Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಸಿಬಿಸಿ ದೃಶ್ಯದಲ್ಲಿ ನಟಿಸುವಾಗ​ ನನ್ನ ಹೆಂಡತಿ ಕಣ್ಣೆದುರು ಬಂದಿದ್ದಳು ಎಂದ ಬಾಲಿವುಡ್​ ನಟ

‘ಹೋನೆ ಲಗಾ..’ ಹಾಡಿನಲ್ಲಿ ಆಯುಷ್​ ಇಂಟಿಮೇಟ್​ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ, ಇದನ್ನು ಶೂಟ್​ ಮಾಡೋದು ಅವರಿಗೆ ಅಷ್ಟು ಸುಲಭದ ಮಾತಾಗಿರಲಿಲ್ಲ. ಅವರ ತಲೆಯಲ್ಲಿ ಸಾವಿರಾರು ಆಲೋಚನೆಗಳು ಮೂಡಿದ್ದವು.

ಹಸಿಬಿಸಿ ದೃಶ್ಯದಲ್ಲಿ ನಟಿಸುವಾಗ​ ನನ್ನ ಹೆಂಡತಿ ಕಣ್ಣೆದುರು ಬಂದಿದ್ದಳು ಎಂದ ಬಾಲಿವುಡ್​ ನಟ
ಹೋನೆ ಲಗಾ ಹಾಡಿನ ದೃಶ್ಯ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Nov 13, 2021 | 7:08 PM

‘ಅಂತಿಮ್​-ದಿ ಫೈನಲ್​ ಟ್ರುತ್​’ ( Antim: The Final Truth)ಸಿನಿಮಾ ತೆರೆಗೆ ಬರೋಕೆ ರೆಡಿ ಆಗಿದೆ. ನವೆಂಬರ್​ 26ರಂದು ರಿಲೀಸ್​ ಆಗುತ್ತಿರುವ ಈ ಸಿನಿಮಾದಲ್ಲಿ ಖಡಕ್​ ಸಿಖ್​ ಪೊಲೀಸ್​ ಆಗಿ ಸಲ್ಮಾನ್​ ಖಾನ್ (Salman Khan)​ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಆಯುಷ್​​ ಶರ್ಮಾ (Aayush Sharma) ಗ್ಯಾಂಗ್​ಸ್ಟರ್​ ಪಾತ್ರ ನಿರ್ವಹಿಸಿದ್ದಾರೆ. ಈ ಚಿತ್ರದ ಬಗ್ಗೆ ಪ್ರೇಕ್ಷಕರು ದೊಡ್ಡ ಮಟ್ಟದ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಸಿನಿಮಾದ ಹಾಡೊಂದರಲ್ಲಿ ಆಯುಷ್​ ಅವರು ಮಹಿಮಾ ಮುಕ್ವಾನಾ ಜತೆ ಹಸಿಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ದೃಶ್ಯಗಳನ್ನು ಮಾಡುವಾಗ ತುಂಬಾನೇ ಭಯವಾಗಿತ್ತಂತೆ. ಅಲ್ಲದೆ, ಇದನ್ನು ನೋಡಿ ಕುಟುಂಬದವರು ಏನು ಹೇಳಬಹುದು ಎನ್ನುವ ಭಯವೂ ಅವರಿಗೆ ಕಾಡಿತ್ತು. ಈ ಬಗ್ಗೆ ಆಯುಷ್​ ಮಾಹಿತಿ ನೀಡಿದ್ದಾರೆ.

‘ಹೋನೆ ಲಗಾ..’ ಹಾಡಿನಲ್ಲಿ ಆಯುಷ್​ ಇಂಟಿಮೇಟ್​ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ, ಇದನ್ನು ಶೂಟ್​ ಮಾಡೋದು ಅವರಿಗೆ ಅಷ್ಟು ಸುಲಭದ ಮಾತಾಗಿರಲಿಲ್ಲ. ಅವರ ತಲೆಯಲ್ಲಿ ಸಾವಿರಾರು ಆಲೋಚನೆಗಳು ಮೂಡಿದ್ದವು. ಅವರ ಪತ್ನಿ ಅರ್ಪಿತಾ ಖಾನ್​ ಈ ಬಗ್ಗೆ ಏನು ಹೇಳಬಹುದು, ಮಕ್ಕಳಾದ ಆಹಿಲ್​ ಹಾಗೂ ಆಯತ್ ಈ ಬಗ್ಗೆ ಏನು ಯೋಚಿಸಬಹುದು ಎಂದು ಅವರು ಚಿಂತೆಗೆ ಒಳಗಾಗಿದ್ದರು.

‘ನಮ್ಮ ಸಿನಿಮಾದ ‘ಹೋನೆ ಲಗಾ..’ ಸಾಂಗ್​ ಚಿತ್ರೀಕರಣದಲ್ಲಿದ್ದಾಗ ನಾನು ಆಲೋಚಿಸುತ್ತಲೇ ಇದ್ದೆ. ಇದನ್ನು ಸ್ಕ್ರೀನ್‌ನಲ್ಲಿ ನಾನು ನೋಡಬಾರದು ಎಂದುಕೊಂಡೆ. ಇದನ್ನು ನನ್ನ ಹೆಂಡತಿ ವೀಕ್ಷಿಸುತ್ತಾಳೆ, ನನ್ನ ಮಕ್ಕಳು ನೋಡುತ್ತಾರೆ. ಆಗ ಏನಾಗಬಹುದು ಎನ್ನುವ ಯೋಚನೆ ಬಂತು. ಹೀಗೆ, ಸಾವಿರ ಆಲೋಚನೆಗಳು ತಲೆಯಲ್ಲಿ ಕೊರೆಯುತ್ತಲೇ ಇದ್ದವು. ಹಾಡಿನ ಶೂಟಿಂಗ್​ ವೇಳೆ ಹೆಂಡತಿ ಕಣ್ಣೆದುರು ಬರುತ್ತಿದ್ದಳು’ ಎಂದಿದ್ದಾರೆ ಆಯುಷ್.

ಮಹೇಶ್​ ಮಂಜ್ರೇಕರ್​ ಅವರು ‘ಅಂತಿಮ್​-ದಿ ಫೈನಲ್​ ಟ್ರುತ್​’ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಅವರು ಆಯುಷ್​ ಅವರನ್ನು ಪ್ರ್ಯಾಂಕ್​ ಮಾಡಿದ್ದರು. ಈ ಸಿನಿಮಾದಲ್ಲಿ ಕಿಸ್ಸಿಂಗ್​ ದೃಶ್ಯ ಬರುತ್ತದೆ. ಅದನ್ನು ನಾನು​ ಮಾಡಬೇಕು ಎಂದು ಹೇಳಿದ್ದರು. ‘ನಾನು ಆ ದೃಶ್ಯ ಮಾಡಲು ಸಾಧ್ಯವಿಲ್ಲ ಎಂದು ಹೇಳಿದೆ. ಆದರೆ ಚಿತ್ರಕ್ಕೆ ಅದರ ಅಗತ್ಯವಿದೆ ಎಂದು ಮಹೇಶ್​ ಪುನರುಚ್ಚರಿಸಿದರು. ಸರ್ ದಯವಿಟ್ಟು ಹಾಗೆ ಮಾಡಬೇಡಿ. ಇದೊಂದು ದರೋಡೆಕೋರರ ಚಿತ್ರ. ಇದರಲ್ಲಿ ಪ್ರೇಮಕಥೆ ಬರುವುದು ಬೇಡ ಎಂಬುದಾಗಿ ಬೇಡಿಕೊಂಡಿದ್ದೆ’ ಎಂದು ಶೂಟಿಂಗ್​ ಸಮಯವನ್ನು ನೆನಪಿಸಿಕೊಂಡಿದ್ದಾರೆ ಆಯುಷ್​.

ಜಾನ್​ ಅಬ್ರಾಹಂ ನಟನೆಯ ‘ಸತ್ಯಮೇವ ಜಯತೆ’ ಸಿನಿಮಾ ಹಿಟ್​ ಆಗಿತ್ತು. ಅದರ ಸೀಕ್ವೆಲ್​ ಆಗಿ ‘ಸತ್ಯಮೇವ ಜಯತೆ 2’ ತೆರೆಗೆ ಬರುತ್ತಿದೆ. ಈ ಚಿತ್ರವೂ ನವೆಂಬರ್​ 26ರಂದು ರಿಲೀಸ್​ ಆಗುತ್ತಿದೆ. ಈಗ ಅದೇ ದಿನ ಸಲ್ಲು ಸಿನಿಮಾ ಕೂಡ ರಿಲೀಸ್​ ಆಗುತ್ತಿದೆ. ಹೀಗಾಗಿ, ಬಾಕ್ಸ್​ ಆಫೀಸ್​ನಲ್ಲಿ ಎರಡು ದೊಡ್ಡ ಬಜೆಟ್​ ಸಿನಿಮಾಗಳು ಮುಖಾಮುಖಿ ಆಗುತ್ತಿವೆ. ‘ಅಂತಿಮ್​-ದಿ ಫೈನಲ್​ ಟ್ರುತ್​’ ಸಿನಿಮಾ ದೀಪಾವಳಿಗೆ ತೆರೆಗೆ ಬರಬೇಕಿತ್ತು. ಆದರೆ, ಸಿನಿಮಾದ ಕೆಲ ದೃಶ್ಯಗಳನ್ನು ರೀಶೂಟ್​ ಮಾಡಲಾಗಿದೆ. ಇದರ ಎಡಿಟಿಂಗ್​ಗೆ ಹೆಚ್ಚು ಸಮಯ ಹಿಡಿದಿದೆ. ಹೀಗಾಗಿ, ನವೆಂಬರ್ 26ಕ್ಕೆ ಸಿನಿಮಾ ರಿಲೀಸ್​ ಆಗುತ್ತಿದೆ.

ಇದನ್ನೂ ಓದಿ: Antim Movie Trailer: ‘ಅಂತಿಮ್’​ ಟ್ರೇಲರ್​ನಲ್ಲಿ ಪೊಲೀಸ್​ ಆಗಿ ಮಿಂಚಿದ ಸಲ್ಮಾನ್​ ಖಾನ್​; ಸಲ್ಲು ಲುಕ್​ಗೆ ಫ್ಯಾನ್ಸ್​ ಫಿದಾ

Published On - 7:02 pm, Sat, 13 November 21

ರ‍್ಯಾಂಡಮ್ಮಾಗಿ ಗುಂಡು ಹಾರಿದ ಕಾರಣ ಪ್ರಾಣ ಉಳಿದಿದ್ದೇ ಹೆಚ್ಚು: ದೊಡ್ಡಬಸಯ್ಯ
ರ‍್ಯಾಂಡಮ್ಮಾಗಿ ಗುಂಡು ಹಾರಿದ ಕಾರಣ ಪ್ರಾಣ ಉಳಿದಿದ್ದೇ ಹೆಚ್ಚು: ದೊಡ್ಡಬಸಯ್ಯ
ಪಹಲ್ಗಾಮ್ ದಾಳಿ ಹಿನ್ನೆಲೆ ದೆಹಲಿಯಲ್ಲಿ ಸರ್ವ ಪಕ್ಷಗಳ ಸಭೆ ಆರಂಭ
ಪಹಲ್ಗಾಮ್ ದಾಳಿ ಹಿನ್ನೆಲೆ ದೆಹಲಿಯಲ್ಲಿ ಸರ್ವ ಪಕ್ಷಗಳ ಸಭೆ ಆರಂಭ
ಸಿಡಿದ ಒಂದೇ ಗುಂಡು ಕ್ಷಣಾರ್ಧದಲ್ಲಿ ಪತಿಯ ಪ್ರಾಣ ತೆಗೆದುಕೊಂಡಿತು: ಪಲ್ಲವಿ
ಸಿಡಿದ ಒಂದೇ ಗುಂಡು ಕ್ಷಣಾರ್ಧದಲ್ಲಿ ಪತಿಯ ಪ್ರಾಣ ತೆಗೆದುಕೊಂಡಿತು: ಪಲ್ಲವಿ
ಚೆನಾಬ್ ನದಿಗೆ ನಿರ್ಮಿಸಿದ ಬಾಗ್ಲಿಹಾರ್ ಡ್ಯಾಂ ವಿಡಿಯೋ ಇಲ್ಲಿದೆ
ಚೆನಾಬ್ ನದಿಗೆ ನಿರ್ಮಿಸಿದ ಬಾಗ್ಲಿಹಾರ್ ಡ್ಯಾಂ ವಿಡಿಯೋ ಇಲ್ಲಿದೆ
ಭರತ್ ಭೂಷಣ್ ಅಂತಿಮ ಸಂಸ್ಕಾರವನ್ನು ನೆರವೇರಿಸಿದ ಸಹೋದರ ಪ್ರೀತಂ
ಭರತ್ ಭೂಷಣ್ ಅಂತಿಮ ಸಂಸ್ಕಾರವನ್ನು ನೆರವೇರಿಸಿದ ಸಹೋದರ ಪ್ರೀತಂ
ಪಹಲ್ಗಾಮ್ ಸ್ವರ್ಗದಲ್ಲಿ ತೇಲಾಡುವಾಗ ಉಗ್ರರ ಭೀಕರತೆ ಬಿಚ್ಚಿಟ್ಟ ಪಲ್ಲವಿ
ಪಹಲ್ಗಾಮ್ ಸ್ವರ್ಗದಲ್ಲಿ ತೇಲಾಡುವಾಗ ಉಗ್ರರ ಭೀಕರತೆ ಬಿಚ್ಚಿಟ್ಟ ಪಲ್ಲವಿ
ಚಿತೆಯಲ್ಲಿ ಮಲಗಿದ ಪತಿಯ ಕೈ ಹುಡುಕಿ ಹಿಡಿದ ಪತ್ನಿ: ಹೃದಯ ಹಿಂಡುವ ದೃಶ್ಯ
ಚಿತೆಯಲ್ಲಿ ಮಲಗಿದ ಪತಿಯ ಕೈ ಹುಡುಕಿ ಹಿಡಿದ ಪತ್ನಿ: ಹೃದಯ ಹಿಂಡುವ ದೃಶ್ಯ
ಅಪ್ಪಾಜಿಯ ಸಮಾಧಿಗೆ ಪೂಜೆ ಮಾಡಿ, ಶಿವಣ್ಣ ಹೇಳಿದ್ದು ಹೀಗೆ..
ಅಪ್ಪಾಜಿಯ ಸಮಾಧಿಗೆ ಪೂಜೆ ಮಾಡಿ, ಶಿವಣ್ಣ ಹೇಳಿದ್ದು ಹೀಗೆ..
ಪಹಲ್ಗಾಮ್​ನಲ್ಲಿ ಉಗ್ರರ ಅಟ್ಟಹಾಸವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಅಭಿಜನ್
ಪಹಲ್ಗಾಮ್​ನಲ್ಲಿ ಉಗ್ರರ ಅಟ್ಟಹಾಸವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಅಭಿಜನ್
ಕರ್ನಾಟಕದಷ್ಟು ಸುಂದರ ಸ್ಥಳ ಮತ್ತು ಜನ ಬೇರೆಲ್ಲೂ ಇಲ್ಲ: ಮೋನಿಕ ಸತ್ಯ
ಕರ್ನಾಟಕದಷ್ಟು ಸುಂದರ ಸ್ಥಳ ಮತ್ತು ಜನ ಬೇರೆಲ್ಲೂ ಇಲ್ಲ: ಮೋನಿಕ ಸತ್ಯ