮನೆ
| Updated By: ಮದನ್​ ಕುಮಾರ್​|

Updated on: Mar 28, 2021 | 3:45 PM

Share

ರಘು ವೈನ್​ ಸ್ಟೋರ್​ ಯೂಟ್ಯೂಬ್​ ಚಾನೆಲ್​ ಮೂಲಕ ಹೆಸರು ಮಾಡಿರುವ ರಘು ಗೌಡ ಬಿಗ್​ ಬಾಸ್​ ಮನೆ ಸೇರಿದ ಕೂಡಲೇ ಭಾರೀ ನಿರೀಕ್ಷೆ ಹುಟ್ಟಿಕೊಂಡಿತ್ತು. ಆದರೆ, ಮನೆ ಒಳಗೆ ಸೇರಿದ ನಂತರ ಅವರು ಡಲ್​ ಆಗಿದ್ದನ್ನು ನೋಡಿ ಫ್ಯಾನ್ಸ್​ಗೆ ಬೇಸರ ಉಂಟಾಗಿತ್ತು. ಆದರೆ, ಮೂರನೇ ವಾರದಿಂದ ರಘು ಸಂಪೂರ್ಣ ಬದಲಾಗಿದ್ದಾರೆ. ಮನೆಯಲ್ಲಿ ತಾವೂ ನಗುತ್ತಾ ಎಲ್ಲರನ್ನೂ ನಗಿಸುತ್ತಿದ್ದಾರೆ. ಈಗ ಕಿಚ್ಚ ಸುದೀಪ್​ ಎದುರು ರಘು ಗೌಡ ಅಚ್ಚರಿಯ ಮಾಹಿತಿ ಒಂದನ್ನು ಹೊರ ಹಾಕಿದ್ದಾರೆ. ಆರಂಭದಲ್ಲಿ ರಘು ಗೌಡ ಅವರು ತಾವು ಜೀವನದಲ್ಲಿ ಅನುಭವಿಸಿದ ಕಹಿ ನೆನಪನ್ನು ಹಂಚಿಕೊಂಡಿದ್ದರು. ತಂದೆ-ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದರು ಎನ್ನುವ ವಿಚಾರ ಮನೆ ಮಂದಿಯಲ್ಲಿ ಅನೇಕರಿಗೆ ಶಾಕ್​ ನೀಡಿತ್ತು. ಈಗ ಅವರ ಖುಷಿಯ ದಿನಗಳು ಅನಾವರಣಗೊಂಡಿದೆ.

ವೀಕೆಂಡ್​ನಲ್ಲಿ ರಘುಗೆ ನಿಮ್ಮ ಬೆಸ್ಟ್​ ಬ್ರೇಕಪ್​ ಯಾವುದು ಎಂದು ಸುದೀಪ್ ಕೇಳಿದ್ದಾರೆ. ಆಗ ರಘು ತಮ್ಮ ಜೀವನದಲ್ಲಿ ನಡೆದ ವಿಚಿತ್ರ ಪ್ರೀತಿ ಬಗ್ಗೆ ಹೇಳಿಕೊಂಡಿದ್ದಾರೆ. ನಾನು ಒಂದು ಹುಡುಗಿ ಜತೆ ರಿಲೇಶನ್​ಶಿಪ್​ನಲ್ಲಿದೆ. ಮೊದಲೆಲ್ಲ ಚೆನ್ನಾಗಿತ್ತು. ಆದರೆ, ಹೀಗೆ ಮಾತುಕತೆ ಕಡಿಮೆ ಆಗ್ತಾ ಬಂತು. ಆದರೆ, ಅವಳು ಬ್ರೇಕಪ್​ ಮಾಡಿಕೊಂಡಿದ್ದಳು ಎನ್ನುವುದು ಗೊತ್ತಿರಲಿಲ್ಲ. ಆರು ತಿಂಗಳ ನಂತರ ಒಮ್ಮೆ ಸಿಕ್ಕಿದ್ದಳು. ಆಗ ಮಾತನಾಡುವಾಗ ಆರು ತಿಂಗಳ ಹಿಂದೆ ಬ್ರೇಕಪ್​ ಆಯ್ತಲ್ಲ. ಆಗ ನಾನು ಹೊಸ ವಿಚಾರ ಕಲಿತುಕೊಂಡೆ ಎಂದು ಆಕೆ ಹೇಳಿದ್ದಳು. ನಾನು ಶಾಕ್​ ಆಗೋದೆ. ನನ್ನ ಸಂಬಂಧ ಮುರಿದು ಬಿದ್ದಿದೆ ಎಂದು ಗೊತ್ತಾಗಿದ್ದು ಆಗಲೇ. ನಾನು 6 ತಿಂಗಳ ಭ್ರಮೆಯಲ್ಲಿದ್ದಿದೆ. ನನಗೆ ಬ್ರೇಕಪ್​ ಆಗಿದೆ ಎನ್ನುವುದೇ ನೆನಪಿರಲಿಲ್ಲ ಎಂದಿದ್ದಾರೆ.

ಈ ವೇಳೆ ಸುದೀಪ್​, ನಿಮ್ಮ ಪತ್ನಿ ವಿದ್ಯಾ ಅವರಿಗೆ ಈ ವಿಚಾರ ಗೊತ್ತಿದೆಯ ಎಂದು ಕೇಳಿದ್ದಾರೆ. ಆಗ ರಘು, ಇಲ್ಲ ಅವಳಿಗೆ ಈ ಬಗ್ಗೆ ಗೊತ್ತಿಲ್ಲ. ವಿದ್ಯಾ ಆಚೆ ಬಂದ ಮೇಲೆ ಮಾತಾಡೋಣ ಎಂದು ಹೇಳುತ್ತಿದ್ದಂತೆ ಸುದೀಪ್​ ನಕ್ಕಿದ್ದಾರೆ. ಆಗ ರಘು, ನನ್ನ ಹೆಂಡತಿ ನನ್ನ ಬಳಿ ಒಮ್ಮೆ ಈ ವಿಚಾರ ಮಾತನಾಡಿದ್ದರು. ನಿನ್ನ ಅಫೇರ್​ ವಿಚಾರ ಹೊರ ಬಂದರೆ, ನಾನು ನಿನ್ನನ್ನು ಸಾಯಿಸಲ್ಲ, ಜೀವನ ಏನು ಎಂಬುದನ್ನು ತೋರಿಸುತ್ತೇನೆ ಎಂದಿದ್ದರು ಎಂದು ರಘು ಹೇಳಿದ್ದಾರೆ.

ಇದನ್ನೂ ಓದಿ: ರಘು-ವಿಶ್ವಗೆ ಬಿಗ್​ ಬಾಸ್​ ಮನೆಯಲ್ಲಿ ಮಾಡುತ್ತಿರುವ ದೊಡ್ಡ ತಪ್ಪಿನ ಅರಿವಾಗಿದೆ!

ವಿಶ್ವ ಚಿಕ್ಕವನಲ್ಲ, ತುಂಬಾನೇ ನಾಟಿ!; ರಘು ಗೌಡ ಬಿಚ್ಚಿಟ್ರು ಬಿಗ್​ ಬಾಸ್ ಬಾಲಕನ ಮತ್ತೊಂದು ಮುಖ

ಚುನಾವಣಾ ಅಯೋಗದ ವಿರುದ್ಧ ಅಭಿಯಾನ ನಡೆಸುತ್ತಿರುವ ರಾಹುಲ್ ಗಾಂಧಿ
ಚುನಾವಣಾ ಅಯೋಗದ ವಿರುದ್ಧ ಅಭಿಯಾನ ನಡೆಸುತ್ತಿರುವ ರಾಹುಲ್ ಗಾಂಧಿ
ನಿಮ್ಮನ್ನೂ ದೇವೇಗೌಡ್ರು ಉಚ್ಛಾಟಿಸಿದ್ರು: ಸಿದ್ದರಾಮಯ್ಯಗೆ ಯತ್ನಾಳ್ ಚಮಕ್
ನಿಮ್ಮನ್ನೂ ದೇವೇಗೌಡ್ರು ಉಚ್ಛಾಟಿಸಿದ್ರು: ಸಿದ್ದರಾಮಯ್ಯಗೆ ಯತ್ನಾಳ್ ಚಮಕ್
ಸುಜಾತ ಭಟ್ ಗೆ ಮಹೇಶ್ ತಿಮರೋಡಿ ಕೆಲದಿನ ಆಶ್ರಯ ನೀಡಿದ್ದರು: ಜಯಂತ್
ಸುಜಾತ ಭಟ್ ಗೆ ಮಹೇಶ್ ತಿಮರೋಡಿ ಕೆಲದಿನ ಆಶ್ರಯ ನೀಡಿದ್ದರು: ಜಯಂತ್
ರಸ್ತೆ ಬದಿಯಲ್ಲಿ ಕುಳಿತಿದ್ದ ವ್ಯಕ್ತಿ ಮೇಲೆ ಹತ್ತಿ ಎಳೆದುಕೊಂಡು ಹೋದ ಕಾರು!
ರಸ್ತೆ ಬದಿಯಲ್ಲಿ ಕುಳಿತಿದ್ದ ವ್ಯಕ್ತಿ ಮೇಲೆ ಹತ್ತಿ ಎಳೆದುಕೊಂಡು ಹೋದ ಕಾರು!
ಕೆಎಸ್​ಸಿಎಗೆ ಪರವಾನಗಿ ಇರದಿದ್ದರೆ ಡಿಸಿಎಂ ಹೋಗಿದ್ದು ಯಾಕೆ? ಅಶೋಕ
ಕೆಎಸ್​ಸಿಎಗೆ ಪರವಾನಗಿ ಇರದಿದ್ದರೆ ಡಿಸಿಎಂ ಹೋಗಿದ್ದು ಯಾಕೆ? ಅಶೋಕ
ನಿಯಮಗಳನ್ನು ಉಲ್ಲಂಘಿಸಿ ತಿಮರೋಡಿಯವರನ್ನು ಬಂಧಿಸಲಾಗಿದೆ: ಮಟ್ಟಣ್ಣನವರ್
ನಿಯಮಗಳನ್ನು ಉಲ್ಲಂಘಿಸಿ ತಿಮರೋಡಿಯವರನ್ನು ಬಂಧಿಸಲಾಗಿದೆ: ಮಟ್ಟಣ್ಣನವರ್
ವಿವಾದದಲ್ಲಿ ರಮೋಲಾ; ಸಿನಿಮಾದಲ್ಲಿ ನಟಿಸಿ ಪ್ರಮೋಷನ್​ಗೆ ಬರಲ್ಲ ಎಂದ ನಟಿ?
ವಿವಾದದಲ್ಲಿ ರಮೋಲಾ; ಸಿನಿಮಾದಲ್ಲಿ ನಟಿಸಿ ಪ್ರಮೋಷನ್​ಗೆ ಬರಲ್ಲ ಎಂದ ನಟಿ?
ಕಾಲ್ತುಳಿತ ಪ್ರಕರಣದಲ್ಲಿ ಸರ್ಕಾರವನ್ನು ಅಬೆಟರ್ ಅನ್ನೋದು ಸರಿಯಲ್ಲ: ಸಿಎಂ
ಕಾಲ್ತುಳಿತ ಪ್ರಕರಣದಲ್ಲಿ ಸರ್ಕಾರವನ್ನು ಅಬೆಟರ್ ಅನ್ನೋದು ಸರಿಯಲ್ಲ: ಸಿಎಂ
ರಸ್ತೆ ತಡೆಗೋಡೆ ಮೇಲೆ ಕುಳಿತು ಕ್ಯಾಮೆರಾಗೆ ಪೋಸ್​​ ಕೊಟ್ಟ ಚಿರತೆ
ರಸ್ತೆ ತಡೆಗೋಡೆ ಮೇಲೆ ಕುಳಿತು ಕ್ಯಾಮೆರಾಗೆ ಪೋಸ್​​ ಕೊಟ್ಟ ಚಿರತೆ
ವಿರೇಂದ್ರ ಪಪ್ಪಿ ಜೊತೆ ಕುಸುಮ ಸಹೋದರನ ವ್ಯಾವಹಾರಿಕ ಸಂಬಂಧ ಹಿನ್ನೆಲೆ ದಾಳಿ
ವಿರೇಂದ್ರ ಪಪ್ಪಿ ಜೊತೆ ಕುಸುಮ ಸಹೋದರನ ವ್ಯಾವಹಾರಿಕ ಸಂಬಂಧ ಹಿನ್ನೆಲೆ ದಾಳಿ