Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪತಿ ರಣಬೀರ್ ಕಪೂರ್​ ಬಗ್ಗೆ ಟಾಕ್ಸಿಕ್​ ಎಂದವರಿಗೆ ತಿರುಗೇಟು ನೀಡಿದ ಆಲಿಯಾ ಭಟ್​

ಕರಣ್​ ಜೋಹರ್ ಅವರಿಗೆ ಬಾಲಿವುಡ್​ನ ಎಲ್ಲ ಸೆಲೆಬ್ರಿಟಿಗಳ ಜೊತೆ ನಂಟು ಇದೆ. ‘ಕಾಫಿ ವಿತ್​ ಕರಣ್​’ ಶೋಗೆ ಬರುವ ಅತಿಥಿಗಳಿಗೆ ಅವರು ಅನೇಕ ವೈಯಕ್ತಿಕ, ವಿವಾದಾತ್ಮಕ ಪ್ರಶ್ನೆಗಳನ್ನು ಕೇಳುತ್ತಾರೆ. ಕರಣ್​ ಜೊತೆಗೆ ಇರುವ ಬಾಂಧವ್ಯದ ಕಾರಣದಿಂದ ಆ ಸೆಲೆಬ್ರಿಟಿಗಳು ಮುಕ್ತವಾಗಿ ಮಾತನಾಡುತ್ತಾರೆ. ಈಗ ನಟಿ ಆಲಿಯಾ ಭಟ್​ ಸರದಿ..

ಪತಿ ರಣಬೀರ್ ಕಪೂರ್​ ಬಗ್ಗೆ ಟಾಕ್ಸಿಕ್​ ಎಂದವರಿಗೆ ತಿರುಗೇಟು ನೀಡಿದ ಆಲಿಯಾ ಭಟ್​
ಆಲಿಯಾ ಭಟ್​, ರಣಬೀರ್​ ಕಪೂರ್​
Follow us
ಮದನ್​ ಕುಮಾರ್​
|

Updated on: Nov 16, 2023 | 7:08 AM

ನಟಿ ಆಲಿಯಾ ಭಟ್​ ಮತ್ತು ರಣಬೀರ್​ ಕಪೂರ್​ (Ranbir Kapoor) ಅವರು ಹಾಯಾಗಿ ಸಂಸಾರ ಮಾಡಿಕೊಂಡಿದ್ದಾರೆ. ಇಬ್ಬರ ನಡುವೆ ಒಳ್ಳೆಯ ಅನ್ಯೋನ್ಯತೆ ಇದೆ. ಹಾಗಿದ್ದರೂ ಕೂಡ ಕೆಲವರು ಅವರ ಸಂಬಂಧದಲ್ಲಿ ಹುಳಿ ಹಿಂಡುವ ಕೆಲಸ ಮಾಡಿದ್ದಾರೆ. ಅಂಥವರಿಗೆ ಆಲಿಯಾ ಭಟ್​ (Alia Bhatt) ಖಡಕ್​ ತಿರುಗೇಟು ನೀಡಿದ್ದಾರೆ. ಕೆಲವೇ ದಿನಗಳ ಹಿಂದೆ ರಣಬೀರ್​ ಕಪೂರ್ ಅವರನ್ನು ಸೋಶಿಯಲ್​ ಮೀಡಿಯಾದಲ್ಲಿ ಟ್ರೋಲ್​ ಮಾಡಲಾಗಿತ್ತು. ಆಲಿಯಾಗೆ ಲಿಪ್​ಸ್ಟಿಕ್​ ಹಚ್ಚಲು ಬಿಡುವುದಿಲ್ಲ ಎಂಬ ಕಾರಣಕ್ಕೆ ರಣಬೀರ್​ ಕಪೂರ್​ಗೆ ‘ಟಾಕ್ಸಿಕ್​’ (Toxic) ಎಂದು ಹಣೆಪಟ್ಟೆ ಕಟ್ಟಲಾಗಿತ್ತು. ಅದರ ಬಗ್ಗೆ ಈಗ ಆಲಿಯಾ ಭಟ್​ ಮಾತನಾಡಿದ್ದಾರೆ. ‘ಕಾಫಿ ವಿತ್​ ಕರಣ್​’ ಶೋನಲ್ಲಿ ಅವರು ಈ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಕರಣ್​ ಜೋಹರ್ ಅವರಿಗೆ ಬಾಲಿವುಡ್​ನ ಎಲ್ಲ ಸೆಲೆಬ್ರಿಟಿಗಳ ಜೊತೆ ನಂಟು ಇದೆ. ‘ಕಾಫಿ ವಿತ್​ ಕರಣ್​’ ಶೋಗೆ ಬರುವ ಅತಿಥಿಗಳಿಗೆ ಅವರು ಅನೇಕ ವೈಯಕ್ತಿಕ ಪ್ರಶ್ನೆಗಳನ್ನು ಕೇಳುತ್ತಾರೆ. ಕರಣ್​ ಜೊತೆಗೆ ಇರುವ ಬಾಂಧವ್ಯದ ಕಾರಣದಿಂದ ಆ ಸೆಲೆಬ್ರಿಟಿಗಳು ಮುಕ್ತವಾಗಿ ಮಾತನಾಡುತ್ತಾರೆ. ರಣಬೀರ್ ಕಪೂರ್​ ಅವರನ್ನು ಟಾಕ್ಸಿಕ್ ಎಂದು ಜನರು ಕರೆದಿದ್ದರ ಬಗ್ಗೆ ಆಲಿಯಾ ಭಟ್​ ಇಷ್ಟು ದಿನ ಸುಮ್ಮನಾಗಿದ್ದರು. ಆದರೆ ಈಗ ಅವರು ಮೌನ ಮುರಿದಿದ್ದಾರೆ. ತಮ್ಮ ಗಂಡನ ವ್ಯಕ್ತಿತ್ವ ಆ ರೀತಿ ಇಲ್ಲ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ವಿವೇಕ್ ಅಗ್ನಿಹೋತ್ರಿಗೆ ಆಲಿಯಾ ಭಟ್​ನ ಕಂಡರೆ ಸಖತ್ ಇಷ್ಟ; ಕಾರಣ ತಿಳಿಸಿದ ನಿರ್ದೇಶಕ

ವಿವಾದ ಶುರುವಾಗಿದ್ದು ಹೇಗೆ?

ಮೇಕಪ್​ಗೆ ಸಂಬಂಧಿಸಿದ ಒಂದು ವಿಡಿಯೋದಲ್ಲಿ ಆಲಿಯಾ ಭಟ್​ ಅವರು ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದರು. ‘ನಾನು ಲಿಪ್​ಸ್ಟಿಕ್​ ಹಚ್ಚಿಕೊಂಡರೆ ರಣಬೀರ್ ಕಪೂರ್​ಗೆ ಇಷ್ಟ ಆಗುವುದಿಲ್ಲ. ಅದನ್ನು ಒರೆಸಿಕೋ ಅಂತ ಅವರು ಹೇಳುತ್ತಾರೆ’ ಎಂದಿದ್ದರು ಆಲಿಯಾ. ಇದೇ ವಿಚಾರವನ್ನು ಮುಂದಿಟ್ಟುಕೊಂಡು ರಣಬೀರ್​ ಕಪೂರ್​ ಅವರನ್ನು ಟಾಕ್ಸಿಕ್​ ಎಂದು ನೆಟ್ಟಿಗರು ಕರೆದಿದ್ದರು.

ಇದನ್ನೂ ಓದಿ: ರಾಷ್ಟ್ರ ಪ್ರಶಸ್ತಿ ಸ್ವೀಕರಿಸಲು ಮದುವೆಯ ಸೀರೆಯುಟ್ಟು ಬಂದ ಆಲಿಯಾ ಭಟ್​; ಫ್ಯಾನ್ಸ್ ಏನಂದ್ರು?

ಆಲಿಯಾ ಭಟ್​ ಪ್ರತಿಕ್ರಿಯೆ:

‘ಈ ರೀತಿ ಆಗಿದ್ದಕ್ಕೆ ನನಗೆ ಬೇಜಾರಾಯ್ತು. ಯಾಕೆಂದರೆ ರಣಬೀರ್​ ಕಪೂರ್​ ಅವರ ವ್ಯಕ್ತಿತ್ವ ಸಂಪೂರ್ಣ ವಿರುದ್ಧವಾಗಿದೆ. ನನ್ನ ಮಾತನ್ನು ಬೇರೆ ರೀತಿಯಲ್ಲಿ ಅರ್ಥೈಸಲಾಯಿತು. ನನ್ನ ತಂಡದವರೂ ಅದನ್ನು ನನಗೆ ತಿಳಿಸಿದರು. ಆಗಲಿ ಬಿಡಿ ಎಂದೆ. ಆದರೆ ರಣಬೀರ್​ ಕಪೂರ್​ ಬಗ್ಗೆ ಗಂಭೀರವಾದ ಲೇಖನ ಬರೆದು, ಅದರಲ್ಲೂ ಕೂಡ ಟಾಕ್ಸಿಕ್ ಎಂದು ವಿವರಿಸಲಾಗಿತ್ತು. ಜಗತ್ತಿನಲ್ಲಿ ಗಮನ ನೀಡಲು ಬೇರೆ ವಿಷಯಗಳು ಕೂಡ ಇವೆ’ ಎಂದು ಆಲಿಯಾ ಭಟ್​ ಹೇಳಿದ್ದಾರೆ. ಆ ಮೂಲಕ ಅವರು ಗಂಡನ ಪರವಾಗಿ ಬ್ಯಾಟ್​ ಬೀಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ದೆಹಲಿ ವಿಮಾನ ನಿಲ್ದಾಣಕ್ಕೆ ತೆರಳಿ ಕತಾರ್ ರಾಜನನ್ನು ಬರಮಾಡಿಕೊಂಡ ಮೋದಿ
ದೆಹಲಿ ವಿಮಾನ ನಿಲ್ದಾಣಕ್ಕೆ ತೆರಳಿ ಕತಾರ್ ರಾಜನನ್ನು ಬರಮಾಡಿಕೊಂಡ ಮೋದಿ
ದಿನಕ್ಕೊಂದು ಸಾವಿರ ದುಡಿಯುವವನಿಗೆ ₹12,000 ದಂಡ ಹಾಕಿದರೆ ಹೇಗೆ? ಕುಲಕರ್ಣಿ
ದಿನಕ್ಕೊಂದು ಸಾವಿರ ದುಡಿಯುವವನಿಗೆ ₹12,000 ದಂಡ ಹಾಕಿದರೆ ಹೇಗೆ? ಕುಲಕರ್ಣಿ
ನಾನು ಸುದ್ದಿಯಲ್ಲಿ ಇರೋದ್ರಿಂದ ಟಾರ್ಗೆಟ್ ಮಾಡಲಾಗುತ್ತಿದೆ: ಐಶ್ವರ್ಯ ಗೌಡ
ನಾನು ಸುದ್ದಿಯಲ್ಲಿ ಇರೋದ್ರಿಂದ ಟಾರ್ಗೆಟ್ ಮಾಡಲಾಗುತ್ತಿದೆ: ಐಶ್ವರ್ಯ ಗೌಡ
ಪೊಲೀಸರಿಗೆ ಉದ್ಯೋಗವೇ ಇಲ್ಲ, ಬರೀ ವಸೂಲಿ ಮಾಡೋದು: ಶಾಸಕ ವಿನಯ್​ ಕುಲಕರ್ಣಿ
ಪೊಲೀಸರಿಗೆ ಉದ್ಯೋಗವೇ ಇಲ್ಲ, ಬರೀ ವಸೂಲಿ ಮಾಡೋದು: ಶಾಸಕ ವಿನಯ್​ ಕುಲಕರ್ಣಿ
ಕೇವಲ ಎರಡು ತಿಂಗಳ ಅಕ್ಕಿ ಹಣ ಮಾತ್ರ ಟ್ರಾನ್ಸ್​ಫರ್ ಮಾಡೋದು ಬಾಕಿ: ಸಚಿವ
ಕೇವಲ ಎರಡು ತಿಂಗಳ ಅಕ್ಕಿ ಹಣ ಮಾತ್ರ ಟ್ರಾನ್ಸ್​ಫರ್ ಮಾಡೋದು ಬಾಕಿ: ಸಚಿವ
ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯೂ ನಿಷ್ಕ್ರಿಯ, ಮಹಿಳೆಯರು ಅಸಹಾಯಕ
ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯೂ ನಿಷ್ಕ್ರಿಯ, ಮಹಿಳೆಯರು ಅಸಹಾಯಕ
ರಾಜಣ್ಣಗೆ ಯಾರ ಮೇಲೂ ಸಿಟ್ಟಿಲ್ಲ, ಅವರು ಮಾತಾಡೋ ಶೈಲಿಯೇ ಹಾಗೆ: ಜಾರಕಿಹೊಳಿ
ರಾಜಣ್ಣಗೆ ಯಾರ ಮೇಲೂ ಸಿಟ್ಟಿಲ್ಲ, ಅವರು ಮಾತಾಡೋ ಶೈಲಿಯೇ ಹಾಗೆ: ಜಾರಕಿಹೊಳಿ
ಚೇತನ್ ದುಡುಕಿನ ನಿರ್ಧಾರ ತೆಗೆದುಕೊಂಡು ಘೋರ ಅಪರಾಧವೆಸಗಿದ್ದಾನೆ: ಸೋಮಶೇಖರ್
ಚೇತನ್ ದುಡುಕಿನ ನಿರ್ಧಾರ ತೆಗೆದುಕೊಂಡು ಘೋರ ಅಪರಾಧವೆಸಗಿದ್ದಾನೆ: ಸೋಮಶೇಖರ್
ಪಿಂಕ್​​ ಲೈನ್​ ಮೆಟ್ರೋ ಟನಲ್​ ಕಾಮಗಾರಿ ಬಗ್ಗೆ ಮಾಹಿತಿ ನೀಡಿದ ಇಂಜಿನಿಯರ್
ಪಿಂಕ್​​ ಲೈನ್​ ಮೆಟ್ರೋ ಟನಲ್​ ಕಾಮಗಾರಿ ಬಗ್ಗೆ ಮಾಹಿತಿ ನೀಡಿದ ಇಂಜಿನಿಯರ್
ಸಿಎಂ ಮತ್ತು ಕೆಪಿಸಿಸಿ ಬದಲಾವಣೆ ಬಿಟ್ಟು ಕೆಲ ಸಚಿವರು ಬೇರೇನೂ ಮಾತಾಡಲಾರರು!
ಸಿಎಂ ಮತ್ತು ಕೆಪಿಸಿಸಿ ಬದಲಾವಣೆ ಬಿಟ್ಟು ಕೆಲ ಸಚಿವರು ಬೇರೇನೂ ಮಾತಾಡಲಾರರು!