AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತೆ ಅನಂತ್ ಅಂಬಾನಿ-ರಾಧಿಕಾರ ಪ್ರೀ ವೆಡ್ಡಿಂಗ್ ಪಾರ್ಟಿ, ಕಳೆದ ಬಾರಿಗಿಂತಲೂ ಅದ್ಧೂರಿ

ಮುಖೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ, ರಾಧಿಕಾ ಮರ್ಚೆಂಟ್ ಜೊತೆ ವಿವಾಹವಾಗಲಿದ್ದು ಮಾರ್ಚ್ ತಿಂಗಳಲ್ಲಿ ಈ ಜೋಡಿಯ ಅದ್ಧೂರಿ ಪ್ರೀ ವೆಡ್ಡಿಂಗ್ ಪಾರ್ಟಿ ನಡೆದಿದ್ದು, ವಿಶ್ವವೇ ತಿರುಗಿನೋಡುವಷ್ಟು ಅದ್ಧೂರಿ ಪಾರ್ಟಿ ಇದಾಗಿತ್ತು. ಇದೀಗ ಎರಡನೇ ಬಾರಿ ಪ್ರೀ ವೆಡ್ಡಿಂಗ್ ನಡೆಯಲಿದೆ. ಎಲ್ಲಿ? ಇಲ್ಲಿದೆ ಮಾಹಿತಿ.

ಮತ್ತೆ ಅನಂತ್ ಅಂಬಾನಿ-ರಾಧಿಕಾರ ಪ್ರೀ ವೆಡ್ಡಿಂಗ್ ಪಾರ್ಟಿ, ಕಳೆದ ಬಾರಿಗಿಂತಲೂ ಅದ್ಧೂರಿ
ಮಂಜುನಾಥ ಸಿ.
|

Updated on: May 21, 2024 | 1:13 PM

Share

ವಿಶ್ವದ ಟಾಪ್ ಶ್ರೀಮಂತರಲ್ಲಿ ಒಬ್ಬರಾಗಿರುವ ಮುಖೇಶ್ ಅಂಬಾನಿಯ (Mukhesh Ambani) ಪುತ್ರ ಅನಂತ್ ಅಂಬಾನಿ (Anant Ambani) ಹಾಗೂ ರಾಧಿಕಾ ಮರ್ಚೆಂಟ್​ರ ವಿವಾಹಪೂರ್ವ ಸಂಭ್ರಮ (ಪ್ರೀ ವೆಡ್ಡಿಂಗ್) ಪಾರ್ಟಿ ಮಾರ್ಚ್ 1 ರಿಂದ ಆರಂಭಗೊಂಡು ಸುಮಾರು ಒಂದು ವಾರಗಳ ಕಾಲ ನಡೆಯಿತು. ಹಾಲಿವುಡ್ ತಾರೆಯರಾದ ರಿಹಾನಾ, ಎಕಾನ್ ಸೇರಿದಂತೆ ಹಲವು ದಿಗ್ಗಜರು ಕಾರ್ಯಕ್ರಮಕ್ಕೆ ಆಗಮಿಸಿ ವೇದಿಕೆ ಮೇಲೆ ಹಾಡಿ, ಕುಣಿದು ಮನೊರಂಜನೆ ನೀಡಿದರು. ಇಡೀ ಬಾಲಿವುಡ್ ಮಂದಿ ಅನಂತ್ ಅಂಬಾನಿ-ರಾಧಿಕಾರ ಪ್ರೀ ವೆಡ್ಡಿಂಗ್ ಪಾರ್ಟಿಗೆ ಹಾಜರಾಗಿತ್ತು. ದಕ್ಷಿಣ ಭಾರತ ಚಿತ್ರರಂಗದ ಕೆಲವು ತಾರೆಯರು ಸಹ ಪಾರ್ಟಿಯಲ್ಲಿ ಭಾಗಿಯಾಗಿದ್ದರು. ಇದೀಗ ಮತ್ತೊಮ್ಮೆ ಅಂದರೆ ಎರಡನೇ ಪ್ರೀ ವೆಡ್ಡಿಂಗ್ ಪಾರ್ಟಿಯನ್ನು ಆಯೋಜನೆ ಮಾಡಲಾಗುತ್ತಿದೆ. ಕಳೆದ ಬಾರಿಗಿಂತಲೂ ಈ ಬಾರಿಯ ಪಾರ್ಟಿ ಅದ್ಧೂರಿಯಾಗಿರಲಿದೆ.

ಅನಂತ್ ಹಾಗೂ ರಾಧಿಕಾರ ಎರಡನೇ ಪ್ರೀ ವೆಡ್ಡಿಂಗ್ ಪಾರ್ಟಿ ವಿದೇಶದಲ್ಲಿ ನಡೆಯಲಿದೆ. ಅದೂ ದೊಡ್ಡ ಐಶಾರಾಮಿ ಹಡಗಿನಲ್ಲಿ. ಇದೇ ತಿಂಗಳ 28ಕ್ಕೆ ಎರಡನೇ ಪ್ರೀ ವೆಡ್ಡಿಂಗ್ ಪಾರ್ಟಿ ಆಯೋಜನೆಗೊಳ್ಳಲಿದ್ದು, ಈ ಬಾರಿಯ ಪಾರ್ಟಿ ನಡೆಯಲಿರುವುದು ಸಮುದ್ರದಲ್ಲಿ. ಇಟಲಿಯಿಂದ ಐಶಾರಾಮಿ ಶಿಪ್​ನಲ್ಲಿ ಹೊರಟು, ಫ್ರಾನ್ಸ್​ನ ದಕ್ಷಿಣ ತೀರವನ್ನು ಈ ಬೃಹತ್ ಹಾಗೂ ಐಶಾರಾಮಿ ಹಡಗು ತಲುಪಲಿದೆ. ಈ ಪಾರ್ಟಿಯಲ್ಲಿ ಸುಮಾರು 800 ಮಂದಿ ಅತಿಥಿಗಳು ಭಾಗಿಯಾಗಲಿದ್ದಾರೆ. ಕಳೆದ ಬಾರಿ ರಾಜಸ್ಥಾನದಲ್ಲಿ ನಡೆದಿದ್ದ ಪಾರ್ಟಿಯಲ್ಲಿ 1200ಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದರು. ಆದರೆ ಈ ಪಾರ್ಟಿಗೆ ಅಂಬಾನಿ ಕುಟುಂಬಕ್ಕೆ ಬಹಳ ಆಪ್ತವಾಗಿರುವ ಪ್ರಮುಖರಷ್ಟೆ ಭಾಗಿಯಾಗಲಿದ್ದಾರೆ. 800 ಅತಿಥಿಗಳು ಭಾಗಿಯಾಗುವ ಈ ಕಾರ್ಯಕ್ರಮದಲ್ಲಿ 600 ಮಂದಿ ಸೇವಕರೇ ಇರಲಿದ್ದಾರೆ.

ಇದನ್ನೂ ಓದಿ:ಅನಂತ್ ಅಂಬಾನಿ ಧರಿಸಿದ್ದ 10 ಕೋಟಿ ರೂಪಾಯಿ ವಾಚ್ ನೋಡಿ ದಿಗ್ಭ್ರಮೆಗೊಂಡ ಜುಕರ್​ಬರ್ಗ್ ಪತ್ನಿ

ಇಟಲಿಯಿಂದ ಹೊರಡುವ ಐಶಾರಾಮಿ ಹಡುಗು 4380 ಕಿ.ಮೀ ಸಮುದ್ರದಲ್ಲಿಯೇ ಪ್ರಯಾಣ ನಡೆಸಲಿದೆ. ಹಡಗಿನಲ್ಲಿ ಅದ್ಧೂರಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮ ಸಂಪೂರ್ಣ ಖಾಸಗಿ ಕಾರ್ಯಕ್ರಮವಾಗಿದ್ದು, ಕಾರ್ಯಕ್ರಮಕ್ಕೆ ಹೊರಗಿನ ಫೋಟೊಗ್ರಾಫರ್​ಗಳಿಗೆ ಅವಕಾಶವಿರುವುದಿಲ್ಲ, ಹಾಗೂ ಭಾಗವಹಿಸುವ ಅತಿಥಿಗಳಿಗೂ ಸಹ ಕೆಲವು ನಿಬಂಧನೆಗಳನ್ನು ಹೇರಲಾಗಿದೆ. ಈ ಕಾರ್ಯಕ್ರಮದಲ್ಲಿಯೂ ಸಹ ಕೆಲವು ಬಾಲಿವುಡ್ ಹಾಗೂ ಹಾಲಿವುಡ್ ತಾರೆಯರು ಭಾಗಿ ಆಗಲಿದ್ದಾರೆ. ಶಾರುಖ್, ಸಲ್ಮಾನ್ ಖಾನ್, ರಣ್​ಬೀರ್ ಕಪೂರ್, ಆಲಿಯಾ, ರಣ್ವೀರ್ ಸಿಂಗ್ ಇನ್ನೂ ಕೆಲವು ಬಾಲಿವುಡ್ ತಾರೆಯರು ಹಾಗೂ ಕ್ರಿಕೆಟರ್​ಗಳು ಈ ಐಶಾರಾಮಿ ಹಡಗಿನಲ್ಲಿ ತೆರಳಲಿದ್ದಾರೆ.

ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಅವರುಗಳು ಜುಲೈ ತಿಂಗಳಲ್ಲಿ ವಿವಾಹವಾಗಲಿದ್ದಾರೆ. ಇವರು ಜನವರಿ 19ರಂದು ನಿಶ್ಚಿತಾರ್ಥ ಮಾಡಿಕೊಂಡರು. ಬಹಳ ವರ್ಷಗಳಿಂದಲೂ ಈ ಇಬ್ಬರು ಪ್ರೀತಿಯಲ್ಲಿದ್ದರು. ರಾಧಿಕಾ ಮರ್ಚೆಂಟ್ ಸಹ ದೊಡ್ಡ ಉದ್ಯಮಿಯ ಪುತ್ರಿ. ರಾಧಿಕಾರ ತಂದೆ ವೀರೆನ್ ಮರ್ಚೆಂಟ್ ಎನ್​ಕೋರ್ ಹೆಲ್ತ್​ಕೇರ್ ಸಂಸ್ಥೆಯ ಸಿಇಓ, ರಾಧಿಕಾರ ತಾಯಿ ಶಾಲಿನಿ ಮರ್ಚೆಂಟ್ ಸಹ ತಮ್ಮದೇ ಆದ ಉದ್ಯಮವನ್ನು ಹೊಂದಿದ್ದಾರೆ. ರಾಧಿಕಾ ಹಾಗೂ ಅನಂತ್ ಶಾಲಾ ದಿನಗಳಿಂದಲೂ ಆಪ್ತರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Manjunatha C
Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ