AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿನಿಮೀಯ ರೀತಿಯ ಘಟನೆ: ನಟನೆ ಮಾಡಲು ಬಂದಿದ್ದ 17 ಮಕ್ಕಳ ಅಪಹರಣ

Bollywood news: ಸಿನಿಮಗಳಲ್ಲಿ ದುರುಳರು ಮಕ್ಕಳನ್ನು ಅಪಹರಿಸಿ ಒತ್ತೆಯಾಳುಗಳನ್ನಾಗಿ ಇರಿಸಿಕೊಂಡು ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳುತ್ತಾರೆ. ಅದರಂತೆ ಇಲ್ಲೊಬ್ಬ ಸಿನಿಮಾ ಸ್ಟುಡಿಯೋನಲ್ಲಿಯೇ ಮಕ್ಕಳನ್ನು ಅಪಹರಿಸಿ ಪೊಲಿಸರ ಮುಂದೆ ತನ್ನ ಬೇಡಿಕೆಗಳನ್ನು ಇರಿಸಿದ್ದ. ಆತ ಯಾರು? ಆತನ ಬೇಡಿಕೆಗಳು ಏನಾಗಿದ್ದವು? ಬಂಧನ ಆಗಿದ್ದು ಹೇಗೆ? ಎಲ್ಲ ಮಾಹಿತಿ ಇಲ್ಲಿದೆ.

ಸಿನಿಮೀಯ ರೀತಿಯ ಘಟನೆ: ನಟನೆ ಮಾಡಲು ಬಂದಿದ್ದ 17 ಮಕ್ಕಳ ಅಪಹರಣ
Rohit Arya
ಮಂಜುನಾಥ ಸಿ.
|

Updated on:Oct 30, 2025 | 5:02 PM

Share

ಸಿನಿಮಾಗಳಲ್ಲಿ ಮಕ್ಕಳನ್ನು ಅಪಹರಣ ಮಾಡಿ ದುರುಳರು ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳುವುದು ನೋಡಿರುತ್ತೀವಿ, ಆದರೆ ಮುಂಬೈನಲ್ಲಿ ಸಿನಿಮಾ ಸ್ಟುಡಿಯೋನಲ್ಲಿಯೇ ವ್ಯಕ್ತಿಯೊಬ್ಬ ಹಾಡ ಹಗಲೆ 17 ಮಕ್ಕಳನ್ನು ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿದ್ದಾನೆ. ಆದರೆ ಮುಂಬೈ ಪೊಲೀಸರ ಸಮಯೋಚಿತ ಕಾರ್ಯದಿಂದ ಎಲ್ಲ ಮಕ್ಕಳು ಸುರಕ್ಷಿತವಾಗಿದ್ದು, ಅಪಹರಣಕಾರನನ್ನು ಸಹ ಬಂಧಿಸಲಾಗಿದೆ. ಈ ಆತಂಕಕಾರಿ ಘಟನೆ ಇಂದೇ (ಅಕ್ಟೋಬರ್ 30) ಮಧ್ಯಾಹ್ನ ನಡೆದಿದೆ.

ಮುಂಬೈನ ಪವಾಯಿಯಲ್ಲಿರುವ ಆರ್​​ಎ ಸ್ಟುಡಿಯೋನಲ್ಲಿ ನಟನೆ ಕಲಿಯಲು ತರಗತಿಗೆಂದು ಬಂದಿದ್ದ 17 ಮಕ್ಕಳನ್ನು ರೋಹಿತ್ ಆರ್ಯ ಹೆಸರಿನ ವ್ಯಕ್ತಿ ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿದ್ದ. ಮಕ್ಕಳು, ಸ್ಟುಡಿಯೋದ ಕಿಟಕಿ ಗಾಜುಗಳಿಂದ ಹೊರಗೆ ಕೈಬೀಸುತ್ತಾ ಸಹಾಯಕ್ಕೆ ಅಂಗಲಾಚಿದ್ದನ್ನು ಗಮನಿಸಿದ ಸಾರ್ವಜನಿಕರು ಪೊಲೀಸರಿಗೆ ವಿಷಯ ಮುಟ್ಟಿಸಿದರು. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು, ಮಕ್ಕಳನ್ನು ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿದ್ದ ರೋಹಿತ್ ಆರ್ಯ ಜೊತೆಗೆ ಮಾತನಾಡಿ ಎಲ್ಲ ಮಕ್ಕಳನ್ನು ಬಿಡಿಸಿದ್ದಾರೆ ಮತ್ತು ರೋಹಿತ್ ಅನ್ನು ಬಂಧಿಸಿದ್ದಾರೆ.

ಇದನ್ನೂ ಓದಿ:ಆಟೋ ಓಡಿಸುತ್ತಿರುವ ಈ ಬಾಲಿವುಡ್ ನಟಿ ಯಾರು ಗೊತ್ತಾಯ್ತ?

ಮಕ್ಕಳನ್ನು ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿದ್ದ ರೋಹಿತ್ ಆರ್ಯ ವಿಡಿಯೋ ಒಂದನ್ನು ಸಹ ಬಿಡುಗಡೆ ಮಾಡಿದ್ದ. ನನಗೆ ಯಾವುದೇ ಹಣ ಬೇಡ, ನನ್ನ ಬೇಡಿಕೆಗಳು ಸ್ವಾರ್ಥ ಬೇಡಿಕೆಗಳು ಅಲ್ಲ. ನನ್ನದು ಒಳ್ಳೆಯ ಬೇಡಿಕೆಗಳು, ನನಗೆ ಕೆಲವು ವ್ಯಕ್ತಿಗಳೊಟ್ಟಿಗೆ ಮಾತನಾಡಲಿಕ್ಕಿದೆ, ಅವರಿಗೆ ಕೆಲವು ಪ್ರಶ್ನೆಗಳನ್ನು ಕೇಳಬೇಕಿದೆ. ಒಂದು ವೇಳೆ ಇದಕ್ಕೆ ಅವಕಾಶ ಮಾಡಿಕೊಡದೇ ಇದ್ದಲ್ಲಿ ಈ ಮಕ್ಕಳಿಗೆ ಹಾನಿ ಆಗಲಿದೆ, ನಾನೂ ಸಹ ಸಾಯಲಿದ್ದೇನೆ. ಎಲ್ಲ ಯೋಚನೆ ಮಾಡಿಯೇ ಮಕ್ಕಳನ್ನು ನಾನು ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿದ್ದೇನೆ. ಹಾಗಾಗಿ ನಾನು ಹೇಳಿದಂತೆ ಮಾಡಿ’ ಎಂದು ರೋಹಿತ್ ಆರ್ಯ ವಿಡಿಯೋನಲ್ಲಿ ಹೇಳಿದ್ದ.

ರೋಹಿತ್ ಆರ್ಯ, ಆರ್​​ಎ ಸ್ಟುಡಿಯೋದ ಸಿಬ್ಬಂದಿ ಆಗಿದ್ದ ಎನ್ನಲಾಗುತ್ತಿದೆ. ಮಕ್ಕಳಿಗೆ ನಟನೆಯ ಕುರಿತು ತರಬೇತಿಗಳನ್ನು ತೆಗೆದುಕೊಳ್ಳುತ್ತಿದ್ದ. ಸ್ವತಃ ಯೂಟ್ಯೂಬ್ ಚಾನೆಲ್ ಅನ್ನು ಸಹ ಒಂದಿದ್ದ. ಇಂದು ಆತ ಬಿಡುಗಡೆ ಮಾಡಿರುವ ವಿಡಿಯೋನಲ್ಲಿ ಸ್ಪಷ್ಟವಾಗಿ, ಗೊಂದಲ ಇಲ್ಲದೆ, ಆತಂಕ ಇಲ್ಲದೆ ಮಾತನಾಡಿದ್ದಾರೆ. ಇದೀಗ ರೋಹಿತ್ ಆರ್ಯನನ್ನು ಪೊಲೀಸರು ಬಂಧಿಸಿದ್ದು, ಆತನ ವಿಚಾರಣೆ ಚಾಲ್ತಿಯಲ್ಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:59 pm, Thu, 30 October 25

ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ