AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪೈರಸಿ ಮಾಡುತ್ತಿದ್ದ ಅತಿ ದೊಡ್ಡ ಜಾಲ ಅರೆಸ್ಟ್; ಇವರ ತಂತ್ರಜ್ಞಾನ ನೋಡಿ ಪೊಲೀಸರೇ ಕಂಗಾಲು

ಫರೀದಾಬಾದ್ ಪೊಲೀಸರ ಪ್ರಕಾರ ಬಂಧಿತರು ಸುಮಾರು 400 ಚಾನೆಲ್​ಗಳಿಂದ ಕಾಂಟೆಂಟ್​ಗಳನ್ನು ಕದಿಯುತ್ತಿದ್ದರು. ಕದಿಯುವ ವಿಧಾನಕ್ಕೆ ತುಂಬಾನೇ ಆಧುನಿಕ ತಂತ್ರಜ್ಞಾನ ಬಳಕೆ ಮಾಡುತ್ತಿದ್ದರಂತೆ!

ಪೈರಸಿ ಮಾಡುತ್ತಿದ್ದ ಅತಿ ದೊಡ್ಡ ಜಾಲ ಅರೆಸ್ಟ್; ಇವರ ತಂತ್ರಜ್ಞಾನ ನೋಡಿ ಪೊಲೀಸರೇ ಕಂಗಾಲು
ಚಿತ್ರಮಂದಿರ
ರಾಜೇಶ್ ದುಗ್ಗುಮನೆ
| Edited By: |

Updated on: Mar 28, 2021 | 4:54 PM

Share

ಪೈರಸಿ ಅನ್ನೋದು ಇಂದು ಚಿತ್ರರಂಗ, ಕಿರುತೆರೆ ಹಾಗೂ ಒಟಿಟಿ ಪ್ಲಾಟ್​​ಫಾರ್ಮ್​ಗೆ ದೊಡ್ಡ ಪಿಡುಗಾಗಿ ಕಾಡುತ್ತಿದೆ. ಇದನ್ನು ಹತ್ತಿಕ್ಕಲು ಪೊಲೀಸರು ಕೂಡ ಪ್ರಯತ್ನ ಮಾಡುತ್ತಿದ್ದಾರೆ. ಇದರ ಭಾಗವಾಗಿ ಅತಿದೊಡ್ಡ ಪೈರಸಿ ಜಾಲವನ್ನು ಪೊಲೀಸರು ಭೇದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಆರು ಜನರನ್ನು ಅರೆಸ್ಟ್​ ಮಾಡಲಾಗಿದೆ. ಇವರು ಬಳಕೆ ಮಾಡುತ್ತಿದ್ದ ಆಧುನಿಕ ತಂತ್ರಜ್ಞಾನ ನೋಡಿ ಪೊಲೀಸರೇ ಅಚ್ಚರಿ ಹೊರ ಹಾಕಿದ್ದಾರೆ. ಹರಿಯಾಣದ ಫರಿದಾಬಾದ್​ನಲ್ಲಿ ಆರು ಜನರನ್ನು ಅರೆಸ್ಟ್​ ಮಾಡಲಾಗಿದೆ. ರಹಿಸ್ಲೆ ಹೆಸರಿನ ಕಂಪನಿ ಪಿಪಿಇ ಕಿಟ್​ ಮತ್ತು ಮಾಸ್ಕ್​ ತಯಾರಿಸುತ್ತಿದೆ. ಆದರೆ, ಈ ಕಂಪೆನಿಯ ಮೂಲ ಕಸುಬು ಪೈರಸಿ ಮಾಡುವುದು. ಭಾರತ ಹಾಗೂ ವಿದೇಶಿ ಚಾನೆಲ್​ಗಳಿಂದ ಕಾಂಟೆಂಟ್​ಗಳನ್ನು ಕದ್ದು, ಕಡಿಮೆ ಬೆಲೆಗೆ ಅದನ್ನು ಮಾರಾಟ ಮಾಡುವ ಕೆಲಸವನ್ನು ರಹಿಸ್ಲೆ ಮಾಡುತ್ತಿತ್ತು.

ಫರೀದಾಬಾದ್ ಪೊಲೀಸರ ಪ್ರಕಾರ ಬಂಧಿತರು ಸುಮಾರು 400 ಚಾನೆಲ್​ಗಳಿಂದ ಕಾಂಟೆಂಟ್​ಗಳನ್ನು ಕದಿಯುತ್ತಿದ್ದರು. ಕದಿಯುವ ವಿಧಾನಕ್ಕೆ ತುಂಬಾನೇ ಆಧುನಿಕ ತಂತ್ರಜ್ಞಾನ ಬಳಕೆ ಮಾಡುತ್ತಿದ್ದರಂತೆ! ಇವರು, ಭಾರತ ಹಾಗೂ ವಿದೇಶಿ ಚಾನೆಲ್​ಗಳ ಸಿಗ್ನಲ್​ಗಳನ್ನು ಹ್ಯಾಕ್​ ಮಾಡಿ ಚಾನೆಲ್​ಗಳಲ್ಲಿ ಪ್ರಸಾರವಾಗುವ ಮಾಹಿತಿಯನ್ನೇ ಕದ್ದು ಬಿಡುತ್ತಿದ್ದರು.

ಈ ವಿಚಾರಕ್ಕೆ ಸಂಬಂಧಿಸಿ YuppTV ಸೈಬರ್​ ಠಾಣೆಗೆ ದೂರು ನೀಡಿತ್ತು. ಈ ದೂರನ್ನು ಆಧರಿಸಿ ಫರೀದಾಬಾದ್ ಪೊಲೀಸರು ಸಾಕಷ್ಟು ಕಡೆಗಳಲ್ಲಿ ದಾಳಿ ನಡೆಸಿದ್ದರು. ಈ ವೇಳೆ ಈ ಕಂಪನಿಯಿಂದ ಕಾಂಟೆಂಟ್​ಗಳನ್ನು ಮಾರಾಟ ಮಾಡಿದ ಬಗ್ಗೆ ಇ-ಮೇಲ್​ಗಳು ದೊರೆತಿವೆ. GoDaddy.com, informir.eu. ಸೇರಿ ಸಾಕಷ್ಟು ಸೈಟ್​ಗಳು ಈ ಪೈರಸಿಯಲ್ಲಿ ಪಾಲುದಾರರವಾಗಿವೆ ಎನ್ನುವ ಮಾತು ಕೇಳಿ ಬಂದಿದೆ.

ಕೆಲ ವೆಬ್​ಸೈಟ್ ಮೂಲಕವೂ ಈ ಕಾಂಟೆಂಟ್​ಗಳನ್ನು ಮಾರಾಟ ಮಾಡಲಾಗುತ್ತಿತ್ತು. ಕಡಿಮೆ ಬೆಲೆಯಲ್ಲಿ ಸಿಗುತ್ತದೆ ಎನ್ನುವ ಕಾರಣಕ್ಕೆ ವೀಕ್ಷಕರು ಇದಕ್ಕೆ ಲಾಗಿನ್​ ಆಗುತ್ತಿದ್ದರು. ಆದರೆ, ಈ ವೇಳೆ ಪರ್ಸನಲ್​ ಡೇಟಾಗಳನ್ನು ಹ್ಯಾಕ್​ ಮಾಡಲಾಗುತ್ತಿತ್ತು ಎನ್ನಲಾಗಿದೆ.

ಇದನ್ನೂ ಓದಿ: Darshan: ಪೈರಸಿ ತಡೆಯೋಕೆ ದರ್ಶನ್​ ಹೊಸ ತಂತ್ರ!; ಇದು ಜಾರಿಗೆ ಬಂದ್ರೆ ಕಳ್ಳರು ಸಿಕ್ಕಿ ಬೀಳೋದು ಪಕ್ಕಾ

ಪೈರಸಿ ಮಾಡಿದ್ರೂ ರಾಬರ್ಟ್​ ಓಡ್ತಿರೋದು, ರಾಯರ ಸನ್ನಿಧಿಯಲ್ಲಿ ಸಿಕ್ಕ ಸನ್ಮಾನ ಎರಡೂ ನನಗೆ ಖುಷಿ ತಂದಿದೆ’

Follow Us
ಗ್ಯಾಸ್​ ಇಲ್ಲಿದೇ ಬೆಂಗಳೂರಿನ ಗಲ್ಲಿ ಗಲ್ಲಿಯಲ್ಲೂ ನಿಂತ ಆಟೋಗಳು!
ಗ್ಯಾಸ್​ ಇಲ್ಲಿದೇ ಬೆಂಗಳೂರಿನ ಗಲ್ಲಿ ಗಲ್ಲಿಯಲ್ಲೂ ನಿಂತ ಆಟೋಗಳು!
ಅಧಿಕಾರಿ ಮೇಲೆ ಪಾಲಿಕೆ ಸದಸ್ಯ ಹಲ್ಲೆ: ಪ್ರಕರಣದಲ್ಲಿ​ ಶಾಸಕ ರೆಡ್ಡಿ ಎಂಟ್ರಿ
ಅಧಿಕಾರಿ ಮೇಲೆ ಪಾಲಿಕೆ ಸದಸ್ಯ ಹಲ್ಲೆ: ಪ್ರಕರಣದಲ್ಲಿ​ ಶಾಸಕ ರೆಡ್ಡಿ ಎಂಟ್ರಿ
ಹಿಂದೆ ಸಂಬಂಧಿಯನ್ನ ಕೊಂದ್ರು, ಈಗ ಅಳಿಯನ ಹತ್ಯೆ:ಮಾಜಿ ಸಚಿವ ಬೆಳಮಗಿ ಕಣ್ಣೀರು
ಹಿಂದೆ ಸಂಬಂಧಿಯನ್ನ ಕೊಂದ್ರು, ಈಗ ಅಳಿಯನ ಹತ್ಯೆ:ಮಾಜಿ ಸಚಿವ ಬೆಳಮಗಿ ಕಣ್ಣೀರು
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ